NH 44 ಹೆದ್ದಾರಿಯಲ್ಲಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು!
ಭೀಕರ ಅಪಘಾತದ ಬಳಿಕ ರಸ್ತೆ ಮೇಲೆ ಬಿದ್ದ ರಕ್ತಚಂದನದ ತುಂಡುಗಳು
ಕಾರು ಅಪಘಾತದಿಂದ ರಕ್ತಚಂದನ ದಂಧೆ ಬಗ್ಗೆ ಆಯ್ತು ಬಟಾಬಯಲು
ಪುಷ್ಪ ಮೂವಿ ಸ್ಟೈಲ್ನಲ್ಲಿಯೇ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಿಸುತ್ತಿದ್ದ ದಂಧೆಕೋರರ ಕಾರು ಅಪಘಾತವಾಗಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಆಂಧ್ರ ಪ್ರದೇಶದ ಕಡಪ ಮೂಲದ ನಾಗೇಂದ್ರ, ಶ್ರೀನಿವಾಸಲು ಮತ್ತು ನಾಗರಾಜು ಎಂದು ಹೇಳಲಾಗಿದೆ.
ಸದ್ಯ ಈ ಅಪಘಾತದಿಂದ ಖದೀಮರು ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನ ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಗೊತ್ತಾಗಿದೆ. ಇವರು ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಆಂಧ್ರದ ಕಡಪದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರದ NH 44 ಹೆದ್ದಾರಿಯಲ್ಲಿ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನ ಸೀಟ್ ಅಡಿ ಇಟ್ಟಿದ್ದ ರಕ್ತಚಂದನದ ತುಂಡುಗಳು ಹೊರ ಬಿದ್ದಿದ್ದು ಇದರಿಂದ ಪ್ರಕರಣ ಹೊರ ಬಂದಿದೆ.
ಘಟನೆಯಲ್ಲಿ ಮೂವರು ಗಂಭೀರವಾಗಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಬಳಿಕ ಸ್ಥಳಕ್ಕೆ ಪೊಲೀಸರು ಬಂದಿದ್ದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಕ್ರೇನ್ ಅನ್ನು ತರಿಸಿ ಕಾರನ್ನು ಮೇಲೆತ್ತಲಾಗಿದೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅರಣ್ಯ ಇಲಾಖೆ ಕಣ್ಣುಮುಚ್ಚಿ ಕುತ್ತಿದ್ಯಾ?
ರಕ್ತಚಂದನ ಸಾಗಾಟದ ಗೊತ್ತೇ ಆಗ್ಲಿಲ್ವಾ?
ಈ ಪ್ರಕರಣ ಅಪಘಾತದ ನಂತರ ಬಯಲಾಗಿದೆ. ಒಂದು ವೇಳೆ ಆ್ಯಕ್ಸಿಡೆಂಟ್ ಆಗದೇ ಇದ್ದಿದ್ರೆ, ಈ ಪ್ರಕರಣ ಬಯಲೇ ಆಗ್ತಿರಲಿಲ್ಲ. ರಾಜಾರೋಷವಾಗಿ ಖದೀಮರು ರಕ್ತಚಂದನ ಸಾಗಿಸುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸುಮ್ಮನಿದ್ದಾರೆ ಎನ್ನಲಾಗಿದೆ. ಆಂಧ್ರಪ್ರದೇಶದ ಗಡಿಭಾಗದಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಇದೆ. ಆದ್ರೆ, ಅಲ್ಲಿ ತಪಾಸಣೆ ಆಗಿದ್ಯೋ ಇಲ್ವೋ ಅನ್ನೋದರ ಬಗ್ಗೆ ಅನುಮಾನ ಮೂಡಿದೆ. ಅಧಿಕಾರಿಗಳು ಗೊತ್ತಿದ್ದರೂ ಸುಮ್ಮನೇ ಕೂತ್ತಿದ್ದಾರಾ? ರಕ್ತಚಂದನ ಸಾಗಾಣೆಯಲ್ಲಿ ಶಾಮೀಲಾಗಿದ್ದಾರಾ? ಅನ್ನೋ ಪ್ರಶ್ನೆ ಮೂಡ್ತಿದೆ. ಇನೋವಾ ಕಾರಿನ ಸೀಟ್ನಲ್ಲಿ ಹೆಚ್ಚಿನ ಪ್ರಮಾಣ ರಕ್ತಚಂದನ ಲೋಡ್ ಮಾಡಿದ್ದರಿಂದಲೇ ಅಪಘಾತವಾಗಿದೆ ಅಂತಾ ಹೇಳಲಾಗ್ತಿದೆ. ಲೋಡ್ ಜಾಸ್ತಿಯಾಗಿದ್ದರಿಂದ ನಿಯಂತ್ರಣ ಮಾಡೋಕೆ ಆಗಿಲ್ಲ. ಹೀಗಾಗಿ ಅಪಘಾತ ಸಂಭವಿಸಿದೆ ಅಂತಾ ಅಂದಾಜಿಸಲಾಗಿದೆ. ಸದ್ಯ ರಕ್ತಚಂದನ ತುಂಡುಗಳನ್ನ ಪೆರೇಸಂದ್ರ ಪೊಲೀಸ್ ಠಾಣೆಗೆ ರವಾನೆ ಮಾಡಲಾಗಿದೆ. ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
NH 44 ಹೆದ್ದಾರಿಯಲ್ಲಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು!
