newsfirstkannada.com

ಚೈತ್ರಾ ಕುಂದಾಪುರ ವಿರುದ್ಧ ವಂಚನೆ ಆರೋಪ ಕೇಸ್; ಇದುವರೆಗೂ 3 ಕೋಟಿ ನಗದು ಜಪ್ತಿ..!?

Share :

17-09-2023

    ಆರೋಪಿ ಶ್ರೀಕಾಂತ್ ಮನೆಯಲ್ಲಿ 45 ಲಕ್ಷ ಹಣ ಸೀಜ್

    ಗೋವಿಂದ ಪೂಜಾರಿ ಆದಾಯ ಮೂಲ ಕೆದಕಿದ ಸಿಸಿಬಿ

    ಚೈತ್ರಾ ಕುಂದಾಪುರ ಮನೆಯಲ್ಲಿ ಸಿಕ್ಕಿ ಚಿನ್ನಾಭರಣ ಎಷ್ಟು?

ಬೆಂಗಳೂರು: ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪು ವಿರುದ್ಧದ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಪ್ರಕರಣಲದಲ್ಲಿ ಸುಮಾರು 3 ಕೋಟಿಯಷ್ಟು ಮೌಲ್ಯದ ನಗದು ಹಾಗೂ ಚಿನ್ನವನ್ನು ಸಿಸಿಬಿ ಜಪ್ತಿ ಮಾಡಿದೆ.

ಆರೋಪಿ ಚೈತ್ರಾ ಕುಂದಾಪುರ ತನ್ನ ಸಂಬಂಧಿಕರ ಹೆಸರಲ್ಲಿ ಖಾಸಗಿ ಬ್ಯಾಂಕ್​ನಲ್ಲಿ ಇಟ್ಟಿದ್ದ 1.8 ಕೋಟಿ ಠೇವಣಿ ಪತ್ರವನ್ನು ಜಪ್ತಿ ಮಾಡಲಾಗಿದ್ಯಂತೆ. ಜೊತೆಗೆ ಚೈತ್ರಾ ಮನೆಯಲ್ಲಿದ್ದ ಸುಮಾರು 65 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ರೆ ಬ್ಯಾಂಕ್​ನಲ್ಲಿಟ್ಟಿದ್ದ 40 ಲಕ್ಷ, ಆರೋಪಿ ಶ್ರೀಕಾಂತ್ ಮನೆಯಲ್ಲಿ 45 ಲಕ್ಷವನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಹಾಲಶ್ರೀಗೆ ಈಗಾಗಲೇ 50 ಲಕ್ಷ ರೂಪಾಯಿಯನ್ನು ಗೋವಿಂದ ಪೂಜಾರಿಗೆ ಹಿಂದಿರುಗಿಸಿದ್ದು ಉಳಿದ ಹಣಕ್ಕಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮತ್ತೊಂದು ಕಡೆ ಸಿಸಿಬಿ ಅಧಿಕಾರಿಗಳು ಉದ್ಯಮಿ ಗೋವಿಂದ ಬಾಬು ಪೂಜಾರಿಯ ಸಂಪೂರ್ಣ ಆಸ್ತಿಯ ವಿವರವನ್ನು ಕಲೆ ಹಾಕೋಕೆ ಮುಂದಾಗಿದ್ದಾರೆ. ಸಾಲ ಮಾಡಿ ಚೈತ್ರಾ ಆ್ಯಂಡ್ ಟೀಂಗೆ ಹಣ ಕೊಟ್ಟಿರೋದಾಗಿ ಗೋವಿಂದ ಬಾಬು ದಾಖಲೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಗೋವಿಂದ ಬಾಬು ಅದಾಯದ ಮೂಲ, ಬ್ಯಾಂಕ್​ನಿಂದ ಸಾಲ ಪಡೆದ ಬಗ್ಗೆಯೂ ಸಿಸಿಬಿ ಮಾಹಿತಿ ಕಲೆ ಹಾಕ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ವಿರುದ್ಧ ವಂಚನೆ ಆರೋಪ ಕೇಸ್; ಇದುವರೆಗೂ 3 ಕೋಟಿ ನಗದು ಜಪ್ತಿ..!?

