ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಬಿಗ್ಬಾಸ್ ಸ್ಪರ್ಧಿ
ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್..!
ಈ ಬಗ್ಗೆ ವರ್ತೂರು ಸಂತೋಷ್ ಪರ ವಕೀಲರು ಏನಂದ್ರು?
ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕೆ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ವರ್ತೂರು ಸಂತೋಷ್ ಪರ ವಕೀಲ ಕೆ. ನಟರಾಜ್ ಮಾತಾಡಿದ್ದಾರೆ.
ವರ್ತೂರು ಸಂತೋಷ್ ಕೃಷಿ ಕುಟುಂಬದಿಂದ ಬಂದವರು. ಯಾವುದೇ ಅಪರಾಧ ಪ್ರಕರಣಗಳ ಹಿನ್ನೆಲೆ ಇಲ್ಲ. ಬಹಳ ದಿನಗಳಿಂದಲೂ ಹುಲಿ ಉಗುರನ್ನು ಪೂಜಿಸಿಕೊಂಡು ಬಂದ ವ್ಯಕ್ತಿ ವರ್ತೂರು ಸಂತೋಷ್ ಎಂದರು.
ಸಂತೋಷ್ ವಿರುದ್ಧ ಮಾತ್ರ ಕ್ರಮ ಯಾಕೆ?
ನಟ ದರ್ಶನ್, ಜಗ್ಗೇಶ್, ರಾಕ್ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ. ಅವರ ಬಳಿಯಿದ್ದ ಎಲ್ಲಾ ಪೆಂಡೆಂಟ್ಗಳನ್ನು ವಶಕ್ಕೆ ಪಡೆದು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಆದರೆ, ಇದ್ಯಾವುದು ಮಾಡದೆ ವರ್ತೂರು ಸಂತೋಷ್ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ಇನ್ನು, ವರ್ತೂರು ಸಂತೋಷ್ ವಿರುದ್ಧ ಹುಲಿಯನ್ನು ಕೊಂದು ಉಗುರು ತಂದ ಸೆಕ್ಷನ್ಗಳಡಿ ಕೇಸ್ ಮಾಡಲಾಗಿದೆ. ಹೀಗಾಗಿ ಇದು ಸುಳ್ಳಾಗಿದ್ದು, ಮಾನ್ಯ ನ್ಯಾಯಲಯ ವಾದ ಪುರಸ್ಕರಿಸಿ ಜಾಮೀನು ನೀಡೋ ವಿಶ್ವಾಸ ಇದೆ. ನಾಳೆಯೇ ಸಂತೋಷ್ ಜಾಮೀನು ಸಿಗೋ ಸಾಧ್ಯತೆ ಇದೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಬಿಗ್ಬಾಸ್ ಸ್ಪರ್ಧಿ
ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್..!
ಈ ಬಗ್ಗೆ ವರ್ತೂರು ಸಂತೋಷ್ ಪರ ವಕೀಲರು ಏನಂದ್ರು?
ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕೆ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ವರ್ತೂರು ಸಂತೋಷ್ ಪರ ವಕೀಲ ಕೆ. ನಟರಾಜ್ ಮಾತಾಡಿದ್ದಾರೆ.
ವರ್ತೂರು ಸಂತೋಷ್ ಕೃಷಿ ಕುಟುಂಬದಿಂದ ಬಂದವರು. ಯಾವುದೇ ಅಪರಾಧ ಪ್ರಕರಣಗಳ ಹಿನ್ನೆಲೆ ಇಲ್ಲ. ಬಹಳ ದಿನಗಳಿಂದಲೂ ಹುಲಿ ಉಗುರನ್ನು ಪೂಜಿಸಿಕೊಂಡು ಬಂದ ವ್ಯಕ್ತಿ ವರ್ತೂರು ಸಂತೋಷ್ ಎಂದರು.
ಸಂತೋಷ್ ವಿರುದ್ಧ ಮಾತ್ರ ಕ್ರಮ ಯಾಕೆ?
ನಟ ದರ್ಶನ್, ಜಗ್ಗೇಶ್, ರಾಕ್ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ. ಅವರ ಬಳಿಯಿದ್ದ ಎಲ್ಲಾ ಪೆಂಡೆಂಟ್ಗಳನ್ನು ವಶಕ್ಕೆ ಪಡೆದು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಆದರೆ, ಇದ್ಯಾವುದು ಮಾಡದೆ ವರ್ತೂರು ಸಂತೋಷ್ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ಇನ್ನು, ವರ್ತೂರು ಸಂತೋಷ್ ವಿರುದ್ಧ ಹುಲಿಯನ್ನು ಕೊಂದು ಉಗುರು ತಂದ ಸೆಕ್ಷನ್ಗಳಡಿ ಕೇಸ್ ಮಾಡಲಾಗಿದೆ. ಹೀಗಾಗಿ ಇದು ಸುಳ್ಳಾಗಿದ್ದು, ಮಾನ್ಯ ನ್ಯಾಯಲಯ ವಾದ ಪುರಸ್ಕರಿಸಿ ಜಾಮೀನು ನೀಡೋ ವಿಶ್ವಾಸ ಇದೆ. ನಾಳೆಯೇ ಸಂತೋಷ್ ಜಾಮೀನು ಸಿಗೋ ಸಾಧ್ಯತೆ ಇದೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