26 ವರ್ಷದ ಬಿಜೆಪಿ ಮುಖಂಡನ ಮೃತದೇಹ ಮರದಲ್ಲಿ ಪತ್ತೆ
ಮಹಿಳೆ ಜೊತೆ ಸಂಬಂಧದಲ್ಲಿದ್ದ ಬಿಜೆಪಿ ಮುಖಂಡ ಸುಭದೀಪ್
ಮಹಿಳೆಯ ಜೊತೆಗೆ ಸ್ವಇಚ್ಚೆಯಿಂದ ಓಡಿ ಹೋಗಿದ್ದ ಸುಭದೀಪ್
ಪಶ್ಚಿಮ ಬಂಗಾಳ: 26 ವರ್ಷದ ಬಿಜೆಪಿ ಮುಖಂಡ ಸುಭದೀಪ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಂಕುರಾ ಜಿಲ್ಲೆಯ ನಿಧಿರಾಂಪುರದಲ್ಲಿ ಬಳಿ ಇರುವ ಮರದಲ್ಲಿ ಮೃತದೇಹ ಸಿಕ್ಕಿದೆ.
ಸುಭದೀಪ್ ಕಳೆದ ಎಳು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಪಂಚಾಯತ್ ಚುನಾವಣೆಗೆಂದು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೀಗ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದೆ.
ಸುಭದೀಪ್ ಕುಟುಂಬಸ್ಥರು, ಆತನಿಗೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು. ಕಳೆದ ಮಂಗಳವಾರ ಅವರು ಮಹಿಳೆಯ ಜೊತೆಗೆ ಓಡಿ ಹೋಗಿದ್ದರು. ಆದರೆ ನಿಧಿರಾಂಪುರಕ್ಕೆ ಹಿಂತಿರುಗಿದಾಗಲೆಲ್ಲ ಮಹಿಳೆಯ ಕುಟುಂಬ ಆತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.
ಮಹಿಳೆ ಆಕೆಯ ಸ್ವಇಚ್ಚೆಯಿಂದ ಆತನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆಯ ಮನೆಯವರೇ ಸುಭದೀಪ್ನನ್ನು ಕೊಂದಿದ್ದಾರೆ. ಇದು ಪೂರ್ವ ನಿಯೋಜಿತ ಕೊಲೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಹಿನ್ನೆಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
26 ವರ್ಷದ ಬಿಜೆಪಿ ಮುಖಂಡನ ಮೃತದೇಹ ಮರದಲ್ಲಿ ಪತ್ತೆ
ಮಹಿಳೆ ಜೊತೆ ಸಂಬಂಧದಲ್ಲಿದ್ದ ಬಿಜೆಪಿ ಮುಖಂಡ ಸುಭದೀಪ್
ಮಹಿಳೆಯ ಜೊತೆಗೆ ಸ್ವಇಚ್ಚೆಯಿಂದ ಓಡಿ ಹೋಗಿದ್ದ ಸುಭದೀಪ್
ಪಶ್ಚಿಮ ಬಂಗಾಳ: 26 ವರ್ಷದ ಬಿಜೆಪಿ ಮುಖಂಡ ಸುಭದೀಪ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಂಕುರಾ ಜಿಲ್ಲೆಯ ನಿಧಿರಾಂಪುರದಲ್ಲಿ ಬಳಿ ಇರುವ ಮರದಲ್ಲಿ ಮೃತದೇಹ ಸಿಕ್ಕಿದೆ.
ಸುಭದೀಪ್ ಕಳೆದ ಎಳು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಪಂಚಾಯತ್ ಚುನಾವಣೆಗೆಂದು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೀಗ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದೆ.
ಸುಭದೀಪ್ ಕುಟುಂಬಸ್ಥರು, ಆತನಿಗೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು. ಕಳೆದ ಮಂಗಳವಾರ ಅವರು ಮಹಿಳೆಯ ಜೊತೆಗೆ ಓಡಿ ಹೋಗಿದ್ದರು. ಆದರೆ ನಿಧಿರಾಂಪುರಕ್ಕೆ ಹಿಂತಿರುಗಿದಾಗಲೆಲ್ಲ ಮಹಿಳೆಯ ಕುಟುಂಬ ಆತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.
ಮಹಿಳೆ ಆಕೆಯ ಸ್ವಇಚ್ಚೆಯಿಂದ ಆತನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆಯ ಮನೆಯವರೇ ಸುಭದೀಪ್ನನ್ನು ಕೊಂದಿದ್ದಾರೆ. ಇದು ಪೂರ್ವ ನಿಯೋಜಿತ ಕೊಲೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಹಿನ್ನೆಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