ಬಿಎಂಟಿಸಿ ರಥದ ಸಾರಥಿಗಳಿಗೆ ಈ ಸಮಸ್ಯೆಗೆ ಕಾರಣವೇನು
ಸಂಸ್ಥೆಗಾಗಿ ದುಡಿಯುತ್ತಿರುವ ಡ್ರೈವರ್ಗಳ ಹೃದಯಕ್ಕೆ ಅಪಾಯ
ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವೈದ್ಯರಿಂದ ಸಮಗ್ರ ಪರೀಕ್ಷೆ!
ಬೆಂಗಳೂರು: ಬಿಎಂಟಿಸಿ ಬಸ್ ಓಡಿಸುತ್ತಿರೋ ಚಾಲಕರಿಗೆ ಶಾಕಿಂಗ್ ನ್ಯೂಸ್ವೊಂದು ಕಾದಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಸಂಸ್ಥೆಗಾಗಿ ದುಡಿಯುತ್ತಿರುವ ಬಹತೇಕ ಡ್ರೈವರ್ಗಳ ಹೃದಯ ಅಪಾಯದಲ್ಲಿಯಂತೆ. ಹೌದು, ಜಯದೇವ ಆಸ್ಪತ್ರೆ ವೈದ್ಯರ ವರದಿಯಲ್ಲಿ ಈ ಅಘಾತಕಾರಿ ಅಂಶ ಬಯಲಾಗಿದೆ.
ಸಾಲು ಸಾಲು ಬಸ್ಗಳ ಕೊರತೆ. ಒವರ್ ಟೈಂ ಡ್ಯೂಟಿ. ಹಬ್ಬದ ದಿನವೂ ಕೆಲಸ. ಸದಾ ಕಿರಿಕಿರಿ, ಒತ್ತಡ. ಇದು ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಹಕರ ನಿತ್ಯದ ಗೋಳು. ಶಕ್ತಿ ಯೋಜನೆ ಜಾರಿಯಾದ ನಂತರ ಈ ಸಮಸ್ಯೆ ದುಪ್ಪಟ್ಟಾಗಿದೆ. ಬಸ್ಗಳ ಕೊರತೆ ನಡುವೆ ಬಿಎಂಟಿಸಿ ಜನರಿಗಾಗಿ ಇರೋ ಬಸ್ ನಲ್ಲಿಯೇ ಹೆಚ್ಚುವರಿ ಟ್ರಿಪ್ ಮಾಡಿಸ್ತಿದೆ. ಇದು ಚಾಲಕರ ಜೀವಕ್ಕೆ ಆಪತ್ತು ಎದುರಾಗುವ ಆತಂಕ ಮೂಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕರು ಹೃದ್ರೋಗದ ಅಪಾಯದಲ್ಲಿದ್ದಾರೆ. ಬಿಎಂಟಿಸಿ ಚಾಲಕರ ಪೈಕಿ ಶೇಕಡ 40-50ರಷ್ಟು ಜನ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಜಯದೇವ ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣೆಯಿಂದ ಬೆಳಕಿಗೆ ಬಂದಿದೆ.
ಜಯದೇವ ಆಸ್ಪತ್ರೆಯಲ್ಲಿ ಕಳೆದ 12 ತಿಂಗಳಿನಲ್ಲಿ 8200 ಚಾಲಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವೈದ್ಯರಿಂದ ಸಮಗ್ರ ಪರೀಕ್ಷೆ ನಡೆದಿದೆ. ಚಾಲಕರ ಪರೀಕ್ಷಿಸಲು 2022ರ ಆಗಸ್ಟ್ನಲ್ಲಿ ಒಪ್ಪಂದಕ್ಕೆ ಜಯದೇವ ಸಂಸ್ಥೆ ಸಹಿ ಹಾಕಿತ್ತು. ಅದರಂತೆ ಚಾಲಕರ ಬ್ಲೆಡ್ ಟೆಸ್ಟ್, ಹೃದಯದ ಒತ್ತಡ ಪರೀಕ್ಷೆ, ಇಸಿಜಿ, ಇಕೋ ಟೆಸ್ಟ್ ಸೇರಿ ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸಿತ್ತು. ತಪಾಸಣೆಗೆ ಒಳಗಾದ ಶೇಕಡಾ 40 ರಷ್ಟು ಚಾಲಕರಿಗೆ ಮಧುಹೇಹ ಇರೋದು ಪತ್ತೆಯಾಗಿದೆ. ಅಲ್ಲದೆ ಶೇ. 40 ರಷ್ಟು ಚಾಲಕರಿಗೆ ಅಧಿಕದೊತ್ತಡ, ಶೇ. 62 ರಷ್ಟು ಚಾಲಕರಿಗೆ ಹೈ ಕೊಲೆಸ್ಟಲ್ ಪತ್ತೆಯಾಗಿದೆ. ಇವರಿಗೆ ಭವಿಷ್ಯದಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗೆ ಒಳಗಾಗಲಿದ್ದಾರೆ ಅಂತ ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಬಿಗ್ ಆಫರ್; MLA ಗಣಿಗ ರವಿಕುಮಾರ್ ಹೇಳಿದ್ದೇನು..?
