2015-2019 ವೈಫಲ್ಯಕ್ಕೆ ಬ್ರೇಕ್ ಹಾಕಲು ರೋಹಿತ್ ಪಣ
ಆ ತಪ್ಪು ಮರು ಕಳುಹಿಸದಂತೆ ರೋಹಿತ್ ವಾರ್ನ್
ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಎಚ್ಚರಿಕೆ
ಟೀಮ್ ಇಂಡಿಯಾದ ಫಿಟೆಸ್ಟ್ ಕ್ರಿಕೆಟರ್ ವಿರಾಟ್ ಕೊಹ್ಲಿ.. ಈ ಫಿಟ್ನೆಸ್ ವಿಚಾರದಲ್ಲಿ ಸದಾ ಒಂದಿಲ್ಲೊಂದು ಟೀಕೆಗೆ ಗುರಿಯಾಗುವ ಆಟಗಾರ ಟೀಮ್ ಇಂಡಿಯಾದಲ್ಲಿ ಯಾರಾದ್ರೂ ಇದ್ರೆ ಅದು ರೋಹಿತ್ ಶರ್ಮಾ. ಆದ್ರೀಗ ಫಿಟ್ನೆಸ್ನ ಸಿರೀಯಸ್ ಆಗಿ ತೆಗೆದುಕೊಂಡಿರುವ ರೋಹಿತ್, ತಾನೊಂದು ಬೆಸ್ಟ್ ಎಕ್ಸಾಂಪಲ್ ಸೆಟ್ ಮಾಡೋಕೆ ಹೊರಟಿದ್ದಾರೆ. ಅಷ್ಟೇ ಅಲ್ಲ! ಸಹ ಆಟಗಾರರಿಗೆ ಸ್ಟ್ರಾಂಗ್ ಮೆಸೇಜ್ ಕೂಡ ಪಾಸ್ ಮಾಡಿದ್ದಾರೆ.
ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್ನ ಒನ್ ಆ್ಯಂಡ್ ಒನ್ಲಿ ಹಿಟ್ಮ್ಯಾನ್.. ಏಕದಿನ ಕ್ರಿಕೆಟ್ನಲ್ಲಿ ಬರೋಬ್ಬರಿ 3 ದ್ವಿಶತಕ ಸಿಡಿಸಿರುವ ಈ ವೀರ.. ಒನ್ ಆಫ್ ದಿ ಬೆಸ್ಟ್ ಸ್ಟ್ರೈಕರ್ ಆಗಿರೋ ರೋಹಿತ್, ಸಿಡಿದು ನಿಂತರೆ ಖಲ್ಲಾಸ್ ಆಗೋದು ಗ್ಯಾರಂಟಿ. ಹೀಗೆ ಬ್ಯಾಟಿಂಗ್ನಲ್ಲಿ ಸೂಪರ್ ಹಿಟ್ ಇನ್ನಿಂಗ್ಸ್ ಕಟ್ಟರೋ ಹಿಟ್ಮ್ಯಾನ್, ಫಿಟ್ನೆಸ್ ವಿಚಾರದಲ್ಲಿ ಮಾತ್ರ ಡಲ್ಲು.. ಇದೀಗ ಇದಕ್ಕೆ ಬ್ರೇಕ್ ಹಾಕೋಕೆ ಹಿಟ್ಮ್ಯಾನ್ ರೋಹಿತ್ ಮುಂದಾಗಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ವಿಶ್ರಾಂತಿಯಲ್ಲಿರುವ ರೋಹಿತ್, ಏಷ್ಯಾಕಪ್ನತ್ತ ಚಿತ್ತ ನೆಟ್ಟಿದ್ದಾರೆ. ಇದಕ್ಕಾಗಿ ಭಾರೀ ಕಸರತ್ತನ್ನೇ ನಡೆಸ್ತಿರುವ ನಾಯಕ ರೋಹಿತ್, ಜಿಮ್ನಲ್ಲಿ ಬೆವರು ಸುರಿಸುತ್ತಿದ್ದಾರೆ.
