newsfirstkannada.com

ಬಿಜೆಪಿಯಿಂದ ಕಾಂಗ್ರೆಸ್​ಗೆ ಕೌಂಟರ್​​​; ಲೋಕಸಭಾ ಚುನಾವಣೆ ಗೆಲ್ಲಲು ಬಿ.ಎಲ್​ ಸಂತೋಷ್​​​ ಮಾಸ್ಟರ್​​ ಪ್ಲಾನ್​​

Share :

07-08-2023

    ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕಟೀಲ್ ಎಚ್ಚರಿಕೆ!

    ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ

    ಕಾಂಗ್ರೆಸ್‌ ಗ್ಯಾರಂಟಿಗಳ ಮೇಲೆ ಕೇಸರಿ ಪಡೆ ಕಣ್ಣು

ಬೆಂಗಳೂರು: ಲೋಕ ಕದನದಲ್ಲಿ ಹ್ಯಾಟ್ರಿಕ್​ ಗೆಲವು ಸಾಧಿಸಲು ಕೇಸರಿ ಪಾಳಯ ಟೊಂಕಕಟ್ಟಿ ನಿಂತಿದೆ. ಆದರೆ ಕರುನಾಡಿನ ಗ್ಯಾರಂಟಿ ಸೋಲಿನಿಂದ ಸಣ್ಣ ಆತಂಕವೂ ಎದುರಾಗಿದೆ. ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿ ಗೇಮ್​ಪ್ಲಾನ್​ ಮಾಡಿದರೆ, ಕಥೆ ಹೇಗಪ್ಪ ಎಂಬ ಚಿಂತೆ ಬಿಜೆಪಿ ಹೈಕಮಾಂಡ್​ ತಲೆಯನ್ನು ಒಕ್ಕಿದೆ. ಹೀಗಾಗಿ ಗ್ಯಾರಂಟಿಗಳ ಮೇಲೆ ಕಣ್ಣಿಡಲು ಸಂತೋಷ್​ಗೆ ಬಿಜೆಪಿ ಹೈಕಮಾಂಡ್​ ಹೈ ಟಾಸ್ಕ್​ ನೀಡಿದ್ದು, ಮೈಯನ್ನೆಲ್ಲ ಕಣ್ಣಾಗಿಸಿಕೊಂಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್​ನ ಕೈ ಹಿಡಿದಿದ್ದೇ ಗ್ಯಾರಂಟಿ ಘೋಷಣೆಗಳು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಗ್ಯಾರಂಟಿ ಘೋಷಣೆಗಳ ಮೂಲಕ ಕಮಾಲ್​ ಮಾಡಿದ್ದ ಕಾಂಗ್ರೆಸ್​ ಪಡೆ 135 ಸ್ಥಾನಗಳ ಪ್ರಚಂಡ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಅಧಿಕಾರದಲ್ಲಿದ್ದ ಬಿಜೆಪಿ ಕಾಂಗ್ರೆಸ್​ನ ಗ್ಯಾರಂಟಿಗಳ ಸುನಾಮಿಗೆ ಕೊಚ್ಚಿ ಹೋಗಿದೆ. ಇದೀಗ ಲೋಕಸಭೆ ಚುನಾವಣೆಯಲ್ಲೂ ಗೆಲುವಿಗಾಗಿ ಕಾಂಗ್ರೆಸ್​ ರಣವ್ಯೂಹ ರಚಿಸೋದು ಗ್ಯಾರಂಟಿ. ಹೀಗಾಗಿ ಕರ್ನಾಟಕದ ಗ್ಯಾರಂಟಿ ಸೋಲಿನಿಂದ ಪಾಠ ಕಲಿತಿರುವ ಕೇಸರಿ ಪಡೆ ಫುಲ್​ ಅಲರ್ಟ್​ ಆಗಿದೆ.

