newsfirstkannada.com

ತಪ್ಪುಗಳಿಂದ ಪಾಠ ಕಲಿಯದ ದ್ರಾವಿಡ್-ರೋಹಿತ್ ಜೋಡಿ; ಇರೋ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ.. ಹೀಗಿದ್ದೂ ಮತ್ತದೇ ಮಿಸ್ಟೇಕ್ಸ್..!

Share :

31-07-2023

    ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್​ಗೆ ಏನಾಗಿದೆ?

    ಟೀಮ್​ ಇಂಡಿಯಾಗೆ 4ನೇ ಕ್ರಮಾಂಕವೇ ‘ಕಂಟಕ’!

    ಒಂದು ಸ್ಥಾನಕ್ಕೆ ಹಲವರ ನಡುವೆ ನಡೀತಿದೆ ಫೈಟ್​!

ಈ ಹಿಂದೆ ಮಾಡಿದ ತಪ್ಪುಗಳಿಂದ ಟೀಮ್​ ಇಂಡಿಯಾ ಕೋಚ್​-ಕ್ಯಾಪ್ಟನ್​ ಪಾಠ ಕಲಿತಂತೆ ಇಲ್ಲ. ಮಹತ್ವದ ವಿಶ್ವಕಪ್​ ಟೂರ್ನಿಗೆ ಕೌಂಟ್​ಡೌನ್​ ಶುರುವಾಗಿರೋ ಈ ಸಮಯದಲ್ಲಿ, ಇರೋ ಸಮಸ್ಯೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದ್ರ ನಡುವೆ ಹೊಸ ಹೊಸ ಸಮಸ್ಯೆಗಳನ್ನ ರೋಹಿತ್​ & ದ್ರಾವಿಡ್​​ ಜೋಡಿ ಸೃಷ್ಟಿಸ್ತಿದೆ.

ವಿಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಏನ್​ ಮಾಡ್ತಿದೆ? ಮುಂದಿರೋ ಸವಾಲುಗಳಿಗೆ ಉತ್ತರ ಹುಡುಕೋದ್ರ ಬದಲು ಮತ್ತಷ್ಟು ಸಮಸ್ಯೆಗಳನ್ನ ಕ್ರಿಯೇಟ್​ ಮಾಡಿಕೊಳ್ತಿದ್ಯಾ? ಸದ್ಯ ಕ್ರಿಕೆಟ್​ ವಲಯದಲ್ಲಿ ಚರ್ಚೆಯಾಗ್ತಿರೋ ಹಾಟ್​ ಟಾಪಿಕ್​ ಇದು! ಟೀಮ್​ ಮ್ಯಾನೇಜ್​ಮೆಂಟ್​ನ ನಡೆಗೆ ಫ್ಯಾನ್ಸ್​ ಕಂಗಾಲ್​ ಆಗಿದ್ರೆ, ಮಾಜಿ ಕ್ರಿಕೆಟರ್ಸ್​​​ ಕ್ರಿಕೆಟರ್ಸ್​ ಕೆಂಡ ಕಾರ್ತಿದ್ದಾರೆ.

2ನೇ ಏಕದಿನದಲ್ಲಿ ನಿಮಗೆ ಸರಿಯಾದ ಬ್ಯಾಲೆನ್ಸ್​ ಕಂಡುಕೊಳ್ಳಲು, ಸರಿಯಾದ ಬ್ಯಾಟಿಂಗ್​ ಆರ್ಡರ್​ ಕಂಡುಕೊಳ್ಳಲು ಮತ್ತೊಂದು ಅವಕಾಶ ಇತ್ತು. ನನ್ನ ಪ್ರಕಾರ ವಿಶ್ವಕಪ್​ ಸಿದ್ಧತೆಗೆ ತಡವಾಗುತ್ತಿದೆ –ಸಬಾ ಕರೀಂ, ಮಾಜಿ ಕ್ರಿಕೆಟಿಗ

ವಿಂಡೀಸ್​ ಸರಣಿಯಲ್ಲಿ ಬೇಕಿತ್ತಾ ಅನಗತ್ಯ ಪ್ರಯೋಗ.?

ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿದೆ. ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಬ್ಯಾಟಿಂಗ್​ ಆರ್ಡರ್​ನಲ್ಲಿ ಬದಲಾವಣೆ ಆಯ್ತು. ಆದ್ರೆ ಎರಡನೇ ಪಂದ್ಯದಲ್ಲಿ ಇಡೀ ತಂಡವೇ ಚೇಂಜ್​ ಆಯ್ತು. ಈ ಬದಲಾವಣೆ ಟೀಮ್​ ಇಂಡಿಯಾದಲ್ಲಿರೋ ಸಮಸ್ಯೆಯನ್ನ ಹೆಚ್ಚು ಮಾಡ್ತಿದ್ಯೇ ಹೊರತು ಗೊಂದಲಗಳಿಗೆ ಪರಿಹಾರವನ್ನ ನೀಡ್ತಿಲ್ಲ.

ರೋಹಿತ್-ದ್ರಾವಿಡ್
ರೋಹಿತ್-ದ್ರಾವಿಡ್

ಉಳಿದಿರೋದು ಕೆಲವೇ ಪಂದ್ಯ, ಫೈನಲ್​ ಆಗದ ತಂಡ

ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಮುಂದಿರೋದು ಕೆಲವೇ ಪಂದ್ಯ ಮಾತ್ರ. ಅಷ್ಟರಲ್ಲಿ ತಂಡವನ್ನ ಫೈನಲ್​ ಮಾಡಬೇಕಾದ ಸವಾಲು ಟೀಮ್​ ಮ್ಯಾನೇಜ್​ಮೆಂಟ್​ ಮುಂದಿದೆ. ಟೀಮ್​ ಇಂಡಿಯಾದಲ್ಲಿ ಅನಗತ್ಯ ಪ್ರಯೋಗಗಳು ನಡೀತಿವೆ. ವಿಂಡೀಸ್​​ ವಿರುದ್ಧದ 2ನೇ ಪಂದ್ಯದಲ್ಲಿ ಕೊಹ್ಲಿ-ರೋಹಿತ್​ಗೆ ರೆಸ್ಟ್​ ನೀಡೋ ಅಗತ್ಯತೆ ಏನಿತ್ತು? ನಮಗೆ ಮಾತ್ರವಲ್ಲ.. ಮಾಜಿ ಕ್ರಿಕೆಟಿಗ, ಸೆಲೆಕ್ಟರ್​ ಸಬಾ ಕರೀಂಗೂ ಕೂಡ ಇದು ಅರ್ಥವಾಗದ ಪ್ರಶ್ನೆಯಾಗಿದೆ.

ನಾನು ಈ ಪ್ರಶ್ನೆಯನ್ನೂ ಕೇಳ್ತಾ ಇದ್ದೀನಿ. ರೋಹಿತ್​ ಶರ್ಮಾ-ವಿರಾಟ್​ ಕೊಹ್ಲಿ ಯಾಕೆ ಆಡ್ತಿಲ್ಲ. ಅವರು ಆಡ್ತಿಲ್ಲ ಅಂದ ಮೇಲೆ ಅವರನ್ನ ಏಕದಿನಕ್ಕೆ ಸೆಲೆಕ್ಟ್​ ಮಾಡಿದ್ದು ಯಾಕೆ? ಅದರ ಬದಲು ಫ್ರೆಶ್​ ತಂಡವನ್ನ ಕಳುಹಿಸಬಹುದಿತ್ತು. ಈಗ ನಿಮ್ಮ ವಿಶ್ವಕಪ್​ನ ಆಡುವ 11 ಅಥವಾ 15 ಮಂದಿ ಆಟಗಾರರು ಸತತವಾಗಿ ಆಡಬೇಕು. ನಿಮ್ಮ ಬಳಿ ಹೆಚ್ಚು ಸಮಯ ಉಳಿದಿಲ್ಲ.
ಸಬಾ ಕರೀಂ, ಮಾಜಿ ಕ್ರಿಕೆಟಿಗ

ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ವಾ ಕೋಚ್-ಕ್ಯಾಪ್ಟನ್?

