Watch: ‘ನಾನು ಕಾವೇರಿ ಪರ ಮಾತನಾಡಿ ಅಂದು ವಿಲನ್ ಆದೆ’ -ದರ್ಶನ್ ಮತ್ತೊಮ್ಮೆ ವಾಗ್ದಾಳಿ

author-image
Ganesh
Updated On
Kaatera: ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್​​ಗೆ ಗುಡ್​​ನ್ಯೂಸ್;​ ಕಾಟೇರ ಚಿತ್ರ ತಂಡದ ಬಿಗ್‌ ಅಪಡೇಟ್‌ ಇಲ್ಲಿದೆ!
Advertisment
  • ಕರ್ನಾಟಕ, ಕನ್ನಡ, ಕಾವೇರಿ ಬಗ್ಗೆ ದರ್ಶನ್ ಮಾತು
  • ‘ಮೊದ್ಲು ನಮ್ಮ ತಾಯಿನ ನಾವ್​ ಪ್ರೀತ್ಸೋದ್​​ ಕಲಿಯೋಣ’
  • ‘ಕೈವ’ ಚಿತ್ರದ ಟ್ರೈಲರ್​​​ ರಿಲೀಸ್​​ ಕಾರ್ಯಕ್ರಮಕ್ಕೆ ದರ್ಶನ್ ಸಾಥ್

ಧನ್ವೀರ್ ನಟನೆಯ ‘ಕೈವ’ ಚಿತ್ರದ ಟ್ರೈಲರ್​​​ ರಿಲೀಸ್​​ ಇವೆಂಟ್​​​ನಲ್ಲಿ ಚಾಲೆಂಜಿಂಗ್​ ಸ್ಟಾರ್​ ಮತ್ತೊಮ್ಮೆ ಗುಡುಗಿದ್ದಾರೆ. ಕರ್ನಾಟಕ, ಕನ್ನಡ, ಕಾವೇರಿ ಬಗ್ಗೆ ಮತ್ತೊಮ್ಮೆ ದರ್ಶನ್​ ಮಾತನಾಡಿದ್ದು, ಮೊದಲು ನಮ್ಮ ತಾಯಿನ ಪ್ರೀತಿಸೋದನ್ನು ಕಲಿಯೋಣ. ಆಮೇಲೆ ಪಕ್ಕದವರ ತಾಯಿನಾ ನೋಡೋಣ ಎಂದಿದ್ದಾರೆ.

ಕಾವೇರಿ ವಿಷಯದಲ್ಲಿ ಮಾತಾಡಿದಾಗ ತಪ್ಪಾಗಿ ಕಾಣುತ್ತೇವೆ. ನಾವೇನು ಹೀರೋಗಳಲ್ಲ. ವಿಲನ್​​ ಬಿಡಿ. ಅಂದು ಕಾವೇರಿ ವಿಚಾರದ ಬಗ್ಗೆ ಬೇರೆ ಯಾರಾದರೂ ಒಂದು ಮಾತು ಎತ್ತಿದ್ರಾ? ಹಾಗಿದ್ದರೆ ಅವರಿಗೆ ಈ ವಿಚಾರ ಸಂಬಂಧವೇ ಇಲ್ಲವಾ? ಕೇವಲ ಪ್ರಮೋಷನ್ ಅಷ್ಟೇನಾ? ಎಂದು ಟಾಂಗ್ ಕೊಟ್ಟರು.

ಕನ್ನಡ ಸಿನಿಮಾನವನ್ನು ಬೆಳಸಿ, ಹರಿಸಿ. ಒಂದು ಸಲ ನೋಡಿ ನಿಮ್ಮ ಸಿನಿಮಾನವನ್ನು. ಎರಡೂವರೆ ಗಂಟೆಯಲ್ಲಿ ಎಲ್ಲೋ ಒಂದು 10 ನಿಮಿಷ ನಿಮಗೆ ಇಷ್ಟ ಆಗಲ್ಲ ಅನ್ನೋದು ತಪ್ಪು. ಪೂರ್ತಿ ಸಿನಿಮಾ ನೋಡಬೇಕು. ಆಗಲೇ ನಮಗೆ ಸಿನಿಮಾ ಏನು ಅನ್ನೋದು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment