newsfirstkannada.com

ಬಿಜೆಪಿ ಸರ್ಕಾರದ 17 ಯೋಜನೆಗಳಿಗೆ ಕೊಕ್​ ಕೊಟ್ಟ ಸಿದ್ದು ಬಜೆಟ್​.. ಆ ಯೋಜನೆಗಳು ಯಾವ್ಯಾವುದು?

Share :

08-07-2023

    ಎನ್​ಇಪಿ, ವಿದ್ಯಾನಿಧಿ ಯೋಜನೆಗಳಿಗೆ ಕೊಕ್

    3.27 ಲಕ್ಷ ಕೋಟಿ ಬೆಲೆಯ ಬಜೆಟ್​ ಮಂಡನೆ

    14ನೇ ಬಾರಿಗೆ ಬಜೆಟ್​​ ಮಂಡಿಸಿದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಜ್ಯ ಬಜೆಟ್​ ಮಂಡಿಸಿರುವುದೇನೋ ನಿಜ. ಆದರೆ ಈ ಬಜೆಟ್​ನಲ್ಲಿ ಹಿಂದಿನ ಬಿಜೆಪಿ ಸರ್ಕಾರದ 17 ಯೋಜನೆಗಳಿಗೆ ಕೋಕ್​ ನೀಡಲಾಗಿದೆ. ಅದರಲ್ಲಿ ಎನ್​ಇಪಿ, ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ನಮ್ಮ ಕ್ಲಿನಿಕ್​, ಎಪಿಎಂಪಿ ತಿದ್ದುಪಡಿ ಕಾಯ್ದೆಗಳು ಸೇರಿವೆ.

ಬಿಜೆಪಿ ಸರ್ಕಾರದ ಯೋಜನೆಗಳು

ಪಠ್ಯಪರಿಷ್ಕರಣೆ– ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯಪರಿಷ್ಕರಣೆಯನ್ನು ರದ್ದುಗೊಳಿಸಿದೆ.

ವಿದ್ಯಾನಿಧಿ– ರೈತರ, ಮೀನುಗಾರರ, ಟ್ಯಾಕ್ಸಿ ಚಾಲಕರ ಮತ್ತು ಇನ್ನಿತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ನೆರವು ನೀಡುತ್ತಿದ್ದ ವಿದ್ಯಾನಿಧಿ ಯೋಜನೆಯನ್ನು ಕಾಂಗ್ರೆಸ್​ ಸರ್ಕಾರ ಕೈಬಿಟ್ಟಿದೆ.

ಗೋಶಾಲೆ– ಬಿಜೆಪಿ ಸರ್ಕಾರ ಜಾರಿಗೆಗೊಳಿಸಿದ್ದ ಗೋಶಾಲೆ ಯೋಜನೆಯನ್ನ ಕೂಡ ಈ ಬಾರಿಯ ಬಜೆಟ್​ನಲ್ಲಿ ಉಲ್ಲೇಖಿಸಿಲ್ಲ.

ಕೃಷಿ ಭೂಮಿ ತಿದ್ದುಪಡಿ ಕಾಯ್ದೆ– ಕೃಷಿ ಭೂಮಿ ಖರೀದಿಸಲು ಅನುಕೂಲವಾಘುವ 79ಎ ಮತ್ತು 79ಬಿ ತಿದ್ದುಪಡಿ ತಂದಿದ್ದ ಕೃಷಿ ಭೂಮಿ ತಿದ್ದುಪಡಿ ಕಾಯ್ದೆgಊ ಕೊಕ್​ ನೀಡಿದೆ.

ನಮ್ಮ ಕ್ಲಿನಿಕ್​– ರಾಜ್ಯದಲ್ಲಿ ಜಾರಿಗೊಳಿಸಿದ್ದ ನಮ್ಮ ಕ್ಲಿನಿಕ್​ ಯೋಜನೆ ಕೂಡ ಕಾಂಗ್ರೆಸ್​​ ಈ ಬಾರಿಯ ಬಜೆಟ್​ನಲ್ಲಿ ಸ್ಥಗಿತಮಾಡಿದೆ.

ವಿವೇಕ ಶಾಲಾ ಅಭಿವೃದ್ಧಿ– ರಾಜ್ಯದಲ್ಲಿರುವ ಶಾಲೆಗಳಿಗೆ ಒಂದೇ ರೂಪದ ಬಣ್ಣ ಬಳಿಯುವ ಯೋಜನೆಗೆ ಇದಾಗಿದೆ.

