newsfirstkannada.com

ಚೈತ್ರಾ ಕುಂದಾಪುರ ಕೇಸ್​ನಲ್ಲಿ ಮತ್ತೊಂದು ವಿಚಾರ ಬಹಿರಂಗ; ಸ್ಫೋಟಕ ಸತ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ..!

Share :

20-09-2023

    ನಿರ್ದೇಶಕ ಮಂಜು ಉಮೇಶ್ ಕೊಟ್ಯಾನ್ ರೋಚಕ ಮಾಹಿತಿ

    ಪೂಜಾರಿ ಜೊತೆ ಚೈತ್ರಾ ಗ್ಯಾಂಗ್​ನಿಂದ ನಡೆದಿತ್ತು ಮತ್ತೊಂದು ಮಾತುಕತೆ

    ಅಭಿನವ ಹಾಲಶ್ರೀ ನೇತೃತ್ವದಲ್ಲಿ ನಡೆದಿತ್ತು ಮೆಗಾ ಪ್ಲಾನ್

ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪ್ರಕರಣಕ್ಕೆ ನಿರೀಕ್ಷೆಗೂ ಮೀರಿದ ಟ್ವಿಸ್ಟ್​ಗಳು ಸಿಗ್ತಿವೆ. ಇಷ್ಟು ದಿನ ಕೈಗೆ ಸಿಗದೇ ಎಸ್ಕೇಪ್​ ಆಗಿದ್ದ ಪ್ರಮುಖ ಆರೋಪಿ ಹಾಲಶ್ರೀ ಸ್ವಾಮೀಜಿಯ ಬಂಧನ ಆಗಿದೆ. ಈ ನಡುವೆ ಈ ಕೇಸ್​ನಲ್ಲಿ ಗೋವಿಂದ ಪೂಜಾರಿ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಭಾರತದ ಓಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಕೊನೆಗೂ ಸಿಸಿಬಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಗೋವಿಂದ್​ ಪೂಜಾರಿ ಜೀವನಾಧಾರಿತ ಚಿತ್ರಕ್ಕೆ ನಡೆದಿತ್ತಂತೆ ಪ್ಲಾನ್

ಹೌದು, ಚೈತ್ರಾ ಮತ್ತು ಅವರ ತಂಡದ ವಿರುದ್ಧ ಪಂಚಕೋಟಿ ನಾಮ ಆರೋಪ ಮಾಡಿರುವ ಉದ್ಯಮಿ ಗೋವಿಂದ್​ ಪೂಜಾರಿಯ ಜೀವನಾಧಾರಿತ ಚಿತ್ರಕ್ಕೆ ಪ್ಲಾನ್​ ನಡೆದಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾವನ್ನು ಸ್ವತಃ ಈಗ ಬಂಧನವಾಗಿರುವ ಹಾಲಶ್ರೀ ಅನೌನ್ಸ್​ ಮಾಡಿದ್ದರು. ಎಲ್ಲವೂ ಸರಿ ಇದ್ದಿದ್ದರೆ ಸಿನಿಮಾಕ್ಕೆ ಹಾಲಶ್ರೀ ಕ್ಲಾಪ್​​ ಮಾಡಬೇಕಿತ್ತು.

ಸೆಟ್ಟೇರದ ಗೋವಿಂದ ಸಿನಿಮಾ!

