newsfirstkannada.com

‘ಕಾಂಗ್ರೆಸ್​ ಘರ್​ವಾಪ್ಸಿ’ಗೆ ನಡುಗಿದ ಕೇಸರಿ ಪಡೆ; ಬಿಎಸ್​ವೈ ನಿವಾಸಕ್ಕೆ ದೌಡಾಯಿಸಿದ ಬಿಜೆಪಿ ಪ್ರಮುಖರು..!

Share :

19-08-2023

    ಕೇಸರಿ ಕಲಿಗಳಿಗೆ ತಲೆನೋವಾದ ಆಪರೇಷನ್​ ಹಸ್ತ

    ‘ಧವಳಗಿರಿ’ ನಿವಾಸದಲ್ಲಿ ಕೇಸರಿ ಕಲಿಗಳ ಸುದೀರ್ಘ ಚರ್ಚೆ

    ಬಿಎಸ್​ವೈ ಜೊತೆಗಿನ ಚರ್ಚೆಯಲ್ಲಿ 4 ವಿಷಯಗಳು ಚರ್ಚೆ

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಬಾಂಬೆ ಟೀಂ ಕಾಂಗ್ರೆಸ್​ ಘರ್​ವಾಪ್ಸಿ ಕೇಸರಿ ಪಡೆಯನ್ನು ನಡುಗುವಂತೆ ಮಾಡಿದೆ. ವಲಸಿಗ ನಾಯಕರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಕೇಸರಿ ಸೇನೆಯಲ್ಲಿ ಕಸರತ್ತು ಆರಂಭವಾಗಿದೆ. 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ಬಿಜೆಪಿ ನಾಯಕರು ಹಲವು ವಿಚಾರಗಳನ್ನು ಚರ್ಚಿಸಿ ಹೊಸ ಸಮರಕ್ಕೆ ಸಜ್ಜಾಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸದ್ಯ ಬಾಂಬೆ ಟೀಂ ಸೃಷ್ಟಿಸಿರೋ ಸಂಚಲನ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಅತ್ತ ದಳಪತಿ ಹೆಚ್​.ಡಿ ಕುಮಾರಸ್ವಾಮಿ ಸಹ ಕಾಂಗ್ರೆಸ್​ ಕೋಟೆಯ ಮೇಲೆ ಮಾತಿನ ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ ಜಂಪಿಂಗ್​ ಪಾಲಿಟಿಕ್ಸ್​ನಿಂದ ಮಂಕಾಗಿರೋ ಬಿಜೆಪಿ ತನ್ನ ತಂಡದ ಸದಸ್ಯರನ್ನ ಉಳಿಸಿಕೊಳ್ಳಲು ತಂತ್ರ, ರಣತಂತ್ರಗಳನ್ನ ಹೆಣೆಯಲು ಮುಂದಾಗಿದೆ. ಬಾಂಬೆ ಟೀಂ ಮತ್ತೆ ಕಾಂಗ್ರೆಸ್​ ಕಡೆ ವಾಲಿದ್ರೆ ಮುಂದೆ ಭಾರೀ ಮುಖಭಂಗವಾಗುತ್ತೆ ಅನ್ನೋದು ಬಿಜೆಪಿ ನಾಯಕರ ಎದೆಬಡಿತವನ್ನ ಹೆಚ್ಚಿಸಿದೆ.

ಬಹುಮತ ಇದ್ದರೂ ಅಪರೇಷನ್​ಗಿಳಿದ ‘ಕೈ’ ಟೀಂ!

135 ಶಾಸಕರ ಬಲದೊಂದಿಗೆ ಸರ್ಕಾರ ರಚಿಸಿ ಸೇಫ್​ ಜೋನ್​ನಲ್ಲಿ ಇದ್ದರೂ ಸಹ ಕಾಂಗ್ರೆಸ್​ ನಾಯಕರು ಮತ್ತೆ ಆಪರೇಷನ್​ಗೆ​ ಇಳಿದಿರೋದು ಬಿಜೆಪಿಗರ ನಿದ್ದೆಗೆಡಿಸಿದೆ. ಲೋಕಾಸಭಾ ಸಮರ ಸನಿಹವಿರೋದ್ರಿಂದ ಆಪರೇಷನ್​ ಹಸ್ತ ಸಕ್ಸಸ್​ ಆದ್ರೆ ಕೇಸರಿ ಸೇನೆಗೆ ಕಂಟಕ ಕಟ್ಟಿಟ್ಟ ಬುತ್ತಿ ಅನ್ನೋದು ನಾಯಕರಿಗೆ ಅರಿವಾಗಿದೆ. ಹೀಗಾಗಿ ಮನೆಮಕ್ಕಳನ್ನ ಮನೆಯಲ್ಲೇ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸಲು ಮುಂದಾಗಿದೆ.. ಈ ಪರಿಸ್ಥಿತಿ ನಿಭಾಯಿಸೋ ಹೊಣೆಯನ್ನ ಹೈಕಮಾಂಡ್​ ರಾಜ್ಯ ಬಿಜೆಪಿ ಪಾಲಿನ ಆಪತ್ಬಾಂಧವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರಿಗೆ ನೀಡಿದೆ.

‘ಧವಳಗಿರಿ’ ನಿವಾಸದಲ್ಲಿ ಕೇಸರಿ ಕಲಿಗಳ ಸುದೀರ್ಘ ಚರ್ಚೆ

ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಲು ಮುಂದಾಗಿರೋ ಬಿಜೆಪಿ ನಾಯಕರು ಕೈ ಪಡೆಯನ್ನ ಕಟ್ಟಿಹಾಕಲು ಪ್ಲಾನ್​ ರೂಪಿಸಲು ಸಜ್ಜಾಗಿದ್ದಾರೆ. ಇಷ್ಟು‌ ದಿನ ಸರ್ಕಾರಕ್ಕೆ ಹನಿಮೂನ್ ಪೀರಿಯಡ್ ನೀಡಿ ಸುಮ್ಮನಿದ್ದ ಕೇಸರಿ ಕಲಿಗಳು ಮತ್ತೆ ಕೈ ಕೋಟೆ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ. ನಿನ್ನೆ ಬಿಜೆಪಿ ಬಿ.ಎಸ್​ ಯಡಿಯೂರಪ್ಪರ ಬೆಂಗಳೂರಿನ ನಿವಾಸದಲ್ಲಿ ಬಿಜೆಪಿ ನಾಯಕರು 2 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ, ಆರ್​. ಅಶೋಕ್​, ಮುನಿರತ್ನ, ಮುರುಗೇಶ್​ ನಿರಾಣಿ, ಗೋಪಾಲಯ್ಯ ಸೇರಿ ಹಲವರು ಭಾಗಿಯಾಗಿದ್ದಾರೆ.

ಸುದೀರ್ಘ ಸಭೆ!

ಚರ್ಚೆ 1 : ಆಪರೇಷನ್ ಹಸ್ತದ ಬಗ್ಗೆ ಬಿಜೆಪಿ ನಾಯಕರಿಂದ ವಿಮರ್ಶೆ
ಬಾಂಬೆ ಟೀಂ ಅನ್ನ ಮತ್ತೆ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್​ ನಾಯಕರು ಆಪರೇಷನ್​ಗೆ​ ಇಳಿದಿದ್ದಾರೆ.. ಹೀಗಾಗಿ ಬಾಂಬೆ ಟೀಂ ಕಾಂಗ್ರೆಸ್​ಗೆ ಸೇರ್ಪಡೆಯಾದ್ರೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯುಂಟಾಗುತ್ತೆ.. ಹೀಗಾಗಿ ವಲಸಿಗರನ್ನ ಬಿಜೆಪಿಗೆ ಕರೆತಂದ ನಾಯಕರ ಹೆಗಲಿಗೆ ಅವರನ್ನ ಕಾಂಗ್ರೆಸ್​ ಕಡೆ ಮುಖ ಮಾಡದಂತೆ ಉಳಿಸಿಕೊಳ್ಳುವ ಜವಾಬ್ದಾರಿಯನ್ನ ನೀಡಲಾಗಿದೆ.. ವಲಸಿಗರ ಮನವೊಲಿಸಲು ಆಗಬೇಕಾದ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಚರ್ಚೆ 2 : ಹೋರಾಟದ ಹಾದಿ ಹಿಡಿಯಲು ಬಿಜೆಪಿಗರ ನಿರ್ಧಾರ

ರಾಜ್ಯ ಕಾಂಗ್ರೆಸ್ ಸರ್ಕಾರದ ನ್ಯೂನ್ಯತೆಗಳನ್ನ ಜನರ ಮುಂದಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಚರ್ಚೆ 3 : ಗುತ್ತಿಗೆದಾರರ ಅನುದಾನ ಬಿಡುಗಡೆಯಾಗದ ವಿಚಾರ ಚರ್ಚೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳ ಅನುದಾನ ಬಿಡುಗಡೆಯಾಗಿಲ್ಲ.. ಈ ಅನುದಾನ ಕಮಿಷನ್ ಆಧಾರದ ಮೇಲೆ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಅನ್ನೋ ವಿಚಾರವನ್ನ ಮುಂದಿಟ್ಟುಕೊಂಡು, ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.. ಆಗಸ್ಟ್ 23 ರಂದು ಪ್ರತಿಭಟನೆಗೆ ದಿನಾಂಕ ಸಹ ನಿಗದಿಪಡಿಸಿಲಾಗಿದೆ.

ಚರ್ಚೆ 4 : 2024ರ ಲೋಕಸಭಾ ಚುನಾವಣೆ ಗೆಲ್ಲಲು ಶಸ್ತ್ರಾಭ್ಯಾಸ

2024ರ ಲೋಕಸಭಾ ಚುನಾವಣೆಯಲ್ಲಿ ಅತೀಹೆಚ್ಚು ಸ್ಥಾನಗಳನ್ನ ರಾಜ್ಯದಲ್ಲಿ ಗೆಲ್ಲಲು ಬಿಜೆಪಿ ಸಿದ್ದತೆ ಮಾಡಿಕೊಳ್ಳುತ್ತಿದೆ.. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ನಿಟ್ಟಿನಲ್ಲಿ ಉತ್ತಮವಾಗಿ ತಯಾರಿ ನಡೆಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದ ಬೊಮ್ಮಾಯಿ

2 ಗಂಟೆಗಳ ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಬಿಎಸ್​ವೈ ಆಗಸ್ಟ್​ 23 ರಂದು ಹೋರಾಟ ನಡೆಸಲಿದ್ದೇವೆ ಅಂತ ತಿಳಿಸಿದ್ರು.. ಇತ್ತ ಬೊಮ್ಮಾಯಿ ವಲಸಿಗರು ಯಾರೂ ಪಕ್ಷ ಬಿಟ್ಟು ಹೋಗಲ್ಲ ಅಂದ್ರೆ ಅತ್ತ ಆರ್​. ಆಶೋಕ್​ 15 ಜನ ಶಾಸಕರು ಬಿಜೆಪಿ ಸೇರುವಾಗ ಕಾಂಗ್ರೆಸ್​ನವರು ಮಣ್ಣು ತಿಂತಿದ್ರಾ ಅಂತ ಕಿಡಿಕಾರಿದರು.

ಒಟ್ಟಿನಲ್ಲಿ ಅಪರೇಷನ್​ ಹಸ್ತಕ್ಕೆ ಬೆಚ್ಚಿಬಿದ್ದಿರೋ ಕೇಸರಿ ಸೇನೆ ಮತ್ತೆ ಪಿನಿಕ್ಸ್​ನಂತೆ ಎದ್ದುಬರಲು ಸಜ್ಜಾಗಿದೆ. ಬಾಂಬೆ ಟೀಂ ಅನ್ನ ಪಕ್ಷದಲ್ಲೇ ಉಳಿಸಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ರೂಪು ರೇಶೆಯನ್ನೂ ಸಿದ್ಧಪಡಿಸಿಕೊಂಡು ಸಮರ ಸಾರಲು ಅಲರ್ಟ್​ ಆಗಿ ನಿಂತಿದೆ.

ವಿಶೇಷ ವರದಿ: ಮಧುಸೂದನ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಾಂಗ್ರೆಸ್​ ಘರ್​ವಾಪ್ಸಿ’ಗೆ ನಡುಗಿದ ಕೇಸರಿ ಪಡೆ; ಬಿಎಸ್​ವೈ ನಿವಾಸಕ್ಕೆ ದೌಡಾಯಿಸಿದ ಬಿಜೆಪಿ ಪ್ರಮುಖರು..!

https://newsfirstlive.com/wp-content/uploads/2023/08/BSY-1.jpg

    ಕೇಸರಿ ಕಲಿಗಳಿಗೆ ತಲೆನೋವಾದ ಆಪರೇಷನ್​ ಹಸ್ತ

    ‘ಧವಳಗಿರಿ’ ನಿವಾಸದಲ್ಲಿ ಕೇಸರಿ ಕಲಿಗಳ ಸುದೀರ್ಘ ಚರ್ಚೆ

    ಬಿಎಸ್​ವೈ ಜೊತೆಗಿನ ಚರ್ಚೆಯಲ್ಲಿ 4 ವಿಷಯಗಳು ಚರ್ಚೆ

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಬಾಂಬೆ ಟೀಂ ಕಾಂಗ್ರೆಸ್​ ಘರ್​ವಾಪ್ಸಿ ಕೇಸರಿ ಪಡೆಯನ್ನು ನಡುಗುವಂತೆ ಮಾಡಿದೆ. ವಲಸಿಗ ನಾಯಕರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಕೇಸರಿ ಸೇನೆಯಲ್ಲಿ ಕಸರತ್ತು ಆರಂಭವಾಗಿದೆ. 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ಬಿಜೆಪಿ ನಾಯಕರು ಹಲವು ವಿಚಾರಗಳನ್ನು ಚರ್ಚಿಸಿ ಹೊಸ ಸಮರಕ್ಕೆ ಸಜ್ಜಾಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸದ್ಯ ಬಾಂಬೆ ಟೀಂ ಸೃಷ್ಟಿಸಿರೋ ಸಂಚಲನ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಅತ್ತ ದಳಪತಿ ಹೆಚ್​.ಡಿ ಕುಮಾರಸ್ವಾಮಿ ಸಹ ಕಾಂಗ್ರೆಸ್​ ಕೋಟೆಯ ಮೇಲೆ ಮಾತಿನ ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ ಜಂಪಿಂಗ್​ ಪಾಲಿಟಿಕ್ಸ್​ನಿಂದ ಮಂಕಾಗಿರೋ ಬಿಜೆಪಿ ತನ್ನ ತಂಡದ ಸದಸ್ಯರನ್ನ ಉಳಿಸಿಕೊಳ್ಳಲು ತಂತ್ರ, ರಣತಂತ್ರಗಳನ್ನ ಹೆಣೆಯಲು ಮುಂದಾಗಿದೆ. ಬಾಂಬೆ ಟೀಂ ಮತ್ತೆ ಕಾಂಗ್ರೆಸ್​ ಕಡೆ ವಾಲಿದ್ರೆ ಮುಂದೆ ಭಾರೀ ಮುಖಭಂಗವಾಗುತ್ತೆ ಅನ್ನೋದು ಬಿಜೆಪಿ ನಾಯಕರ ಎದೆಬಡಿತವನ್ನ ಹೆಚ್ಚಿಸಿದೆ.

ಬಹುಮತ ಇದ್ದರೂ ಅಪರೇಷನ್​ಗಿಳಿದ ‘ಕೈ’ ಟೀಂ!

135 ಶಾಸಕರ ಬಲದೊಂದಿಗೆ ಸರ್ಕಾರ ರಚಿಸಿ ಸೇಫ್​ ಜೋನ್​ನಲ್ಲಿ ಇದ್ದರೂ ಸಹ ಕಾಂಗ್ರೆಸ್​ ನಾಯಕರು ಮತ್ತೆ ಆಪರೇಷನ್​ಗೆ​ ಇಳಿದಿರೋದು ಬಿಜೆಪಿಗರ ನಿದ್ದೆಗೆಡಿಸಿದೆ. ಲೋಕಾಸಭಾ ಸಮರ ಸನಿಹವಿರೋದ್ರಿಂದ ಆಪರೇಷನ್​ ಹಸ್ತ ಸಕ್ಸಸ್​ ಆದ್ರೆ ಕೇಸರಿ ಸೇನೆಗೆ ಕಂಟಕ ಕಟ್ಟಿಟ್ಟ ಬುತ್ತಿ ಅನ್ನೋದು ನಾಯಕರಿಗೆ ಅರಿವಾಗಿದೆ. ಹೀಗಾಗಿ ಮನೆಮಕ್ಕಳನ್ನ ಮನೆಯಲ್ಲೇ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸಲು ಮುಂದಾಗಿದೆ.. ಈ ಪರಿಸ್ಥಿತಿ ನಿಭಾಯಿಸೋ ಹೊಣೆಯನ್ನ ಹೈಕಮಾಂಡ್​ ರಾಜ್ಯ ಬಿಜೆಪಿ ಪಾಲಿನ ಆಪತ್ಬಾಂಧವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರಿಗೆ ನೀಡಿದೆ.

‘ಧವಳಗಿರಿ’ ನಿವಾಸದಲ್ಲಿ ಕೇಸರಿ ಕಲಿಗಳ ಸುದೀರ್ಘ ಚರ್ಚೆ

ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಲು ಮುಂದಾಗಿರೋ ಬಿಜೆಪಿ ನಾಯಕರು ಕೈ ಪಡೆಯನ್ನ ಕಟ್ಟಿಹಾಕಲು ಪ್ಲಾನ್​ ರೂಪಿಸಲು ಸಜ್ಜಾಗಿದ್ದಾರೆ. ಇಷ್ಟು‌ ದಿನ ಸರ್ಕಾರಕ್ಕೆ ಹನಿಮೂನ್ ಪೀರಿಯಡ್ ನೀಡಿ ಸುಮ್ಮನಿದ್ದ ಕೇಸರಿ ಕಲಿಗಳು ಮತ್ತೆ ಕೈ ಕೋಟೆ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ. ನಿನ್ನೆ ಬಿಜೆಪಿ ಬಿ.ಎಸ್​ ಯಡಿಯೂರಪ್ಪರ ಬೆಂಗಳೂರಿನ ನಿವಾಸದಲ್ಲಿ ಬಿಜೆಪಿ ನಾಯಕರು 2 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ, ಆರ್​. ಅಶೋಕ್​, ಮುನಿರತ್ನ, ಮುರುಗೇಶ್​ ನಿರಾಣಿ, ಗೋಪಾಲಯ್ಯ ಸೇರಿ ಹಲವರು ಭಾಗಿಯಾಗಿದ್ದಾರೆ.

ಸುದೀರ್ಘ ಸಭೆ!

ಚರ್ಚೆ 1 : ಆಪರೇಷನ್ ಹಸ್ತದ ಬಗ್ಗೆ ಬಿಜೆಪಿ ನಾಯಕರಿಂದ ವಿಮರ್ಶೆ
ಬಾಂಬೆ ಟೀಂ ಅನ್ನ ಮತ್ತೆ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್​ ನಾಯಕರು ಆಪರೇಷನ್​ಗೆ​ ಇಳಿದಿದ್ದಾರೆ.. ಹೀಗಾಗಿ ಬಾಂಬೆ ಟೀಂ ಕಾಂಗ್ರೆಸ್​ಗೆ ಸೇರ್ಪಡೆಯಾದ್ರೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯುಂಟಾಗುತ್ತೆ.. ಹೀಗಾಗಿ ವಲಸಿಗರನ್ನ ಬಿಜೆಪಿಗೆ ಕರೆತಂದ ನಾಯಕರ ಹೆಗಲಿಗೆ ಅವರನ್ನ ಕಾಂಗ್ರೆಸ್​ ಕಡೆ ಮುಖ ಮಾಡದಂತೆ ಉಳಿಸಿಕೊಳ್ಳುವ ಜವಾಬ್ದಾರಿಯನ್ನ ನೀಡಲಾಗಿದೆ.. ವಲಸಿಗರ ಮನವೊಲಿಸಲು ಆಗಬೇಕಾದ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಚರ್ಚೆ 2 : ಹೋರಾಟದ ಹಾದಿ ಹಿಡಿಯಲು ಬಿಜೆಪಿಗರ ನಿರ್ಧಾರ

