newsfirstkannada.com

ಎಷ್ಟೇ ಚೆನ್ನಾಗಿ ಆಡಿದ್ರೂ ಟೀಂ ಇಂಡಿಯಾದಲ್ಲಿ ಸಿಗದ ಅವಕಾಶ; ಈ ಬಗ್ಗೆ ಚಹಾಲ್​​ ಹೇಳಿದ್ದೇನು?

Share :

06-08-2023

    ವೆಸ್ಟ್​ ಇಂಡೀಸ್​​ಗೆ ಟೀಂ ಇಂಡಿಯಾ ಪ್ರವಾಸ..!

    ಟೀಂ ಇಂಡಿಯಾದಲ್ಲಿ ಆಡಲು ಸಿಗುತ್ತಿಲ್ಲ ಚಾನ್ಸ್​​

    ಈ ಬಗ್ಗೆ ಸ್ಟಾರ್​ ಬೌಲರ್​ ಚಹಾಲ್​ ಹೇಳಿದ್ದೇನು?

ವೆಸ್ಟ್​​ ಇಂಡೀಸ್​​ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಅವಕಾಶ ಸಿಗದೆ ಟೀಂ ಇಂಡಿಯಾದ ಸ್ಟಾರ್​ ಬೌಲರ್​ ಚಹಾಲ್​​ ಸಂಪೂರ್ಣ ಬೆಂಚ್​​ ಕಾದಿದ್ದರು. ಒಂದೇ ಒಂದು ಏಕದಿನ ಪಂದ್ಯದಲ್ಲೂ ಚಹಾಲ್​ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೀಗ ಕೊನೆಗೂ ವಿಂಡೀಸ್​​ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಚಹಾಲ್​​ ಮಾತಾಡಿದ್ದಾರೆ.

ನಾವು ತಂಡದ ಪ್ಲಾನ್​ ಪ್ರಕಾರ ಆಡುತ್ತಿದ್ದೇವೆ. ಟೀಂ ಇಂಡಿಯಾದ ಪ್ಲಾನ್​​ ಅನುಷ್ಠಾನ ಮಾಡುವುದೇ ಮೊದಲ ಆದ್ಯತೆ. ಇದು ಹೊಸದೇನಲ್ಲ. 7ನೇ ಕ್ರಮಾಂಕದಲ್ಲಿ ರವೀಂದ್ರ ಜಡಾಜಾ, ಅಕ್ಷರ್​​ ಪಟೇಲ್​​ ಆಡುವುದು ಸಾಮಾನ್ಯ. ಪಿಚ್​​ ಸ್ಪಿನರ್ಸ್​ಗೆ ಸಪೋರ್ಟಿವ್​​​​ ಆಗಿದ್ದಾಗ ಮಾತ್ರ ಮೂವರು ಆಡಬಹುದು. ಸದ್ಯ ಕುಲ್​​ದೀಪ್​​​​ ಚೆನ್ನಾಗಿ ಆಡುತ್ತಿದ್ದಾರೆ. ಹೀಗಾಗಿ ಅವರ ಬೆಂಬಲಕ್ಕೆ ಟೀಂ ನಿಂತಿದೆ ಎಂದರು.

ನಾನು ನೆಟ್ಸ್‌ನಲ್ಲಿ ಬಹಳ ಶ್ರಮ ಹಾಕುತ್ತಿದ್ದೇನೆ. ಐಪಿಎಲ್​​​​ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದ ಪರ ಆಡುತ್ತಿದ್ದೇನೆ. ಇದು ನನ್ನ ಪ್ರಿಪರೇಷನ್​ ಭಾಗ. ಎಲ್ಲರಿಗೂ ಯಾವಾಗಲೂ ನೀಲಿ ಜರ್ಸಿಯಲ್ಲಿ ಆಡಲೇಬೇಕು ಎಂದು ಇರುತ್ತದೆ. ನಾನೇನು ಸುಮ್ಮನೇ ಕೂತಿಲ್ಲ. ತಂಡದೊಂದಿಗೆ ಜರ್ನೀ ಮಾಡುತ್ತಲೇ ಇದ್ದೇನೆ ಎಂದರು.

ಏನಂದ್ರು ಚಹಾಲ್​​..?

