newsfirstkannada.com

BREAKING: ವಂಚನೆ ಕೇಸ್​; ಚೈತ್ರಾ ಕುಂದಾಪುರ 10 ದಿನ ಸಿಸಿಬಿ ಪೊಲೀಸ್​ ಕಸ್ಟಡಿಗೆ

Share :

13-09-2023

    ಟಿಕೆಟ್​ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಹಣ ವಂಚನೆ ಆರೋಪ

    ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್​ ಸಿಸಿಬಿ ಕಸ್ಟಡಿಗೆ!

    ಮೂರನೇ ಎಸಿಎಂಎಂ ನ್ಯಾಯಾಲಯದಿಂದ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ..!

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಉದ್ಯಮಿಯೊಬ್ಬರಿಗೆ ಟಿಕೆಟ್​ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿದ್ದಾರೆ ಎಂಬ ಗಂಭೀರ ಆರೋಪವೊಂದು ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ಕೇಳಿ ಬಂದಿದೆ. ಹೀಗಾಗಿ ಬೆಂಗಳೂರು ಸಿಸಿಬಿ‌ ಪೊಲೀಸರು ಚೈತ್ರಾ ಕುಂದಾಪುರ ಮತ್ತಿಡೀ ಗ್ಯಾಂಗ್​​ ಅನ್ನು ಬಂಧಿಸಿ ಬಳಿಕ ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದರು.

ಇನ್ನು, ಕೇಸ್​​ ವಿಚಾರಣೆ ನಡೆಸಿದ ಬಳಿಕ ಮಹತ್ವದ ತೀರ್ಪು ನೀಡಿದ ಮೂರನೇ ಎಸಿಎಂಎಂ ಕೋರ್ಟ್​​ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ಅನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಚೈತ್ರಾ, ರಮೇಶ್​​, ಧನರಾಜ್​​​, ಪ್ರಜ್ವಲ್​​​, ಶ್ರೀಕಾಂತ್​ ಎಂಬ ಐವರನ್ನು ಕೋರ್ಟ್​ ಸಿಸಿಸಿ ಪೊಲೀಸ್​ ಕಸ್ಟಡಿಗೆ ಕೊಟ್ಟಿದೆ.

ನನ್ನನ್ನು ಯಾಕೆ ಅರೆಸ್ಟ್​ ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದು ಚೈತ್ರಾ ನ್ಯಾಯಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಸಿಸಿಬಿ ಪೊಲೀಸರು, ಎಲ್ಲವೂ ವಿಡಿಯೋ ರೆಕಾರ್ಡ್​ ಮಾಡಲಾಗಿದೆ ಎಂದು ಉತ್ತರ ನೀಡಿದರು. ಜತೆಗೆ ಮೆಡಿಕಲ್​ ರಿಪೋರ್ಟ್​​ ಮಾಡಿಸಿದ ಬಗ್ಗೆಯೂ ಮಾಹಿತಿ ಕೊಟ್ಟರು. 14 ದಿನಗಳ ಕಾಲ ಕಸ್ಟಡಿಗೆ ಕೊಡಿ ಎಂದು ಮನವಿ ಮಾಡಿದ್ರು. ಈ ವೇಳೆ ಕೋರ್ಟ್​ 10 ದಿನಗಳ ಕಾಲ ಕಸ್ಟಡಿ ನೀಡುತ್ತಿದ್ದೇವೆ ಎಂದು ತೀರ್ಪು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ವಂಚನೆ ಕೇಸ್​; ಚೈತ್ರಾ ಕುಂದಾಪುರ 10 ದಿನ ಸಿಸಿಬಿ ಪೊಲೀಸ್​ ಕಸ್ಟಡಿಗೆ

https://newsfirstlive.com/wp-content/uploads/2023/09/Chaitra-Kundapura-3-1.jpg

    ಟಿಕೆಟ್​ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಹಣ ವಂಚನೆ ಆರೋಪ

    ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್​ ಸಿಸಿಬಿ ಕಸ್ಟಡಿಗೆ!

    ಮೂರನೇ ಎಸಿಎಂಎಂ ನ್ಯಾಯಾಲಯದಿಂದ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ..!

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಉದ್ಯಮಿಯೊಬ್ಬರಿಗೆ ಟಿಕೆಟ್​ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿದ್ದಾರೆ ಎಂಬ ಗಂಭೀರ ಆರೋಪವೊಂದು ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ಕೇಳಿ ಬಂದಿದೆ. ಹೀಗಾಗಿ ಬೆಂಗಳೂರು ಸಿಸಿಬಿ‌ ಪೊಲೀಸರು ಚೈತ್ರಾ ಕುಂದಾಪುರ ಮತ್ತಿಡೀ ಗ್ಯಾಂಗ್​​ ಅನ್ನು ಬಂಧಿಸಿ ಬಳಿಕ ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದರು.

ಇನ್ನು, ಕೇಸ್​​ ವಿಚಾರಣೆ ನಡೆಸಿದ ಬಳಿಕ ಮಹತ್ವದ ತೀರ್ಪು ನೀಡಿದ ಮೂರನೇ ಎಸಿಎಂಎಂ ಕೋರ್ಟ್​​ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ಅನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಚೈತ್ರಾ, ರಮೇಶ್​​, ಧನರಾಜ್​​​, ಪ್ರಜ್ವಲ್​​​, ಶ್ರೀಕಾಂತ್​ ಎಂಬ ಐವರನ್ನು ಕೋರ್ಟ್​ ಸಿಸಿಸಿ ಪೊಲೀಸ್​ ಕಸ್ಟಡಿಗೆ ಕೊಟ್ಟಿದೆ.

ನನ್ನನ್ನು ಯಾಕೆ ಅರೆಸ್ಟ್​ ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದು ಚೈತ್ರಾ ನ್ಯಾಯಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಸಿಸಿಬಿ ಪೊಲೀಸರು, ಎಲ್ಲವೂ ವಿಡಿಯೋ ರೆಕಾರ್ಡ್​ ಮಾಡಲಾಗಿದೆ ಎಂದು ಉತ್ತರ ನೀಡಿದರು. ಜತೆಗೆ ಮೆಡಿಕಲ್​ ರಿಪೋರ್ಟ್​​ ಮಾಡಿಸಿದ ಬಗ್ಗೆಯೂ ಮಾಹಿತಿ ಕೊಟ್ಟರು. 14 ದಿನಗಳ ಕಾಲ ಕಸ್ಟಡಿಗೆ ಕೊಡಿ ಎಂದು ಮನವಿ ಮಾಡಿದ್ರು. ಈ ವೇಳೆ ಕೋರ್ಟ್​ 10 ದಿನಗಳ ಕಾಲ ಕಸ್ಟಡಿ ನೀಡುತ್ತಿದ್ದೇವೆ ಎಂದು ತೀರ್ಪು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More