ರಾಜ್ಯ ಕಾಂಗ್ರೆಸ್ ಸರ್ಕಾರದ ನ್ಯೂನ್ಯತೆಗಳನ್ನ ಜನರ ಮುಂದಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಚರ್ಚೆ 3 : ಗುತ್ತಿಗೆದಾರರ ಅನುದಾನ ಬಿಡುಗಡೆಯಾಗದ ವಿಚಾರ ಚರ್ಚೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳ ಅನುದಾನ ಬಿಡುಗಡೆಯಾಗಿಲ್ಲ.. ಈ ಅನುದಾನ ಕಮಿಷನ್ ಆಧಾರದ ಮೇಲೆ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಅನ್ನೋ ವಿಚಾರವನ್ನ ಮುಂದಿಟ್ಟುಕೊಂಡು, ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.. ಆಗಸ್ಟ್ 23 ರಂದು ಪ್ರತಿಭಟನೆಗೆ ದಿನಾಂಕ ಸಹ ನಿಗದಿಪಡಿಸಿಲಾಗಿದೆ.

ಚರ್ಚೆ 4 : 2024ರ ಲೋಕಸಭಾ ಚುನಾವಣೆ ಗೆಲ್ಲಲು ಶಸ್ತ್ರಾಭ್ಯಾಸ

2024ರ ಲೋಕಸಭಾ ಚುನಾವಣೆಯಲ್ಲಿ ಅತೀಹೆಚ್ಚು ಸ್ಥಾನಗಳನ್ನ ರಾಜ್ಯದಲ್ಲಿ ಗೆಲ್ಲಲು ಬಿಜೆಪಿ ಸಿದ್ದತೆ ಮಾಡಿಕೊಳ್ಳುತ್ತಿದೆ.. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ನಿಟ್ಟಿನಲ್ಲಿ ಉತ್ತಮವಾಗಿ ತಯಾರಿ ನಡೆಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದ ಬೊಮ್ಮಾಯಿ

2 ಗಂಟೆಗಳ ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಬಿಎಸ್​ವೈ ಆಗಸ್ಟ್​ 23 ರಂದು ಹೋರಾಟ ನಡೆಸಲಿದ್ದೇವೆ ಅಂತ ತಿಳಿಸಿದ್ರು.. ಇತ್ತ ಬೊಮ್ಮಾಯಿ ವಲಸಿಗರು ಯಾರೂ ಪಕ್ಷ ಬಿಟ್ಟು ಹೋಗಲ್ಲ ಅಂದ್ರೆ ಅತ್ತ ಆರ್​. ಆಶೋಕ್​ 15 ಜನ ಶಾಸಕರು ಬಿಜೆಪಿ ಸೇರುವಾಗ ಕಾಂಗ್ರೆಸ್​ನವರು ಮಣ್ಣು ತಿಂತಿದ್ರಾ ಅಂತ ಕಿಡಿಕಾರಿದರು.

ಒಟ್ಟಿನಲ್ಲಿ ಅಪರೇಷನ್​ ಹಸ್ತಕ್ಕೆ ಬೆಚ್ಚಿಬಿದ್ದಿರೋ ಕೇಸರಿ ಸೇನೆ ಮತ್ತೆ ಪಿನಿಕ್ಸ್​ನಂತೆ ಎದ್ದುಬರಲು ಸಜ್ಜಾಗಿದೆ. ಬಾಂಬೆ ಟೀಂ ಅನ್ನ ಪಕ್ಷದಲ್ಲೇ ಉಳಿಸಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ರೂಪು ರೇಶೆಯನ್ನೂ ಸಿದ್ಧಪಡಿಸಿಕೊಂಡು ಸಮರ ಸಾರಲು ಅಲರ್ಟ್​ ಆಗಿ ನಿಂತಿದೆ.

ವಿಶೇಷ ವರದಿ: ಮಧುಸೂದನ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More