newsfirstkannada.com

ಬಿಗ್​ ಸ್ಪರ್ಧಿ ವರ್ತೂರ್​ ಸಂತೋಷ್​ಗೆ ಕುತ್ತು ತಂದ ಹುಲಿ ಉಗುರಿನ ಪೆಂಡೆಂಟ್​! ಅರೆಸ್ಟ್​ ಬೆನ್ನಲ್ಲೇ ಪರಿಸರವಾದಿ ಏನಂದ್ರು ಗೊತ್ತಾ?

Share :

23-10-2023

    ವೈಲ್ಡ್​ ಲೈಪ್​ ಆ್ಯಕ್ಟ್​ ಅಡಿಯಲ್ಲಿ ವರ್ತೂರ್​ ಸಂತೋಷ್​ ಬಂಧನ

    ಹುಲಿ ಉಗುರಿನ ಪೆಂಡೆಂಟ್​ ಧರಿಸೋದು ಶೋಕಿಯಾಗಿದೆ

    ರಾಮುಹಳ್ಳಿ ಅರಣ್ಯಾಧಿಕಾರಿಗಳಿಂದ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​

ಬಿಗ್​ ಬಾಸ್ ಸ್ಪರ್ಧಿ ವರ್ತೂರ್​ ಸಂತೋಷ್​ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಿಗ್​ ಬಾಸ್ ಮನೆಗೆ ತೆರಳುವಾಗ ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಕಾರಣ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸೆಟ್​ಗೆ ತೆರಳಿ ಅರೆಸ್ಟ್​ ಮಾಡಿದ್ದಾರೆ. ಬಿಗ್​ ಬಾಸ್​ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಪ್ರಸಂಗವೊಂದು ನಡೆದಿದೆ.

ವೈಲ್ಡ್​ ಲೈಫ್​ ಆ್ಯಕ್ಟ್​ ಅಡಿಯಲ್ಲಿ ವರ್ತೂರ್​ ಸಂತೋಷ್​ ಬಂಧನವಾಗಿದೆ. ಈ ಹಿಂದೆ ಹುಚ್ಚ ವೆಂಕಟ್​​ ಮನೆಯ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿದ್ದ ಕಾರಣ ಮನೆಯಿಂದ ಹೊರಹಾಕಲಾಗಿತ್ತು. ಆದರೀಗ ಕುತ್ತಿಗೆಗೆ ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಕಾರಣ ವರ್ತೂರ್​ ಸಂತೋಷ್​ ಅವರನ್ನ ಬಂಧಿಸಲಾಗಿದೆ. ಈ ವಿಚಾರವಾಗಿ ಪರಿಸರವಾದಿ ಜೋಸೆಫ್​​ ಹೂವರ್ ಮಾತನಾಡಿದ್ದಾರೆ, ಶೋಕಿಗಾಗಿ ಹುಲಿ ಉಗುರನ್ನು ಹಾಕಿ ಉಲ್ಲಂಘನೆ ಮಾಡಿದ್ದಾರೆ. ಇಂತವರು ಹುಲಿ ಉಗುರನ್ನು ತೆಗೆದುಕೊಳ್ಳುವುದರಿಂದ ಜನರು ಹುಲಿಯನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಈಗ ಹುಲಿ ಉಗುರು ಎಲ್ಲಿ ಸಿಕ್ತು. ಯಾರು ಹುಲಿಯನ್ನ ಕೊಂದಿದ್ದು, ತನಿಖೆ ಆಗುತ್ತೆ. ನಮ್ಮ ಕರ್ನಾಟಕದ ಒಳಗೆ ಫಾರೆಸ್ಟ್​ ಸೆಲ್​ ಇದೆ ಎಂದಿದ್ದಾರೆ.