ಲೋಕಸಭೆಗೆ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಪ್ಲಾನ್​
ಕಾಂಗ್ರೆಸ್‌ ಗ್ಯಾರಂಟಿಗಳ ಮೇಲೆ ಕೇಸರಿ ಪಡೆ ಕಣ್ಣು

2024ರ ಲೋಕಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಬಿಜೆಪಿ ಪಡೆ, ಹ್ಯಾಟ್ರಿಕ್​ ಜಯದ ಕನಸು ಕಾಣ್ತಿದೆ. ಆದ್ರೆ, ಕಾಂಗ್ರೆಸ್​ನ ಗ್ಯಾರಂಟಿ ಅಸ್ತ್ರದಿಂದ ಕೇಸರಿ ಪಡೆಯ ನಿದ್ರಾಭಂಗವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರು ಗೆದ್ದರು. ಆದ್ರೀಗ ಕಾಂಗ್ರೆಸ್​ನ ಗ್ಯಾರಂಟಿಗಳಿಂದಾಗಿ ಸಣ್ಣ ಆತಂಕ ಶುರುವಾಗಿದೆ. ಹೆಚ್ಚು ಸ್ಥಾನ ಗೆಲ್ಲಲು ಪಣತೊಟ್ಟಿರುವ ಕೇಸರಿ ಪಡೆ, ಕಾಂಗ್ರೆಸ್​ನ ರಣತಂತ್ರಗಳ ಬಗ್ಗೆ ಹದ್ದಿನ ಕಣ್ಣಿಡಲು ನಿರ್ಧರಿಸಿದೆ. ಕಾಂಗ್ರೆಸ್ ಗ್ಯಾರಂಟಿ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್​, ಸಮಗ್ರ ಮಾಹಿತಿ ತರಿಸಿಕೊಂಡು, ತಂತ್ರ ರೂಪಿಸಲು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​.ಸಂತೋಷ್​ಗೆ ಟಾಸ್ಕ್​ ನೀಡಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಈಗಿನ ವಾತಾವರಣ ಹೇಗಿದೆ? ವಿಧಾನಸಭೆ ಎಲೆಕ್ಷನ್​ನಲ್ಲಿ 7 ಜಿಲ್ಲೆಗಳಲ್ಲಿ ಬಿಜೆಪಿ ಖಾತೆಯನ್ನೇ ತೆರೆದಿಲ್ಲ. ಏಳು ಜಿಲ್ಲೆಗಳಲ್ಲಿ ಬಿಜೆಪಿಯ ಸಂಸದರುಗಳ ಇಂದಿನ ಪರಿಸ್ಥಿತಿ ಹೇಗಿದೆ. ರಾಜ್ಯ ಸರ್ಕಾರದಲ್ಲಿದ್ದ 20 ಸಚಿವರು ಪರಾಭವಗೊಂಡಿದ್ದು ಹೇಗೆ ಎಂಬ ಮಾಹಿತಿ ತರಿಸಿಕೊಂಡು, ತಂತ್ರ ರೂಪಿಸಲು ನಿರ್ಧರಿಸಿದೆ.

ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕಟೀಲ್ ಎಚ್ಚರಿಕೆ

ಇನ್ನು ಬೆಂಗಳೂರಿನ 3 ಸಂಸದ ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆದ್ದಿದೆ. ಹೀಗಾಗಿ ಆ ಕ್ಷೇತ್ರಗಳನ್ನು 2024ರ ಚುನಾವಣೆಯಲ್ಲೂ ತಮ್ಮ ಬಳಿಯೇ ಉಳಿಸಿಕೊಳ್ಳಬೇಕಾಗಿದೆ. ಈಗಾಗಲೇ ಡಿಸಿಎಂ ಡಿಕೆ.ಶಿವಕುಮಾರ್​, ಬಿಜೆಪಿಯಲ್ಲಿ ಗುರುಸಿಕೊಂಡಿರುವ ಹಲವು ಮುಖಂಡರನ್ನು ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಆರ್​ಆರ್​ ನಗರ ಕ್ಷೇತ್ರದ ವೇಲು ನಾಯ್ಕರ್​ ಕಾಂಗ್ರೆಸ್​ ಸೇರ್ಪಡೆಯಾಗಿದ್ರು. ಈ ವಿಷ್ಯ ಪ್ರಸ್ತಾಪಿಸಿ, ಬೆಂಗಳೂರು ವ್ಯಾಪ್ತಿಯ 16 ಶಾಸಕರಿಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​, ಪಕ್ಷದ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದು ಗ್ಯಾರಂಟಿ ಸವಾಲ್​ಗೆ ಅಶ್ವತ್ಥ್​ನಾರಾಯಣ್​ ಟಾಂಗ್

ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ರು. ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ವೇಳೆ, ಗ್ಯಾರಂಟಿ ಯೋಜನೆಗಳನ್ನೇ ಚರ್ಚಿಸಿ ಎಂದು ಪ್ರಧಾನಿಗೆ ಸವಾಲು ಹಾಕಿದ್ರು. ಸಿದ್ದರಾಮಯ್ಯನವರ ಈ ಹೇಳಿಕೆ ಮಾಜಿ ಸಚಿವ ಅಶ್ವತ್ಥ್​ನಾರಾಯಣ್​ ಎದಿರೇಟು ನೀಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿ ತಾಕತ್ತು ತೋರಿಸಿ ಎಂದು ಕಿಡಿಕಾರಿದ್ದಾರೆ. ಒಟ್ಟಾರೆ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿ ಬಾಕಿ ಇರುವಂತೆ, ಕಾಂಗ್ರೆಸ್​ ಬಿಜೆಪಿ ಮಧ್ಯೆ, ಆರೋಪ-ಪ್ರತ್ಯಾರೋಪ, ಸವಾಲು ಪ್ರತಿಸವಾಲು. ತಂತ್ರ-ರಣತಂತ್ರಗಳು ಜೋರಾಗಿಯೇ ನಡೆಯುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯಿಂದ ಕಾಂಗ್ರೆಸ್​ಗೆ ಕೌಂಟರ್​​​; ಲೋಕಸಭಾ ಚುನಾವಣೆ ಗೆಲ್ಲಲು ಬಿ.ಎಲ್​ ಸಂತೋಷ್​​​ ಮಾಸ್ಟರ್​​ ಪ್ಲಾನ್​​

https://newsfirstlive.com/wp-content/uploads/2023/08/bl-santhosh.jpg

    ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕಟೀಲ್ ಎಚ್ಚರಿಕೆ!

    ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ

    ಕಾಂಗ್ರೆಸ್‌ ಗ್ಯಾರಂಟಿಗಳ ಮೇಲೆ ಕೇಸರಿ ಪಡೆ ಕಣ್ಣು

ಬೆಂಗಳೂರು: ಲೋಕ ಕದನದಲ್ಲಿ ಹ್ಯಾಟ್ರಿಕ್​ ಗೆಲವು ಸಾಧಿಸಲು ಕೇಸರಿ ಪಾಳಯ ಟೊಂಕಕಟ್ಟಿ ನಿಂತಿದೆ. ಆದರೆ ಕರುನಾಡಿನ ಗ್ಯಾರಂಟಿ ಸೋಲಿನಿಂದ ಸಣ್ಣ ಆತಂಕವೂ ಎದುರಾಗಿದೆ. ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿ ಗೇಮ್​ಪ್ಲಾನ್​ ಮಾಡಿದರೆ, ಕಥೆ ಹೇಗಪ್ಪ ಎಂಬ ಚಿಂತೆ ಬಿಜೆಪಿ ಹೈಕಮಾಂಡ್​ ತಲೆಯನ್ನು ಒಕ್ಕಿದೆ. ಹೀಗಾಗಿ ಗ್ಯಾರಂಟಿಗಳ ಮೇಲೆ ಕಣ್ಣಿಡಲು ಸಂತೋಷ್​ಗೆ ಬಿಜೆಪಿ ಹೈಕಮಾಂಡ್​ ಹೈ ಟಾಸ್ಕ್​ ನೀಡಿದ್ದು, ಮೈಯನ್ನೆಲ್ಲ ಕಣ್ಣಾಗಿಸಿಕೊಂಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್​ನ ಕೈ ಹಿಡಿದಿದ್ದೇ ಗ್ಯಾರಂಟಿ ಘೋಷಣೆಗಳು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಗ್ಯಾರಂಟಿ ಘೋಷಣೆಗಳ ಮೂಲಕ ಕಮಾಲ್​ ಮಾಡಿದ್ದ ಕಾಂಗ್ರೆಸ್​ ಪಡೆ 135 ಸ್ಥಾನಗಳ ಪ್ರಚಂಡ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಅಧಿಕಾರದಲ್ಲಿದ್ದ ಬಿಜೆಪಿ ಕಾಂಗ್ರೆಸ್​ನ ಗ್ಯಾರಂಟಿಗಳ ಸುನಾಮಿಗೆ ಕೊಚ್ಚಿ ಹೋಗಿದೆ. ಇದೀಗ ಲೋಕಸಭೆ ಚುನಾವಣೆಯಲ್ಲೂ ಗೆಲುವಿಗಾಗಿ ಕಾಂಗ್ರೆಸ್​ ರಣವ್ಯೂಹ ರಚಿಸೋದು ಗ್ಯಾರಂಟಿ. ಹೀಗಾಗಿ ಕರ್ನಾಟಕದ ಗ್ಯಾರಂಟಿ ಸೋಲಿನಿಂದ ಪಾಠ ಕಲಿತಿರುವ ಕೇಸರಿ ಪಡೆ ಫುಲ್​ ಅಲರ್ಟ್​ ಆಗಿದೆ.

ಲೋಕಸಭೆಗೆ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಪ್ಲಾನ್​
ಕಾಂಗ್ರೆಸ್‌ ಗ್ಯಾರಂಟಿಗಳ ಮೇಲೆ ಕೇಸರಿ ಪಡೆ ಕಣ್ಣು

2024ರ ಲೋಕಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಬಿಜೆಪಿ ಪಡೆ, ಹ್ಯಾಟ್ರಿಕ್​ ಜಯದ ಕನಸು ಕಾಣ್ತಿದೆ. ಆದ್ರೆ, ಕಾಂಗ್ರೆಸ್​ನ ಗ್ಯಾರಂಟಿ ಅಸ್ತ್ರದಿಂದ ಕೇಸರಿ ಪಡೆಯ ನಿದ್ರಾಭಂಗವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರು ಗೆದ್ದರು. ಆದ್ರೀಗ ಕಾಂಗ್ರೆಸ್​ನ ಗ್ಯಾರಂಟಿಗಳಿಂದಾಗಿ ಸಣ್ಣ ಆತಂಕ ಶುರುವಾಗಿದೆ. ಹೆಚ್ಚು ಸ್ಥಾನ ಗೆಲ್ಲಲು ಪಣತೊಟ್ಟಿರುವ ಕೇಸರಿ ಪಡೆ, ಕಾಂಗ್ರೆಸ್​ನ ರಣತಂತ್ರಗಳ ಬಗ್ಗೆ ಹದ್ದಿನ ಕಣ್ಣಿಡಲು ನಿರ್ಧರಿಸಿದೆ. ಕಾಂಗ್ರೆಸ್ ಗ್ಯಾರಂಟಿ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್​, ಸಮಗ್ರ ಮಾಹಿತಿ ತರಿಸಿಕೊಂಡು, ತಂತ್ರ ರೂಪಿಸಲು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​.ಸಂತೋಷ್​ಗೆ ಟಾಸ್ಕ್​ ನೀಡಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಈಗಿನ ವಾತಾವರಣ ಹೇಗಿದೆ? ವಿಧಾನಸಭೆ ಎಲೆಕ್ಷನ್​ನಲ್ಲಿ 7 ಜಿಲ್ಲೆಗಳಲ್ಲಿ ಬಿಜೆಪಿ ಖಾತೆಯನ್ನೇ ತೆರೆದಿಲ್ಲ. ಏಳು ಜಿಲ್ಲೆಗಳಲ್ಲಿ ಬಿಜೆಪಿಯ ಸಂಸದರುಗಳ ಇಂದಿನ ಪರಿಸ್ಥಿತಿ ಹೇಗಿದೆ. ರಾಜ್ಯ ಸರ್ಕಾರದಲ್ಲಿದ್ದ 20 ಸಚಿವರು ಪರಾಭವಗೊಂಡಿದ್ದು ಹೇಗೆ ಎಂಬ ಮಾಹಿತಿ ತರಿಸಿಕೊಂಡು, ತಂತ್ರ ರೂಪಿಸಲು ನಿರ್ಧರಿಸಿದೆ.

ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕಟೀಲ್ ಎಚ್ಚರಿಕೆ

ಇನ್ನು ಬೆಂಗಳೂರಿನ 3 ಸಂಸದ ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆದ್ದಿದೆ. ಹೀಗಾಗಿ ಆ ಕ್ಷೇತ್ರಗಳನ್ನು 2024ರ ಚುನಾವಣೆಯಲ್ಲೂ ತಮ್ಮ ಬಳಿಯೇ ಉಳಿಸಿಕೊಳ್ಳಬೇಕಾಗಿದೆ. ಈಗಾಗಲೇ ಡಿಸಿಎಂ ಡಿಕೆ.ಶಿವಕುಮಾರ್​, ಬಿಜೆಪಿಯಲ್ಲಿ ಗುರುಸಿಕೊಂಡಿರುವ ಹಲವು ಮುಖಂಡರನ್ನು ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಆರ್​ಆರ್​ ನಗರ ಕ್ಷೇತ್ರದ ವೇಲು ನಾಯ್ಕರ್​ ಕಾಂಗ್ರೆಸ್​ ಸೇರ್ಪಡೆಯಾಗಿದ್ರು. ಈ ವಿಷ್ಯ ಪ್ರಸ್ತಾಪಿಸಿ, ಬೆಂಗಳೂರು ವ್ಯಾಪ್ತಿಯ 16 ಶಾಸಕರಿಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​, ಪಕ್ಷದ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದು ಗ್ಯಾರಂಟಿ ಸವಾಲ್​ಗೆ ಅಶ್ವತ್ಥ್​ನಾರಾಯಣ್​ ಟಾಂಗ್

ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ರು. ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ವೇಳೆ, ಗ್ಯಾರಂಟಿ ಯೋಜನೆಗಳನ್ನೇ ಚರ್ಚಿಸಿ ಎಂದು ಪ್ರಧಾನಿಗೆ ಸವಾಲು ಹಾಕಿದ್ರು. ಸಿದ್ದರಾಮಯ್ಯನವರ ಈ ಹೇಳಿಕೆ ಮಾಜಿ ಸಚಿವ ಅಶ್ವತ್ಥ್​ನಾರಾಯಣ್​ ಎದಿರೇಟು ನೀಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿ ತಾಕತ್ತು ತೋರಿಸಿ ಎಂದು ಕಿಡಿಕಾರಿದ್ದಾರೆ. ಒಟ್ಟಾರೆ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿ ಬಾಕಿ ಇರುವಂತೆ, ಕಾಂಗ್ರೆಸ್​ ಬಿಜೆಪಿ ಮಧ್ಯೆ, ಆರೋಪ-ಪ್ರತ್ಯಾರೋಪ, ಸವಾಲು ಪ್ರತಿಸವಾಲು. ತಂತ್ರ-ರಣತಂತ್ರಗಳು ಜೋರಾಗಿಯೇ ನಡೆಯುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More