newsfirstkannada.com

ಸುಪ್ರೀಂ ತ್ರಿಸದಸ್ಯ ಪೀಠದಲ್ಲಿ ಕಾವೇರಿ ನೀರಿನ ವಿಚಾರಣೆ; ರಾಜ್ಯದ ವಾದ ಏನು ಗೊತ್ತಾ..?

Share :

25-08-2023

    ನಮ್ಮ ಜಲ, ನಮ್ಮ ಹಕ್ಕಿಗಾಗಿ ರಾಜ್ಯದ ಅರ್ಜಿ!

    ಮಂಡ್ಯದ ರೈತರಿಗೆ ಹೆಚ್ಚಿದ ಮತ್ತಷ್ಟು ಆತಂಕ

    ಕಾವೇರಿ ಕೊಳ್ಳದ ಸದ್ಯದ ಪರಿಸ್ಥಿತಿ ಹೇಗಿದೆ..?

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನೆರೆ ಮನೆಯ ದಾಹ ನೀಗಿಸಬೇಕಾದ ಸ್ಥಿತಿಗೆ ಕರ್ನಾಟಕ ತಲುಪಿದೆ. ಮುಂಗಾರು ಕೈಕೊಟ್ಟು ಜಲಾಶಯಗಳು ಭರ್ತಿಯಾಗಿಲ್ಲ. ಹೀಗಿರುವಾಗ ಕಾವೇರಿ ನೀರು ಹರಿಸಿ ಅಂತಾ ತಮಿಳುನಾಡು ಖ್ಯಾತೆ ತೆಗೆದಿದೆ. ಸುಪ್ರೀಂಕೋರ್ಟ್​ ಕದ ತಟ್ಟಿದೆ. ಇವತ್ತು ಕಾವೇರಿ ಕದನ ಬಗ್ಗೆ ವಿಚಾರಣೆ ನಡೆಯಲಿದ್ದು, ತನ್ನ ವಾದ ಮಂಡಿಸೋಕೆ ರಾಜ್ಯ ಸಜ್ಜಾಗಿದೆ.

ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ ಅಂತಾ ಗೊತ್ತಿದ್ರೂ ತಮಿಳುನಾಡು ಮಾತ್ರ ನೀರಿಗಾಗಿ ಖ್ಯಾತೆ ತೆಗೆಯುತ್ತಲೇ ಇದೆ. ಕಾವೇರಿ ನೀರು ಹರಿಸುವಂತೆ ತಮಿಳುನಾಡು ಸುಪ್ರೀಂ ಕೋರ್ಟ್​ ಕದ ತಟ್ಟಿದೆ. ಮತ ರಾಜಕೀಯಕ್ಕಾಗಿ ಸುಪ್ರೀಂಕೋರ್ಟ್​​​ ಹೆಬ್ಬಾಗಿಲಲ್ಲಿ ಸ್ಟಾಲಿನ್​​ ಸರ್ಕಾರ ವಕಾಲತ್ತಿಗೆ ನಿಂತಿದೆ. ಇಂದು ಸುಪ್ರೀಂಕೋರ್ಟ್‌ನ ಹೊಸ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.