ಗೋವಿಂದ ಬಾಬು​ ಪೂಜಾರಿ ಜೀವನಾಧಾರಿತ ಸಿನಿಮಾದ ಸ್ಕ್ರಿಪ್ಟ್ ವರ್ಕ್​ನ್ನ ನಿರ್ದೇಶಕ ಮಂಜು ಕೋಟ್ಯಾನ್ ಸಿದ್ಧಪಡಿಸಿದ್ದರು. ಕಳೆದ ಡಿಸೆಂಬರ್​ನಲ್ಲಿ ಚೆಫ್ ಟಾಕ್ 15ನೇ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಅಭಿನವ ಹಾಲಶ್ರೀ ಭಾಗಿಯಾಗಿದ್ದರು. ಗೋವಿಂದ್​ ಪೂಜಾರಿ ಒಡೆತನದ ಚೆಫ್ ಟಾಕ್ ಕಚೇರಿಯ ಕಾರ್ಯಕ್ರಮ ಇದಾಗಿತ್ತು. ಈ ಕಂಪೆನಿ ಕಾರ್ಪೊರೇಟ್ ಕಂಪನಿಗಳಿಗೆ ಫುಡ್ ಅಂಡ್ ಹಾಸ್ಪಿಟಾಲಿಟಿ ಒದಗಿಸುವ ಕಂಪನಿಯಾಗಿತ್ತು. ಕಾರ್ಯಕ್ರಮದಲ್ಲಿ ಗೋವಿಂದ್​ ಪೂಜಾರಿ ಕುರಿತಾದ ಸಿನಿಮಾ ಬಗ್ಗೆ ಅನೌನ್ಸ್ ಮಾಡಿದ್ದರು. ಆರ್​ಎಸ್ಎಸ್ ಸಂಘ ಪರಿವಾರ ಬಗ್ಗೆ ಸಿನಿಮಾ ಮಾಡಲು ಸಿದ್ಧತೆ ಕೂಡ ನಡೆದಿತ್ತು. ಆದ್ರೆ ಅಂತಿಮವಾಗಿ ತನ್ನದೇ ಸ್ಕ್ರೀಪ್ ಪ್ಲೇನಲ್ಲಿ ನಟಿಸಿ ಗೋವಿಂದ್​ ಪೂಜಾರಿಗೆ ಹಾಲಶ್ರೀ ವಂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಖುದ್ದು ಗೋವಿಂದ ಪೂಜಾರಿಯ ಸಿನಿಮಾ ನಿರ್ದೇಶಿಸಬೇಕಿದ್ದ ಮಂಜು ಉಮೇಶ್ ಕೊಟ್ಯಾನ್ ಮಾಹಿತಿ ನೀಡಿದ್ದಾರೆ. ಸಿನಿಮಾಗೆ ಮಾತುಕತೆ ನಡೆದಿತ್ತು. ಈ ವೇಳೆ ಅವರು ಹೇಳಿದ್ದರು, ನನ್ನ ಜೀವನ ಮಾತ್ರ ಸಿನಿಮಾದಲ್ಲಿ ತೋರಿಸೋದು ಬೇಡವಯ್ಯ. ಜೊತೆಗೆ ಹಿಂದೂತ್ವ, ಆರ್​ಎಸ್​ಎಸ್​ ಬಗ್ಗೆಯೂ ತೋರಿಸೋಣ ಎಂದಿದ್ದರು. ಹಾಗೆಯೇ ಅವರು ಮೊದಲು ಮುಂಬೈನಲ್ಲಿದ್ದರು, ಅಲ್ಲಿನ ಅಂಡರ್​ವರ್ಲ್ಡ್​ ಬಗ್ಗೆಯೂ ತೋರಿಸೋಣ. ಒಂದು ಫುಲ್ ಪ್ಯಾಕೇಜ್ ಚಿತ್ರ ಮಾಡೋಣ ಎಂದಿದ್ದರು ಅಂತಾ ಮಂಜು ಉಮೇಶ್​ ಕೊಟ್ಯಾನ್ ಹೇಳಿದ್ದಾರೆ.

ವಿಶೇಷ ಬರದಿ: ಶಿವಕುಮಾರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ಕೇಸ್​ನಲ್ಲಿ ಮತ್ತೊಂದು ವಿಚಾರ ಬಹಿರಂಗ; ಸ್ಫೋಟಕ ಸತ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ..!

https://newsfirstlive.com/wp-content/uploads/2023/09/HALASREE-1.jpg

    ನಿರ್ದೇಶಕ ಮಂಜು ಉಮೇಶ್ ಕೊಟ್ಯಾನ್ ರೋಚಕ ಮಾಹಿತಿ

    ಪೂಜಾರಿ ಜೊತೆ ಚೈತ್ರಾ ಗ್ಯಾಂಗ್​ನಿಂದ ನಡೆದಿತ್ತು ಮತ್ತೊಂದು ಮಾತುಕತೆ

    ಅಭಿನವ ಹಾಲಶ್ರೀ ನೇತೃತ್ವದಲ್ಲಿ ನಡೆದಿತ್ತು ಮೆಗಾ ಪ್ಲಾನ್

ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪ್ರಕರಣಕ್ಕೆ ನಿರೀಕ್ಷೆಗೂ ಮೀರಿದ ಟ್ವಿಸ್ಟ್​ಗಳು ಸಿಗ್ತಿವೆ. ಇಷ್ಟು ದಿನ ಕೈಗೆ ಸಿಗದೇ ಎಸ್ಕೇಪ್​ ಆಗಿದ್ದ ಪ್ರಮುಖ ಆರೋಪಿ ಹಾಲಶ್ರೀ ಸ್ವಾಮೀಜಿಯ ಬಂಧನ ಆಗಿದೆ. ಈ ನಡುವೆ ಈ ಕೇಸ್​ನಲ್ಲಿ ಗೋವಿಂದ ಪೂಜಾರಿ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಭಾರತದ ಓಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಕೊನೆಗೂ ಸಿಸಿಬಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಗೋವಿಂದ್​ ಪೂಜಾರಿ ಜೀವನಾಧಾರಿತ ಚಿತ್ರಕ್ಕೆ ನಡೆದಿತ್ತಂತೆ ಪ್ಲಾನ್

ಹೌದು, ಚೈತ್ರಾ ಮತ್ತು ಅವರ ತಂಡದ ವಿರುದ್ಧ ಪಂಚಕೋಟಿ ನಾಮ ಆರೋಪ ಮಾಡಿರುವ ಉದ್ಯಮಿ ಗೋವಿಂದ್​ ಪೂಜಾರಿಯ ಜೀವನಾಧಾರಿತ ಚಿತ್ರಕ್ಕೆ ಪ್ಲಾನ್​ ನಡೆದಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾವನ್ನು ಸ್ವತಃ ಈಗ ಬಂಧನವಾಗಿರುವ ಹಾಲಶ್ರೀ ಅನೌನ್ಸ್​ ಮಾಡಿದ್ದರು. ಎಲ್ಲವೂ ಸರಿ ಇದ್ದಿದ್ದರೆ ಸಿನಿಮಾಕ್ಕೆ ಹಾಲಶ್ರೀ ಕ್ಲಾಪ್​​ ಮಾಡಬೇಕಿತ್ತು.

