ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾಗೆ ಸೋಲು
2 ವರ್ಷವಾದ್ರೂ ರೋಹಿತ್ ತಂಡವನ್ನು ಮುನ್ನಡೆಸಲೇಬೇಕು
ರೋಹಿತ್ ನಿವೃತ್ತಿ ಹೇಳಿದರೆ ತಂಡಕ್ಕೆ ದೊಡ್ಡ ನಷ್ಟ ಆಗಲಿದೆ
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋತ ಬೆನ್ನಲ್ಲೇ, ಕ್ಯಾಪ್ಟನ್ ರೋಹಿತ್ ಶರ್ಮಾ ಭವಿಷ್ಯದ ಚರ್ಚೆ ಎದ್ದಿದೆ. ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್ ಬೈ ಹೇಳ್ತಾರೆ ಅನ್ನೋ ಪ್ರಿಡಿಕ್ಷನ್ ನಡೀತಿದೆ. ಒಂದು ವೇಳೆ ರೋಹಿತ್ ನಿವೃತ್ತಿ ಹೇಳಿದ್ರೆ, ಟೀಮ್ ಇಂಡಿಯಾಗೆ ಬಿಗ್ ಲಾಸ್. ಮುಂದಿನ 2 ವರ್ಷವಾದ್ರೂ ರೋಹಿತ್ ತಂಡವನ್ನು ಮುನ್ನಡೆಸಲೇಬೇಕು.
ಒಂದೂವರೆ ತಿಂಗಳಿಂದ ರಂಜಿಸಿದ ವಿಶ್ವಕಪ್ ಟೂರ್ನಿಗೆ ತೆರೆ ಬಿದ್ದಿದೆ. ಫೈನಲ್ ಫೈಟ್ನಲ್ಲಿ ಆಸ್ಟ್ರೇಲಿಯಾದ ಅಬ್ಬರದ ನಡುವೆ ಟೀಮ್ ಇಂಡಿಯಾದ ಕಪ್ ಗೆಲುವಿನ ಕನಸು ಕೊಚ್ಚಿ ಹೋಗಿದೆ. ತಂಡವನ್ನು ಯಶಸ್ಸಿಯಾಗಿ ಟೂರ್ನಿ ಯುದ್ದಕ್ಕೂ ಮುನ್ನಡೆಸಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಫೈನಲ್ನಲ್ಲಿ ಫೇಲ್ ಆಗಿ ಬಿಟ್ರು. ಫೈನಲ್ ಕದನದ ಸೋಲು ಹಿಟ್ಮ್ಯಾನ್ರನ್ನ ಮೌನಕ್ಕೆ ಶರಣಾಗುವಂತೆ ಮಾಡಿಬಿಟ್ಟಿದೆ. ನಾಯಕತ್ವಕ್ಕೆ ಗುಡ್ ಬೈ ಹೇಳುವ ಹಂತಕ್ಕೂ ಕರೆದೊಯ್ದಿದೆ.
ರೋಹಿತ್ ಶರ್ಮಾ ನಿವೃತ್ತಿ ಹೇಳೋದು ಬೇಡವೆ ಬೇಡ
ವಿಶ್ವಕಪ್ ಫೈನಲ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕತ್ವಕ್ಕೆ ರೋಹಿತ್ ಶರ್ಮಾ ನಿವೃತ್ತಿ ಹೇಳ್ತಾರೆ ಅನ್ನೋ ಸುದ್ದು ಹಲ್ಚಲ್ ಎಬ್ಬಿಸಿದೆ. ನಿಜಕ್ಕೂ ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್ ಬೈ ಹೇಳಬೇಕಾ? ಯಾವುದೇ ಕಾರಣಕ್ಕೂ ಹಿಟ್ಮ್ಯಾನ್ ನಿವೃತ್ತಿ ಹೇಳಬಾರದು ಅಂತಿವೆ ಈ ಕಾರಣಗಳು.