https://newsfirstlive.com/wp-content/uploads/2023/09/CHAITRA.jpg

    ಆರೋಪಿ ಶ್ರೀಕಾಂತ್ ಮನೆಯಲ್ಲಿ 45 ಲಕ್ಷ ಹಣ ಸೀಜ್

    ಗೋವಿಂದ ಪೂಜಾರಿ ಆದಾಯ ಮೂಲ ಕೆದಕಿದ ಸಿಸಿಬಿ

    ಚೈತ್ರಾ ಕುಂದಾಪುರ ಮನೆಯಲ್ಲಿ ಸಿಕ್ಕಿ ಚಿನ್ನಾಭರಣ ಎಷ್ಟು?

ಬೆಂಗಳೂರು: ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪು ವಿರುದ್ಧದ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಪ್ರಕರಣಲದಲ್ಲಿ ಸುಮಾರು 3 ಕೋಟಿಯಷ್ಟು ಮೌಲ್ಯದ ನಗದು ಹಾಗೂ ಚಿನ್ನವನ್ನು ಸಿಸಿಬಿ ಜಪ್ತಿ ಮಾಡಿದೆ.

ಆರೋಪಿ ಚೈತ್ರಾ ಕುಂದಾಪುರ ತನ್ನ ಸಂಬಂಧಿಕರ ಹೆಸರಲ್ಲಿ ಖಾಸಗಿ ಬ್ಯಾಂಕ್​ನಲ್ಲಿ ಇಟ್ಟಿದ್ದ 1.8 ಕೋಟಿ ಠೇವಣಿ ಪತ್ರವನ್ನು ಜಪ್ತಿ ಮಾಡಲಾಗಿದ್ಯಂತೆ. ಜೊತೆಗೆ ಚೈತ್ರಾ ಮನೆಯಲ್ಲಿದ್ದ ಸುಮಾರು 65 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ರೆ ಬ್ಯಾಂಕ್​ನಲ್ಲಿಟ್ಟಿದ್ದ 40 ಲಕ್ಷ, ಆರೋಪಿ ಶ್ರೀಕಾಂತ್ ಮನೆಯಲ್ಲಿ 45 ಲಕ್ಷವನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಹಾಲಶ್ರೀಗೆ ಈಗಾಗಲೇ 50 ಲಕ್ಷ ರೂಪಾಯಿಯನ್ನು ಗೋವಿಂದ ಪೂಜಾರಿಗೆ ಹಿಂದಿರುಗಿಸಿದ್ದು ಉಳಿದ ಹಣಕ್ಕಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮತ್ತೊಂದು ಕಡೆ ಸಿಸಿಬಿ ಅಧಿಕಾರಿಗಳು ಉದ್ಯಮಿ ಗೋವಿಂದ ಬಾಬು ಪೂಜಾರಿಯ ಸಂಪೂರ್ಣ ಆಸ್ತಿಯ ವಿವರವನ್ನು ಕಲೆ ಹಾಕೋಕೆ ಮುಂದಾಗಿದ್ದಾರೆ. ಸಾಲ ಮಾಡಿ ಚೈತ್ರಾ ಆ್ಯಂಡ್ ಟೀಂಗೆ ಹಣ ಕೊಟ್ಟಿರೋದಾಗಿ ಗೋವಿಂದ ಬಾಬು ದಾಖಲೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಗೋವಿಂದ ಬಾಬು ಅದಾಯದ ಮೂಲ, ಬ್ಯಾಂಕ್​ನಿಂದ ಸಾಲ ಪಡೆದ ಬಗ್ಗೆಯೂ ಸಿಸಿಬಿ ಮಾಹಿತಿ ಕಲೆ ಹಾಕ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More