ಮತಯುದ್ಧಕ್ಕೂ ಮುನ್ನವೇ ‘ಕಮಲ-ದಳ’ ಮೈತ್ರಿ ಮಂಥನ
ಕೇಸರಿ-ಹಸಿರಿನ ದೋಸ್ತಿ.. ಕೈಗೆ ಜಟೀಲ ಕುಸ್ತಿಯ ಭೀತಿ
‘ಹಳೇ ಪರಿವಾರ’ದ ಹೊಸ ಸವಾಲು ಸ್ವೀಕರಿಸಿದ ಹಸ್ತ
ವಿಧಾನಸಭೆ ಚುನಾವಣೆ ಸೋಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನ ಹತ್ತಿರವಾಗಿಸಿದೆ. ಶತ್ರುವಿನ ಶತ್ರು ಮಿತ್ರ ಅನ್ನೋ ಹಾಗೇ ಎರಡು ಪಕ್ಷಗಳ ಟಾರ್ಗೆಟ್, ಕಾಂಗ್ರೆಸ್ ಆಗಿದೆ. ಇನ್ನು, ಭಿನ್ನ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್, ಲೋಕ ಕದನಕ್ಕೆ ತನ್ನ ಫಾರ್ಮೂಲಾ ಬದಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇತ್ತ, ಮೈತ್ರಿ ವಿಚಾರವಾಗಿ ಕೈ-ಕಮಲ ನಾಯಕರ ಮಾತಿನ ವಾಗ್ಯುದ್ಧವೂ ಜೋರಾಗಿದೆ. ಲೋಕಸಭೆ ಎಲೆಕ್ಷನ್ಗೆ ರಾಜ್ಯದಲ್ಲಿ ಮೂರು ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ಮತ ಕದನಕ್ಕೂ ಮುನ್ನವೇ ಕಮಲ-ತೆನೆ ಪಾರ್ಟಿಗಳು ಮೈತ್ರಿ ಮಂಥನಕ್ಕೆ ಕುಳಿತಿವೆ. ವಿಧಾನಸಭೆ ಸೋಲಿಗೆ ಸೇಡು ತೀರಿಸಿಕೊಳ್ಳಲು ತಾಲೀಮು ನಡೆಸ್ತಿರುವ ಎರಡು ಪಕ್ಷಗಳಿಗೂ ಸಾಮರ್ಥ್ಯದ ಜೊತೆಗೆ ಅಸ್ತಿತ್ವದ ಹೋರಾಟವೂ ಅನಿವಾರ್ಯ ಆಗಿಸಿದೆ. ಕೇಸರಿ-ಹಸಿರಿನ ದೋಸ್ತಿ, ಕೈಗೆ ಜಟೀಲ ಕುಸ್ತಿಯ ಭೀತಿ ಇದೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಜೆಡಿ ಯೆಸ್!
‘ಹಳೇ ಪರಿವಾರ’ದ ಹೊಸ ಸವಾಲು ಸ್ವೀಕರಿಸಿದ ಹಸ್ತ
2024ರ ಲೋಕಸಭೆ ಎಲೆಕ್ಷನ್ಗೆ ನಮೋ ಟೀಂ ಮೈತ್ರಿ ವಿಸ್ತರಣೆಯಲ್ಲಿ ತೊಡಗಿದೆ. ಮಿಷನ್ ಸೌಥ್ನ ಭಾಗವಾಗಿ ಜೆಡಿಎಸ್ಗೆ ಗಾಳ ಹಾಕಿದ ಕಮಲ, ಕಳೆದ ಬಾರಿಯ ಫಲಿತಾಂಶ ಮರುಕಳಿಸುವ ಲೆಕ್ಕಾಚಾರದಲ್ಲಿದೆ. ದಳಕ್ಕೂ ಆಸರೆಯ ಆಶ್ರಯ ಬೇಕಿದ್ದು, ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆದಿದೆ. ಈ ಮೈತ್ರಿ ವಿಚಾರವಾಗಿ ಎರಡು ಪಕ್ಷಗಳನ್ನ ಕೈಪಡೆ ಕುಟುಕಿದ್ದು, ಸವಾಲು ಗೆಲ್ಲುವ ವಿಶ್ವಾಸದಲ್ಲಿದೆ.