ನಂತರ ಮಾತನಾಡಿದ ಅವರು, ಇದು ಶೋಕಿ ಆಗಿದೆ ಜನರಿಗೆ, ಹುಲಿ ಹಲ್ಲು ಸಿಗುತ್ತೆ, ಹುಲಿ ಮೀಸೆ, ಆನೆ ಬಾಲ, ಕೃಷ್ಣ ಮಗದ ಕೊಂಬು ಹೀಗೆ ಇದನ್ನು ಧರಿಸುವುದು ಮತ್ತು ಶೋಕಿಗಾಗಿ ಬಳಸುತ್ತಿದ್ದಾರೆ. ಈ ಫ್ಯಾಷನ್​ನಿಂದ ವನ್ಯಜೀವಿಗೆ ಏನು ತೊಂದರೆ ಆಗುತ್ತಿದೆ ಎಂಬುದನ್ನು ಯಾರು ನೋಡುತ್ತಿಲ್ಲ. ಇದು ಒಳ್ಳೆಯ ವಿಚಾರ ಎಂದು ಜೋಸೆಫ್​​ ಹೂವರ್ ನ್ಯೂಸ್​ ಫಸ್ಟ್​ಗೆ ತಿಳಿಸಿದ್ದಾರೆ.

ನಿನ್ನೆ ಬಿಗ್​ ಬಾಸ್​ ಮನೆಯಿಂದ ಪತ್ರಕರ್ತ ಗೌರೀಶ್​ ಅಕ್ಕಿ ಎಲಿಮಿನೇಟ್​ ಆಗಿದ್ದರು. ಆದರೀಗ ವೈಲ್ಡ್​ ಲೈಫ್​ ಆ್ಯಕ್ಟ್​ ಅಡಿಯಲ್ಲಿ ಹುಲಿ ಉಗುರನ್ನು ಧರಿಸಿದ್ದ ಸ್ಪರ್ಧಿ ವರ್ತೂರ್​ ಅವರನ್ನು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆ ಮೂಲಕ ಬಿಗ್​ ಬಾಸ್​​ ಕಾರ್ಯಕ್ರಮಕ್ಕೆ ದೊಡ್ಡ ಟ್ವಿಸ್ಟ್​ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ ಸ್ಪರ್ಧಿ ವರ್ತೂರ್​ ಸಂತೋಷ್​ಗೆ ಕುತ್ತು ತಂದ ಹುಲಿ ಉಗುರಿನ ಪೆಂಡೆಂಟ್​! ಅರೆಸ್ಟ್​ ಬೆನ್ನಲ್ಲೇ ಪರಿಸರವಾದಿ ಏನಂದ್ರು ಗೊತ್ತಾ?

https://newsfirstlive.com/wp-content/uploads/2023/10/VARTUR-SANTOSH.jpg

    ವೈಲ್ಡ್​ ಲೈಪ್​ ಆ್ಯಕ್ಟ್​ ಅಡಿಯಲ್ಲಿ ವರ್ತೂರ್​ ಸಂತೋಷ್​ ಬಂಧನ

    ಹುಲಿ ಉಗುರಿನ ಪೆಂಡೆಂಟ್​ ಧರಿಸೋದು ಶೋಕಿಯಾಗಿದೆ

    ರಾಮುಹಳ್ಳಿ ಅರಣ್ಯಾಧಿಕಾರಿಗಳಿಂದ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​

ಬಿಗ್​ ಬಾಸ್ ಸ್ಪರ್ಧಿ ವರ್ತೂರ್​ ಸಂತೋಷ್​ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಿಗ್​ ಬಾಸ್ ಮನೆಗೆ ತೆರಳುವಾಗ ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಕಾರಣ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸೆಟ್​ಗೆ ತೆರಳಿ ಅರೆಸ್ಟ್​ ಮಾಡಿದ್ದಾರೆ. ಬಿಗ್​ ಬಾಸ್​ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಪ್ರಸಂಗವೊಂದು ನಡೆದಿದೆ.

ವೈಲ್ಡ್​ ಲೈಫ್​ ಆ್ಯಕ್ಟ್​ ಅಡಿಯಲ್ಲಿ ವರ್ತೂರ್​ ಸಂತೋಷ್​ ಬಂಧನವಾಗಿದೆ. ಈ ಹಿಂದೆ ಹುಚ್ಚ ವೆಂಕಟ್​​ ಮನೆಯ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿದ್ದ ಕಾರಣ ಮನೆಯಿಂದ ಹೊರಹಾಕಲಾಗಿತ್ತು. ಆದರೀಗ ಕುತ್ತಿಗೆಗೆ ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಕಾರಣ ವರ್ತೂರ್​ ಸಂತೋಷ್​ ಅವರನ್ನ ಬಂಧಿಸಲಾಗಿದೆ. ಈ ವಿಚಾರವಾಗಿ ಪರಿಸರವಾದಿ ಜೋಸೆಫ್​​ ಹೂವರ್ ಮಾತನಾಡಿದ್ದಾರೆ, ಶೋಕಿಗಾಗಿ ಹುಲಿ ಉಗುರನ್ನು ಹಾಕಿ ಉಲ್ಲಂಘನೆ ಮಾಡಿದ್ದಾರೆ. ಇಂತವರು ಹುಲಿ ಉಗುರನ್ನು ತೆಗೆದುಕೊಳ್ಳುವುದರಿಂದ ಜನರು ಹುಲಿಯನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಈಗ ಹುಲಿ ಉಗುರು ಎಲ್ಲಿ ಸಿಕ್ತು. ಯಾರು ಹುಲಿಯನ್ನ ಕೊಂದಿದ್ದು, ತನಿಖೆ ಆಗುತ್ತೆ. ನಮ್ಮ ಕರ್ನಾಟಕದ ಒಳಗೆ ಫಾರೆಸ್ಟ್​ ಸೆಲ್​ ಇದೆ ಎಂದಿದ್ದಾರೆ.

ನಂತರ ಮಾತನಾಡಿದ ಅವರು, ಇದು ಶೋಕಿ ಆಗಿದೆ ಜನರಿಗೆ, ಹುಲಿ ಹಲ್ಲು ಸಿಗುತ್ತೆ, ಹುಲಿ ಮೀಸೆ, ಆನೆ ಬಾಲ, ಕೃಷ್ಣ ಮಗದ ಕೊಂಬು ಹೀಗೆ ಇದನ್ನು ಧರಿಸುವುದು ಮತ್ತು ಶೋಕಿಗಾಗಿ ಬಳಸುತ್ತಿದ್ದಾರೆ. ಈ ಫ್ಯಾಷನ್​ನಿಂದ ವನ್ಯಜೀವಿಗೆ ಏನು ತೊಂದರೆ ಆಗುತ್ತಿದೆ ಎಂಬುದನ್ನು ಯಾರು ನೋಡುತ್ತಿಲ್ಲ. ಇದು ಒಳ್ಳೆಯ ವಿಚಾರ ಎಂದು ಜೋಸೆಫ್​​ ಹೂವರ್ ನ್ಯೂಸ್​ ಫಸ್ಟ್​ಗೆ ತಿಳಿಸಿದ್ದಾರೆ.

ನಿನ್ನೆ ಬಿಗ್​ ಬಾಸ್​ ಮನೆಯಿಂದ ಪತ್ರಕರ್ತ ಗೌರೀಶ್​ ಅಕ್ಕಿ ಎಲಿಮಿನೇಟ್​ ಆಗಿದ್ದರು. ಆದರೀಗ ವೈಲ್ಡ್​ ಲೈಫ್​ ಆ್ಯಕ್ಟ್​ ಅಡಿಯಲ್ಲಿ ಹುಲಿ ಉಗುರನ್ನು ಧರಿಸಿದ್ದ ಸ್ಪರ್ಧಿ ವರ್ತೂರ್​ ಅವರನ್ನು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆ ಮೂಲಕ ಬಿಗ್​ ಬಾಸ್​​ ಕಾರ್ಯಕ್ರಮಕ್ಕೆ ದೊಡ್ಡ ಟ್ವಿಸ್ಟ್​ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More