ಐದು ಟಿ20 ಪಂದ್ಯಗಳಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ. ತಂಡವನ್ನು ಗೆಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಟೀಂ ಇಂಡಿಯಾಗೆ ನನ್ನ ಕೈಯಲ್ಲಾದ ಕೊಡುಗೆ ನೀಡುವುದೇ ಮೊದಲ ಆದ್ಯತೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಷ್ಟೇ ಚೆನ್ನಾಗಿ ಆಡಿದ್ರೂ ಟೀಂ ಇಂಡಿಯಾದಲ್ಲಿ ಸಿಗದ ಅವಕಾಶ; ಈ ಬಗ್ಗೆ ಚಹಾಲ್​​ ಹೇಳಿದ್ದೇನು?

https://newsfirstlive.com/wp-content/uploads/2023/08/Chahal.jpg

    ವೆಸ್ಟ್​ ಇಂಡೀಸ್​​ಗೆ ಟೀಂ ಇಂಡಿಯಾ ಪ್ರವಾಸ..!

    ಟೀಂ ಇಂಡಿಯಾದಲ್ಲಿ ಆಡಲು ಸಿಗುತ್ತಿಲ್ಲ ಚಾನ್ಸ್​​

    ಈ ಬಗ್ಗೆ ಸ್ಟಾರ್​ ಬೌಲರ್​ ಚಹಾಲ್​ ಹೇಳಿದ್ದೇನು?

ವೆಸ್ಟ್​​ ಇಂಡೀಸ್​​ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಅವಕಾಶ ಸಿಗದೆ ಟೀಂ ಇಂಡಿಯಾದ ಸ್ಟಾರ್​ ಬೌಲರ್​ ಚಹಾಲ್​​ ಸಂಪೂರ್ಣ ಬೆಂಚ್​​ ಕಾದಿದ್ದರು. ಒಂದೇ ಒಂದು ಏಕದಿನ ಪಂದ್ಯದಲ್ಲೂ ಚಹಾಲ್​ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೀಗ ಕೊನೆಗೂ ವಿಂಡೀಸ್​​ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಚಹಾಲ್​​ ಮಾತಾಡಿದ್ದಾರೆ.

ನಾವು ತಂಡದ ಪ್ಲಾನ್​ ಪ್ರಕಾರ ಆಡುತ್ತಿದ್ದೇವೆ. ಟೀಂ ಇಂಡಿಯಾದ ಪ್ಲಾನ್​​ ಅನುಷ್ಠಾನ ಮಾಡುವುದೇ ಮೊದಲ ಆದ್ಯತೆ. ಇದು ಹೊಸದೇನಲ್ಲ. 7ನೇ ಕ್ರಮಾಂಕದಲ್ಲಿ ರವೀಂದ್ರ ಜಡಾಜಾ, ಅಕ್ಷರ್​​ ಪಟೇಲ್​​ ಆಡುವುದು ಸಾಮಾನ್ಯ. ಪಿಚ್​​ ಸ್ಪಿನರ್ಸ್​ಗೆ ಸಪೋರ್ಟಿವ್​​​​ ಆಗಿದ್ದಾಗ ಮಾತ್ರ ಮೂವರು ಆಡಬಹುದು. ಸದ್ಯ ಕುಲ್​​ದೀಪ್​​​​ ಚೆನ್ನಾಗಿ ಆಡುತ್ತಿದ್ದಾರೆ. ಹೀಗಾಗಿ ಅವರ ಬೆಂಬಲಕ್ಕೆ ಟೀಂ ನಿಂತಿದೆ ಎಂದರು.

ನಾನು ನೆಟ್ಸ್‌ನಲ್ಲಿ ಬಹಳ ಶ್ರಮ ಹಾಕುತ್ತಿದ್ದೇನೆ. ಐಪಿಎಲ್​​​​ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದ ಪರ ಆಡುತ್ತಿದ್ದೇನೆ. ಇದು ನನ್ನ ಪ್ರಿಪರೇಷನ್​ ಭಾಗ. ಎಲ್ಲರಿಗೂ ಯಾವಾಗಲೂ ನೀಲಿ ಜರ್ಸಿಯಲ್ಲಿ ಆಡಲೇಬೇಕು ಎಂದು ಇರುತ್ತದೆ. ನಾನೇನು ಸುಮ್ಮನೇ ಕೂತಿಲ್ಲ. ತಂಡದೊಂದಿಗೆ ಜರ್ನೀ ಮಾಡುತ್ತಲೇ ಇದ್ದೇನೆ ಎಂದರು.

ಏನಂದ್ರು ಚಹಾಲ್​​..?

ಐದು ಟಿ20 ಪಂದ್ಯಗಳಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ. ತಂಡವನ್ನು ಗೆಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಟೀಂ ಇಂಡಿಯಾಗೆ ನನ್ನ ಕೈಯಲ್ಲಾದ ಕೊಡುಗೆ ನೀಡುವುದೇ ಮೊದಲ ಆದ್ಯತೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More