ಏಷ್ಯಾಕಪ್ನಲ್ಲಿ ಅಬ್ಬರಿಸಲು ರೋಹಿತ್ ಶರ್ಮಾ ತಯಾರಿ!
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟ್ ಬೀಸದ ರೋಹಿತ್, ಈಗ ಸಂಪೂರ್ಣ ಚಿತ್ತ ಏಷ್ಯಾಕಪ್ನತ್ತ ನೆಟ್ಟಿದ್ದಾರೆ. ಈ ಮಹತ್ವದ ಟೂರ್ನಿಯನ್ನ ಸಿರೀಯಸ್ ಆಗಿ ತೆಗೆದುಕೊಂಡಿರುವ ರೋಹಿತ್, ಸಿಕ್ಕ ಬ್ರೇಕ್ನಲ್ಲಿ ವೇಟ್ಲಿಫ್ಟಿಂಗ್, ಲೆಗ್ ವ್ಯಾಯಾಮ ಮಾಡ್ತಾ ಜಿಮ್ನಲ್ಲಿ ಸಖತ್ ವರ್ಕೌಟ್ ಮಾಡ್ತಿದ್ದಾರೆ. ಏಷ್ಯಾಕಪ್ಗೆ ತಯಾರಿ ಆರಂಭಿಸಿರುವ ಹಿಟ್ಮ್ಯಾನ್, ತನ್ನದೇ ಆದ ಬೆಸ್ಟ್ ಎಕ್ಸಾಂಪಲ್ ಸೆಟ್ ಮಾಡೋಕೆ ಉತ್ಸಾಹದಲ್ಲಿದ್ದಾರೆ. ಈ ನಿಟ್ಟಿನಲ್ಲೇ ಬೆವರು ಹರಿಸ್ತಿರುವ ರೋಹಿತ್, ಸಹ ಆಟಗಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಸಹ ಆಟಗಾರರಿಗೆ ಹಿಟ್ಮ್ಯಾನ್ ವಾರ್ನಿಂಗ್..!
ಮೆಗಾ ಟೂರ್ನಿಗಳನ್ನ ಗೆಲ್ಲೋಕೆ ಹೊರಟಿರುವ ಹಿಟ್ಮ್ಯಾನ್ ರೋಹಿತ್ಗೆ ನೂರೊಂದು ಅಡೆತಡೆ ಎದುರಾಗಿದೆ. ಅದರಲ್ಲೂ 4 ಹಾಗೂ 5ನೇ ಕ್ರಮಾಂಕದ ಚಿಂತೆ ಬಹುವಾಗಿ ಕಾಡ್ತಿದೆ. ಈ ನಿಟ್ಟಿನಲ್ಲಿ ಹಲವು ಆಟಗಾರರನ್ನ ಪ್ರಯೋಗಿಸಿರುವ ಟೀಮ್ ಮ್ಯಾನೇಜ್ಮೆಂಟ್, ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಹಾಕಿದೆ. ಇದೀಗ ಏಷ್ಯಾಕಪ್ಗೆ 19 ದಿನಗಳಿರುವಂತೆಯೇ ಏಕದಿನ ವಿಶ್ವಕಪ್ ರೇಸ್ನಲ್ಲಿರುವ ಆಟಗಾರರಿಗೆ ಓತ್ತಡದಲ್ಲಿ ಆಡಿ ಅಥವಾ ಜಾಗ ಖಾಲಿ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒತ್ತಡದಲ್ಲಿ ಆಡುವವರನ್ನ ಬಯಸುವೆ..!
