12ನೇ ಬಾರಿ ಪ್ಲೇ ಆಫ್ಗೆ ಸೂಪರ್ ಕಿಂಗ್ಸ್ ಎಂಟ್ರಿ..!
ಟೀಮ್ ಫಸ್ಟ್ ಎಂದ ಕೂಲ್ ಕ್ಯಾಪ್ಟನ್ ಧೋನಿ.!
ನಾಯಕನ ನಡೆಯೇ ಆಟಗಾರರಿಗೆ ಸ್ಪೂರ್ತಿ.!
ಸೂಪರ್ - ಡೂಪರ್ ಬ್ಯಾಟಿಂಗ್ ಕಂಡು ಎಲ್ಲಾ ದಂಗು.!
ಮಾಹಿ ಮಾರ್ಗದರ್ಶನ, ಬೌಲರ್ಗಳ ಅಬ್ಬರ.!
ಕಳೆದ ಸೀಸನ್ನಲ್ಲಿ ಪ್ಲಾಫ್, ಈ ಸೀಸನ್ನಲ್ಲಿ ರಾಕ್..!
ಐಪಿಎಲ್ ಸೀಸನ್ 16ರ ಪ್ಲೇ ಆಫ್ಗೆ ಚೆನ್ನೈ ಸೂಪರ್ ಕಿಂಗ್ಸ್ ಪಡೆ ರಾಜನಂತೆ ಕಾಲಿಟ್ಟಿದೆ. ಐಪಿಎಲ್ ಇತಿಹಾಸದ 2ನೇ ಮೋಸ್ಟ್ ಸಕ್ಸಸ್ಫುಲ್ ತಂಡ ಎನಿಸಿಕೊಂಡಿದ್ರೂ, ಚೆನ್ನೈ ಈ ಸೀಸನ್ನಲ್ಲಿ ಪ್ಲೇ ಆಫ್ಗೆ ಎಂಟ್ರಿ ಕೊಡಲ್ಲ ಅನ್ನೋದು ಬಹುತೇಕರ ಮಾತಾಗಿತ್ತು. ಈಗ ಅದು ಸುಳ್ಳಾಗಿದೆ. ಒನ್ಸ್ ಅಗೇನ್ ಮಾಸ್ಟರ್ ಧೋನಿಯ ಮಾಸ್ಟರ್ ಸ್ಟ್ರೋಕ್ ಮುಂದೆ ಎಲ್ಲರ ಭವಿಷ್ಯಗಳು ಠುಸ್ ಆಗಿದೆ.
ಈ ಸೀಸನ್ನ ಐಪಿಎಲ್ ಟೂರ್ನಿಯಲ್ಲಿ ಬೌಂಡರಿ, ಸಿಕ್ಸರ್ಗಳ ಮೇಳ ಹೇಗೆ ನಡೀತಾ ಇತ್ತು ಹಾಗೇ ಧೋನಿಯ ಜಾತ್ರೆಯೂ ನಡೀತಿದೆ. ಅದು ಚೆನ್ನೈನ ಚೆಪಾಕ್ನಿಂದ ಹಿಡಿದು. ಡೆಲ್ಲಿ ಅರುಣ್ ಜೇಟ್ಲಿ ಮೈದಾನವರೆಗೂ. ಹೋದಲ್ಲಿ ಬಂದಲ್ಲಿ ಎಲ್ಲೆಡೆ ಮಹೇಂದ್ರನದ್ದೇ ಜಪ.
ಈ ಸೀಸನ್ನ ಐಪಿಎಲ್, ಧೋನಿ ಪಾಲಿನ ಕೊನೆ ಟೂರ್ನಮೆಂಟ್ ಅನ್ನೋ ಮಾತು ಆರಂಭಕ್ಕೂ ಮುಂಚಿನಿಂದಲೂ ಇತ್ತು. ಆದ್ರೆ, ಟೂರ್ನಿ ಅಂತ್ಯಕ್ಕೆ ಬಂದ್ರೂ ಅದಕ್ಕೆ ಉತ್ತರ ಮಾತ್ರ ಸಿಕ್ಕಿಲ್ಲ. ಬದಲಾಗಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದೆ.