ಚಾಲಕರು ಒವರ್ ಟೈಂ ಡ್ಯೂಟಿ ಮಾಡ್ತಾರೆ. ಸರಿಯಾದ ಸಮಯಕ್ಕೆ ಸಮರ್ಪಕ ಆಹಾರ ಸೇವಿಸುವುದಿಲ್ಲ. ವ್ಯಾಯಾಮದ ಕೊರತೆ ಮತ್ತು 10 ಗಂಟೆಗೂ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಹೆಚ್ಚು ಆಯಾಸಕ್ಕೆ ಒಳಗಾಗಿದ್ದಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಅವರನ್ನು ಕಾಡುತ್ತಿವೆಯಂತೆ. ಅಲ್ಲದೇ ಶೇ.5 ರಷ್ಟು ಮಂದಿಗೆ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವುದು ಕಂಡು ಬಂದಿದೆಯಂತೆ. ಇದೇ ರೀತಿಯ ಆರೋಗ್ಯ ತಪಾಸಣೆಗಳನ್ನು ಕರ್ನಾಟಕ ಕೆಎಸ್ಆರ್ಟಿಸಿ ಮತ್ತು ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಒಟ್ಟಾರೆ ಇತ್ತಿಚಿನ ದಿನದಲ್ಲಿ ಹಠಾತ್ ಹೃದಯಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಅಧಿಕವಾಗಿದೆ. ಅಲ್ಲದೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಸಿಬ್ಬಂದಿ ಕೂಡ ಹಾರ್ಟ್ ಆಟ್ಯಾಕ್ನಿಂದ ಸತ್ತಿದ್ದಾರೆ. ಹೀಗಾಗಿ ಸದಾ ಜನರ ಸೇವೆಗೆ ದುಡಿಯುತ್ತಿರುವ ಇವರು ಹೃದಯದ ಬಗ್ಗೆ ಕಾಳಜಿ ವಹಿಸೋದು ಅಗತ್ಯ ಅಂತಾರೆ ತಜ್ಞರು. ಅಲ್ಲದೆ ಸಂಬಂಧಪಟ್ಟರು ತಮ್ಮ ಸಿಬ್ಬಂದಿ ಆರೋಗ್ಯದ ಬಗ್ಗೆ ಗಮನಹರಿಸಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಎಂಟಿಸಿ ರಥದ ಸಾರಥಿಗಳಿಗೆ ಈ ಸಮಸ್ಯೆಗೆ ಕಾರಣವೇನು
ಸಂಸ್ಥೆಗಾಗಿ ದುಡಿಯುತ್ತಿರುವ ಡ್ರೈವರ್ಗಳ ಹೃದಯಕ್ಕೆ ಅಪಾಯ
ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವೈದ್ಯರಿಂದ ಸಮಗ್ರ ಪರೀಕ್ಷೆ!
ಬೆಂಗಳೂರು: ಬಿಎಂಟಿಸಿ ಬಸ್ ಓಡಿಸುತ್ತಿರೋ ಚಾಲಕರಿಗೆ ಶಾಕಿಂಗ್ ನ್ಯೂಸ್ವೊಂದು ಕಾದಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಸಂಸ್ಥೆಗಾಗಿ ದುಡಿಯುತ್ತಿರುವ ಬಹತೇಕ ಡ್ರೈವರ್ಗಳ ಹೃದಯ ಅಪಾಯದಲ್ಲಿಯಂತೆ. ಹೌದು, ಜಯದೇವ ಆಸ್ಪತ್ರೆ ವೈದ್ಯರ ವರದಿಯಲ್ಲಿ ಈ ಅಘಾತಕಾರಿ ಅಂಶ ಬಯಲಾಗಿದೆ.
ಸಾಲು ಸಾಲು ಬಸ್ಗಳ ಕೊರತೆ. ಒವರ್ ಟೈಂ ಡ್ಯೂಟಿ. ಹಬ್ಬದ ದಿನವೂ ಕೆಲಸ. ಸದಾ ಕಿರಿಕಿರಿ, ಒತ್ತಡ. ಇದು ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಹಕರ ನಿತ್ಯದ ಗೋಳು. ಶಕ್ತಿ ಯೋಜನೆ ಜಾರಿಯಾದ ನಂತರ ಈ ಸಮಸ್ಯೆ ದುಪ್ಪಟ್ಟಾಗಿದೆ. ಬಸ್ಗಳ ಕೊರತೆ ನಡುವೆ ಬಿಎಂಟಿಸಿ ಜನರಿಗಾಗಿ ಇರೋ ಬಸ್ ನಲ್ಲಿಯೇ ಹೆಚ್ಚುವರಿ ಟ್ರಿಪ್ ಮಾಡಿಸ್ತಿದೆ. ಇದು ಚಾಲಕರ ಜೀವಕ್ಕೆ ಆಪತ್ತು ಎದುರಾಗುವ ಆತಂಕ ಮೂಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕರು ಹೃದ್ರೋಗದ ಅಪಾಯದಲ್ಲಿದ್ದಾರೆ. ಬಿಎಂಟಿಸಿ ಚಾಲಕರ ಪೈಕಿ ಶೇಕಡ 40-50ರಷ್ಟು ಜನ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಜಯದೇವ ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣೆಯಿಂದ ಬೆಳಕಿಗೆ ಬಂದಿದೆ.