ಭೀಕರ ಅಪಘಾತದ ಬಳಿಕ ರಸ್ತೆ ಮೇಲೆ ಬಿದ್ದ ರಕ್ತಚಂದನದ ತುಂಡುಗಳು
ಕಾರು ಅಪಘಾತದಿಂದ ರಕ್ತಚಂದನ ದಂಧೆ ಬಗ್ಗೆ ಆಯ್ತು ಬಟಾಬಯಲು
ಪುಷ್ಪ ಮೂವಿ ಸ್ಟೈಲ್ನಲ್ಲಿಯೇ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಿಸುತ್ತಿದ್ದ ದಂಧೆಕೋರರ ಕಾರು ಅಪಘಾತವಾಗಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಆಂಧ್ರ ಪ್ರದೇಶದ ಕಡಪ ಮೂಲದ ನಾಗೇಂದ್ರ, ಶ್ರೀನಿವಾಸಲು ಮತ್ತು ನಾಗರಾಜು ಎಂದು ಹೇಳಲಾಗಿದೆ.
ಸದ್ಯ ಈ ಅಪಘಾತದಿಂದ ಖದೀಮರು ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನ ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಗೊತ್ತಾಗಿದೆ. ಇವರು ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಆಂಧ್ರದ ಕಡಪದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರದ NH 44 ಹೆದ್ದಾರಿಯಲ್ಲಿ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನ ಸೀಟ್ ಅಡಿ ಇಟ್ಟಿದ್ದ ರಕ್ತಚಂದನದ ತುಂಡುಗಳು ಹೊರ ಬಿದ್ದಿದ್ದು ಇದರಿಂದ ಪ್ರಕರಣ ಹೊರ ಬಂದಿದೆ.
ಘಟನೆಯಲ್ಲಿ ಮೂವರು ಗಂಭೀರವಾಗಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಬಳಿಕ ಸ್ಥಳಕ್ಕೆ ಪೊಲೀಸರು ಬಂದಿದ್ದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಕ್ರೇನ್ ಅನ್ನು ತರಿಸಿ ಕಾರನ್ನು ಮೇಲೆತ್ತಲಾಗಿದೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅರಣ್ಯ ಇಲಾಖೆ ಕಣ್ಣುಮುಚ್ಚಿ ಕುತ್ತಿದ್ಯಾ?
ರಕ್ತಚಂದನ ಸಾಗಾಟದ ಗೊತ್ತೇ ಆಗ್ಲಿಲ್ವಾ?
ಈ ಪ್ರಕರಣ ಅಪಘಾತದ ನಂತರ ಬಯಲಾಗಿದೆ. ಒಂದು ವೇಳೆ ಆ್ಯಕ್ಸಿಡೆಂಟ್ ಆಗದೇ ಇದ್ದಿದ್ರೆ, ಈ ಪ್ರಕರಣ ಬಯಲೇ ಆಗ್ತಿರಲಿಲ್ಲ. ರಾಜಾರೋಷವಾಗಿ ಖದೀಮರು ರಕ್ತಚಂದನ ಸಾಗಿಸುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸುಮ್ಮನಿದ್ದಾರೆ ಎನ್ನಲಾಗಿದೆ. ಆಂಧ್ರಪ್ರದೇಶದ ಗಡಿಭಾಗದಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಇದೆ. ಆದ್ರೆ, ಅಲ್ಲಿ ತಪಾಸಣೆ ಆಗಿದ್ಯೋ ಇಲ್ವೋ ಅನ್ನೋದರ ಬಗ್ಗೆ ಅನುಮಾನ ಮೂಡಿದೆ. ಅಧಿಕಾರಿಗಳು ಗೊತ್ತಿದ್ದರೂ ಸುಮ್ಮನೇ ಕೂತ್ತಿದ್ದಾರಾ? ರಕ್ತಚಂದನ ಸಾಗಾಣೆಯಲ್ಲಿ ಶಾಮೀಲಾಗಿದ್ದಾರಾ? ಅನ್ನೋ ಪ್ರಶ್ನೆ ಮೂಡ್ತಿದೆ. ಇನೋವಾ ಕಾರಿನ ಸೀಟ್ನಲ್ಲಿ ಹೆಚ್ಚಿನ ಪ್ರಮಾಣ ರಕ್ತಚಂದನ ಲೋಡ್ ಮಾಡಿದ್ದರಿಂದಲೇ ಅಪಘಾತವಾಗಿದೆ ಅಂತಾ ಹೇಳಲಾಗ್ತಿದೆ. ಲೋಡ್ ಜಾಸ್ತಿಯಾಗಿದ್ದರಿಂದ ನಿಯಂತ್ರಣ ಮಾಡೋಕೆ ಆಗಿಲ್ಲ. ಹೀಗಾಗಿ ಅಪಘಾತ ಸಂಭವಿಸಿದೆ ಅಂತಾ ಅಂದಾಜಿಸಲಾಗಿದೆ. ಸದ್ಯ ರಕ್ತಚಂದನ ತುಂಡುಗಳನ್ನ ಪೆರೇಸಂದ್ರ ಪೊಲೀಸ್ ಠಾಣೆಗೆ ರವಾನೆ ಮಾಡಲಾಗಿದೆ. ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