ಮುಂದಿನ 2 ವರ್ಷದಲ್ಲಿವೆ 3 ಐಸಿಸಿ ಟ್ರೋಫಿ ಟೂರ್ನಮೆಂಟ್
ಏಕದಿನ ವಿಶ್ವಕಪ್ ಟೂರ್ನಿಯ ಸೋಲು ಈಗ ಮುಗಿದ ಅಧ್ಯಾಯ. ಆ ನೋವನ್ನು ಮರೆಯಲು ಮುಂದಿನ 2 ವರ್ಷಗಳಲ್ಲಿ ಬರೋಬ್ಬರಿ 3 ಐಸಿಸಿ ಟೂರ್ನಿಗಳಿವೆ. 2024 ರ ಟಿ 20 ವಿಶ್ವಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಗಳಿವೆ. ಈ ಮೂರು ಟೂರ್ನಿಗಳಲ್ಲಿ ಗೆದ್ದು ಐಸಿಸಿ ಟ್ರೋಫಿ ಜಯಿಸೋ ಅವಕಾಶ ಟೀಮ್ ಇಂಡಿಯಾಗಿದೆ. ಇದಕ್ಕೆ ರೋಹಿತ್ ನಾಯಕತ್ವದ ಅಗತ್ಯತೆ ತಂಡಕ್ಕಿದೆ.
3 ಮಾದರಿಯಲ್ಲಿ ತಂಡ ಮುನ್ನಡೆಸೋ ಸಮರ್ಥ ನಾಯಕನಿಲ್ಲ
2007ರಲ್ಲಿ ದ್ರಾವಿಡ್ ನಾಯಕತ್ವ ತೊರೆದಾಗ ಎಮ್.ಎಸ್ ಧೋನಿ ರಿಪ್ಲೇಸ್ಮೆಂಟ್ ಆಯ್ಕೆಯಾಗಿದ್ದರು. ಕೊಹ್ಲಿ ನಾಯಕತ್ವದ ಪಟ್ಟುಗಳನ್ನು ಕಲಿತ ಮೇಲೆ ಧೋನಿ ಗುಡ್ ಬೈ ಹೇಳಿದ್ರು. ಕೊಹ್ಲಿ ಕ್ಯಾಪ್ಟನ್ಸಿ ಪಟ್ಟ ತ್ಯಜಿಸಿದಾಗ ರೋಹಿತ್ ಶರ್ಮಾ ಸ್ಥಾನ ತುಂಬಲು ಸಿದ್ಧರಾಗಿದ್ರು. ಈಗ ರೋಹಿತ್ ನಾಯಕತ್ವ ತ್ಯಜಿಸಿಬಿಟ್ಟರೇ ಅಷ್ಟು ಸಮರ್ಥವಾಗಿ ಮೂರೂ ಫಾರ್ಮೆಟ್ನಲ್ಲಿ ತಂಡವನ್ನು ಮುನ್ನಡೆಸೋ ಆಟಗಾರರೇ ಇಲ್ಲ.
ಹಾರ್ದಿಕ್ ಪಾಂಡ್ಯರನ್ನ ಭವಿಷ್ಯದ ನಾಯಕ ಎನ್ನಲಾಗ್ತಿದ್ದರೂ ಆಲ್ರೌಂಡರ್ ಫಿಟ್ನೆಸ್ ಮತ್ತು ಫಾರ್ಮ್ ಸಮಸ್ಯೆಯಾಗಿದೆ. ಏಕದಿನ ವಿಶ್ವಕಪ್ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್, ಟೂರ್ನಿ ಮದ್ಯೆಯೇ ತಂಡದಿಂದ ಹೊರಬಿದ್ರು. ಕೆ.ಎಲ್ ರಾಹುಲ್, ಜಸ್ಪ್ರಿತ್ ಬೂಮ್ರಾ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಿಲ್ಲ.
ಎಲ್ಲಾ ಮಾದರಿಯಲ್ಲಿ ರೋಹಿತ್ ಬೊಂಬಾಟ್ ಆಟ
ಕಳೆದ 3 ವರ್ಷಗಳಲ್ಲಿ ರೋಹಿತ್ ಶರ್ಮಾ ಬೆಸ್ಟ್ ಟೆಸ್ಟ್ ಬ್ಯಾಟ್ಸ್ಮನ್ ಆಗಿ ರೂಪುಗೊಂಡಿದ್ದಾರೆ. ಟಿ20 ಫಾರ್ಮೆಟ್ನಲ್ಲಿ ರೋಹಿತ್, ಡಿಸ್ಟ್ರಕ್ಟಿವ್ ಬ್ಯಾಟ್ಸ್ಮನ್ ಅನ್ನೋದನ್ನು ಜಗವೇ ಒಪ್ಪಿದೆ. ಓನ್ ಡೇಯಲ್ಲಿ ನೀಡ್ತಿರೋ ಪರ್ಫಾಮೆನ್ಸ್ಗೆ ವಿಶ್ವಕಪ್ ಟೂರ್ನಿಯೇ ಉದಾಹರಣೆ ಆಗಿದೆ. ನಾಯಕತ್ವದ ಜೊತೆ ಬ್ಯಾಟಿಂಗ್ನಲ್ಲೂ ಅಬ್ಬರಿಸುತ್ತಿರುವಾಗ ನಿವೃತ್ತಿ ಹೇಳಿದ್ರೆ ತಂಡಕ್ಕೇ ನಷ್ಟ.