12ನೇ ಬಾರಿ ಪ್ಲೇ ಆಫ್ಗೆ ಸೂಪರ್ ಕಿಂಗ್ಸ್ ಎಂಟ್ರಿ..!
ಹೌದು.. ಐಪಿಎಲ್ ಈವರೆಗೆ 16 ಸೀಸನ್ಗಳನ್ನ ಕಂಡಿದೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ಸೀಸನ್ಗಳಲ್ಲೂ ಟೂರ್ನಿಯ ಭಾಗವಾಗಿದೆ. ಈ 14 ರಲ್ಲಿ ಎರಡೇ ಎರಡು ಸೀಸನ್ ಬಿಟ್ರೆ, ಉಳಿದೆಲ್ಲಾ ಸೀಸನ್ನಲ್ಲೂ ಚೆನ್ನೈ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ಅದು ಮಾಹಿಯ ಮಾರ್ಗದರ್ಶನದಲ್ಲಿ.
ಟೀಮ್ ಫಸ್ಟ್ ಎಂದ ಕೂಲ್ ಕ್ಯಾಪ್ಟನ್ ಧೋನಿ.!
ಪ್ಲೇ ಆಫ್ಗೆ ಕ್ವಾಲಿಫೈ ಆಗ್ತಿದ್ದಂತೆ ಧೋನಿ ಆಡಿರುವ ಮಾತುಗಳಿವು. ಈ ಸೀಸನ್ನ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತೀವ್ರ ಹಿನ್ನಡೆ ಅನುಭವಿಸಿತ್ತು., ಆದ್ರೆ, ಅಂತ್ಯದಲ್ಲಿ 2ನೇ ತಂಡವಾಗಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ತಂಡ ಸಕ್ಸಸ್ಗಾಗಿ ಒಬ್ಬ ಬ್ಯಾಟ್ಸ್ಮನ್ ಅನ್ನೋ, ಒಬ್ಬ ಬೌಲರ್ ಅನ್ನೋ ನೆಚ್ಚಿಕೊಂಡಿಲ್ಲ. ಇಡೀ ತಂಡವಾಗಿ ಹೋರಾಡುತ್ತೆ. ಇವತ್ತು ಚೆನ್ನೈ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರೋದ್ರ ಹಿಂದಿನ ಸೀಕ್ರೆಟ್ ಇದೇ.
ನಾಯಕನ ನಡೆಯೇ ಆಟಗಾರರಿಗೆ ಸ್ಪೂರ್ತಿ.!
ಟೀಮ್ ಮುಖ್ಯ ಅನ್ನೋ ಧೋನಿ ಈ ಸೀಸನ್ನಲ್ಲಿ ಕಂಪ್ಲೀಟ್ ಬದಲಾದ್ರು. ಕಳೆದ ಸೀಸನ್ನಲ್ಲಿ ಬ್ಯಾಟಿಂಗ್ನಲ್ಲಿ ಪ್ಲಾಫ್ ಶೋ ನೀಡಿದ್ದ ಮಾಹಿ ಈ ಸಲ ಘರ್ಜಿಸಿದ್ರು. ಅಪಾರ ಮಂಡಿ ನೋವಿನ ನಡುವೆಯೂ ಮೈದಾನಕ್ಕಿಳಿದು ಹೋರಾಡಿದ್ರು. ಧೋನಿಯ ಈ ನಡೆಯೇ ಆಟಗಾರರಿಗೆ ಸ್ಪೂರ್ತಿಯ ಸೆಲೆಯಾಯ್ತು.
ಸೂಪರ್ – ಡೂಪರ್ ಬ್ಯಾಟಿಂಗ್ ಕಂಡು ಎಲ್ಲಾ ದಂಗು.!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಯುನಿಟ್ ಎಲ್ಲರನ್ನೂ ದಂಗು ಬಡಿಸಿದ್ದು ಸುಳ್ಳಲ್ಲ. ಅಜಿಂಕ್ಯಾ ರಹಾನೆಯಂತೂ ಈ ವಿಚಾರದಲ್ಲಿ ಸರ್ಪ್ರೈಸ್ ಪ್ಯಾಕ್. ಇಷ್ಟೇ ಅಲ್ಲ. ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ಡಿವೋನ್ ಕಾನ್ವೆ. ಹೀಗೆ ತಂಡ ಸೇರಿದ ಪ್ರತಿಯೊಬ್ಬ ಬ್ಯಾಟ್ಸ್ಮನ್ ಸಿಡಿದು ನಿಂತರು.
