ಸುಮಾರು 156 ವಾರ್ಡ್ಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವಾಹನಗಳೇ ಇಲ್ಲ
ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಎನ್.ಆರ್ ರಮೇಶ್ ಆಗ್ರಹ
ಶೇ.40ರಷ್ಟು ಆಟೋ ಹಾಜರಾತಿ ಇಲ್ಲದಿದ್ರೂ ಹಣ ಪಾವತಿಯಾಗ್ತಿದೆಯಾ?
ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿದ್ದಾರಾ ಅನವಶ್ಯಕ ಮಾರ್ಷಲ್ಗಳು?. ಮಾರ್ಷಲ್ಗಳ ನೇಮಕದಿಂದ ಪಾಲಿಕೆ ಸಕ್ಸಸ್ ಕಂಡಿದೆಯಾ?. ಇವರಿಂದ ಪಾಲಿಕೆಗೆ ಲಾಭವೆಷ್ಟು, ಲಾಸ್ ಎಷ್ಟು? ಈ ಕುರಿತು ಎನ್ಆರ್ ರಮೇಶ್ ಧ್ವನಿ ಎತ್ತಿದ್ದಾರೆ.
ಶಿಸ್ತಿನ ಸಿಪಾಯಿ, ಪಾಲಿಕೆಯ ಶಕ್ತಿ ಮಾರ್ಷಲ್ಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿರುವ ಅನವಶ್ಯಕ ಮಾರ್ಷಲ್ಗಳ ಸೇವೆಯನ್ನು ಸ್ಥಗಿತ ಗೊಳಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್, ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ. ತುಷಾರ್ ಗಿರಿನಾಥ್ರವರಿಗೆ ದೂರು ನೀಡಿದ್ದಾರೆ. ಹಾಗಿದ್ರೆ ಆ ದೂರಿನಲ್ಲೇನಿದೆ ಅನ್ನೋದನ್ನ ನೋಡೋದಾದ್ರೆ.
ಮಾರ್ಷಲ್ ಸೇವೆ ಸ್ಥಗಿತಕ್ಕಾಗಿ ದೂರು
ಮಾರ್ಷಲ್ಗಳನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ಒಂದು ವೇಳೆ ತೆಗೆದುಕೊಂಡಿಲ್ಲ ಅಂದರೆ ಒಂದು ವಾರ ನಿಗಧಿ ಮಾಡಿದ್ದೇನೆ. ನಂತರ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ. 6 ವರ್ಷದಲ್ಲಿ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿದ ಅಷ್ಟು ಜನ ಅಧಿಕಾರಿಗಳು ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ.
ಎನ್.ಆರ್ ರಮೇಶ್, ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ
ಅದೇನೆ ಇರ್ಲಿ ಈ ಬಗ್ಗೆ ಸತ್ಯಾಸತ್ಯತೆಗಳ ಪರಿಶೀಲನೆ ಮಾಡಿದ್ದೇ ಆದ್ರಲ್ಲಿ ಬೃಹತ್ ಮಟ್ಟದ ಗೋಲ್ ಮಾಲ್ ಕಾರ್ಯ ಬೆಳಕಿಗೆ ಬರಲಿದೆ ಎಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ…ಆದ್ರೆ ಇದಕ್ಕೆ ಬಿಬಿಎಂಪಿ ಯಾವ ಉತ್ತರ ಕೊಡುತ್ತೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸುಮಾರು 156 ವಾರ್ಡ್ಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವಾಹನಗಳೇ ಇಲ್ಲ
ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಎನ್.ಆರ್ ರಮೇಶ್ ಆಗ್ರಹ
ಶೇ.40ರಷ್ಟು ಆಟೋ ಹಾಜರಾತಿ ಇಲ್ಲದಿದ್ರೂ ಹಣ ಪಾವತಿಯಾಗ್ತಿದೆಯಾ?
ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿದ್ದಾರಾ ಅನವಶ್ಯಕ ಮಾರ್ಷಲ್ಗಳು?. ಮಾರ್ಷಲ್ಗಳ ನೇಮಕದಿಂದ ಪಾಲಿಕೆ ಸಕ್ಸಸ್ ಕಂಡಿದೆಯಾ?. ಇವರಿಂದ ಪಾಲಿಕೆಗೆ ಲಾಭವೆಷ್ಟು, ಲಾಸ್ ಎಷ್ಟು? ಈ ಕುರಿತು ಎನ್ಆರ್ ರಮೇಶ್ ಧ್ವನಿ ಎತ್ತಿದ್ದಾರೆ.
ಶಿಸ್ತಿನ ಸಿಪಾಯಿ, ಪಾಲಿಕೆಯ ಶಕ್ತಿ ಮಾರ್ಷಲ್ಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿರುವ ಅನವಶ್ಯಕ ಮಾರ್ಷಲ್ಗಳ ಸೇವೆಯನ್ನು ಸ್ಥಗಿತ ಗೊಳಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್, ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ. ತುಷಾರ್ ಗಿರಿನಾಥ್ರವರಿಗೆ ದೂರು ನೀಡಿದ್ದಾರೆ. ಹಾಗಿದ್ರೆ ಆ ದೂರಿನಲ್ಲೇನಿದೆ ಅನ್ನೋದನ್ನ ನೋಡೋದಾದ್ರೆ.
ಮಾರ್ಷಲ್ ಸೇವೆ ಸ್ಥಗಿತಕ್ಕಾಗಿ ದೂರು
ಮಾರ್ಷಲ್ಗಳನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ಒಂದು ವೇಳೆ ತೆಗೆದುಕೊಂಡಿಲ್ಲ ಅಂದರೆ ಒಂದು ವಾರ ನಿಗಧಿ ಮಾಡಿದ್ದೇನೆ. ನಂತರ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ. 6 ವರ್ಷದಲ್ಲಿ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿದ ಅಷ್ಟು ಜನ ಅಧಿಕಾರಿಗಳು ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ.
ಎನ್.ಆರ್ ರಮೇಶ್, ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ
ಅದೇನೆ ಇರ್ಲಿ ಈ ಬಗ್ಗೆ ಸತ್ಯಾಸತ್ಯತೆಗಳ ಪರಿಶೀಲನೆ ಮಾಡಿದ್ದೇ ಆದ್ರಲ್ಲಿ ಬೃಹತ್ ಮಟ್ಟದ ಗೋಲ್ ಮಾಲ್ ಕಾರ್ಯ ಬೆಳಕಿಗೆ ಬರಲಿದೆ ಎಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ…ಆದ್ರೆ ಇದಕ್ಕೆ ಬಿಬಿಎಂಪಿ ಯಾವ ಉತ್ತರ ಕೊಡುತ್ತೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