ಮೆಂಟರ್ ರೋಹಿತ್ ಅಗತ್ಯತೆ ತಂಡಕ್ಕೆ ಬೇಕೆಬೇಕು
ಆಟಗಾರರನ್ನು ಸಮರ್ಥವಾಗಿ ಹ್ಯಾಂಡಲ್ ಮಾಡುವ ಮ್ಯಾನ್ ಮ್ಯಾನೇಜ್ಮೆಂಟ್ ಸ್ಕಿಲ್ ನಾಯಕಕ್ಕೆ ಬೇಕಾದ ಫಸ್ಟ್ ಕ್ವಾಲಿಟಿ. ಈ ಕ್ವಾಲಿಟಿ ರೋಹಿತ್ಗಿದೆ. ಜೂನಿಯರ್, ಸೀನಿಯರ್ ಅನ್ನೋ ಬೇದಭಾವವಿಲ್ಲದೇ ತಂಡವನ್ನು ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ ರೋಹಿತ್ಗಿದೆ. ಜೂನಿಯರ್ ಆಟಗಾರರ ಪಾಲಿನ ಬೆಸ್ಟ್ ಮೆಂಟರ್ ಆಗಿ ಕಾರ್ಯನಿರ್ವಹಿಸೋ ರೋಹಿತ್ ಅಗತ್ಯತೆ ಭವಿಷ್ಯದ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಇದ್ದೇ ಇದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾಗೆ ಸೋಲು
2 ವರ್ಷವಾದ್ರೂ ರೋಹಿತ್ ತಂಡವನ್ನು ಮುನ್ನಡೆಸಲೇಬೇಕು
ರೋಹಿತ್ ನಿವೃತ್ತಿ ಹೇಳಿದರೆ ತಂಡಕ್ಕೆ ದೊಡ್ಡ ನಷ್ಟ ಆಗಲಿದೆ
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋತ ಬೆನ್ನಲ್ಲೇ, ಕ್ಯಾಪ್ಟನ್ ರೋಹಿತ್ ಶರ್ಮಾ ಭವಿಷ್ಯದ ಚರ್ಚೆ ಎದ್ದಿದೆ. ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್ ಬೈ ಹೇಳ್ತಾರೆ ಅನ್ನೋ ಪ್ರಿಡಿಕ್ಷನ್ ನಡೀತಿದೆ. ಒಂದು ವೇಳೆ ರೋಹಿತ್ ನಿವೃತ್ತಿ ಹೇಳಿದ್ರೆ, ಟೀಮ್ ಇಂಡಿಯಾಗೆ ಬಿಗ್ ಲಾಸ್. ಮುಂದಿನ 2 ವರ್ಷವಾದ್ರೂ ರೋಹಿತ್ ತಂಡವನ್ನು ಮುನ್ನಡೆಸಲೇಬೇಕು.