ಮಾಹಿ ಮಾರ್ಗದರ್ಶನ, ಬೌಲರ್ಗಳ ಅಬ್ಬರ.!
ಈ ಸೀಸನ್ನ ಆರಂಭದಲ್ಲೇ ಚೆನ್ನೈಗೆ ಸ್ಟೋಕ್ಸ್ ರೂಪದಲ್ಲಿ ಮೊದಲ ವಿಘ್ನ ಎದುರಾದ್ರೆ, ಮುಖೇಶ್ ಚೌದರಿ ರೂಲ್ಡ್ ಔಟ್ ಆಗಿದ್ದು ಮತ್ತೊಂದು ಹಿನ್ನಡೆಯಾಯ್ತು. ಪವರ್ ಪ್ಲೇ, ಡೆತ್ ಓವರ್ನಲ್ಲಿ ಬೌಲಿಂಗ್ ಮಾಡೋ ಅನುಭವಿ ಆಟಗಾರರ ಕೊರತೆ ಕಾಡ್ತು. ಆರಂಭಿಕ ಕೆಲ ಪಂದ್ಯಗಳಲ್ಲಿ ತಂಡ ಸೋಲುಂಡಿತು ಕೂಡ. ಆದ್ರೆ, ಎಮ್ಎಸ್ಡಿ ವಿಚಲಿತರಾಗಲಿಲ್ಲ. ಆಟಗಾರರ ಮೇಲೆ ನಂಬಿಕೆ ಇಟ್ಟು ಬ್ಯಾಕ್ ಮಾಡಿದ್ರು. ಸರಿಯಾದ ಮಾರ್ಗದರ್ಶನವನ್ನೂ ಮಾಡಿದ್ರು. ಬೌಲರ್ಗಳು ನಂಬಿಕೆ ಹುಸಿಗೊಳಲೇ ಇಲ್ಲ.
ಕಳೆದ ಸೀಸನ್ನಲ್ಲಿ ಪ್ಲಾಫ್, ಈ ಸೀಸನ್ನಲ್ಲಿ ರಾಕ್..!
ಈ ಸೀಸನ್ನ ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ಗೆ ಎಂಟ್ರಿ ಕೊಡಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ವು. ಇದಕ್ಕೆಲ್ಲಾ ಕಳೆದ ಸೀಸನ್ನ ಕಳಪೆ ಪ್ರದರ್ಶನವೇ ಕಾರಣವಾಗಿತ್ತು. ಐಪಿಎಲ್ ಇತಿಹಾಸದಲ್ಲೇ ಹೀನಾಯ ಪ್ರದರ್ಶನ ನೀಡಿದ್ದ ಚೆನ್ನೈ ಲೀಗ್ ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆದ್ರೆ, ಈ ಸೀಸನ್ನಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದೆ.
ಕಳೆದ ಸೀಸನ್ನಲ್ಲಿ ಕಂಡಷ್ಟು ಏಳು – ಬೀಳುಗಳನ್ನ ಹಿಂದೆಂದೂ ಕಂಡಿಲ್ಲ. ನಾಯಕತ್ವದಲ್ಲಿ ಬದಲಾವಣೆಯ ಗೊಂದಲ, ಅನಾವಶ್ಯಕ ವಿವಾದಗಳು, ಆಟಗಾರರ ಪ್ಲಾಫ್ ಶೋ, ಮ್ಯಾನೇಜ್ಮೆಂಟ್ ನಡೆಯ ಬಗ್ಗೆ ಆರೋಪಗಳು ಹೀಗೆ ಸಾಲು-ಸಾಲಯ ಹಿನ್ನಡೆಗಳನ್ನ ಕಳೆದ ಸೀಸನ್ನಲ್ಲಿ ಚೆನ್ನೈ ಎದುರಿಸಿತ್ತು. ಆ ಎಲ್ಲಾ ನೋವಿನ ಕಥೆಗಳೇ ಇಂದು ಸಕ್ಸಸ್ ತಂದು ಕೊಟ್ಟಿವೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ
12ನೇ ಬಾರಿ ಪ್ಲೇ ಆಫ್ಗೆ ಸೂಪರ್ ಕಿಂಗ್ಸ್ ಎಂಟ್ರಿ..!
ಟೀಮ್ ಫಸ್ಟ್ ಎಂದ ಕೂಲ್ ಕ್ಯಾಪ್ಟನ್ ಧೋನಿ.!
ನಾಯಕನ ನಡೆಯೇ ಆಟಗಾರರಿಗೆ ಸ್ಪೂರ್ತಿ.!
ಸೂಪರ್ - ಡೂಪರ್ ಬ್ಯಾಟಿಂಗ್ ಕಂಡು ಎಲ್ಲಾ ದಂಗು.!
ಮಾಹಿ ಮಾರ್ಗದರ್ಶನ, ಬೌಲರ್ಗಳ ಅಬ್ಬರ.!
ಕಳೆದ ಸೀಸನ್ನಲ್ಲಿ ಪ್ಲಾಫ್, ಈ ಸೀಸನ್ನಲ್ಲಿ ರಾಕ್..!
ಐಪಿಎಲ್ ಸೀಸನ್ 16ರ ಪ್ಲೇ ಆಫ್ಗೆ ಚೆನ್ನೈ ಸೂಪರ್ ಕಿಂಗ್ಸ್ ಪಡೆ ರಾಜನಂತೆ ಕಾಲಿಟ್ಟಿದೆ. ಐಪಿಎಲ್ ಇತಿಹಾಸದ 2ನೇ ಮೋಸ್ಟ್ ಸಕ್ಸಸ್ಫುಲ್ ತಂಡ ಎನಿಸಿಕೊಂಡಿದ್ರೂ, ಚೆನ್ನೈ ಈ ಸೀಸನ್ನಲ್ಲಿ ಪ್ಲೇ ಆಫ್ಗೆ ಎಂಟ್ರಿ ಕೊಡಲ್ಲ ಅನ್ನೋದು ಬಹುತೇಕರ ಮಾತಾಗಿತ್ತು. ಈಗ ಅದು ಸುಳ್ಳಾಗಿದೆ. ಒನ್ಸ್ ಅಗೇನ್ ಮಾಸ್ಟರ್ ಧೋನಿಯ ಮಾಸ್ಟರ್ ಸ್ಟ್ರೋಕ್ ಮುಂದೆ ಎಲ್ಲರ ಭವಿಷ್ಯಗಳು ಠುಸ್ ಆಗಿದೆ.
ಈ ಸೀಸನ್ನ ಐಪಿಎಲ್ ಟೂರ್ನಿಯಲ್ಲಿ ಬೌಂಡರಿ, ಸಿಕ್ಸರ್ಗಳ ಮೇಳ ಹೇಗೆ ನಡೀತಾ ಇತ್ತು ಹಾಗೇ ಧೋನಿಯ ಜಾತ್ರೆಯೂ ನಡೀತಿದೆ. ಅದು ಚೆನ್ನೈನ ಚೆಪಾಕ್ನಿಂದ ಹಿಡಿದು. ಡೆಲ್ಲಿ ಅರುಣ್ ಜೇಟ್ಲಿ ಮೈದಾನವರೆಗೂ. ಹೋದಲ್ಲಿ ಬಂದಲ್ಲಿ ಎಲ್ಲೆಡೆ ಮಹೇಂದ್ರನದ್ದೇ ಜಪ.
ಈ ಸೀಸನ್ನ ಐಪಿಎಲ್, ಧೋನಿ ಪಾಲಿನ ಕೊನೆ ಟೂರ್ನಮೆಂಟ್ ಅನ್ನೋ ಮಾತು ಆರಂಭಕ್ಕೂ ಮುಂಚಿನಿಂದಲೂ ಇತ್ತು. ಆದ್ರೆ, ಟೂರ್ನಿ ಅಂತ್ಯಕ್ಕೆ ಬಂದ್ರೂ ಅದಕ್ಕೆ ಉತ್ತರ ಮಾತ್ರ ಸಿಕ್ಕಿಲ್ಲ. ಬದಲಾಗಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದೆ.
