newsfirstkannada.com

ಸಂಜೆಯೊಳಗೆ ಮುರುಘಾ ಸ್ವಾಮೀಜಿ ಬಂಧನವಾಗುತ್ತಾ? ದಾವಣಗೆರೆ ವಿರಕ್ತ ಮಠದಲ್ಲಿ ಆಪ್ತರ ಜೊತೆ ರಹಸ್ಯ ಚರ್ಚೆ

Share :

20-11-2023

    ಇಂದು ಸಂಜೆ ವೇಳೆಗೆ ಬಂಧಿಸಿ ಕೋರ್ಟ್​ಗೆ ಹಾಜರು ಪಡಿಸಬೇಕು

    ವಾರಂಟ್ ಜಾರಿಗೊಳಿಸಿ ನ್ಯಾಯಾಧೀಶೆ ಬಿ.ಕೆ ಕೋಮಲಾ ಆದೇಶ

    ಬಾಡಿ ವಾರಂಟ್ ಆಧರಿಸಿ ಜಾಮೀನು ರಹಿತ ವಾರಂಟ್ ಜಾರಿ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ 2ನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಕೋರ್ಟ್​ ಆದೇಶ ಹೊರಡಿಸಿದೆ.

ಚಿತ್ರದುರ್ಗದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಈ ಆದೇಶವನ್ನು ನೀಡಿದ್ದಾರೆ. ಆರೋಪಿ ಮುರುಘಾ ಶ್ರೀಯನ್ನು ಕೂಡಲೇ ಬಂಧಿಸಿ ಇಂದು ಸಂಜೆ ಒಳಗೆ ಕೋರ್ಟ್​ ಮುಂದೆ ಹಾಜರ್ ಪಡಿಸುವಂತೆ ಆದೇಶಿಸಲಾಗಿದೆ. ಕಳೆದ 2 ದಿನದ ಹಿಂದೆಯಷ್ಟೇ ಬಾಡಿ ವಾರಂಟ್ ಮೇಲೆ ವಿಚಾರಣೆ ಮಾಡಲಾಗಿತ್ತು.

 

ಜಾಮೀನು ರಹಿತ ವಾರೆಂಟ್ ಜಾರಿ ಆದ ಹಿನ್ನೆಲೆಯಲ್ಲಿ ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠದ ಕೋಣೆಯೊಂದರಲ್ಲಿ ಬಾಗಿಲು ಹಾಕಿಕೊಂಡಿದ್ದಾರೆ. ಒಳಗೆ ಯಾರು ಬರದಂತೆ ಶ್ರೀಗಳು ಸೂಚಿಸಿದ್ದಾರೆ. ಶೀಘ್ರವೇ ಬಂಧಿಸಿ ಕೋರ್ಟ್​ಗೆ ಪೊಲೀಸರು ಹಾಜರು ಪಡಿಸಲಿದ್ದಾರೆ.

ಇನ್ನು ಚಿತ್ರದುರ್ಗ ಪೊಲೀಸರು ಗೊಂದಲದಲ್ಲಿದ್ದು ಮೊದಲ ಕೇಸ್​ ಪ್ರಕಾರ ಹೈಕೋರ್ಟ್ ಹೇಳಿದಂತೆ ಮುರುಘಾ ಶ್ರೀಗಳು ಚಿತ್ರದುರ್ಗಕ್ಕೆ ಹೋಗಬಾರದು. ಆದರೆ ಈಗ 2ನೇ ಕೇಸ್​ನಲ್ಲಿ ಆದೆಶ ನೀಡಿರುವ ಕೋರ್ಟ್​ ಚಿತ್ರದುರ್ಗದಲ್ಲೇ ಇರುವುದರಿಂದ ಬಂಧಿಸಿ ಕರೆತರುವಂತೆ ಸೂಚಿಸಿದೆ. ಹೀಗಾಗಿ ಪೊಲೀಸರು ಗೊಂದಲದಲ್ಲಿದ್ದಾರೆ. ಹೀಗಾಗಿ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಜೆಯೊಳಗೆ ಮುರುಘಾ ಸ್ವಾಮೀಜಿ ಬಂಧನವಾಗುತ್ತಾ? ದಾವಣಗೆರೆ ವಿರಕ್ತ ಮಠದಲ್ಲಿ ಆಪ್ತರ ಜೊತೆ ರಹಸ್ಯ ಚರ್ಚೆ

