ಸೂರಪ್ಪ ಬಾಬು ವಿರುದ್ಧ ಚಂದ್ರಚೂಡ್ ಪ್ರೆಸ್ ಮೀಟ್!
ಸುದೀಪ್ ವಿರುದ್ಧ ಕುಮಾರ್ ಅವರನ್ನು ಎತ್ತಿ ಕಟ್ಟಿದ್ಯಾರು?
ಚಕ್ರವರ್ತಿ ಚಂದ್ರಚೂಡ್ ಅವರಿಂದ ಸೂರಪ್ಪಗೆ ಪ್ರಶ್ನೆ..!
ಬೆಂಗಳೂರು: ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್, ನಿರ್ಮಾಪಕ ಎಂ.ಎನ್ ಕುಮಾರ್ ನಡುವಿನ ಬೀದಿ ಕಾಳಗ ಇನ್ನೂ ನಿಂತಿಲ್ಲ. ಸುದೀಪ್ ವಿರುದ್ಧ ಎಂ.ಎನ್ ಕುಮಾರ್ ಅವರನ್ನು ಎತ್ತಿ ಕಟ್ಟಿದ್ದು, ನಿರ್ಮಾಪಕ ಸೂರಪ್ಪ ಬಾಬು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸುದೀಪ್ ಆಪ್ತರಾದ ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ವಿಡಿಯೋ ಮಾಡಿ ಸೂರಪ್ಪ ಬಾಬು ವಿರುದ್ಧ ಕಿಡಿಕಾರಿದ್ದರು. ಈ ಬೆನ್ನಲ್ಲೇ ತನ್ನ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಚಂದ್ರಚೂಡ್ಗೆ ಸೂರಪ್ಪ ಬಾಬು ವಾರ್ನಿಂಗ್ ಕೂಡ ಕೊಟ್ಟಿದ್ದರು.
ಸದ್ಯ ಸೂರಪ್ಪ ಬಾಬು, ಚಕ್ರವರ್ತಿ ಚಂದ್ರಚೂಡ್ ಮಧ್ಯೆ ಗಲಾಟೆ ತಾರಕಕ್ಕೇರಿದೆ. ನಾನು ಸೂರಪ್ಪ ಬಾಬು ವಿರುದ್ಧ ಮಾಡಿರೋ ಆರೋಪಕ್ಕೆ ಬದ್ಧ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಚಂದ್ರಚೂಡ್, ಸೂರಪ್ಪ ಬಾಬು ಸುದೀಪ್ ಜೊತೆ 2 ಸಿನಿಮಾ ಮಾಡಿದ್ದಾರೆ. ಸುದೀಪ್ ಕಾಲ್ಶೀಟ್ ತೆಗೆದುಕೊಂಡರೆ 50 ಕೋಟಿ ಬ್ಯುಸಿನೆಸ್ ಆಗುತ್ತೆ ಎಂಬುದು ಅವರ ಪ್ಲಾನ್. ಹಾಗಾಗಿಯೇ ಕೋಟಿಗೊಬ್ಬ 3 ಸಿನಿಮಾಗೆ ಸುದೀಪ್ ಕಾಲ್ ಶೀಟ್ ತೆಗೆದುಕೊಂಡಿದ್ದು. ಈ ಸಿನಿಮಾ ರಿಲೀಸ್ ಆಗೋಕೆ ಕಾರಣವೇ ಸುದೀಪ್ ಅವರು. ಸುದೀಪ್ ಅವರಿಂದಲೇ ಸಹಾಯ ಪಡೆದು ಮೋಸ ಮಾಡಿದ್ರೆ ಶಿಖಂಡಿ ಎನ್ನದೆ ಇನ್ನೂ ಏನಂತಾ ಕರೆಯಬೇಕು ಎಂದರು.
ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡಿದ್ದು ನಿಜ
ಸೂರಪ್ಪ ಬಾಬು ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡಿದ್ದು ನಿಜ. ಕೋಟಿಗೊಬ್ಬ ಸಿನಿಮಾಗೆ ಡೇಟ್ ಹೇಗೆ ಸಿಕ್ಕಿದು ಸೂರಪ್ಪ ಬಾಬು ಹೇಳಲಿ. ನಾನು ಯಾರು ಎಂದು ಗೊತ್ತೇ ಇಲ್ಲ ಎಂದಿದ್ದಾರೆ ಸೂರಪ್ಪ. ಅವರು ಕಾರ್ಮಿಕರಿಗೆ ಎಷ್ಟು ಕೋಟಿ ಮೋಸ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಕುಡಿದಾಗ ಸೂರಪ್ಪ ಸ್ಟಾರ್ ನಟರೊಬ್ಬರ ಬಗ್ಗೆ ಮಾತಾಡಿದ್ದರು. ಅಂದು ಇದೇ ಪತ್ರಕರ್ತ ಸಹಾಯ ಮಾಡಿದ್ದು ಎಂದರು.
ಸುದೀಪ್ ಅವರೊಂದಿಗೆ ತಾಕತ್ ಇದ್ದಿದ್ರೆ ನೇರವಾಗಿ ಮಾತಾಡಬೇಕಿತ್ತು. ಅದರ ಬದಲಿಗೆ ಕುಮಾರ್ ಅವರನ್ನು ಎತ್ತಿ ಕಟ್ಟಿದ್ದು ಯಾಕೆ? ಸುದೀಪ್ ಅವರು ಕೋರ್ಟ್ಗೆ ಹೋಗುವಾಗ ಬಹಳ ನೊಂದಿದ್ದರು. ಕೊನೆಗೂ ಸಮಸ್ಯೆ ಬಗೆಹರಿಸಲು ಶಿವಣ್ಣ, ರವಿಚಂದ್ರನ್ ಅವರು ಎಂಟ್ರಿ ಕೊಡಬೇಕಾಯ್ತು. ಸುದೀಪ್ ಅವರು ಬಿಟ್ಟರೂ, ನಾನು ಬಿಡೋ ಮಗ ಅಲ್ಲ ಎಂದು ಕಿಡಿಕಾರಿದರು ಸುದೀಪ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸೂರಪ್ಪ ಬಾಬು ವಿರುದ್ಧ ಚಂದ್ರಚೂಡ್ ಪ್ರೆಸ್ ಮೀಟ್!
ಸುದೀಪ್ ವಿರುದ್ಧ ಕುಮಾರ್ ಅವರನ್ನು ಎತ್ತಿ ಕಟ್ಟಿದ್ಯಾರು?
ಚಕ್ರವರ್ತಿ ಚಂದ್ರಚೂಡ್ ಅವರಿಂದ ಸೂರಪ್ಪಗೆ ಪ್ರಶ್ನೆ..!
ಬೆಂಗಳೂರು: ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್, ನಿರ್ಮಾಪಕ ಎಂ.ಎನ್ ಕುಮಾರ್ ನಡುವಿನ ಬೀದಿ ಕಾಳಗ ಇನ್ನೂ ನಿಂತಿಲ್ಲ. ಸುದೀಪ್ ವಿರುದ್ಧ ಎಂ.ಎನ್ ಕುಮಾರ್ ಅವರನ್ನು ಎತ್ತಿ ಕಟ್ಟಿದ್ದು, ನಿರ್ಮಾಪಕ ಸೂರಪ್ಪ ಬಾಬು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸುದೀಪ್ ಆಪ್ತರಾದ ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ವಿಡಿಯೋ ಮಾಡಿ ಸೂರಪ್ಪ ಬಾಬು ವಿರುದ್ಧ ಕಿಡಿಕಾರಿದ್ದರು. ಈ ಬೆನ್ನಲ್ಲೇ ತನ್ನ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಚಂದ್ರಚೂಡ್ಗೆ ಸೂರಪ್ಪ ಬಾಬು ವಾರ್ನಿಂಗ್ ಕೂಡ ಕೊಟ್ಟಿದ್ದರು.