ಕಳೆದ 4-5 ವರ್ಷಗಳಿಂದ ಗಾಯಗಳ ಶೇಕಡಾವಾರು ಹೆಚ್ಚಿದೆ. ಆಟಗಾರರು ಗಾಯಗೊಂಡು ಅಲಭ್ಯರಿದ್ದಾಗ, ವಿಭಿನ್ನ ಆಟಗಾರರೊಂದಿಗೆ ವಿಭಿನ್ನ ಪ್ರಯೋಗಕ್ಕೆ ಮುಂದಾಗುತ್ತೀರಿ. ನಾನು ಇದನ್ನ ನಂಬರ್-4 ಸ್ಲಾಟ್ ಬಗ್ಗೆ ಹೇಳುತ್ತಿದ್ದೇನೆ. ನಮಗೆ ಉತ್ತರ ಬೇಕಾಗಿರುವ ಬಹಳಷ್ಟು ಪ್ರಶ್ನೆಗಳಿವೆ. ಆದರೆ ಏಷ್ಯಾಕಪ್ನಲ್ಲಿ ಒತ್ತಡದಲ್ಲಿ ಬ್ಯಾಟಿಂಗ್ ಮಾಡುವ ಕೆಲ ಆಟಗಾರರನ್ನು ನೋಡಲು ಬಯಸುತ್ತೇನೆ-ರೋಹಿತ್ ಶರ್ಮಾ, ನಾಯಕ
ಹಿಟ್ಮ್ಯಾನ್ ರೋಹಿತ್ ಶರ್ಮಾರ ಈ ಮಾತಿನ ಹಿಂದಿನ ಕಾರಣ. ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಇಂಜುರಿಗೆ ತುತ್ತಾಗಿರುವುದು. ಈ ಇಬ್ಬರ ಲಭ್ಯತೆ ಬಗ್ಗೆ ಎಳ್ಳಷ್ಟು ಕ್ಲಾರಿಟಿ ಟೀಮ್ ಮ್ಯಾನೇಜ್ಮೆಂಟ್ಗೆ ಇಲ್ಲ. ಹೀಗಾಗಿ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ರನ್ನ ಪ್ರಯೋಗಿಸಿತ್ತು. ಇವರ ಪರ್ಫಾಮೆನ್ಸ್ ಫ್ಲಾಟ್ ಟ್ರ್ಯಾಕ್ಗೆ ಮಾತ್ರವೇ ಸಿಮೀತವಾಗಿತ್ತು. ಇದೇ ಕಾರಣಕ್ಕೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಂಡರ್ pressureನಲ್ಲಿ ಆಡೋ ಆಟಗಾರರನ್ನೇ ಬಯಸುವೆ ಎಂಬ ಕ್ಲಿಯರ್ ಮೆಸೇಜ್ ಪಾಸ್ ಮಾಡಿದ್ದಾರೆ. ಇನ್ಫ್ಯಾಕ್ಟ್ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಎಚ್ಚರಿಕೆ ಕಾರಣ ಹಿಂದಿನ 2 ಏಕದಿನ ವಿಶ್ವಕಪ್.
ಟಾಪ್-3 ಮೇಲೆಯೇ ನಿಂತಿತ್ತು ವಿಶ್ವಕಪ್ಗಳ ಭವಿಷ್ಯ..!
2011ರ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಸೆಮೀಸ್ನಲ್ಲೇ ಮುಗ್ಗರಿಸ್ತಿದೆ. ಇದಕ್ಕೆ ಕಾರಣ ಮಿಡಲ್ ಆರ್ಡರ್ ವೈಫಲ್ಯವೇ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. 2015 ಹಾಗೂ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಟಾಪ್-3 ವಿಫಲವಾಗಿತ್ತು. ಒತ್ತಡದ ಪರಿಸ್ಥಿತಿಯಗೆ ಸಿಲುಕಿದ್ದ ಮಿಡಲ್ ಆರ್ಡರ್ ಗೆಲುವಿನ ಹಳಿಗೇರಿಸುವಲ್ಲಿ ವಿಫಲವಾಗಿತ್ತು. ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಎರಡು ಏಕದಿನ ವಿಶ್ವಕಪ್ಗಳಲ್ಲಿ ಭಾರತ ಪರ 12 ಶತಕಗಳು ಮೂಡಿಬಂದಿವೆ. ಇವೆಲ್ಲವೂ ಟಾಪ್-3 ಬ್ಯಾಟರ್ಗಳ ಕೊಡುಗೆ.
2019ರಲ್ಲಿ ಇಂಗ್ಲೆಂಡ್ ಗೆಲುವಿನ ಸಿಕ್ರೇಟ್ ಮಿಡಲ್ ಆರ್ಡರ್..!
ಮಿಡಲ್ ಆರ್ಡರ್ ವೈಫಲ್ಯದಿಂದ ಟೀಮ್ ಇಂಡಿಯಾದ ವಿಶ್ವಕಪ್ ಕನಸು ಛಿದ್ರಗೊಂಡರೆ, ಇದೇ ಮಿಡಲ್ ಆರ್ಡರ್ನ ಸಕ್ಸಸ್ನಿಂದಾಗಿ ಇಂಗ್ಲೆಂಡ್ ವಿಶ್ವಕಿರೀಟಕ್ಕೆ ಮುತ್ತಿಟ್ಟಿತ್ತು. ಬೆನ್ ಸ್ಟೋಕ್ಸ್, ಇಯಾನ್ ಮಾರ್ಗನ್, ಜೋಶ್ ಬಟ್ಲರ್ ಅಮೋಘ ಬ್ಯಾಟಿಂಗ್ನ ಪ್ರತಿಫಲ ಚಾಂಪಿಯನ್ ಪಟಕ್ಕೇರಿತ್ತು. ಇದೇ ಕಾರಣಕ್ಕೆ ಒತ್ತಡದ ಪರಿಸ್ಥಿತಿಗಳನ್ನ ಮೆಟ್ಟಿನಿಲ್ಲುವ ಆಟಗಾರರಿಗೆ ಚಾನ್ಸ್ ನೀಡುವ ಬಯಕೆಯ ಮರ್ಮವಾಗಿದೆ. ಅದೇನೇ ಆಗಲಿ..! ಏಷ್ಯಾಕಪ್ಗೆ ಸಜ್ಜಾಗ್ತಿರುವ ಕ್ಯಾಪ್ಟನ್ ರೋಹಿತ್, ಮೆಗಾ ಟೂರ್ನಿ ಗೆಲ್ಲುವ ಪಣ ತೊಟ್ಟಿದ್ದು. ಸಹ ಆಟಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
2015-2019 ವೈಫಲ್ಯಕ್ಕೆ ಬ್ರೇಕ್ ಹಾಕಲು ರೋಹಿತ್ ಪಣ
ಆ ತಪ್ಪು ಮರು ಕಳುಹಿಸದಂತೆ ರೋಹಿತ್ ವಾರ್ನ್
ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಎಚ್ಚರಿಕೆ
ಟೀಮ್ ಇಂಡಿಯಾದ ಫಿಟೆಸ್ಟ್ ಕ್ರಿಕೆಟರ್ ವಿರಾಟ್ ಕೊಹ್ಲಿ.. ಈ ಫಿಟ್ನೆಸ್ ವಿಚಾರದಲ್ಲಿ ಸದಾ ಒಂದಿಲ್ಲೊಂದು ಟೀಕೆಗೆ ಗುರಿಯಾಗುವ ಆಟಗಾರ ಟೀಮ್ ಇಂಡಿಯಾದಲ್ಲಿ ಯಾರಾದ್ರೂ ಇದ್ರೆ ಅದು ರೋಹಿತ್ ಶರ್ಮಾ. ಆದ್ರೀಗ ಫಿಟ್ನೆಸ್ನ ಸಿರೀಯಸ್ ಆಗಿ ತೆಗೆದುಕೊಂಡಿರುವ ರೋಹಿತ್, ತಾನೊಂದು ಬೆಸ್ಟ್ ಎಕ್ಸಾಂಪಲ್ ಸೆಟ್ ಮಾಡೋಕೆ ಹೊರಟಿದ್ದಾರೆ. ಅಷ್ಟೇ ಅಲ್ಲ! ಸಹ ಆಟಗಾರರಿಗೆ ಸ್ಟ್ರಾಂಗ್ ಮೆಸೇಜ್ ಕೂಡ ಪಾಸ್ ಮಾಡಿದ್ದಾರೆ.
ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್ನ ಒನ್ ಆ್ಯಂಡ್ ಒನ್ಲಿ ಹಿಟ್ಮ್ಯಾನ್.. ಏಕದಿನ ಕ್ರಿಕೆಟ್ನಲ್ಲಿ ಬರೋಬ್ಬರಿ 3 ದ್ವಿಶತಕ ಸಿಡಿಸಿರುವ ಈ ವೀರ.. ಒನ್ ಆಫ್ ದಿ ಬೆಸ್ಟ್ ಸ್ಟ್ರೈಕರ್ ಆಗಿರೋ ರೋಹಿತ್, ಸಿಡಿದು ನಿಂತರೆ ಖಲ್ಲಾಸ್ ಆಗೋದು ಗ್ಯಾರಂಟಿ. ಹೀಗೆ ಬ್ಯಾಟಿಂಗ್ನಲ್ಲಿ ಸೂಪರ್ ಹಿಟ್ ಇನ್ನಿಂಗ್ಸ್ ಕಟ್ಟರೋ ಹಿಟ್ಮ್ಯಾನ್, ಫಿಟ್ನೆಸ್ ವಿಚಾರದಲ್ಲಿ ಮಾತ್ರ ಡಲ್ಲು.. ಇದೀಗ ಇದಕ್ಕೆ ಬ್ರೇಕ್ ಹಾಕೋಕೆ ಹಿಟ್ಮ್ಯಾನ್ ರೋಹಿತ್ ಮುಂದಾಗಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ವಿಶ್ರಾಂತಿಯಲ್ಲಿರುವ ರೋಹಿತ್, ಏಷ್ಯಾಕಪ್ನತ್ತ ಚಿತ್ತ ನೆಟ್ಟಿದ್ದಾರೆ. ಇದಕ್ಕಾಗಿ ಭಾರೀ ಕಸರತ್ತನ್ನೇ ನಡೆಸ್ತಿರುವ ನಾಯಕ ರೋಹಿತ್, ಜಿಮ್ನಲ್ಲಿ ಬೆವರು ಸುರಿಸುತ್ತಿದ್ದಾರೆ.
ಏಷ್ಯಾಕಪ್ನಲ್ಲಿ ಅಬ್ಬರಿಸಲು ರೋಹಿತ್ ಶರ್ಮಾ ತಯಾರಿ!
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟ್ ಬೀಸದ ರೋಹಿತ್, ಈಗ ಸಂಪೂರ್ಣ ಚಿತ್ತ ಏಷ್ಯಾಕಪ್ನತ್ತ ನೆಟ್ಟಿದ್ದಾರೆ. ಈ ಮಹತ್ವದ ಟೂರ್ನಿಯನ್ನ ಸಿರೀಯಸ್ ಆಗಿ ತೆಗೆದುಕೊಂಡಿರುವ ರೋಹಿತ್, ಸಿಕ್ಕ ಬ್ರೇಕ್ನಲ್ಲಿ ವೇಟ್ಲಿಫ್ಟಿಂಗ್, ಲೆಗ್ ವ್ಯಾಯಾಮ ಮಾಡ್ತಾ ಜಿಮ್ನಲ್ಲಿ ಸಖತ್ ವರ್ಕೌಟ್ ಮಾಡ್ತಿದ್ದಾರೆ. ಏಷ್ಯಾಕಪ್ಗೆ ತಯಾರಿ ಆರಂಭಿಸಿರುವ ಹಿಟ್ಮ್ಯಾನ್, ತನ್ನದೇ ಆದ ಬೆಸ್ಟ್ ಎಕ್ಸಾಂಪಲ್ ಸೆಟ್ ಮಾಡೋಕೆ ಉತ್ಸಾಹದಲ್ಲಿದ್ದಾರೆ. ಈ ನಿಟ್ಟಿನಲ್ಲೇ ಬೆವರು ಹರಿಸ್ತಿರುವ ರೋಹಿತ್, ಸಹ ಆಟಗಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಸಹ ಆಟಗಾರರಿಗೆ ಹಿಟ್ಮ್ಯಾನ್ ವಾರ್ನಿಂಗ್..!
ಮೆಗಾ ಟೂರ್ನಿಗಳನ್ನ ಗೆಲ್ಲೋಕೆ ಹೊರಟಿರುವ ಹಿಟ್ಮ್ಯಾನ್ ರೋಹಿತ್ಗೆ ನೂರೊಂದು ಅಡೆತಡೆ ಎದುರಾಗಿದೆ. ಅದರಲ್ಲೂ 4 ಹಾಗೂ 5ನೇ ಕ್ರಮಾಂಕದ ಚಿಂತೆ ಬಹುವಾಗಿ ಕಾಡ್ತಿದೆ. ಈ ನಿಟ್ಟಿನಲ್ಲಿ ಹಲವು ಆಟಗಾರರನ್ನ ಪ್ರಯೋಗಿಸಿರುವ ಟೀಮ್ ಮ್ಯಾನೇಜ್ಮೆಂಟ್, ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಹಾಕಿದೆ. ಇದೀಗ ಏಷ್ಯಾಕಪ್ಗೆ 19 ದಿನಗಳಿರುವಂತೆಯೇ ಏಕದಿನ ವಿಶ್ವಕಪ್ ರೇಸ್ನಲ್ಲಿರುವ ಆಟಗಾರರಿಗೆ ಓತ್ತಡದಲ್ಲಿ ಆಡಿ ಅಥವಾ ಜಾಗ ಖಾಲಿ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒತ್ತಡದಲ್ಲಿ ಆಡುವವರನ್ನ ಬಯಸುವೆ..!
ಕಳೆದ 4-5 ವರ್ಷಗಳಿಂದ ಗಾಯಗಳ ಶೇಕಡಾವಾರು ಹೆಚ್ಚಿದೆ. ಆಟಗಾರರು ಗಾಯಗೊಂಡು ಅಲಭ್ಯರಿದ್ದಾಗ, ವಿಭಿನ್ನ ಆಟಗಾರರೊಂದಿಗೆ ವಿಭಿನ್ನ ಪ್ರಯೋಗಕ್ಕೆ ಮುಂದಾಗುತ್ತೀರಿ. ನಾನು ಇದನ್ನ ನಂಬರ್-4 ಸ್ಲಾಟ್ ಬಗ್ಗೆ ಹೇಳುತ್ತಿದ್ದೇನೆ. ನಮಗೆ ಉತ್ತರ ಬೇಕಾಗಿರುವ ಬಹಳಷ್ಟು ಪ್ರಶ್ನೆಗಳಿವೆ. ಆದರೆ ಏಷ್ಯಾಕಪ್ನಲ್ಲಿ ಒತ್ತಡದಲ್ಲಿ ಬ್ಯಾಟಿಂಗ್ ಮಾಡುವ ಕೆಲ ಆಟಗಾರರನ್ನು ನೋಡಲು ಬಯಸುತ್ತೇನೆ-ರೋಹಿತ್ ಶರ್ಮಾ, ನಾಯಕ
ಹಿಟ್ಮ್ಯಾನ್ ರೋಹಿತ್ ಶರ್ಮಾರ ಈ ಮಾತಿನ ಹಿಂದಿನ ಕಾರಣ. ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಇಂಜುರಿಗೆ ತುತ್ತಾಗಿರುವುದು. ಈ ಇಬ್ಬರ ಲಭ್ಯತೆ ಬಗ್ಗೆ ಎಳ್ಳಷ್ಟು ಕ್ಲಾರಿಟಿ ಟೀಮ್ ಮ್ಯಾನೇಜ್ಮೆಂಟ್ಗೆ ಇಲ್ಲ. ಹೀಗಾಗಿ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ರನ್ನ ಪ್ರಯೋಗಿಸಿತ್ತು. ಇವರ ಪರ್ಫಾಮೆನ್ಸ್ ಫ್ಲಾಟ್ ಟ್ರ್ಯಾಕ್ಗೆ ಮಾತ್ರವೇ ಸಿಮೀತವಾಗಿತ್ತು. ಇದೇ ಕಾರಣಕ್ಕೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಂಡರ್ pressureನಲ್ಲಿ ಆಡೋ ಆಟಗಾರರನ್ನೇ ಬಯಸುವೆ ಎಂಬ ಕ್ಲಿಯರ್ ಮೆಸೇಜ್ ಪಾಸ್ ಮಾಡಿದ್ದಾರೆ. ಇನ್ಫ್ಯಾಕ್ಟ್ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಎಚ್ಚರಿಕೆ ಕಾರಣ ಹಿಂದಿನ 2 ಏಕದಿನ ವಿಶ್ವಕಪ್.
ಟಾಪ್-3 ಮೇಲೆಯೇ ನಿಂತಿತ್ತು ವಿಶ್ವಕಪ್ಗಳ ಭವಿಷ್ಯ..!
2011ರ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಸೆಮೀಸ್ನಲ್ಲೇ ಮುಗ್ಗರಿಸ್ತಿದೆ. ಇದಕ್ಕೆ ಕಾರಣ ಮಿಡಲ್ ಆರ್ಡರ್ ವೈಫಲ್ಯವೇ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. 2015 ಹಾಗೂ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಟಾಪ್-3 ವಿಫಲವಾಗಿತ್ತು. ಒತ್ತಡದ ಪರಿಸ್ಥಿತಿಯಗೆ ಸಿಲುಕಿದ್ದ ಮಿಡಲ್ ಆರ್ಡರ್ ಗೆಲುವಿನ ಹಳಿಗೇರಿಸುವಲ್ಲಿ ವಿಫಲವಾಗಿತ್ತು. ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಎರಡು ಏಕದಿನ ವಿಶ್ವಕಪ್ಗಳಲ್ಲಿ ಭಾರತ ಪರ 12 ಶತಕಗಳು ಮೂಡಿಬಂದಿವೆ. ಇವೆಲ್ಲವೂ ಟಾಪ್-3 ಬ್ಯಾಟರ್ಗಳ ಕೊಡುಗೆ.
2019ರಲ್ಲಿ ಇಂಗ್ಲೆಂಡ್ ಗೆಲುವಿನ ಸಿಕ್ರೇಟ್ ಮಿಡಲ್ ಆರ್ಡರ್..!
ಮಿಡಲ್ ಆರ್ಡರ್ ವೈಫಲ್ಯದಿಂದ ಟೀಮ್ ಇಂಡಿಯಾದ ವಿಶ್ವಕಪ್ ಕನಸು ಛಿದ್ರಗೊಂಡರೆ, ಇದೇ ಮಿಡಲ್ ಆರ್ಡರ್ನ ಸಕ್ಸಸ್ನಿಂದಾಗಿ ಇಂಗ್ಲೆಂಡ್ ವಿಶ್ವಕಿರೀಟಕ್ಕೆ ಮುತ್ತಿಟ್ಟಿತ್ತು. ಬೆನ್ ಸ್ಟೋಕ್ಸ್, ಇಯಾನ್ ಮಾರ್ಗನ್, ಜೋಶ್ ಬಟ್ಲರ್ ಅಮೋಘ ಬ್ಯಾಟಿಂಗ್ನ ಪ್ರತಿಫಲ ಚಾಂಪಿಯನ್ ಪಟಕ್ಕೇರಿತ್ತು. ಇದೇ ಕಾರಣಕ್ಕೆ ಒತ್ತಡದ ಪರಿಸ್ಥಿತಿಗಳನ್ನ ಮೆಟ್ಟಿನಿಲ್ಲುವ ಆಟಗಾರರಿಗೆ ಚಾನ್ಸ್ ನೀಡುವ ಬಯಕೆಯ ಮರ್ಮವಾಗಿದೆ. ಅದೇನೇ ಆಗಲಿ..! ಏಷ್ಯಾಕಪ್ಗೆ ಸಜ್ಜಾಗ್ತಿರುವ ಕ್ಯಾಪ್ಟನ್ ರೋಹಿತ್, ಮೆಗಾ ಟೂರ್ನಿ ಗೆಲ್ಲುವ ಪಣ ತೊಟ್ಟಿದ್ದು. ಸಹ ಆಟಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್