ಜಯದೇವ ಆಸ್ಪತ್ರೆಯಲ್ಲಿ ಕಳೆದ 12 ತಿಂಗಳಿನಲ್ಲಿ 8200 ಚಾಲಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವೈದ್ಯರಿಂದ ಸಮಗ್ರ ಪರೀಕ್ಷೆ ನಡೆದಿದೆ. ಚಾಲಕರ ಪರೀಕ್ಷಿಸಲು 2022ರ ಆಗಸ್ಟ್ನಲ್ಲಿ ಒಪ್ಪಂದಕ್ಕೆ ಜಯದೇವ ಸಂಸ್ಥೆ ಸಹಿ ಹಾಕಿತ್ತು. ಅದರಂತೆ ಚಾಲಕರ ಬ್ಲೆಡ್ ಟೆಸ್ಟ್, ಹೃದಯದ ಒತ್ತಡ ಪರೀಕ್ಷೆ, ಇಸಿಜಿ, ಇಕೋ ಟೆಸ್ಟ್ ಸೇರಿ ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸಿತ್ತು. ತಪಾಸಣೆಗೆ ಒಳಗಾದ ಶೇಕಡಾ 40 ರಷ್ಟು ಚಾಲಕರಿಗೆ ಮಧುಹೇಹ ಇರೋದು ಪತ್ತೆಯಾಗಿದೆ. ಅಲ್ಲದೆ ಶೇ. 40 ರಷ್ಟು ಚಾಲಕರಿಗೆ ಅಧಿಕದೊತ್ತಡ, ಶೇ. 62 ರಷ್ಟು ಚಾಲಕರಿಗೆ ಹೈ ಕೊಲೆಸ್ಟಲ್ ಪತ್ತೆಯಾಗಿದೆ. ಇವರಿಗೆ ಭವಿಷ್ಯದಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗೆ ಒಳಗಾಗಲಿದ್ದಾರೆ ಅಂತ ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಬಿಗ್ ಆಫರ್; MLA ಗಣಿಗ ರವಿಕುಮಾರ್ ಹೇಳಿದ್ದೇನು..?
ಚಾಲಕರು ಒವರ್ ಟೈಂ ಡ್ಯೂಟಿ ಮಾಡ್ತಾರೆ. ಸರಿಯಾದ ಸಮಯಕ್ಕೆ ಸಮರ್ಪಕ ಆಹಾರ ಸೇವಿಸುವುದಿಲ್ಲ. ವ್ಯಾಯಾಮದ ಕೊರತೆ ಮತ್ತು 10 ಗಂಟೆಗೂ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಹೆಚ್ಚು ಆಯಾಸಕ್ಕೆ ಒಳಗಾಗಿದ್ದಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಅವರನ್ನು ಕಾಡುತ್ತಿವೆಯಂತೆ. ಅಲ್ಲದೇ ಶೇ.5 ರಷ್ಟು ಮಂದಿಗೆ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವುದು ಕಂಡು ಬಂದಿದೆಯಂತೆ. ಇದೇ ರೀತಿಯ ಆರೋಗ್ಯ ತಪಾಸಣೆಗಳನ್ನು ಕರ್ನಾಟಕ ಕೆಎಸ್ಆರ್ಟಿಸಿ ಮತ್ತು ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಒಟ್ಟಾರೆ ಇತ್ತಿಚಿನ ದಿನದಲ್ಲಿ ಹಠಾತ್ ಹೃದಯಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಅಧಿಕವಾಗಿದೆ. ಅಲ್ಲದೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಸಿಬ್ಬಂದಿ ಕೂಡ ಹಾರ್ಟ್ ಆಟ್ಯಾಕ್ನಿಂದ ಸತ್ತಿದ್ದಾರೆ. ಹೀಗಾಗಿ ಸದಾ ಜನರ ಸೇವೆಗೆ ದುಡಿಯುತ್ತಿರುವ ಇವರು ಹೃದಯದ ಬಗ್ಗೆ ಕಾಳಜಿ ವಹಿಸೋದು ಅಗತ್ಯ ಅಂತಾರೆ ತಜ್ಞರು. ಅಲ್ಲದೆ ಸಂಬಂಧಪಟ್ಟರು ತಮ್ಮ ಸಿಬ್ಬಂದಿ ಆರೋಗ್ಯದ ಬಗ್ಗೆ ಗಮನಹರಿಸಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