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾದಲ್ಲಿ ತರಹೇವಾರಿ ಪ್ರಯೋಗಗಳು ನಡೆದಿದ್ವು. ಆದ್ರೆ ಅಂತಿಮವಾಗಿ ಆಗಿದ್ದು, ಹೀನಾಯ ಮುಖಭಂಗ. ಇದರಿಂದ ಕೋಚ್​ ದ್ರಾವಿಡ್​-ಕ್ಯಾಪ್ಟನ್​ ರೋಹಿತ್​ ಪಾಠ ಕಲಿತಂತಿಲ್ಲ. ಸದ್ಯ ಗಾಯಗೊಂಡು ತಂಡದಿಂದ ಹೊರ ಬಿದ್ದಿರೋ, ಶ್ರೇಯಸ್​​ ಅಯ್ಯರ್​ ಕಮ್​ಬ್ಯಾಕ್​ ಮಾಡಿದ್ರೆ 4ನೇ ಕ್ರಮಾಂಕದಲ್ಲಿ ಆಡ್ತಾರೆ ಅನ್ನೋದು ಮ್ಯಾನೇಜ್​ಮೆಂಟ್​ ನಂಬಿಕೆಯಾಗಿದೆ. ಒಂದು ವೇಳೆ ಶ್ರೇಯಸ್,​ ಕಂಪ್ಲೀಟ್​ ಫಿಟ್​ ಆಗಲಿಲ್ಲ ಅಂದ್ರೆ ಮುಂದೇನು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲ.

ಮೊದಲೇ ಇರುವ ಸಮಸ್ಯೆಗಳು ಖಾಯಂ ಆಟಗಾರರಿಂದ ಪರಿಹಾರ ಆದರೆ ಮಾತ್ರ ಪ್ರಯೋಗ ನಡೆಸಬಹುದು. ಆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ? ಈಗ ನಾವು ಶ್ರೇಯಸ್​ ಅಯ್ಯರ್​ ಫಿಟ್​ ಆಗಿ 4ನೇ ಕ್ರಮಾಂಕದಲ್ಲಿ ಆಡಲಿ ಅನ್ನುತ್ತಿದ್ದೇವೆ. ಅವರಿಗೂ ಹೆಚ್ಚು ಸಮಯ ಬೇಕು. ಶ್ರೇಯಸ್​ ಅಯ್ಯರ್​ ಫಿಟ್​ ಆಗಲಿಲ್ಲ ಅಂದ್ರೆ 4ನೇ ಕ್ರಮಾಂಕದಲ್ಲಿ ನಿಮ್ಮ ಬ್ಯಾಕ್​ ಅಪ್​ ಪ್ಲೇಯರ್​ ಯಾರು? –ಸಬಾ ಕರೀಂ, ಮಾಜಿ ಕ್ರಿಕೆಟಿಗ

ಟೀಮ್​ ಇಂಡಿಯಾಗೆ 4ನೇ ಕ್ರಮಾಂಕವೇ ‘ಕಂಟಕ’.!

ಟೀಮ್​ ಇಂಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬಹುಷಃ ಅತಿ ಹೆಚ್ಚು ಪ್ರಯೋಗಕ್ಕೆ ಒಳಗಾದ ಸ್ಲಾಟ್​ ಇದ್ರೆ ಅದು 4ನೇ ಕ್ರಮಾಂಕ..! ಆದ್ರೆ, ಪರಿಹಾರ ಮಾತ್ರ ಸಿಕ್ಕಿಲ್ಲ. ಕಳೆದೊಂದು ವರ್ಷದ ರೆಕಾರ್ಡ್​ ತೆಗೆದು ನೋಡಿದ್ರೆ, ವಿಶ್ವದ ಉಳಿದೆಲ್ಲಾ ತಂಡಗಳಿಗಿಂತ 4ನೇ ಕ್ರಮಾಂಕದಲ್ಲಿ ಟೀಮ್​ ಇಂಡಿಯಾದ ಸರಾಸರಿ ತೀವ್ರ ಕಳಪೆಯಾಗಿದೆ. 11 ಪಂದ್ಯದಿಂದ ಕೇವಲ 16.2ರ ಸರಾಸರಿಯಲ್ಲಿ ಮಾತ್ರ ರನ್​ ಬಂದಿದೆ. ನಿಜಕ್ಕೂ ಪ್ರಯೋಗ ನಡೆಸಿ ಉತ್ತರ ಕಂಡುಕೊಳ್ಳಬೇಕಿರೋದು ಈ ಸ್ಲಾಟ್​ಗೆ..!

ರೋಹಿತ್ ಮತ್ತು ವಿರಾಟ್ ಕೊಹ್ಲಿ
ರೋಹಿತ್ ಮತ್ತು ವಿರಾಟ್ ಕೊಹ್ಲಿ

ಒಂದು ಸ್ಥಾನಕ್ಕೆ ಹಲವರ ನಡುವೆ ಫೈಟ್​..!

ತಂಡದಲ್ಲಿರೋ ಸಂಜು ಸ್ಯಾಮ್ಸನ್​, ಸೂರ್ಯ ಕುಮಾರ್​ ಯಾದವ್​ ಹಾಗೂ ಇಶಾನ್​ ಕಿಶನ್​ಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋ ಸಾಮರ್ಥ್ಯವಿದೆ. ದೀಪಕ್​ ಹೂಡರನ್ನ ಕೂಡ ಆಯ್ಕೆಗೆ ಪರಿಗಣಿಸಬಹುದಾಗಿದೆ. ಇವರಲ್ಲಿ ಒಬ್ಬರನ್ನ ಬ್ಯಾಕ್​ ಅಪ್​ ಪ್ಲೇಯರ್​ ಆಗಿ ಆಯ್ಕೆ ಮಾಡಿಕೊಳ್ಳಬೇಕಿದೆ.

ಒಟ್ಟಿನಲ್ಲಿ ಮುಂದಿನ ಪಂದ್ಯದಿಂದಾದ್ರೂ ಟೀಮ್​ ಮ್ಯಾನೇಜ್​ಮೆಂಟ್​ ಪ್ರಯೋಗವನ್ನು ನಿಲ್ಲಿಸಬೇಕಿದೆ. ವಿಶ್ವಕಪ್​ನಲ್ಲಿ ಆಡೋ ಆಟಗಾರರಿಗೆ ಮಣೆ ಹಾಕಬೇಕಿದೆ. ಸರಿಯಾದ ಸ್ಲಾಟ್​ನಲ್ಲಿ ಆಡಿಸಬೇಕಿದೆ. ಪ್ರಯೋಗವನ್ನೆ ಮುಂದುವರೆಸಿದ್ರೆ, ಸಂಕಷ್ಟ ತಪ್ಪಿದ್ದಲ್ಲ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ತಪ್ಪುಗಳಿಂದ ಪಾಠ ಕಲಿಯದ ದ್ರಾವಿಡ್-ರೋಹಿತ್ ಜೋಡಿ; ಇರೋ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ.. ಹೀಗಿದ್ದೂ ಮತ್ತದೇ ಮಿಸ್ಟೇಕ್ಸ್..!

https://newsfirstlive.com/wp-content/uploads/2023/07/RAHUL_DRAVID_ROHIT_SHARMA.jpg

    ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್​ಗೆ ಏನಾಗಿದೆ?

    ಟೀಮ್​ ಇಂಡಿಯಾಗೆ 4ನೇ ಕ್ರಮಾಂಕವೇ ‘ಕಂಟಕ’!

    ಒಂದು ಸ್ಥಾನಕ್ಕೆ ಹಲವರ ನಡುವೆ ನಡೀತಿದೆ ಫೈಟ್​!

ಈ ಹಿಂದೆ ಮಾಡಿದ ತಪ್ಪುಗಳಿಂದ ಟೀಮ್​ ಇಂಡಿಯಾ ಕೋಚ್​-ಕ್ಯಾಪ್ಟನ್​ ಪಾಠ ಕಲಿತಂತೆ ಇಲ್ಲ. ಮಹತ್ವದ ವಿಶ್ವಕಪ್​ ಟೂರ್ನಿಗೆ ಕೌಂಟ್​ಡೌನ್​ ಶುರುವಾಗಿರೋ ಈ ಸಮಯದಲ್ಲಿ, ಇರೋ ಸಮಸ್ಯೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದ್ರ ನಡುವೆ ಹೊಸ ಹೊಸ ಸಮಸ್ಯೆಗಳನ್ನ ರೋಹಿತ್​ & ದ್ರಾವಿಡ್​​ ಜೋಡಿ ಸೃಷ್ಟಿಸ್ತಿದೆ.

ವಿಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಏನ್​ ಮಾಡ್ತಿದೆ? ಮುಂದಿರೋ ಸವಾಲುಗಳಿಗೆ ಉತ್ತರ ಹುಡುಕೋದ್ರ ಬದಲು ಮತ್ತಷ್ಟು ಸಮಸ್ಯೆಗಳನ್ನ ಕ್ರಿಯೇಟ್​ ಮಾಡಿಕೊಳ್ತಿದ್ಯಾ? ಸದ್ಯ ಕ್ರಿಕೆಟ್​ ವಲಯದಲ್ಲಿ ಚರ್ಚೆಯಾಗ್ತಿರೋ ಹಾಟ್​ ಟಾಪಿಕ್​ ಇದು! ಟೀಮ್​ ಮ್ಯಾನೇಜ್​ಮೆಂಟ್​ನ ನಡೆಗೆ ಫ್ಯಾನ್ಸ್​ ಕಂಗಾಲ್​ ಆಗಿದ್ರೆ, ಮಾಜಿ ಕ್ರಿಕೆಟರ್ಸ್​​​ ಕ್ರಿಕೆಟರ್ಸ್​ ಕೆಂಡ ಕಾರ್ತಿದ್ದಾರೆ.

2ನೇ ಏಕದಿನದಲ್ಲಿ ನಿಮಗೆ ಸರಿಯಾದ ಬ್ಯಾಲೆನ್ಸ್​ ಕಂಡುಕೊಳ್ಳಲು, ಸರಿಯಾದ ಬ್ಯಾಟಿಂಗ್​ ಆರ್ಡರ್​ ಕಂಡುಕೊಳ್ಳಲು ಮತ್ತೊಂದು ಅವಕಾಶ ಇತ್ತು. ನನ್ನ ಪ್ರಕಾರ ವಿಶ್ವಕಪ್​ ಸಿದ್ಧತೆಗೆ ತಡವಾಗುತ್ತಿದೆ –ಸಬಾ ಕರೀಂ, ಮಾಜಿ ಕ್ರಿಕೆಟಿಗ

ವಿಂಡೀಸ್​ ಸರಣಿಯಲ್ಲಿ ಬೇಕಿತ್ತಾ ಅನಗತ್ಯ ಪ್ರಯೋಗ.?

ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿದೆ. ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಬ್ಯಾಟಿಂಗ್​ ಆರ್ಡರ್​ನಲ್ಲಿ ಬದಲಾವಣೆ ಆಯ್ತು. ಆದ್ರೆ ಎರಡನೇ ಪಂದ್ಯದಲ್ಲಿ ಇಡೀ ತಂಡವೇ ಚೇಂಜ್​ ಆಯ್ತು. ಈ ಬದಲಾವಣೆ ಟೀಮ್​ ಇಂಡಿಯಾದಲ್ಲಿರೋ ಸಮಸ್ಯೆಯನ್ನ ಹೆಚ್ಚು ಮಾಡ್ತಿದ್ಯೇ ಹೊರತು ಗೊಂದಲಗಳಿಗೆ ಪರಿಹಾರವನ್ನ ನೀಡ್ತಿಲ್ಲ.

ರೋಹಿತ್-ದ್ರಾವಿಡ್
ರೋಹಿತ್-ದ್ರಾವಿಡ್

ಉಳಿದಿರೋದು ಕೆಲವೇ ಪಂದ್ಯ, ಫೈನಲ್​ ಆಗದ ತಂಡ

ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಮುಂದಿರೋದು ಕೆಲವೇ ಪಂದ್ಯ ಮಾತ್ರ. ಅಷ್ಟರಲ್ಲಿ ತಂಡವನ್ನ ಫೈನಲ್​ ಮಾಡಬೇಕಾದ ಸವಾಲು ಟೀಮ್​ ಮ್ಯಾನೇಜ್​ಮೆಂಟ್​ ಮುಂದಿದೆ. ಟೀಮ್​ ಇಂಡಿಯಾದಲ್ಲಿ ಅನಗತ್ಯ ಪ್ರಯೋಗಗಳು ನಡೀತಿವೆ. ವಿಂಡೀಸ್​​ ವಿರುದ್ಧದ 2ನೇ ಪಂದ್ಯದಲ್ಲಿ ಕೊಹ್ಲಿ-ರೋಹಿತ್​ಗೆ ರೆಸ್ಟ್​ ನೀಡೋ ಅಗತ್ಯತೆ ಏನಿತ್ತು? ನಮಗೆ ಮಾತ್ರವಲ್ಲ.. ಮಾಜಿ ಕ್ರಿಕೆಟಿಗ, ಸೆಲೆಕ್ಟರ್​ ಸಬಾ ಕರೀಂಗೂ ಕೂಡ ಇದು ಅರ್ಥವಾಗದ ಪ್ರಶ್ನೆಯಾಗಿದೆ.

ನಾನು ಈ ಪ್ರಶ್ನೆಯನ್ನೂ ಕೇಳ್ತಾ ಇದ್ದೀನಿ. ರೋಹಿತ್​ ಶರ್ಮಾ-ವಿರಾಟ್​ ಕೊಹ್ಲಿ ಯಾಕೆ ಆಡ್ತಿಲ್ಲ. ಅವರು ಆಡ್ತಿಲ್ಲ ಅಂದ ಮೇಲೆ ಅವರನ್ನ ಏಕದಿನಕ್ಕೆ ಸೆಲೆಕ್ಟ್​ ಮಾಡಿದ್ದು ಯಾಕೆ? ಅದರ ಬದಲು ಫ್ರೆಶ್​ ತಂಡವನ್ನ ಕಳುಹಿಸಬಹುದಿತ್ತು. ಈಗ ನಿಮ್ಮ ವಿಶ್ವಕಪ್​ನ ಆಡುವ 11 ಅಥವಾ 15 ಮಂದಿ ಆಟಗಾರರು ಸತತವಾಗಿ ಆಡಬೇಕು. ನಿಮ್ಮ ಬಳಿ ಹೆಚ್ಚು ಸಮಯ ಉಳಿದಿಲ್ಲ.
ಸಬಾ ಕರೀಂ, ಮಾಜಿ ಕ್ರಿಕೆಟಿಗ

ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ವಾ ಕೋಚ್-ಕ್ಯಾಪ್ಟನ್?

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾದಲ್ಲಿ ತರಹೇವಾರಿ ಪ್ರಯೋಗಗಳು ನಡೆದಿದ್ವು. ಆದ್ರೆ ಅಂತಿಮವಾಗಿ ಆಗಿದ್ದು, ಹೀನಾಯ ಮುಖಭಂಗ. ಇದರಿಂದ ಕೋಚ್​ ದ್ರಾವಿಡ್​-ಕ್ಯಾಪ್ಟನ್​ ರೋಹಿತ್​ ಪಾಠ ಕಲಿತಂತಿಲ್ಲ. ಸದ್ಯ ಗಾಯಗೊಂಡು ತಂಡದಿಂದ ಹೊರ ಬಿದ್ದಿರೋ, ಶ್ರೇಯಸ್​​ ಅಯ್ಯರ್​ ಕಮ್​ಬ್ಯಾಕ್​ ಮಾಡಿದ್ರೆ 4ನೇ ಕ್ರಮಾಂಕದಲ್ಲಿ ಆಡ್ತಾರೆ ಅನ್ನೋದು ಮ್ಯಾನೇಜ್​ಮೆಂಟ್​ ನಂಬಿಕೆಯಾಗಿದೆ. ಒಂದು ವೇಳೆ ಶ್ರೇಯಸ್,​ ಕಂಪ್ಲೀಟ್​ ಫಿಟ್​ ಆಗಲಿಲ್ಲ ಅಂದ್ರೆ ಮುಂದೇನು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲ.

ಮೊದಲೇ ಇರುವ ಸಮಸ್ಯೆಗಳು ಖಾಯಂ ಆಟಗಾರರಿಂದ ಪರಿಹಾರ ಆದರೆ ಮಾತ್ರ ಪ್ರಯೋಗ ನಡೆಸಬಹುದು. ಆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ? ಈಗ ನಾವು ಶ್ರೇಯಸ್​ ಅಯ್ಯರ್​ ಫಿಟ್​ ಆಗಿ 4ನೇ ಕ್ರಮಾಂಕದಲ್ಲಿ ಆಡಲಿ ಅನ್ನುತ್ತಿದ್ದೇವೆ. ಅವರಿಗೂ ಹೆಚ್ಚು ಸಮಯ ಬೇಕು. ಶ್ರೇಯಸ್​ ಅಯ್ಯರ್​ ಫಿಟ್​ ಆಗಲಿಲ್ಲ ಅಂದ್ರೆ 4ನೇ ಕ್ರಮಾಂಕದಲ್ಲಿ ನಿಮ್ಮ ಬ್ಯಾಕ್​ ಅಪ್​ ಪ್ಲೇಯರ್​ ಯಾರು? –ಸಬಾ ಕರೀಂ, ಮಾಜಿ ಕ್ರಿಕೆಟಿಗ

ಟೀಮ್​ ಇಂಡಿಯಾಗೆ 4ನೇ ಕ್ರಮಾಂಕವೇ ‘ಕಂಟಕ’.!

ಟೀಮ್​ ಇಂಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬಹುಷಃ ಅತಿ ಹೆಚ್ಚು ಪ್ರಯೋಗಕ್ಕೆ ಒಳಗಾದ ಸ್ಲಾಟ್​ ಇದ್ರೆ ಅದು 4ನೇ ಕ್ರಮಾಂಕ..! ಆದ್ರೆ, ಪರಿಹಾರ ಮಾತ್ರ ಸಿಕ್ಕಿಲ್ಲ. ಕಳೆದೊಂದು ವರ್ಷದ ರೆಕಾರ್ಡ್​ ತೆಗೆದು ನೋಡಿದ್ರೆ, ವಿಶ್ವದ ಉಳಿದೆಲ್ಲಾ ತಂಡಗಳಿಗಿಂತ 4ನೇ ಕ್ರಮಾಂಕದಲ್ಲಿ ಟೀಮ್​ ಇಂಡಿಯಾದ ಸರಾಸರಿ ತೀವ್ರ ಕಳಪೆಯಾಗಿದೆ. 11 ಪಂದ್ಯದಿಂದ ಕೇವಲ 16.2ರ ಸರಾಸರಿಯಲ್ಲಿ ಮಾತ್ರ ರನ್​ ಬಂದಿದೆ. ನಿಜಕ್ಕೂ ಪ್ರಯೋಗ ನಡೆಸಿ ಉತ್ತರ ಕಂಡುಕೊಳ್ಳಬೇಕಿರೋದು ಈ ಸ್ಲಾಟ್​ಗೆ..!

ರೋಹಿತ್ ಮತ್ತು ವಿರಾಟ್ ಕೊಹ್ಲಿ
ರೋಹಿತ್ ಮತ್ತು ವಿರಾಟ್ ಕೊಹ್ಲಿ

ಒಂದು ಸ್ಥಾನಕ್ಕೆ ಹಲವರ ನಡುವೆ ಫೈಟ್​..!

ತಂಡದಲ್ಲಿರೋ ಸಂಜು ಸ್ಯಾಮ್ಸನ್​, ಸೂರ್ಯ ಕುಮಾರ್​ ಯಾದವ್​ ಹಾಗೂ ಇಶಾನ್​ ಕಿಶನ್​ಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋ ಸಾಮರ್ಥ್ಯವಿದೆ. ದೀಪಕ್​ ಹೂಡರನ್ನ ಕೂಡ ಆಯ್ಕೆಗೆ ಪರಿಗಣಿಸಬಹುದಾಗಿದೆ. ಇವರಲ್ಲಿ ಒಬ್ಬರನ್ನ ಬ್ಯಾಕ್​ ಅಪ್​ ಪ್ಲೇಯರ್​ ಆಗಿ ಆಯ್ಕೆ ಮಾಡಿಕೊಳ್ಳಬೇಕಿದೆ.

ಒಟ್ಟಿನಲ್ಲಿ ಮುಂದಿನ ಪಂದ್ಯದಿಂದಾದ್ರೂ ಟೀಮ್​ ಮ್ಯಾನೇಜ್​ಮೆಂಟ್​ ಪ್ರಯೋಗವನ್ನು ನಿಲ್ಲಿಸಬೇಕಿದೆ. ವಿಶ್ವಕಪ್​ನಲ್ಲಿ ಆಡೋ ಆಟಗಾರರಿಗೆ ಮಣೆ ಹಾಕಬೇಕಿದೆ. ಸರಿಯಾದ ಸ್ಲಾಟ್​ನಲ್ಲಿ ಆಡಿಸಬೇಕಿದೆ. ಪ್ರಯೋಗವನ್ನೆ ಮುಂದುವರೆಸಿದ್ರೆ, ಸಂಕಷ್ಟ ತಪ್ಪಿದ್ದಲ್ಲ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More