ಸೆಟ್ಟೇರದ ಗೋವಿಂದ ಸಿನಿಮಾ!

ಗೋವಿಂದ ಬಾಬು​ ಪೂಜಾರಿ ಜೀವನಾಧಾರಿತ ಸಿನಿಮಾದ ಸ್ಕ್ರಿಪ್ಟ್ ವರ್ಕ್​ನ್ನ ನಿರ್ದೇಶಕ ಮಂಜು ಕೋಟ್ಯಾನ್ ಸಿದ್ಧಪಡಿಸಿದ್ದರು. ಕಳೆದ ಡಿಸೆಂಬರ್​ನಲ್ಲಿ ಚೆಫ್ ಟಾಕ್ 15ನೇ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಅಭಿನವ ಹಾಲಶ್ರೀ ಭಾಗಿಯಾಗಿದ್ದರು. ಗೋವಿಂದ್​ ಪೂಜಾರಿ ಒಡೆತನದ ಚೆಫ್ ಟಾಕ್ ಕಚೇರಿಯ ಕಾರ್ಯಕ್ರಮ ಇದಾಗಿತ್ತು. ಈ ಕಂಪೆನಿ ಕಾರ್ಪೊರೇಟ್ ಕಂಪನಿಗಳಿಗೆ ಫುಡ್ ಅಂಡ್ ಹಾಸ್ಪಿಟಾಲಿಟಿ ಒದಗಿಸುವ ಕಂಪನಿಯಾಗಿತ್ತು. ಕಾರ್ಯಕ್ರಮದಲ್ಲಿ ಗೋವಿಂದ್​ ಪೂಜಾರಿ ಕುರಿತಾದ ಸಿನಿಮಾ ಬಗ್ಗೆ ಅನೌನ್ಸ್ ಮಾಡಿದ್ದರು. ಆರ್​ಎಸ್ಎಸ್ ಸಂಘ ಪರಿವಾರ ಬಗ್ಗೆ ಸಿನಿಮಾ ಮಾಡಲು ಸಿದ್ಧತೆ ಕೂಡ ನಡೆದಿತ್ತು. ಆದ್ರೆ ಅಂತಿಮವಾಗಿ ತನ್ನದೇ ಸ್ಕ್ರೀಪ್ ಪ್ಲೇನಲ್ಲಿ ನಟಿಸಿ ಗೋವಿಂದ್​ ಪೂಜಾರಿಗೆ ಹಾಲಶ್ರೀ ವಂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಖುದ್ದು ಗೋವಿಂದ ಪೂಜಾರಿಯ ಸಿನಿಮಾ ನಿರ್ದೇಶಿಸಬೇಕಿದ್ದ ಮಂಜು ಉಮೇಶ್ ಕೊಟ್ಯಾನ್ ಮಾಹಿತಿ ನೀಡಿದ್ದಾರೆ. ಸಿನಿಮಾಗೆ ಮಾತುಕತೆ ನಡೆದಿತ್ತು. ಈ ವೇಳೆ ಅವರು ಹೇಳಿದ್ದರು, ನನ್ನ ಜೀವನ ಮಾತ್ರ ಸಿನಿಮಾದಲ್ಲಿ ತೋರಿಸೋದು ಬೇಡವಯ್ಯ. ಜೊತೆಗೆ ಹಿಂದೂತ್ವ, ಆರ್​ಎಸ್​ಎಸ್​ ಬಗ್ಗೆಯೂ ತೋರಿಸೋಣ ಎಂದಿದ್ದರು. ಹಾಗೆಯೇ ಅವರು ಮೊದಲು ಮುಂಬೈನಲ್ಲಿದ್ದರು, ಅಲ್ಲಿನ ಅಂಡರ್​ವರ್ಲ್ಡ್​ ಬಗ್ಗೆಯೂ ತೋರಿಸೋಣ. ಒಂದು ಫುಲ್ ಪ್ಯಾಕೇಜ್ ಚಿತ್ರ ಮಾಡೋಣ ಎಂದಿದ್ದರು ಅಂತಾ ಮಂಜು ಉಮೇಶ್​ ಕೊಟ್ಯಾನ್ ಹೇಳಿದ್ದಾರೆ.

ವಿಶೇಷ ಬರದಿ: ಶಿವಕುಮಾರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More