ಹೊಸ ತ್ರಿಸದಸ್ಯ ಪೀಠದಲ್ಲಿ ನಡೆಯಲಿದೆ ಕಾವೇರಿ ವಿಚಾರಣೆ

ಕಾವೇರಿ ಅರ್ಜಿ ವಿಚಾರಣೆ ಇಂದಿನಿಂದ ಆರಂಭ ಆಗಲಿದೆ. ಸುಪ್ರೀಂಕೋರ್ಟ್​ನಿಂದ ಜಸ್ಟೀಸ್ ಬಿ.ಆರ್.ಗವಾಯಿ ನೇತೃತ್ವದಲ್ಲಿ ಜಸ್ಟೀಸ್ ಪಿ.ಎಸ್‌. ನರಸಿಂಹ, ಜಸ್ಟೀಸ್ ಪಿ.ಕೆ.ಮಿಶ್ರಾ ಅವರ ತ್ರಿಸದಸ್ಯ ಪೀಠ ರಚನೆ ಆಗಿದೆ. ಈ ಮಧ್ಯೆ ನ್ಯಾಯ ಪಂಚಾಯ್ತಿ ಮುಂದೆ ಕರ್ನಾಟಕ ತನ್ನ ಅಫಿಡವಿಟ್ ಸಲ್ಲಿಸಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟಿದೆ. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ನಡುವೆ ನೀರು ಹರಿಸಿ ಪ್ರಾಧಿಕಾರದ ಆದೇಶ ಪಾಲನೆ ಆಗಿದೆ. ಆದ್ರೂ ತಮಿಳುನಾಡು ಇನ್ನೂ ಬೇಕು ಎಂಬ ವಾದವೇ ಕಾವೇರಿ ನೀರಿನ ದುರ್ಬಳಕೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದೆ. ಇನ್ನು ನ್ಯಾಯಾಲಯದಲ್ಲಿ ಕವೇರಿ ಕದನದ ಕುರಿತು ಕರ್ನಾಟಕ ಮಂಡಿಸಲಿರೋ ವಾದ ಏನು ಅಂತಾ ನೋಡೋದಾದ್ರೆ.

ಸದ್ಯದ ಪರಿಸ್ಥಿತಿ ಹೇಗಿದೆ..?

  • ಈ ಬಾರಿ ಕಾವೇರಿ ಕೊಳ್ಳದಲ್ಲಿ ಶೇ.42ರಷ್ಟು ಮಳೆ ಕೊರತೆ
  • ಸಾಮಾನ್ಯ ವರ್ಷದಂತೆ ತ.ನಾಡು 36.76 ಟಿಎಂಸಿ ಕೇಳ್ತಿದೆ
  • ಜಲವರ್ಷ ಆರಂಭದಲ್ಲಿ 69 ಟಿಎಂಸಿ ಹೊಂದಿದ್ದ ತ.ನಾಡು
  • ಕರ್ನಾಟಕ ಅಗಸ್ಟ್ 22ರ ತನಕ 26 ಟಿಎಂಸಿ ನೀರು ಬಿಟ್ಟಿದೆ
  • ಇದರಿಂದ 96 ಟಿಎಂಸಿ ನೀರು ತಮಿಳುನಾಡು ಬಳಿ ಸಂಗ್ರಹ
  • ಆದ್ರೆ, ತಮಿಳುನಾಡು ಸದ್ಯ 21 ಟಿಎಂಸಿ ನೀರಿದೆ ಎನ್ನುತ್ತಿದೆ
  • ಹೆಚ್ಚು ಪ್ರದೇಶದಲ್ಲಿ ಕುರುವೈ ಬೆಳೆದು ಹೆಚ್ಚು ನೀರಿನ ಬಳಕೆ
  • ತ.ನಾಡು 1.85 ಲಕ್ಷ ಎಕರೆ ಮೀರಿ ಕುರುವೈ ಬೆಳೆ ಬೆಳೆದಿದೆ
  • ಇದು ಟ್ರುಬ್ಯುನಲ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ
  • ಮೇಕೆದಾಟು ಯೋಜನೆಯನ್ನ ಕಾರಣವಿಲ್ಲದೇ ವಿರೋಧ

ರಾಜ್ಯದಲ್ಲಿರುವ ನೀರಿನ ಪ್ರಮಾಣ ಎಷ್ಟು.. ಸದ್ಯ ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ನೀರೆಷ್ಟು ಅಂತಾ ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಲು ಕೂಡ ರಾಜ್ಯ ಸಜ್ಜಾಗಿದೆ.

ರಾಜ್ಯದ ವಾದ ಏನು?