ಒಂದೂವರೆ ತಿಂಗಳಿಂದ ರಂಜಿಸಿದ ವಿಶ್ವಕಪ್ ಟೂರ್ನಿಗೆ ತೆರೆ ಬಿದ್ದಿದೆ. ಫೈನಲ್ ಫೈಟ್ನಲ್ಲಿ ಆಸ್ಟ್ರೇಲಿಯಾದ ಅಬ್ಬರದ ನಡುವೆ ಟೀಮ್ ಇಂಡಿಯಾದ ಕಪ್ ಗೆಲುವಿನ ಕನಸು ಕೊಚ್ಚಿ ಹೋಗಿದೆ. ತಂಡವನ್ನು ಯಶಸ್ಸಿಯಾಗಿ ಟೂರ್ನಿ ಯುದ್ದಕ್ಕೂ ಮುನ್ನಡೆಸಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಫೈನಲ್ನಲ್ಲಿ ಫೇಲ್ ಆಗಿ ಬಿಟ್ರು. ಫೈನಲ್ ಕದನದ ಸೋಲು ಹಿಟ್ಮ್ಯಾನ್ರನ್ನ ಮೌನಕ್ಕೆ ಶರಣಾಗುವಂತೆ ಮಾಡಿಬಿಟ್ಟಿದೆ. ನಾಯಕತ್ವಕ್ಕೆ ಗುಡ್ ಬೈ ಹೇಳುವ ಹಂತಕ್ಕೂ ಕರೆದೊಯ್ದಿದೆ.
ರೋಹಿತ್ ಶರ್ಮಾ ನಿವೃತ್ತಿ ಹೇಳೋದು ಬೇಡವೆ ಬೇಡ
ವಿಶ್ವಕಪ್ ಫೈನಲ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕತ್ವಕ್ಕೆ ರೋಹಿತ್ ಶರ್ಮಾ ನಿವೃತ್ತಿ ಹೇಳ್ತಾರೆ ಅನ್ನೋ ಸುದ್ದು ಹಲ್ಚಲ್ ಎಬ್ಬಿಸಿದೆ. ನಿಜಕ್ಕೂ ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್ ಬೈ ಹೇಳಬೇಕಾ? ಯಾವುದೇ ಕಾರಣಕ್ಕೂ ಹಿಟ್ಮ್ಯಾನ್ ನಿವೃತ್ತಿ ಹೇಳಬಾರದು ಅಂತಿವೆ ಈ ಕಾರಣಗಳು.
ಮುಂದಿನ 2 ವರ್ಷದಲ್ಲಿವೆ 3 ಐಸಿಸಿ ಟ್ರೋಫಿ ಟೂರ್ನಮೆಂಟ್
ಏಕದಿನ ವಿಶ್ವಕಪ್ ಟೂರ್ನಿಯ ಸೋಲು ಈಗ ಮುಗಿದ ಅಧ್ಯಾಯ. ಆ ನೋವನ್ನು ಮರೆಯಲು ಮುಂದಿನ 2 ವರ್ಷಗಳಲ್ಲಿ ಬರೋಬ್ಬರಿ 3 ಐಸಿಸಿ ಟೂರ್ನಿಗಳಿವೆ. 2024 ರ ಟಿ 20 ವಿಶ್ವಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಗಳಿವೆ. ಈ ಮೂರು ಟೂರ್ನಿಗಳಲ್ಲಿ ಗೆದ್ದು ಐಸಿಸಿ ಟ್ರೋಫಿ ಜಯಿಸೋ ಅವಕಾಶ ಟೀಮ್ ಇಂಡಿಯಾಗಿದೆ. ಇದಕ್ಕೆ ರೋಹಿತ್ ನಾಯಕತ್ವದ ಅಗತ್ಯತೆ ತಂಡಕ್ಕಿದೆ.
3 ಮಾದರಿಯಲ್ಲಿ ತಂಡ ಮುನ್ನಡೆಸೋ ಸಮರ್ಥ ನಾಯಕನಿಲ್ಲ
2007ರಲ್ಲಿ ದ್ರಾವಿಡ್ ನಾಯಕತ್ವ ತೊರೆದಾಗ ಎಮ್.ಎಸ್ ಧೋನಿ ರಿಪ್ಲೇಸ್ಮೆಂಟ್ ಆಯ್ಕೆಯಾಗಿದ್ದರು. ಕೊಹ್ಲಿ ನಾಯಕತ್ವದ ಪಟ್ಟುಗಳನ್ನು ಕಲಿತ ಮೇಲೆ ಧೋನಿ ಗುಡ್ ಬೈ ಹೇಳಿದ್ರು. ಕೊಹ್ಲಿ ಕ್ಯಾಪ್ಟನ್ಸಿ ಪಟ್ಟ ತ್ಯಜಿಸಿದಾಗ ರೋಹಿತ್ ಶರ್ಮಾ ಸ್ಥಾನ ತುಂಬಲು ಸಿದ್ಧರಾಗಿದ್ರು. ಈಗ ರೋಹಿತ್ ನಾಯಕತ್ವ ತ್ಯಜಿಸಿಬಿಟ್ಟರೇ ಅಷ್ಟು ಸಮರ್ಥವಾಗಿ ಮೂರೂ ಫಾರ್ಮೆಟ್ನಲ್ಲಿ ತಂಡವನ್ನು ಮುನ್ನಡೆಸೋ ಆಟಗಾರರೇ ಇಲ್ಲ.
