ಬಿಜೆಪಿ ನಾಯಕರನ್ನ ಸಂಪರ್ಕ ಮಾಡಿದ್ದು ಪ್ರಧಾನಿಯಾಗಲು ಅಲ್ಲ
ದೇವೇಗೌಡರ ಬಗ್ಗೆ ಮಾತಾಡುವ ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇದ್ಯಾ?
ಸೆಪ್ಟೆಂಬರ್ 12ರಂದು ಹೆಚ್.ಡಿ ಕುಮಾರಸ್ವಾಮಿ ದೆಹಲಿಗೆ ಪಯಣ
ಬೆಂಗಳೂರು: ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ಕೇವಲ ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲೂ ಚರ್ಚೆಗೀಡಾಗಿದೆ. ಇಂದು ಖುದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೇ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಬಹಿರಂಗ ಸಮಾವೇಶನದಲ್ಲಿ ಮಾತನಾಡಿದ ಹೆಚ್ಡಿಡಿ, ಯಾವುದನ್ನೂ ನಾನು ಕದ್ದು ಮುಚ್ಚಿ ಮಾಡೋದಿಲ್ಲ ಎನ್ನುತ್ತಾ ಬಿಜೆಪಿ ದೋಸ್ತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಜೆಡಿಎಸ್ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಕರೆ ಕೊಟ್ಟಿರುವ ದೇವೇಗೌಡರು ಭಾವುಕರಾಗಿಯೇ ಭಾಷಣ ಮಾಡಿದ್ದಾರೆ. ನೈತಿಕತೆ ಯಾರಿಗಿದೆ ಇದೆ ಅಂತ ನನಗೆ ಗೊತ್ತಿಲ್ಲ. ನಾನು ವ್ಯಕ್ತಿಗತವಾಗಿ ನಿಂದನೆ ಮಾಡಲು ಹೋಗಲ್ಲ. 90ರ ವಯಸ್ಸಿನಲ್ಲಿ ನಾನು ಗಳಿಸುವುದು ಏನೂ ಇಲ್ಲ. ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿದೆ. ಇಲ್ಲಿ ಬಂದಿರುವ ಕಾರ್ಯಕರ್ತರಿಗೆ ಪಕ್ಷ ಉಳಿಸುವ ಶಕ್ತಿಯಿದೆ. ನಿಮ್ಮಿಂದಲೇ ಅದು ಸಾಧ್ಯ. ಬೇರೆ ಯಾರಿಂದಲೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ದೇವೇಗೌಡರು, ದೆಹಲಿಗೆ ಹೋಗಿ ಯಾರನ್ನೋ ಭೇಟಿ ಮಾಡಿದ್ದಾರೆ ಅಂತ ಟೀಕಿಸಿದ್ದಾರೆ. ಯಾರು ಇವರು ಕಾಂಗ್ರೆಸ್ಸಿಗರು, ಇವರು ಎಲ್ಲಿದ್ದರು. ದೇವೇಗೌಡರ ಬಗ್ಗೆ ಮಾತಾಡುವ ಯೋಗ್ಯತೆ ಇದೆಯಾ? ಎಲ್ಲಿದ್ದರು ಇವರು? ಯಾವಾಗ ಬಂದರು? ಕಾವಲು ಸಮಿತಿ ಸದಸ್ಯರಿಗೆ ರಾಮಕೃಷ್ಣ ಹೆಗ್ಡೆ ಅವರು ಸಿಎಂ ಆದಾಗ 18 ದಿನ ಬಿಜೆಪಿಯವರು ಬೆಂಬಲ ಕೊಟ್ಟಿದ್ದರು. 4 ಜನ ಸಿಪಿಐ ಇದ್ದರು. ಕಾವಲು ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಮಹಾನುಭಾವರು. ಇವರಿಗೆ ಏನು ನೈತಿಕತೆ ಇದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: WATCH: ಬಿಜೆಪಿ, ಜೆಡಿಎಸ್ ಮೈತ್ರಿಯಾದ್ರೆ ಮಂಡ್ಯದಲ್ಲಿ ಸುಮಲತಾ ಅತಂತ್ರ ಆಗ್ತಾರಾ? HDK ಹೇಳಿದ್ದೇನು?
ದೆಹಲಿಯಲ್ಲಿ ಭೇಟಿಯಾಗಿದ್ದು ನಿಜ..!
ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದು ನಿಜ. ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿದ್ದು ನಾನು ಪ್ರಧಾನಿಯಾಗಲು ಅಲ್ಲ. ಜೆಡಿಎಸ್ ಪಕ್ಷ ಉಳಿಸಲು ಸಂಪರ್ಕಿಸಿದ್ದೇನೆ. ನಿಮ್ಮ ತಂದೆ ಹಠವಾದಿ, ಅವರ ಮಾತು ಕೇಳಬೇಡ ಅಂತ ಕುಮಾರಸ್ವಾಮಿಗೆ ಬಿಜೆಪಿ ನಾಯಕರು ಹೇಳಿದ್ರು. ನನಗೆ ಯಾರ ಮೇಲೂ ದ್ವೇಷವಿಲ್ಲ. ರಾಜ್ಯದ ಜನತೆಯ ಕೊಡುವ ತೀರ್ಪು ಬಹಳ ಮುಖ್ಯ. ಒಂದು ಪ್ರಾದೇಶಿಕ ಪಕ್ಷ ಉಳಿಸುವ, ಬೆಳೆಸುವ ಕೆಲಸ ಮಾಡಿ ಎಂದು ದೇವೇಗೌಡರು ಹೇಳಿದ್ದಾರೆ.
ದೆಹಲಿಗೆ ತೆರಳಲಿರುವ ಹೆಚ್.ಡಿ. ಕುಮಾರಸ್ವಾಮಿ
ಹೆಚ್.ಡಿ ದೇವೇಗೌಡರ ಈ ಮಾತಿನಿಂದ ಬಿಜೆಪಿ, ಜೆಡಿಎಸ್ ಮೈತ್ರಿ ಈಗ ಅಧಿಕೃತವಾಗಿದೆ. ಇನ್ನು ಸೀಟು ಹಂಚಿಕೆಯೊಂದೇ ಬಾಕಿ ಇದೆ. ಸೀಟು ಹಂಚಿಕೆಯ ಕುರಿತಂತೆ ಬಿಜೆಪಿ ವರಿಷ್ಠರು, ಕುಮಾರಸ್ವಾಮಿ ಅವರು ಮಾತುಕತೆ ನಡೆಸುತ್ತಾರೆ ಎಂದು ದೇವೇಗೌಡರು ಹೇಳಿದ್ದಾರೆ. ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳ ಜೊತೆಗೆ ದೇವೇಗೌಡರು ವಿಜಯಪುರ, ಬೀದರ್, ರಾಯಚೂರಿನ ಸ್ಥಾನವನ್ನು ಕೇಳಿದ್ದಾರೆ ಎನ್ನಲಾಗಿದೆ.
ಇದೇ ಸೆಪ್ಟೆಂಬರ್ 12ರಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಘೋಷಣೆ ಆಗುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸುವ ನಾಯಕರು ಬಿಜೆಪಿ, ಜೆಡಿಎಸ್ ದೋಸ್ತಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಜೆಪಿ ನಾಯಕರನ್ನ ಸಂಪರ್ಕ ಮಾಡಿದ್ದು ಪ್ರಧಾನಿಯಾಗಲು ಅಲ್ಲ
ದೇವೇಗೌಡರ ಬಗ್ಗೆ ಮಾತಾಡುವ ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇದ್ಯಾ?
ಸೆಪ್ಟೆಂಬರ್ 12ರಂದು ಹೆಚ್.ಡಿ ಕುಮಾರಸ್ವಾಮಿ ದೆಹಲಿಗೆ ಪಯಣ
ಬೆಂಗಳೂರು: ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ಕೇವಲ ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲೂ ಚರ್ಚೆಗೀಡಾಗಿದೆ. ಇಂದು ಖುದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೇ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಬಹಿರಂಗ ಸಮಾವೇಶನದಲ್ಲಿ ಮಾತನಾಡಿದ ಹೆಚ್ಡಿಡಿ, ಯಾವುದನ್ನೂ ನಾನು ಕದ್ದು ಮುಚ್ಚಿ ಮಾಡೋದಿಲ್ಲ ಎನ್ನುತ್ತಾ ಬಿಜೆಪಿ ದೋಸ್ತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಜೆಡಿಎಸ್ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಕರೆ ಕೊಟ್ಟಿರುವ ದೇವೇಗೌಡರು ಭಾವುಕರಾಗಿಯೇ ಭಾಷಣ ಮಾಡಿದ್ದಾರೆ. ನೈತಿಕತೆ ಯಾರಿಗಿದೆ ಇದೆ ಅಂತ ನನಗೆ ಗೊತ್ತಿಲ್ಲ. ನಾನು ವ್ಯಕ್ತಿಗತವಾಗಿ ನಿಂದನೆ ಮಾಡಲು ಹೋಗಲ್ಲ. 90ರ ವಯಸ್ಸಿನಲ್ಲಿ ನಾನು ಗಳಿಸುವುದು ಏನೂ ಇಲ್ಲ. ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿದೆ. ಇಲ್ಲಿ ಬಂದಿರುವ ಕಾರ್ಯಕರ್ತರಿಗೆ ಪಕ್ಷ ಉಳಿಸುವ ಶಕ್ತಿಯಿದೆ. ನಿಮ್ಮಿಂದಲೇ ಅದು ಸಾಧ್ಯ. ಬೇರೆ ಯಾರಿಂದಲೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ದೇವೇಗೌಡರು, ದೆಹಲಿಗೆ ಹೋಗಿ ಯಾರನ್ನೋ ಭೇಟಿ ಮಾಡಿದ್ದಾರೆ ಅಂತ ಟೀಕಿಸಿದ್ದಾರೆ. ಯಾರು ಇವರು ಕಾಂಗ್ರೆಸ್ಸಿಗರು, ಇವರು ಎಲ್ಲಿದ್ದರು. ದೇವೇಗೌಡರ ಬಗ್ಗೆ ಮಾತಾಡುವ ಯೋಗ್ಯತೆ ಇದೆಯಾ? ಎಲ್ಲಿದ್ದರು ಇವರು? ಯಾವಾಗ ಬಂದರು? ಕಾವಲು ಸಮಿತಿ ಸದಸ್ಯರಿಗೆ ರಾಮಕೃಷ್ಣ ಹೆಗ್ಡೆ ಅವರು ಸಿಎಂ ಆದಾಗ 18 ದಿನ ಬಿಜೆಪಿಯವರು ಬೆಂಬಲ ಕೊಟ್ಟಿದ್ದರು. 4 ಜನ ಸಿಪಿಐ ಇದ್ದರು. ಕಾವಲು ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಮಹಾನುಭಾವರು. ಇವರಿಗೆ ಏನು ನೈತಿಕತೆ ಇದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: WATCH: ಬಿಜೆಪಿ, ಜೆಡಿಎಸ್ ಮೈತ್ರಿಯಾದ್ರೆ ಮಂಡ್ಯದಲ್ಲಿ ಸುಮಲತಾ ಅತಂತ್ರ ಆಗ್ತಾರಾ? HDK ಹೇಳಿದ್ದೇನು?
ದೆಹಲಿಯಲ್ಲಿ ಭೇಟಿಯಾಗಿದ್ದು ನಿಜ..!
ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದು ನಿಜ. ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿದ್ದು ನಾನು ಪ್ರಧಾನಿಯಾಗಲು ಅಲ್ಲ. ಜೆಡಿಎಸ್ ಪಕ್ಷ ಉಳಿಸಲು ಸಂಪರ್ಕಿಸಿದ್ದೇನೆ. ನಿಮ್ಮ ತಂದೆ ಹಠವಾದಿ, ಅವರ ಮಾತು ಕೇಳಬೇಡ ಅಂತ ಕುಮಾರಸ್ವಾಮಿಗೆ ಬಿಜೆಪಿ ನಾಯಕರು ಹೇಳಿದ್ರು. ನನಗೆ ಯಾರ ಮೇಲೂ ದ್ವೇಷವಿಲ್ಲ. ರಾಜ್ಯದ ಜನತೆಯ ಕೊಡುವ ತೀರ್ಪು ಬಹಳ ಮುಖ್ಯ. ಒಂದು ಪ್ರಾದೇಶಿಕ ಪಕ್ಷ ಉಳಿಸುವ, ಬೆಳೆಸುವ ಕೆಲಸ ಮಾಡಿ ಎಂದು ದೇವೇಗೌಡರು ಹೇಳಿದ್ದಾರೆ.
ದೆಹಲಿಗೆ ತೆರಳಲಿರುವ ಹೆಚ್.ಡಿ. ಕುಮಾರಸ್ವಾಮಿ
ಹೆಚ್.ಡಿ ದೇವೇಗೌಡರ ಈ ಮಾತಿನಿಂದ ಬಿಜೆಪಿ, ಜೆಡಿಎಸ್ ಮೈತ್ರಿ ಈಗ ಅಧಿಕೃತವಾಗಿದೆ. ಇನ್ನು ಸೀಟು ಹಂಚಿಕೆಯೊಂದೇ ಬಾಕಿ ಇದೆ. ಸೀಟು ಹಂಚಿಕೆಯ ಕುರಿತಂತೆ ಬಿಜೆಪಿ ವರಿಷ್ಠರು, ಕುಮಾರಸ್ವಾಮಿ ಅವರು ಮಾತುಕತೆ ನಡೆಸುತ್ತಾರೆ ಎಂದು ದೇವೇಗೌಡರು ಹೇಳಿದ್ದಾರೆ. ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳ ಜೊತೆಗೆ ದೇವೇಗೌಡರು ವಿಜಯಪುರ, ಬೀದರ್, ರಾಯಚೂರಿನ ಸ್ಥಾನವನ್ನು ಕೇಳಿದ್ದಾರೆ ಎನ್ನಲಾಗಿದೆ.
ಇದೇ ಸೆಪ್ಟೆಂಬರ್ 12ರಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಘೋಷಣೆ ಆಗುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸುವ ನಾಯಕರು ಬಿಜೆಪಿ, ಜೆಡಿಎಸ್ ದೋಸ್ತಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