12ನೇ ಬಾರಿ ಪ್ಲೇ ಆಫ್ಗೆ ಸೂಪರ್ ಕಿಂಗ್ಸ್ ಎಂಟ್ರಿ..!
ಹೌದು.. ಐಪಿಎಲ್ ಈವರೆಗೆ 16 ಸೀಸನ್ಗಳನ್ನ ಕಂಡಿದೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ಸೀಸನ್ಗಳಲ್ಲೂ ಟೂರ್ನಿಯ ಭಾಗವಾಗಿದೆ. ಈ 14 ರಲ್ಲಿ ಎರಡೇ ಎರಡು ಸೀಸನ್ ಬಿಟ್ರೆ, ಉಳಿದೆಲ್ಲಾ ಸೀಸನ್ನಲ್ಲೂ ಚೆನ್ನೈ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ಅದು ಮಾಹಿಯ ಮಾರ್ಗದರ್ಶನದಲ್ಲಿ.
ಟೀಮ್ ಫಸ್ಟ್ ಎಂದ ಕೂಲ್ ಕ್ಯಾಪ್ಟನ್ ಧೋನಿ.!
ಪ್ಲೇ ಆಫ್ಗೆ ಕ್ವಾಲಿಫೈ ಆಗ್ತಿದ್ದಂತೆ ಧೋನಿ ಆಡಿರುವ ಮಾತುಗಳಿವು. ಈ ಸೀಸನ್ನ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತೀವ್ರ ಹಿನ್ನಡೆ ಅನುಭವಿಸಿತ್ತು., ಆದ್ರೆ, ಅಂತ್ಯದಲ್ಲಿ 2ನೇ ತಂಡವಾಗಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ತಂಡ ಸಕ್ಸಸ್ಗಾಗಿ ಒಬ್ಬ ಬ್ಯಾಟ್ಸ್ಮನ್ ಅನ್ನೋ, ಒಬ್ಬ ಬೌಲರ್ ಅನ್ನೋ ನೆಚ್ಚಿಕೊಂಡಿಲ್ಲ. ಇಡೀ ತಂಡವಾಗಿ ಹೋರಾಡುತ್ತೆ. ಇವತ್ತು ಚೆನ್ನೈ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರೋದ್ರ ಹಿಂದಿನ ಸೀಕ್ರೆಟ್ ಇದೇ.
ನಾಯಕನ ನಡೆಯೇ ಆಟಗಾರರಿಗೆ ಸ್ಪೂರ್ತಿ.!
ಟೀಮ್ ಮುಖ್ಯ ಅನ್ನೋ ಧೋನಿ ಈ ಸೀಸನ್ನಲ್ಲಿ ಕಂಪ್ಲೀಟ್ ಬದಲಾದ್ರು. ಕಳೆದ ಸೀಸನ್ನಲ್ಲಿ ಬ್ಯಾಟಿಂಗ್ನಲ್ಲಿ ಪ್ಲಾಫ್ ಶೋ ನೀಡಿದ್ದ ಮಾಹಿ ಈ ಸಲ ಘರ್ಜಿಸಿದ್ರು. ಅಪಾರ ಮಂಡಿ ನೋವಿನ ನಡುವೆಯೂ ಮೈದಾನಕ್ಕಿಳಿದು ಹೋರಾಡಿದ್ರು. ಧೋನಿಯ ಈ ನಡೆಯೇ ಆಟಗಾರರಿಗೆ ಸ್ಪೂರ್ತಿಯ ಸೆಲೆಯಾಯ್ತು.
ಸೂಪರ್ – ಡೂಪರ್ ಬ್ಯಾಟಿಂಗ್ ಕಂಡು ಎಲ್ಲಾ ದಂಗು.!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಯುನಿಟ್ ಎಲ್ಲರನ್ನೂ ದಂಗು ಬಡಿಸಿದ್ದು ಸುಳ್ಳಲ್ಲ. ಅಜಿಂಕ್ಯಾ ರಹಾನೆಯಂತೂ ಈ ವಿಚಾರದಲ್ಲಿ ಸರ್ಪ್ರೈಸ್ ಪ್ಯಾಕ್. ಇಷ್ಟೇ ಅಲ್ಲ. ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ಡಿವೋನ್ ಕಾನ್ವೆ. ಹೀಗೆ ತಂಡ ಸೇರಿದ ಪ್ರತಿಯೊಬ್ಬ ಬ್ಯಾಟ್ಸ್ಮನ್ ಸಿಡಿದು ನಿಂತರು.
ಮಾಹಿ ಮಾರ್ಗದರ್ಶನ, ಬೌಲರ್ಗಳ ಅಬ್ಬರ.!
ಈ ಸೀಸನ್ನ ಆರಂಭದಲ್ಲೇ ಚೆನ್ನೈಗೆ ಸ್ಟೋಕ್ಸ್ ರೂಪದಲ್ಲಿ ಮೊದಲ ವಿಘ್ನ ಎದುರಾದ್ರೆ, ಮುಖೇಶ್ ಚೌದರಿ ರೂಲ್ಡ್ ಔಟ್ ಆಗಿದ್ದು ಮತ್ತೊಂದು ಹಿನ್ನಡೆಯಾಯ್ತು. ಪವರ್ ಪ್ಲೇ, ಡೆತ್ ಓವರ್ನಲ್ಲಿ ಬೌಲಿಂಗ್ ಮಾಡೋ ಅನುಭವಿ ಆಟಗಾರರ ಕೊರತೆ ಕಾಡ್ತು. ಆರಂಭಿಕ ಕೆಲ ಪಂದ್ಯಗಳಲ್ಲಿ ತಂಡ ಸೋಲುಂಡಿತು ಕೂಡ. ಆದ್ರೆ, ಎಮ್ಎಸ್ಡಿ ವಿಚಲಿತರಾಗಲಿಲ್ಲ. ಆಟಗಾರರ ಮೇಲೆ ನಂಬಿಕೆ ಇಟ್ಟು ಬ್ಯಾಕ್ ಮಾಡಿದ್ರು. ಸರಿಯಾದ ಮಾರ್ಗದರ್ಶನವನ್ನೂ ಮಾಡಿದ್ರು. ಬೌಲರ್ಗಳು ನಂಬಿಕೆ ಹುಸಿಗೊಳಲೇ ಇಲ್ಲ.
ಕಳೆದ ಸೀಸನ್ನಲ್ಲಿ ಪ್ಲಾಫ್, ಈ ಸೀಸನ್ನಲ್ಲಿ ರಾಕ್..!
ಈ ಸೀಸನ್ನ ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ಗೆ ಎಂಟ್ರಿ ಕೊಡಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ವು. ಇದಕ್ಕೆಲ್ಲಾ ಕಳೆದ ಸೀಸನ್ನ ಕಳಪೆ ಪ್ರದರ್ಶನವೇ ಕಾರಣವಾಗಿತ್ತು. ಐಪಿಎಲ್ ಇತಿಹಾಸದಲ್ಲೇ ಹೀನಾಯ ಪ್ರದರ್ಶನ ನೀಡಿದ್ದ ಚೆನ್ನೈ ಲೀಗ್ ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆದ್ರೆ, ಈ ಸೀಸನ್ನಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದೆ.
ಕಳೆದ ಸೀಸನ್ನಲ್ಲಿ ಕಂಡಷ್ಟು ಏಳು – ಬೀಳುಗಳನ್ನ ಹಿಂದೆಂದೂ ಕಂಡಿಲ್ಲ. ನಾಯಕತ್ವದಲ್ಲಿ ಬದಲಾವಣೆಯ ಗೊಂದಲ, ಅನಾವಶ್ಯಕ ವಿವಾದಗಳು, ಆಟಗಾರರ ಪ್ಲಾಫ್ ಶೋ, ಮ್ಯಾನೇಜ್ಮೆಂಟ್ ನಡೆಯ ಬಗ್ಗೆ ಆರೋಪಗಳು ಹೀಗೆ ಸಾಲು-ಸಾಲಯ ಹಿನ್ನಡೆಗಳನ್ನ ಕಳೆದ ಸೀಸನ್ನಲ್ಲಿ ಚೆನ್ನೈ ಎದುರಿಸಿತ್ತು. ಆ ಎಲ್ಲಾ ನೋವಿನ ಕಥೆಗಳೇ ಇಂದು ಸಕ್ಸಸ್ ತಂದು ಕೊಟ್ಟಿವೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