ಮೈತ್ರಿ ಮನಸ್ಸು ಮಾಡಿದ ಬಿಜೆಪಿ ರಾಜ್ಯದಲ್ಲಿ ವೀಕು!
ಕಾಂಗ್ರೆಸ್ ಓಟ ತಡೆದುನೋಡಿ ಎಂದು ಪರಂ ಸೆಡ್ಡು!
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಕಳೆದ ಬಾರಿ ಬಿಜೆಪಿ ಯಾರ ಜೊತೆಗೂ ಮೈತ್ರಿ ಮಾಡ್ಕೊಂಡಿಲ್ಲ. ಈಗ ಮೈತ್ರಿ ಅಂತಿದ್ದಾರೆ. ಅಂದ್ರೆ ಬಿಜೆಪಿ ವೀಕ್ ಆಗಿದೆ ಅಂತ ಅಲ್ವಾ ಅಂತ ಪರಮೇಶ್ವರ್ ಲಾಜಿಕ್ ಪ್ರಶ್ನೆ. ಮೈತ್ರಿಯಿಂದ ಕಾಂಗ್ರೆಸ್ ಹೆದರಿಸಲು ಹೊರಟಿದ್ದಾರೆ. ಆದ್ರೆ, ಇದಕ್ಕೆಲ್ಲಾ ನಾವು ರೆಡಿ ಅಂತ ಸೆಡ್ಡು ಹೊಡೆದಿದ್ದಾರೆ.
ನನ್ನ ಹೆಣವೂ ಕೂಡ ಬಿಜೆಪಿ ಪಕ್ಷದತ್ತ ಹೋಗಲ್ಲ!
ಹೆಚ್ಡಿಕೆ ಆರೋಪಕ್ಕೆ ಸಿದ್ದು ಭರ್ಜರಿ ಕೌಂಟರ್!
ಬಿಜೆಪಿ ಸೇರಲು ಅಡ್ವಾಣಿ ಭೇಟಿ ಮಾಡಿದ್ದರು ಎಂಬ ಮಾಜಿ ಸಿಎಂ ಹೆಚ್ಡಿಕೆ ಆರೋಪಕ್ಕೆ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಕೋಮುವಾದಿಗಳ ಜೊತೆ ರಾಜಿ ಇಲ್ಲವೇ ಇಲ್ಲ. ನನ್ನ ಹೆಣವೂ ಕೂಡ ಬಿಜೆಪಿಗೆ ಹೋಗಲ್ಲ. ನಾನು ಸಿದ್ಧಾಂತಕ್ಕಾಗಿ ಬದುಕಿರುವ ವ್ಯಕ್ತಿ ಅಂತ ಕೌಂಟರ್ ಮಾಡಿದ್ದಾರೆ.
ಜೆಡಿಎಸ್ ಬಿಜೆಪಿ ‘ಬಿ’ ಟೀಂ ಸಾಬೀತು ಎಂದ ಖರ್ಗೆ
ಗೊಂದಲದಲ್ಲಿ ಗೌಡರಿಂದ ತಪ್ಪು ಹೆಜ್ಜೆ ಎಂದ ಖಂಡ್ರೆ!
ಕಮಲ ದಳ ಮೈತ್ರಿಯನ್ನ ಕುಟುಕಿದ ಸಚಿವ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಅನ್ನೋದು ಸಾಬೀತಾಗಿದೆ. ಮೋದಿ ಪಾಪ್ಯುಲಾರಿಟಿ ಇಳಿಯುತ್ತಿರೋದಕ್ಕೆ ಸಾಕ್ಷಿ ಎಂದರು. ಇತ್ತ ಈಶ್ವರ್ ಖಂಡ್ರೆ ವ್ಯಾಖ್ಯಾನ ಭಿನ್ನವಾಗಿದೆ. ಹಿರಿಯ ನಾಯಕ ಗೌಡರ ಗೊಂದಲವೇ ಮೈತ್ರಿ ತೀರ್ಮಾನ ಅಂತ ಹೇಳಿದ್ದಾರೆ.