ಹಾರ್ದಿಕ್ ಪಾಂಡ್ಯರನ್ನ ಭವಿಷ್ಯದ ನಾಯಕ ಎನ್ನಲಾಗ್ತಿದ್ದರೂ ಆಲ್ರೌಂಡರ್ ಫಿಟ್ನೆಸ್ ಮತ್ತು ಫಾರ್ಮ್ ಸಮಸ್ಯೆಯಾಗಿದೆ. ಏಕದಿನ ವಿಶ್ವಕಪ್ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್, ಟೂರ್ನಿ ಮದ್ಯೆಯೇ ತಂಡದಿಂದ ಹೊರಬಿದ್ರು. ಕೆ.ಎಲ್ ರಾಹುಲ್, ಜಸ್ಪ್ರಿತ್ ಬೂಮ್ರಾ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಿಲ್ಲ.
ಎಲ್ಲಾ ಮಾದರಿಯಲ್ಲಿ ರೋಹಿತ್ ಬೊಂಬಾಟ್ ಆಟ
ಕಳೆದ 3 ವರ್ಷಗಳಲ್ಲಿ ರೋಹಿತ್ ಶರ್ಮಾ ಬೆಸ್ಟ್ ಟೆಸ್ಟ್ ಬ್ಯಾಟ್ಸ್ಮನ್ ಆಗಿ ರೂಪುಗೊಂಡಿದ್ದಾರೆ. ಟಿ20 ಫಾರ್ಮೆಟ್ನಲ್ಲಿ ರೋಹಿತ್, ಡಿಸ್ಟ್ರಕ್ಟಿವ್ ಬ್ಯಾಟ್ಸ್ಮನ್ ಅನ್ನೋದನ್ನು ಜಗವೇ ಒಪ್ಪಿದೆ. ಓನ್ ಡೇಯಲ್ಲಿ ನೀಡ್ತಿರೋ ಪರ್ಫಾಮೆನ್ಸ್ಗೆ ವಿಶ್ವಕಪ್ ಟೂರ್ನಿಯೇ ಉದಾಹರಣೆ ಆಗಿದೆ. ನಾಯಕತ್ವದ ಜೊತೆ ಬ್ಯಾಟಿಂಗ್ನಲ್ಲೂ ಅಬ್ಬರಿಸುತ್ತಿರುವಾಗ ನಿವೃತ್ತಿ ಹೇಳಿದ್ರೆ ತಂಡಕ್ಕೇ ನಷ್ಟ.
ಮೆಂಟರ್ ರೋಹಿತ್ ಅಗತ್ಯತೆ ತಂಡಕ್ಕೆ ಬೇಕೆಬೇಕು
ಆಟಗಾರರನ್ನು ಸಮರ್ಥವಾಗಿ ಹ್ಯಾಂಡಲ್ ಮಾಡುವ ಮ್ಯಾನ್ ಮ್ಯಾನೇಜ್ಮೆಂಟ್ ಸ್ಕಿಲ್ ನಾಯಕಕ್ಕೆ ಬೇಕಾದ ಫಸ್ಟ್ ಕ್ವಾಲಿಟಿ. ಈ ಕ್ವಾಲಿಟಿ ರೋಹಿತ್ಗಿದೆ. ಜೂನಿಯರ್, ಸೀನಿಯರ್ ಅನ್ನೋ ಬೇದಭಾವವಿಲ್ಲದೇ ತಂಡವನ್ನು ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ ರೋಹಿತ್ಗಿದೆ. ಜೂನಿಯರ್ ಆಟಗಾರರ ಪಾಲಿನ ಬೆಸ್ಟ್ ಮೆಂಟರ್ ಆಗಿ ಕಾರ್ಯನಿರ್ವಹಿಸೋ ರೋಹಿತ್ ಅಗತ್ಯತೆ ಭವಿಷ್ಯದ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಇದ್ದೇ ಇದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್