ಸದ್ಯ ಸೂರಪ್ಪ ಬಾಬು, ಚಕ್ರವರ್ತಿ ಚಂದ್ರಚೂಡ್ ಮಧ್ಯೆ ಗಲಾಟೆ ತಾರಕಕ್ಕೇರಿದೆ. ನಾನು ಸೂರಪ್ಪ ಬಾಬು ವಿರುದ್ಧ ಮಾಡಿರೋ ಆರೋಪಕ್ಕೆ ಬದ್ಧ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಚಂದ್ರಚೂಡ್, ಸೂರಪ್ಪ ಬಾಬು ಸುದೀಪ್ ಜೊತೆ 2 ಸಿನಿಮಾ ಮಾಡಿದ್ದಾರೆ. ಸುದೀಪ್ ಕಾಲ್ಶೀಟ್ ತೆಗೆದುಕೊಂಡರೆ 50 ಕೋಟಿ ಬ್ಯುಸಿನೆಸ್ ಆಗುತ್ತೆ ಎಂಬುದು ಅವರ ಪ್ಲಾನ್. ಹಾಗಾಗಿಯೇ ಕೋಟಿಗೊಬ್ಬ 3 ಸಿನಿಮಾಗೆ ಸುದೀಪ್ ಕಾಲ್ ಶೀಟ್ ತೆಗೆದುಕೊಂಡಿದ್ದು. ಈ ಸಿನಿಮಾ ರಿಲೀಸ್ ಆಗೋಕೆ ಕಾರಣವೇ ಸುದೀಪ್ ಅವರು. ಸುದೀಪ್ ಅವರಿಂದಲೇ ಸಹಾಯ ಪಡೆದು ಮೋಸ ಮಾಡಿದ್ರೆ ಶಿಖಂಡಿ ಎನ್ನದೆ ಇನ್ನೂ ಏನಂತಾ ಕರೆಯಬೇಕು ಎಂದರು.
ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡಿದ್ದು ನಿಜ
ಸೂರಪ್ಪ ಬಾಬು ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡಿದ್ದು ನಿಜ. ಕೋಟಿಗೊಬ್ಬ ಸಿನಿಮಾಗೆ ಡೇಟ್ ಹೇಗೆ ಸಿಕ್ಕಿದು ಸೂರಪ್ಪ ಬಾಬು ಹೇಳಲಿ. ನಾನು ಯಾರು ಎಂದು ಗೊತ್ತೇ ಇಲ್ಲ ಎಂದಿದ್ದಾರೆ ಸೂರಪ್ಪ. ಅವರು ಕಾರ್ಮಿಕರಿಗೆ ಎಷ್ಟು ಕೋಟಿ ಮೋಸ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಕುಡಿದಾಗ ಸೂರಪ್ಪ ಸ್ಟಾರ್ ನಟರೊಬ್ಬರ ಬಗ್ಗೆ ಮಾತಾಡಿದ್ದರು. ಅಂದು ಇದೇ ಪತ್ರಕರ್ತ ಸಹಾಯ ಮಾಡಿದ್ದು ಎಂದರು.
ಸುದೀಪ್ ಅವರೊಂದಿಗೆ ತಾಕತ್ ಇದ್ದಿದ್ರೆ ನೇರವಾಗಿ ಮಾತಾಡಬೇಕಿತ್ತು. ಅದರ ಬದಲಿಗೆ ಕುಮಾರ್ ಅವರನ್ನು ಎತ್ತಿ ಕಟ್ಟಿದ್ದು ಯಾಕೆ? ಸುದೀಪ್ ಅವರು ಕೋರ್ಟ್ಗೆ ಹೋಗುವಾಗ ಬಹಳ ನೊಂದಿದ್ದರು. ಕೊನೆಗೂ ಸಮಸ್ಯೆ ಬಗೆಹರಿಸಲು ಶಿವಣ್ಣ, ರವಿಚಂದ್ರನ್ ಅವರು ಎಂಟ್ರಿ ಕೊಡಬೇಕಾಯ್ತು. ಸುದೀಪ್ ಅವರು ಬಿಟ್ಟರೂ, ನಾನು ಬಿಡೋ ಮಗ ಅಲ್ಲ ಎಂದು ಕಿಡಿಕಾರಿದರು ಸುದೀಪ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