newsfirstkannada.com

Breaking News: ಘೋರ ದುರಂತ.. ಸೇತುವೆ ನಿರ್ಮಾಣದ ವೇಳೆ ಗಿರ್ಡರ್ ಲಾಂಚರ್​ ಕುಸಿದು 16 ಮಂದಿ ದಾರುಣ ಸಾವು

Share :

01-08-2023

    ಸಾವು-ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

    ಕ್ರೇನ್-ಸ್ಲಾಬ್​ಗೆ ಕನೆಕ್ಟ್ ಮಾಡುವಾಗ ದುರ್ಘಟನೆ

    ಸುಮಾರು 100 ಫೀಟ್ ಎತ್ತರದಲ್ಲಿದ್ದ ಗಿರ್ಡರ್ ಲಾಂಚರ್

ಮಹಾರಾಷ್ಟ್ರದ ಥಾಣೆಯಲ್ಲಿ ಘೋರ ದುರಂತ ಸಂಭವಿಸಿದ್ದು ಕಾಮಗಾರಿ ವೇಳೆ ಗಿರ್ಡರ್ ಲಾಂಚರ್ ಮಷಿನ್ ( girder launcher machine) ಕುಸಿದು ಬಿದ್ದು 16 ಮಂದಿ ಸಾವನ್ನಪ್ಪಿದ್ದಾರೆ.

ಥಾಣೆಯ ಸರ್ಲಂಬೆ ಗ್ರಾಮದಲ್ಲಿ ಬರುವ ಸಮೃದ್ಧಿ ಎಕ್ಸ್​ಪ್ರೆಸ್​​ ಹೈವೇ 3ನೇ ಹಂತದ ನಿರ್ಮಾಣ ಹಂತದ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಮೃತ 16 ಮಂದಿಯೂ ಕೂಡ ಕಾರ್ಮಿಕರಾಗಿದ್ದಾರೆ, ಇನ್ನೂ 5 ಜನ ನೆಲಕ್ಕೆ ಉರುಳಿ ಬಿದ್ದಿರುವ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾಕಾರ್ಯ ಶುರುವಾಗಿದೆ.

ತನಿಖೆಗೆ ಆದೇಶ

ಎನ್​ಡಿಆರ್​ಎಫ್​ ಪಡೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬ್ರಿಡ್ಜ್ ನಿರ್ಮಾಣ ಸಂಸ್ಥೆಯ ಬೇಜವಾಬ್ದಾರಿಯೇ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕವಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಘಟನೆಯನ್ನು ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆದೇಶ ನೀಡಿದ್ದಾರೆ.

ಸುಮಾರು 100 ಫೀಟ್ ಎತ್ತರದಲ್ಲಿದ್ದ ಗ್ರಿಡರ್​ ಮಷಿನ್ ಕ್ರೇನ್ ಮತ್ತು ಸ್ಲಾಬ್​ಗೆ ಕನೆಕ್ಟ್ ಮಾಡುವಾಗ ಕುಸಿದು ಬಿದ್ದಿದೆ. ಮೃತದೇಹಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು ನೋವು ಮತ್ತುಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

‘ಸಮೃದ್ಧಿ ಮಹಾಮಾರ್ಗ್​’ಗೆ ಹಿಂದೂ ‘ಹೃದಯಸಮರ್ಥ್ ಬಾಳಸಾಹೇಬ್ ಠಾಕರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್​’ ಎಂದು ಹಸರಿಡಲಾಗಿದೆ. ಇದು 701 ಕಿಲೋ ಮೀಟರ್ ದೂರದ ಎಕ್ಸ್​ಪ್ರೆಸ್​​ ರಸ್ತೆಯಾಗಿದ್ದು, ಮುಂಬೈನಿಂದ ನಾಗ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಘೋರ ದುರಂತ.. ಸೇತುವೆ ನಿರ್ಮಾಣದ ವೇಳೆ ಗಿರ್ಡರ್ ಲಾಂಚರ್​ ಕುಸಿದು 16 ಮಂದಿ ದಾರುಣ ಸಾವು

https://newsfirstlive.com/wp-content/uploads/2023/08/MAHARATSRA.jpg

    ಸಾವು-ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

    ಕ್ರೇನ್-ಸ್ಲಾಬ್​ಗೆ ಕನೆಕ್ಟ್ ಮಾಡುವಾಗ ದುರ್ಘಟನೆ

    ಸುಮಾರು 100 ಫೀಟ್ ಎತ್ತರದಲ್ಲಿದ್ದ ಗಿರ್ಡರ್ ಲಾಂಚರ್

ಮಹಾರಾಷ್ಟ್ರದ ಥಾಣೆಯಲ್ಲಿ ಘೋರ ದುರಂತ ಸಂಭವಿಸಿದ್ದು ಕಾಮಗಾರಿ ವೇಳೆ ಗಿರ್ಡರ್ ಲಾಂಚರ್ ಮಷಿನ್ ( girder launcher machine) ಕುಸಿದು ಬಿದ್ದು 16 ಮಂದಿ ಸಾವನ್ನಪ್ಪಿದ್ದಾರೆ.

ಥಾಣೆಯ ಸರ್ಲಂಬೆ ಗ್ರಾಮದಲ್ಲಿ ಬರುವ ಸಮೃದ್ಧಿ ಎಕ್ಸ್​ಪ್ರೆಸ್​​ ಹೈವೇ 3ನೇ ಹಂತದ ನಿರ್ಮಾಣ ಹಂತದ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಮೃತ 16 ಮಂದಿಯೂ ಕೂಡ ಕಾರ್ಮಿಕರಾಗಿದ್ದಾರೆ, ಇನ್ನೂ 5 ಜನ ನೆಲಕ್ಕೆ ಉರುಳಿ ಬಿದ್ದಿರುವ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾಕಾರ್ಯ ಶುರುವಾಗಿದೆ.

ತನಿಖೆಗೆ ಆದೇಶ

ಎನ್​ಡಿಆರ್​ಎಫ್​ ಪಡೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬ್ರಿಡ್ಜ್ ನಿರ್ಮಾಣ ಸಂಸ್ಥೆಯ ಬೇಜವಾಬ್ದಾರಿಯೇ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕವಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಘಟನೆಯನ್ನು ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆದೇಶ ನೀಡಿದ್ದಾರೆ.

ಸುಮಾರು 100 ಫೀಟ್ ಎತ್ತರದಲ್ಲಿದ್ದ ಗ್ರಿಡರ್​ ಮಷಿನ್ ಕ್ರೇನ್ ಮತ್ತು ಸ್ಲಾಬ್​ಗೆ ಕನೆಕ್ಟ್ ಮಾಡುವಾಗ ಕುಸಿದು ಬಿದ್ದಿದೆ. ಮೃತದೇಹಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು ನೋವು ಮತ್ತುಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

‘ಸಮೃದ್ಧಿ ಮಹಾಮಾರ್ಗ್​’ಗೆ ಹಿಂದೂ ‘ಹೃದಯಸಮರ್ಥ್ ಬಾಳಸಾಹೇಬ್ ಠಾಕರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್​’ ಎಂದು ಹಸರಿಡಲಾಗಿದೆ. ಇದು 701 ಕಿಲೋ ಮೀಟರ್ ದೂರದ ಎಕ್ಸ್​ಪ್ರೆಸ್​​ ರಸ್ತೆಯಾಗಿದ್ದು, ಮುಂಬೈನಿಂದ ನಾಗ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More