ಸ್ವಾಮಿ ಯುವಶಕ್ತಿ ಯೋಜನೆ– ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗ್ರಾಮಪಂಚಾಯಿತಿಗೆ ಒಂದರಂತೆ ಸ್ವಾಮಿ ವಿವೇಕನಂದರ ಗುಂಪನ್ನು ರಚಿಸಿ ಸ್ವ-ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಯೋಜನೆಯ ಬಗ್ಗೆಯೂ ಕಾಂಗ್ರೆಸ್​ ಗಮನಹರಿಸಿಲ್ಲ.

ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ– ಸ್ವಸಹಾಯ ಸಂಘಗಳಿಗೆ 5 ಲಕ್ಷ ಸಹಾಯಧನ ಒದಗಿಸುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಕಾಂಗ್ರೆಸ್​ ಸರ್ಕಾರ ಅದನ್ನು ಸ್ಥಗಿತಗೊಳಿಸಿದೆ.

ಭೂಸಿರಿ ಯೋಜನೆ– ರೈತರಿಗೆ 10 ಸಾವಿರ ರೂಪಾಯಿಯನ್ನು ಕೂಡ ಸ್ಥಗಿತ ಮಾಡಲಾಗಿದೆ.

ಶ್ರಮಶಕ್ತಿ– ಮಹಿಳೆಯರಿಗೆ ಪ್ರತಿ ತಿಂಗಳು ನೀಡುವ 500 ರೂಪಾಯಿಯನ್ನು ಬಜೆಟ್​ನಲ್ಲಿ ಉಲ್ಲೇಖಿಸಿಲ್ಲ.

ಅಗ್ನಿವೀರ ಯೋಜನೆ– ಕೇಂದ್ರದ ಮಹಾತ್ವಕಾಂಕ್ಷಿ ಯೋಜನೆಯಾದ ಅಗ್ನಿವೀರ ಯೋಜನೆ ಕೂಡ ಕಾಂಗ್ರೆಸ್​ ಸರ್ಕಾರ ಸ್ಥಗಿತಗೊಳಿಸಿದೆ. ಇದರಲ್ಲಿ ಎಸ್​ಸಿ/ಎಸ್​ಟಿ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಸರ್ಕಾರದ 17 ಯೋಜನೆಗಳಿಗೆ ಕೊಕ್​ ಕೊಟ್ಟ ಸಿದ್ದು ಬಜೆಟ್​.. ಆ ಯೋಜನೆಗಳು ಯಾವ್ಯಾವುದು?

https://newsfirstlive.com/wp-content/uploads/2023/07/SIDDU-35.jpg

    ಎನ್​ಇಪಿ, ವಿದ್ಯಾನಿಧಿ ಯೋಜನೆಗಳಿಗೆ ಕೊಕ್

    3.27 ಲಕ್ಷ ಕೋಟಿ ಬೆಲೆಯ ಬಜೆಟ್​ ಮಂಡನೆ

    14ನೇ ಬಾರಿಗೆ ಬಜೆಟ್​​ ಮಂಡಿಸಿದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಜ್ಯ ಬಜೆಟ್​ ಮಂಡಿಸಿರುವುದೇನೋ ನಿಜ. ಆದರೆ ಈ ಬಜೆಟ್​ನಲ್ಲಿ ಹಿಂದಿನ ಬಿಜೆಪಿ ಸರ್ಕಾರದ 17 ಯೋಜನೆಗಳಿಗೆ ಕೋಕ್​ ನೀಡಲಾಗಿದೆ. ಅದರಲ್ಲಿ ಎನ್​ಇಪಿ, ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ನಮ್ಮ ಕ್ಲಿನಿಕ್​, ಎಪಿಎಂಪಿ ತಿದ್ದುಪಡಿ ಕಾಯ್ದೆಗಳು ಸೇರಿವೆ.

ಬಿಜೆಪಿ ಸರ್ಕಾರದ ಯೋಜನೆಗಳು

ಪಠ್ಯಪರಿಷ್ಕರಣೆ– ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯಪರಿಷ್ಕರಣೆಯನ್ನು ರದ್ದುಗೊಳಿಸಿದೆ.