https://newsfirstlive.com/wp-content/uploads/2023/11/Murugha-Shree-Bail.jpg

    ಇಂದು ಸಂಜೆ ವೇಳೆಗೆ ಬಂಧಿಸಿ ಕೋರ್ಟ್​ಗೆ ಹಾಜರು ಪಡಿಸಬೇಕು

    ವಾರಂಟ್ ಜಾರಿಗೊಳಿಸಿ ನ್ಯಾಯಾಧೀಶೆ ಬಿ.ಕೆ ಕೋಮಲಾ ಆದೇಶ

    ಬಾಡಿ ವಾರಂಟ್ ಆಧರಿಸಿ ಜಾಮೀನು ರಹಿತ ವಾರಂಟ್ ಜಾರಿ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ 2ನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಕೋರ್ಟ್​ ಆದೇಶ ಹೊರಡಿಸಿದೆ.

ಚಿತ್ರದುರ್ಗದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಈ ಆದೇಶವನ್ನು ನೀಡಿದ್ದಾರೆ. ಆರೋಪಿ ಮುರುಘಾ ಶ್ರೀಯನ್ನು ಕೂಡಲೇ ಬಂಧಿಸಿ ಇಂದು ಸಂಜೆ ಒಳಗೆ ಕೋರ್ಟ್​ ಮುಂದೆ ಹಾಜರ್ ಪಡಿಸುವಂತೆ ಆದೇಶಿಸಲಾಗಿದೆ. ಕಳೆದ 2 ದಿನದ ಹಿಂದೆಯಷ್ಟೇ ಬಾಡಿ ವಾರಂಟ್ ಮೇಲೆ ವಿಚಾರಣೆ ಮಾಡಲಾಗಿತ್ತು.

 

ಜಾಮೀನು ರಹಿತ ವಾರೆಂಟ್ ಜಾರಿ ಆದ ಹಿನ್ನೆಲೆಯಲ್ಲಿ ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠದ ಕೋಣೆಯೊಂದರಲ್ಲಿ ಬಾಗಿಲು ಹಾಕಿಕೊಂಡಿದ್ದಾರೆ. ಒಳಗೆ ಯಾರು ಬರದಂತೆ ಶ್ರೀಗಳು ಸೂಚಿಸಿದ್ದಾರೆ. ಶೀಘ್ರವೇ ಬಂಧಿಸಿ ಕೋರ್ಟ್​ಗೆ ಪೊಲೀಸರು ಹಾಜರು ಪಡಿಸಲಿದ್ದಾರೆ.

ಇನ್ನು ಚಿತ್ರದುರ್ಗ ಪೊಲೀಸರು ಗೊಂದಲದಲ್ಲಿದ್ದು ಮೊದಲ ಕೇಸ್​ ಪ್ರಕಾರ ಹೈಕೋರ್ಟ್ ಹೇಳಿದಂತೆ ಮುರುಘಾ ಶ್ರೀಗಳು ಚಿತ್ರದುರ್ಗಕ್ಕೆ ಹೋಗಬಾರದು. ಆದರೆ ಈಗ 2ನೇ ಕೇಸ್​ನಲ್ಲಿ ಆದೆಶ ನೀಡಿರುವ ಕೋರ್ಟ್​ ಚಿತ್ರದುರ್ಗದಲ್ಲೇ ಇರುವುದರಿಂದ ಬಂಧಿಸಿ ಕರೆತರುವಂತೆ ಸೂಚಿಸಿದೆ. ಹೀಗಾಗಿ ಪೊಲೀಸರು ಗೊಂದಲದಲ್ಲಿದ್ದಾರೆ. ಹೀಗಾಗಿ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More