  • 4 ಜಲಾಶಯಗಳಿಂದ ರಾಜ್ಯಕ್ಕೆ 200 ಟಿಎಂಸಿ ಅಡಿ ನೀರು ಅಗತ್ಯ
  • ರಾಜ್ಯ ಸರ್ಕಾರ ಈವರೆಗೂ 7.2 ಟಿಎಂಸಿ ಅಡಿ ನೀರನ್ನ ಮಾತ್ರ ಬಳಸಿದೆ
  • ರಾಜ್ಯದ ಕೃಷಿ ಭೂಮಿಗಳಿಗೆ ನೀರು ಅಗತ್ಯವಾಗಿ ಹರಿಸಬೇಕಿದೆ
  • ಬೆಂಗಳೂರು ಸೇರಿ ಹಲವು ನಗರಗಳಿಗೆ ಕುಡಿಯುವ ನೀರು ಪೂರೈಸಬೇಕು
  • ಆದ್ರೆ ಮುಂಗಾರಿನ ಕೊರತೆಯಿಂದ ಜಲಾಶಯಗಳು ಭರ್ತಿಯಾಗಿಲ್ಲ
  • ಹೀಗಾಗಿ ರಾಜ್ಯ ಸಂಕಷ್ಟದಿಂದ ಕೂಡಿದೆ ಎಂಬುದು ರಾಜ್ಯ ವಾದ

ಒಟ್ಟಾರೆ ತಮಿಳುನಾಡಿಗೆ ನೀರು ಹರಿಸ್ತಿರೋದ್ರಿಂದ ಮಂಡ್ಯ ರೈತರಿಗೆ ಆತಂಕ ಮತ್ತಷ್ಟು ಹೆಚ್ಚಾಗ್ತಿದೆ.. ಬೆಳೆಗೆ ನೀರು ಸಿಗದ ಕಾರಣ ಬೆಳೆಯಲ್ಲ ಒಣಗ್ತಿರುವ ಚಿಂತೆ ಕಾಡ್ತಿದೆ. ಇತ್ತ, ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜನರ ಕುಡಿಯುವ ನೀರಿಗು ಸಮಸ್ಯೆ ಉಲ್ಬಣಿಸುವ ಸಾಧ್ಯತೆ ದಟ್ಟವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಪ್ರೀಂ ತ್ರಿಸದಸ್ಯ ಪೀಠದಲ್ಲಿ ಕಾವೇರಿ ನೀರಿನ ವಿಚಾರಣೆ; ರಾಜ್ಯದ ವಾದ ಏನು ಗೊತ್ತಾ..?

https://newsfirstlive.com/wp-content/uploads/2023/08/MK_STALIN.jpg

    ನಮ್ಮ ಜಲ, ನಮ್ಮ ಹಕ್ಕಿಗಾಗಿ ರಾಜ್ಯದ ಅರ್ಜಿ!

    ಮಂಡ್ಯದ ರೈತರಿಗೆ ಹೆಚ್ಚಿದ ಮತ್ತಷ್ಟು ಆತಂಕ

    ಕಾವೇರಿ ಕೊಳ್ಳದ ಸದ್ಯದ ಪರಿಸ್ಥಿತಿ ಹೇಗಿದೆ..?

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನೆರೆ ಮನೆಯ ದಾಹ ನೀಗಿಸಬೇಕಾದ ಸ್ಥಿತಿಗೆ ಕರ್ನಾಟಕ ತಲುಪಿದೆ. ಮುಂಗಾರು ಕೈಕೊಟ್ಟು ಜಲಾಶಯಗಳು ಭರ್ತಿಯಾಗಿಲ್ಲ. ಹೀಗಿರುವಾಗ ಕಾವೇರಿ ನೀರು ಹರಿಸಿ ಅಂತಾ ತಮಿಳುನಾಡು ಖ್ಯಾತೆ ತೆಗೆದಿದೆ. ಸುಪ್ರೀಂಕೋರ್ಟ್​ ಕದ ತಟ್ಟಿದೆ. ಇವತ್ತು ಕಾವೇರಿ ಕದನ ಬಗ್ಗೆ ವಿಚಾರಣೆ ನಡೆಯಲಿದ್ದು, ತನ್ನ ವಾದ ಮಂಡಿಸೋಕೆ ರಾಜ್ಯ ಸಜ್ಜಾಗಿದೆ.

ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ ಅಂತಾ ಗೊತ್ತಿದ್ರೂ ತಮಿಳುನಾಡು ಮಾತ್ರ ನೀರಿಗಾಗಿ ಖ್ಯಾತೆ ತೆಗೆಯುತ್ತಲೇ ಇದೆ. ಕಾವೇರಿ ನೀರು ಹರಿಸುವಂತೆ ತಮಿಳುನಾಡು ಸುಪ್ರೀಂ ಕೋರ್ಟ್​ ಕದ ತಟ್ಟಿದೆ. ಮತ ರಾಜಕೀಯಕ್ಕಾಗಿ ಸುಪ್ರೀಂಕೋರ್ಟ್​​​ ಹೆಬ್ಬಾಗಿಲಲ್ಲಿ ಸ್ಟಾಲಿನ್​​ ಸರ್ಕಾರ ವಕಾಲತ್ತಿಗೆ ನಿಂತಿದೆ. ಇಂದು ಸುಪ್ರೀಂಕೋರ್ಟ್‌ನ ಹೊಸ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.

ಹೊಸ ತ್ರಿಸದಸ್ಯ ಪೀಠದಲ್ಲಿ ನಡೆಯಲಿದೆ ಕಾವೇರಿ ವಿಚಾರಣೆ

ಕಾವೇರಿ ಅರ್ಜಿ ವಿಚಾರಣೆ ಇಂದಿನಿಂದ ಆರಂಭ ಆಗಲಿದೆ. ಸುಪ್ರೀಂಕೋರ್ಟ್​ನಿಂದ ಜಸ್ಟೀಸ್ ಬಿ.ಆರ್.ಗವಾಯಿ ನೇತೃತ್ವದಲ್ಲಿ ಜಸ್ಟೀಸ್ ಪಿ.ಎಸ್‌. ನರಸಿಂಹ, ಜಸ್ಟೀಸ್ ಪಿ.ಕೆ.ಮಿಶ್ರಾ ಅವರ ತ್ರಿಸದಸ್ಯ ಪೀಠ ರಚನೆ ಆಗಿದೆ. ಈ ಮಧ್ಯೆ ನ್ಯಾಯ ಪಂಚಾಯ್ತಿ ಮುಂದೆ ಕರ್ನಾಟಕ ತನ್ನ ಅಫಿಡವಿಟ್ ಸಲ್ಲಿಸಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟಿದೆ. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ನಡುವೆ ನೀರು ಹರಿಸಿ ಪ್ರಾಧಿಕಾರದ ಆದೇಶ ಪಾಲನೆ ಆಗಿದೆ. ಆದ್ರೂ ತಮಿಳುನಾಡು ಇನ್ನೂ ಬೇಕು ಎಂಬ ವಾದವೇ ಕಾವೇರಿ ನೀರಿನ ದುರ್ಬಳಕೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದೆ. ಇನ್ನು ನ್ಯಾಯಾಲಯದಲ್ಲಿ ಕವೇರಿ ಕದನದ ಕುರಿತು ಕರ್ನಾಟಕ ಮಂಡಿಸಲಿರೋ ವಾದ ಏನು ಅಂತಾ ನೋಡೋದಾದ್ರೆ.

ಸದ್ಯದ ಪರಿಸ್ಥಿತಿ ಹೇಗಿದೆ..?

  • ಈ ಬಾರಿ ಕಾವೇರಿ ಕೊಳ್ಳದಲ್ಲಿ ಶೇ.42ರಷ್ಟು ಮಳೆ ಕೊರತೆ
  • ಸಾಮಾನ್ಯ ವರ್ಷದಂತೆ ತ.ನಾಡು 36.76 ಟಿಎಂಸಿ ಕೇಳ್ತಿದೆ
  • ಜಲವರ್ಷ ಆರಂಭದಲ್ಲಿ 69 ಟಿಎಂಸಿ ಹೊಂದಿದ್ದ ತ.ನಾಡು
  • ಕರ್ನಾಟಕ ಅಗಸ್ಟ್ 22ರ ತನಕ 26 ಟಿಎಂಸಿ ನೀರು ಬಿಟ್ಟಿದೆ
  • ಇದರಿಂದ 96 ಟಿಎಂಸಿ ನೀರು ತಮಿಳುನಾಡು ಬಳಿ ಸಂಗ್ರಹ
  • ಆದ್ರೆ, ತಮಿಳುನಾಡು ಸದ್ಯ 21 ಟಿಎಂಸಿ ನೀರಿದೆ ಎನ್ನುತ್ತಿದೆ
  • ಹೆಚ್ಚು ಪ್ರದೇಶದಲ್ಲಿ ಕುರುವೈ ಬೆಳೆದು ಹೆಚ್ಚು ನೀರಿನ ಬಳಕೆ
  • ತ.ನಾಡು 1.85 ಲಕ್ಷ ಎಕರೆ ಮೀರಿ ಕುರುವೈ ಬೆಳೆ ಬೆಳೆದಿದೆ
  • ಇದು ಟ್ರುಬ್ಯುನಲ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ
  • ಮೇಕೆದಾಟು ಯೋಜನೆಯನ್ನ ಕಾರಣವಿಲ್ಲದೇ ವಿರೋಧ

ರಾಜ್ಯದಲ್ಲಿರುವ ನೀರಿನ ಪ್ರಮಾಣ ಎಷ್ಟು.. ಸದ್ಯ ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ನೀರೆಷ್ಟು ಅಂತಾ ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಲು ಕೂಡ ರಾಜ್ಯ ಸಜ್ಜಾಗಿದೆ.

ರಾಜ್ಯದ ವಾದ ಏನು?

  • 4 ಜಲಾಶಯಗಳಿಂದ ರಾಜ್ಯಕ್ಕೆ 200 ಟಿಎಂಸಿ ಅಡಿ ನೀರು ಅಗತ್ಯ
  • ರಾಜ್ಯ ಸರ್ಕಾರ ಈವರೆಗೂ 7.2 ಟಿಎಂಸಿ ಅಡಿ ನೀರನ್ನ ಮಾತ್ರ ಬಳಸಿದೆ
  • ರಾಜ್ಯದ ಕೃಷಿ ಭೂಮಿಗಳಿಗೆ ನೀರು ಅಗತ್ಯವಾಗಿ ಹರಿಸಬೇಕಿದೆ
  • ಬೆಂಗಳೂರು ಸೇರಿ ಹಲವು ನಗರಗಳಿಗೆ ಕುಡಿಯುವ ನೀರು ಪೂರೈಸಬೇಕು
  • ಆದ್ರೆ ಮುಂಗಾರಿನ ಕೊರತೆಯಿಂದ ಜಲಾಶಯಗಳು ಭರ್ತಿಯಾಗಿಲ್ಲ
  • ಹೀಗಾಗಿ ರಾಜ್ಯ ಸಂಕಷ್ಟದಿಂದ ಕೂಡಿದೆ ಎಂಬುದು ರಾಜ್ಯ ವಾದ

ಒಟ್ಟಾರೆ ತಮಿಳುನಾಡಿಗೆ ನೀರು ಹರಿಸ್ತಿರೋದ್ರಿಂದ ಮಂಡ್ಯ ರೈತರಿಗೆ ಆತಂಕ ಮತ್ತಷ್ಟು ಹೆಚ್ಚಾಗ್ತಿದೆ.. ಬೆಳೆಗೆ ನೀರು ಸಿಗದ ಕಾರಣ ಬೆಳೆಯಲ್ಲ ಒಣಗ್ತಿರುವ ಚಿಂತೆ ಕಾಡ್ತಿದೆ. ಇತ್ತ, ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜನರ ಕುಡಿಯುವ ನೀರಿಗು ಸಮಸ್ಯೆ ಉಲ್ಬಣಿಸುವ ಸಾಧ್ಯತೆ ದಟ್ಟವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More