ವಿದ್ಯಾನಿಧಿ– ರೈತರ, ಮೀನುಗಾರರ, ಟ್ಯಾಕ್ಸಿ ಚಾಲಕರ ಮತ್ತು ಇನ್ನಿತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ನೆರವು ನೀಡುತ್ತಿದ್ದ ವಿದ್ಯಾನಿಧಿ ಯೋಜನೆಯನ್ನು ಕಾಂಗ್ರೆಸ್​ ಸರ್ಕಾರ ಕೈಬಿಟ್ಟಿದೆ.

ಗೋಶಾಲೆ– ಬಿಜೆಪಿ ಸರ್ಕಾರ ಜಾರಿಗೆಗೊಳಿಸಿದ್ದ ಗೋಶಾಲೆ ಯೋಜನೆಯನ್ನ ಕೂಡ ಈ ಬಾರಿಯ ಬಜೆಟ್​ನಲ್ಲಿ ಉಲ್ಲೇಖಿಸಿಲ್ಲ.

ಕೃಷಿ ಭೂಮಿ ತಿದ್ದುಪಡಿ ಕಾಯ್ದೆ– ಕೃಷಿ ಭೂಮಿ ಖರೀದಿಸಲು ಅನುಕೂಲವಾಘುವ 79ಎ ಮತ್ತು 79ಬಿ ತಿದ್ದುಪಡಿ ತಂದಿದ್ದ ಕೃಷಿ ಭೂಮಿ ತಿದ್ದುಪಡಿ ಕಾಯ್ದೆgಊ ಕೊಕ್​ ನೀಡಿದೆ.

ನಮ್ಮ ಕ್ಲಿನಿಕ್​– ರಾಜ್ಯದಲ್ಲಿ ಜಾರಿಗೊಳಿಸಿದ್ದ ನಮ್ಮ ಕ್ಲಿನಿಕ್​ ಯೋಜನೆ ಕೂಡ ಕಾಂಗ್ರೆಸ್​​ ಈ ಬಾರಿಯ ಬಜೆಟ್​ನಲ್ಲಿ ಸ್ಥಗಿತಮಾಡಿದೆ.

ವಿವೇಕ ಶಾಲಾ ಅಭಿವೃದ್ಧಿ– ರಾಜ್ಯದಲ್ಲಿರುವ ಶಾಲೆಗಳಿಗೆ ಒಂದೇ ರೂಪದ ಬಣ್ಣ ಬಳಿಯುವ ಯೋಜನೆಗೆ ಇದಾಗಿದೆ.

ಸ್ವಾಮಿ ಯುವಶಕ್ತಿ ಯೋಜನೆ– ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗ್ರಾಮಪಂಚಾಯಿತಿಗೆ ಒಂದರಂತೆ ಸ್ವಾಮಿ ವಿವೇಕನಂದರ ಗುಂಪನ್ನು ರಚಿಸಿ ಸ್ವ-ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಯೋಜನೆಯ ಬಗ್ಗೆಯೂ ಕಾಂಗ್ರೆಸ್​ ಗಮನಹರಿಸಿಲ್ಲ.

ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ– ಸ್ವಸಹಾಯ ಸಂಘಗಳಿಗೆ 5 ಲಕ್ಷ ಸಹಾಯಧನ ಒದಗಿಸುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಕಾಂಗ್ರೆಸ್​ ಸರ್ಕಾರ ಅದನ್ನು ಸ್ಥಗಿತಗೊಳಿಸಿದೆ.

ಭೂಸಿರಿ ಯೋಜನೆ– ರೈತರಿಗೆ 10 ಸಾವಿರ ರೂಪಾಯಿಯನ್ನು ಕೂಡ ಸ್ಥಗಿತ ಮಾಡಲಾಗಿದೆ.

ಶ್ರಮಶಕ್ತಿ– ಮಹಿಳೆಯರಿಗೆ ಪ್ರತಿ ತಿಂಗಳು ನೀಡುವ 500 ರೂಪಾಯಿಯನ್ನು ಬಜೆಟ್​ನಲ್ಲಿ ಉಲ್ಲೇಖಿಸಿಲ್ಲ.

ಅಗ್ನಿವೀರ ಯೋಜನೆ– ಕೇಂದ್ರದ ಮಹಾತ್ವಕಾಂಕ್ಷಿ ಯೋಜನೆಯಾದ ಅಗ್ನಿವೀರ ಯೋಜನೆ ಕೂಡ ಕಾಂಗ್ರೆಸ್​ ಸರ್ಕಾರ ಸ್ಥಗಿತಗೊಳಿಸಿದೆ. ಇದರಲ್ಲಿ ಎಸ್​ಸಿ/ಎಸ್​ಟಿ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More