newsfirstkannada.com

ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​.. ಪ್ರೇಮಿ ಜತೆ ಸೇರಲು ಗಂಡನನ್ನೇ ಕೊಲೆಗೈದ ಹೆಂಡತಿ

Share :

14-08-2023

    ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ಮೃತದೇಹ ಪತ್ತೆ..!

    ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದ ಮಡದಿ

    ಸಾವಲ್ಲ, ಕೊಲೆಯೆಂದು ದೂರು ನೀಡಿದ್ದ ಪೋಷಕರು

ಚಿಕ್ಕಮಗಳೂರು: ಯಗಟಿ ಕೆರೆ ಬಳಿ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್​ ಟ್ವಿಸ್ಟ್​ ಸಿಕ್ಕಿದ್ದು ಪ್ರಿಯಕರನ ಜೊತೆ ಸೇರಲು ಪತ್ನಿಯೇ ತನ್ನ ಗಂಡನನ್ನು ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಘಟನೆಯು ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ಪತ್ನಿ ಕೃತ್ಯದಿಂದ ಪತಿ ನವೀನ್ (28) ಕೊಲೆಯಾದವರು. ಸಂಜಯ್ ಎನ್ನುವರನ್ನು ಪತ್ನಿ ಪಾವನ ಆಗಾಗ ಭೇಟಿ ಯಾಗುತ್ತಿದ್ದಳು. ಇದಕ್ಕೆ ಪತಿ ಅಡ್ಡವಾಗುತ್ತಿದ್ದಾನೆಂದು ಊಟದಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಿ ಜ್ಞಾನ ತಪ್ಪಿಸಿದ್ದಾಳೆ. ಬಳಿಕ ಪ್ರಿಯಕರನ ಜೊತೆ ಸೇರಿ ಬೈಕ್​ನಲ್ಲಿ ಪ್ರಜ್ಞೆ ತಪ್ಪಿದ ಪತಿಯನ್ನು ತಂದು ಯಗಟಿ ಕೆರೆ ಬಳಿ ಎಸೆದು ಹೋಗಿದ್ದರು.

ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಇದು ಸಹಜ ಸಾವಲ್ಲ, ಕೊಲೆ ಎಂದು ಪೋಷಕರು ಯಗಟಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಕೊಲೆ ಮಾಡಿರುವುದು ಪತ್ನಿಯೇ ಅನ್ನೋದನ್ನ ಪತ್ತೆ ಹಚ್ಚಿದ್ದಾರೆ. ಅಲ್ಲದೇ ಪೊಲೀಸರ ತನಿಖೆಯಲ್ಲಿ ಆರೋಪಿಗಳು ಸತ್ಯ ಬಾಯಿ ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​.. ಪ್ರೇಮಿ ಜತೆ ಸೇರಲು ಗಂಡನನ್ನೇ ಕೊಲೆಗೈದ ಹೆಂಡತಿ

https://newsfirstlive.com/wp-content/uploads/2023/08/CKM_HUSBAND_DIE.jpg

    ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ಮೃತದೇಹ ಪತ್ತೆ..!

    ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದ ಮಡದಿ

    ಸಾವಲ್ಲ, ಕೊಲೆಯೆಂದು ದೂರು ನೀಡಿದ್ದ ಪೋಷಕರು

ಚಿಕ್ಕಮಗಳೂರು: ಯಗಟಿ ಕೆರೆ ಬಳಿ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್​ ಟ್ವಿಸ್ಟ್​ ಸಿಕ್ಕಿದ್ದು ಪ್ರಿಯಕರನ ಜೊತೆ ಸೇರಲು ಪತ್ನಿಯೇ ತನ್ನ ಗಂಡನನ್ನು ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಘಟನೆಯು ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ಪತ್ನಿ ಕೃತ್ಯದಿಂದ ಪತಿ ನವೀನ್ (28) ಕೊಲೆಯಾದವರು. ಸಂಜಯ್ ಎನ್ನುವರನ್ನು ಪತ್ನಿ ಪಾವನ ಆಗಾಗ ಭೇಟಿ ಯಾಗುತ್ತಿದ್ದಳು. ಇದಕ್ಕೆ ಪತಿ ಅಡ್ಡವಾಗುತ್ತಿದ್ದಾನೆಂದು ಊಟದಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಿ ಜ್ಞಾನ ತಪ್ಪಿಸಿದ್ದಾಳೆ. ಬಳಿಕ ಪ್ರಿಯಕರನ ಜೊತೆ ಸೇರಿ ಬೈಕ್​ನಲ್ಲಿ ಪ್ರಜ್ಞೆ ತಪ್ಪಿದ ಪತಿಯನ್ನು ತಂದು ಯಗಟಿ ಕೆರೆ ಬಳಿ ಎಸೆದು ಹೋಗಿದ್ದರು.

ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಇದು ಸಹಜ ಸಾವಲ್ಲ, ಕೊಲೆ ಎಂದು ಪೋಷಕರು ಯಗಟಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಕೊಲೆ ಮಾಡಿರುವುದು ಪತ್ನಿಯೇ ಅನ್ನೋದನ್ನ ಪತ್ತೆ ಹಚ್ಚಿದ್ದಾರೆ. ಅಲ್ಲದೇ ಪೊಲೀಸರ ತನಿಖೆಯಲ್ಲಿ ಆರೋಪಿಗಳು ಸತ್ಯ ಬಾಯಿ ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More