ಕಮಲ ದಳ ಒಂದಾದ್ರೆ ಕಾಂಗ್ರೆಸ್ಗೆ ಅಡ್ರೆಸ್ ಇರಲ್ಲ
ಮೈತ್ರಿ ಪರವಾಗಿ ಬಿಜೆಪಿ ನಾಯಕರಿಂದ ಬ್ಯಾಟಿಂಗ್!
ದೆಹಲಿಯಲ್ಲಿ ಮೈತ್ರಿ ಪಲ್ಲವಿಸ್ತಿರುವ ಹೊತ್ತಲ್ಲೆ ರಾಜ್ಯ ಬಿಜೆಪಿಯಲ್ಲಿ ಫುಲ್ ಖುಷ್ ಆದಂತಿದೆ. ಮೈತ್ರಿ ಎಂಬುದು ಸಿಹಿಸುದ್ದಿ ಎಂದ ಈಶ್ವರಪ್ಪ, ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಮಣಿಸಲು ಈ ದೋಸ್ತಿ ಅಗತ್ಯ ಅಂತ ಮಾಜಿ ಸಿಎಂ ಬೊಮ್ಮಾಯಿ ಸಮರ್ಥಿಸಿದ್ದಾರೆ. ಒಟ್ಟಾರೆ, ಸದ್ಯ ಮೈತ್ರಿ ಸುಳಿವು ಸಿಕ್ಕಿದ್ದು ಸೀಟ್ ಶೇರಿಂಗ್ ಫೈನಲ್ ಆಗಬೇಕಿದೆ. 2 ಪಕ್ಷಗಳಿಗೂ ಬೇರೆ ಬೇರೆ ಕಾರಣಕ್ಕೆ ದೋಸ್ತಿ ಅನಿವಾರ್ಯ ಆಗಿದ್ದು, ಕಾಂಗ್ರೆಸ್ ಮಣಿಸಲು ಟೊಂಕಕಟ್ಟಿ ನಿಂತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮತಯುದ್ಧಕ್ಕೂ ಮುನ್ನವೇ ‘ಕಮಲ-ದಳ’ ಮೈತ್ರಿ ಮಂಥನ
ಕೇಸರಿ-ಹಸಿರಿನ ದೋಸ್ತಿ.. ಕೈಗೆ ಜಟೀಲ ಕುಸ್ತಿಯ ಭೀತಿ
‘ಹಳೇ ಪರಿವಾರ’ದ ಹೊಸ ಸವಾಲು ಸ್ವೀಕರಿಸಿದ ಹಸ್ತ
ವಿಧಾನಸಭೆ ಚುನಾವಣೆ ಸೋಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನ ಹತ್ತಿರವಾಗಿಸಿದೆ. ಶತ್ರುವಿನ ಶತ್ರು ಮಿತ್ರ ಅನ್ನೋ ಹಾಗೇ ಎರಡು ಪಕ್ಷಗಳ ಟಾರ್ಗೆಟ್, ಕಾಂಗ್ರೆಸ್ ಆಗಿದೆ. ಇನ್ನು, ಭಿನ್ನ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್, ಲೋಕ ಕದನಕ್ಕೆ ತನ್ನ ಫಾರ್ಮೂಲಾ ಬದಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇತ್ತ, ಮೈತ್ರಿ ವಿಚಾರವಾಗಿ ಕೈ-ಕಮಲ ನಾಯಕರ ಮಾತಿನ ವಾಗ್ಯುದ್ಧವೂ ಜೋರಾಗಿದೆ. ಲೋಕಸಭೆ ಎಲೆಕ್ಷನ್ಗೆ ರಾಜ್ಯದಲ್ಲಿ ಮೂರು ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ಮತ ಕದನಕ್ಕೂ ಮುನ್ನವೇ ಕಮಲ-ತೆನೆ ಪಾರ್ಟಿಗಳು ಮೈತ್ರಿ ಮಂಥನಕ್ಕೆ ಕುಳಿತಿವೆ. ವಿಧಾನಸಭೆ ಸೋಲಿಗೆ ಸೇಡು ತೀರಿಸಿಕೊಳ್ಳಲು ತಾಲೀಮು ನಡೆಸ್ತಿರುವ ಎರಡು ಪಕ್ಷಗಳಿಗೂ ಸಾಮರ್ಥ್ಯದ ಜೊತೆಗೆ ಅಸ್ತಿತ್ವದ ಹೋರಾಟವೂ ಅನಿವಾರ್ಯ ಆಗಿಸಿದೆ. ಕೇಸರಿ-ಹಸಿರಿನ ದೋಸ್ತಿ, ಕೈಗೆ ಜಟೀಲ ಕುಸ್ತಿಯ ಭೀತಿ ಇದೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಜೆಡಿ ಯೆಸ್!
‘ಹಳೇ ಪರಿವಾರ’ದ ಹೊಸ ಸವಾಲು ಸ್ವೀಕರಿಸಿದ ಹಸ್ತ
2024ರ ಲೋಕಸಭೆ ಎಲೆಕ್ಷನ್ಗೆ ನಮೋ ಟೀಂ ಮೈತ್ರಿ ವಿಸ್ತರಣೆಯಲ್ಲಿ ತೊಡಗಿದೆ. ಮಿಷನ್ ಸೌಥ್ನ ಭಾಗವಾಗಿ ಜೆಡಿಎಸ್ಗೆ ಗಾಳ ಹಾಕಿದ ಕಮಲ, ಕಳೆದ ಬಾರಿಯ ಫಲಿತಾಂಶ ಮರುಕಳಿಸುವ ಲೆಕ್ಕಾಚಾರದಲ್ಲಿದೆ. ದಳಕ್ಕೂ ಆಸರೆಯ ಆಶ್ರಯ ಬೇಕಿದ್ದು, ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆದಿದೆ. ಈ ಮೈತ್ರಿ ವಿಚಾರವಾಗಿ ಎರಡು ಪಕ್ಷಗಳನ್ನ ಕೈಪಡೆ ಕುಟುಕಿದ್ದು, ಸವಾಲು ಗೆಲ್ಲುವ ವಿಶ್ವಾಸದಲ್ಲಿದೆ.
ಮೈತ್ರಿ ಮನಸ್ಸು ಮಾಡಿದ ಬಿಜೆಪಿ ರಾಜ್ಯದಲ್ಲಿ ವೀಕು!
ಕಾಂಗ್ರೆಸ್ ಓಟ ತಡೆದುನೋಡಿ ಎಂದು ಪರಂ ಸೆಡ್ಡು!
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಕಳೆದ ಬಾರಿ ಬಿಜೆಪಿ ಯಾರ ಜೊತೆಗೂ ಮೈತ್ರಿ ಮಾಡ್ಕೊಂಡಿಲ್ಲ. ಈಗ ಮೈತ್ರಿ ಅಂತಿದ್ದಾರೆ. ಅಂದ್ರೆ ಬಿಜೆಪಿ ವೀಕ್ ಆಗಿದೆ ಅಂತ ಅಲ್ವಾ ಅಂತ ಪರಮೇಶ್ವರ್ ಲಾಜಿಕ್ ಪ್ರಶ್ನೆ. ಮೈತ್ರಿಯಿಂದ ಕಾಂಗ್ರೆಸ್ ಹೆದರಿಸಲು ಹೊರಟಿದ್ದಾರೆ. ಆದ್ರೆ, ಇದಕ್ಕೆಲ್ಲಾ ನಾವು ರೆಡಿ ಅಂತ ಸೆಡ್ಡು ಹೊಡೆದಿದ್ದಾರೆ.
ನನ್ನ ಹೆಣವೂ ಕೂಡ ಬಿಜೆಪಿ ಪಕ್ಷದತ್ತ ಹೋಗಲ್ಲ!
ಹೆಚ್ಡಿಕೆ ಆರೋಪಕ್ಕೆ ಸಿದ್ದು ಭರ್ಜರಿ ಕೌಂಟರ್!
ಬಿಜೆಪಿ ಸೇರಲು ಅಡ್ವಾಣಿ ಭೇಟಿ ಮಾಡಿದ್ದರು ಎಂಬ ಮಾಜಿ ಸಿಎಂ ಹೆಚ್ಡಿಕೆ ಆರೋಪಕ್ಕೆ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಕೋಮುವಾದಿಗಳ ಜೊತೆ ರಾಜಿ ಇಲ್ಲವೇ ಇಲ್ಲ. ನನ್ನ ಹೆಣವೂ ಕೂಡ ಬಿಜೆಪಿಗೆ ಹೋಗಲ್ಲ. ನಾನು ಸಿದ್ಧಾಂತಕ್ಕಾಗಿ ಬದುಕಿರುವ ವ್ಯಕ್ತಿ ಅಂತ ಕೌಂಟರ್ ಮಾಡಿದ್ದಾರೆ.
ಜೆಡಿಎಸ್ ಬಿಜೆಪಿ ‘ಬಿ’ ಟೀಂ ಸಾಬೀತು ಎಂದ ಖರ್ಗೆ
ಗೊಂದಲದಲ್ಲಿ ಗೌಡರಿಂದ ತಪ್ಪು ಹೆಜ್ಜೆ ಎಂದ ಖಂಡ್ರೆ!
ಕಮಲ ದಳ ಮೈತ್ರಿಯನ್ನ ಕುಟುಕಿದ ಸಚಿವ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಅನ್ನೋದು ಸಾಬೀತಾಗಿದೆ. ಮೋದಿ ಪಾಪ್ಯುಲಾರಿಟಿ ಇಳಿಯುತ್ತಿರೋದಕ್ಕೆ ಸಾಕ್ಷಿ ಎಂದರು. ಇತ್ತ ಈಶ್ವರ್ ಖಂಡ್ರೆ ವ್ಯಾಖ್ಯಾನ ಭಿನ್ನವಾಗಿದೆ. ಹಿರಿಯ ನಾಯಕ ಗೌಡರ ಗೊಂದಲವೇ ಮೈತ್ರಿ ತೀರ್ಮಾನ ಅಂತ ಹೇಳಿದ್ದಾರೆ.
ಕಮಲ ದಳ ಒಂದಾದ್ರೆ ಕಾಂಗ್ರೆಸ್ಗೆ ಅಡ್ರೆಸ್ ಇರಲ್ಲ
ಮೈತ್ರಿ ಪರವಾಗಿ ಬಿಜೆಪಿ ನಾಯಕರಿಂದ ಬ್ಯಾಟಿಂಗ್!
ದೆಹಲಿಯಲ್ಲಿ ಮೈತ್ರಿ ಪಲ್ಲವಿಸ್ತಿರುವ ಹೊತ್ತಲ್ಲೆ ರಾಜ್ಯ ಬಿಜೆಪಿಯಲ್ಲಿ ಫುಲ್ ಖುಷ್ ಆದಂತಿದೆ. ಮೈತ್ರಿ ಎಂಬುದು ಸಿಹಿಸುದ್ದಿ ಎಂದ ಈಶ್ವರಪ್ಪ, ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಮಣಿಸಲು ಈ ದೋಸ್ತಿ ಅಗತ್ಯ ಅಂತ ಮಾಜಿ ಸಿಎಂ ಬೊಮ್ಮಾಯಿ ಸಮರ್ಥಿಸಿದ್ದಾರೆ. ಒಟ್ಟಾರೆ, ಸದ್ಯ ಮೈತ್ರಿ ಸುಳಿವು ಸಿಕ್ಕಿದ್ದು ಸೀಟ್ ಶೇರಿಂಗ್ ಫೈನಲ್ ಆಗಬೇಕಿದೆ. 2 ಪಕ್ಷಗಳಿಗೂ ಬೇರೆ ಬೇರೆ ಕಾರಣಕ್ಕೆ ದೋಸ್ತಿ ಅನಿವಾರ್ಯ ಆಗಿದ್ದು, ಕಾಂಗ್ರೆಸ್ ಮಣಿಸಲು ಟೊಂಕಕಟ್ಟಿ ನಿಂತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