newsfirstkannada.com

ಸಮಯ ಪ್ರಜ್ಞೆಯಿಂದ ಭೀಕರ ಬಸ್​​ ದುರಂತ ತಪ್ಪಿಸಿದ ಕಮಾಂಡರ್; 55 ಮಂದಿ ಪ್ರಾಣ ಉಳಿಸಿದ್ದೇ ರೋಚಕ!

Share :

21-06-2023

    ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಬಸ್​​ ಚಲಾಯಿಸಿದ ಚಾಲಕ

    ಸಮಯ ಪ್ರಜ್ಞೆಯಿಂದ ಬಸ್​​ ದುರಂತ ತಪ್ಪಿಸಿದ ಕಮಾಂಡರ್

    ಬಸ್​ ದುರಂತ ತಪ್ಪಿಸಿ 55ಕ್ಕೂ ಹೆಚ್ಚು ಮಂದಿಯನ್ನು ಉಳಿಸಿದ್ರು!

ರುದ್ರಾಪುರ: ಸೆಂಟ್ರಲ್​ ಇಂಡಸ್ಟ್ರಿಯಲ್​​ ಸೆಕ್ಯೂರಿಟಿ ಫೋರ್ಸ್​​ (CISF) ಅಸಿಸ್ಟಂಟ್​​ ಕಮಾಂಡರ್ ಒಬ್ಬರು ಭೀಕರ ಬಸ್​ ಅಪಘಾತವೊಂದನ್ನು ತಪ್ಪಿಸಿದ್ದಾರೆ. ಈ ಮೂಲಕ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದ 55ಕ್ಕೂ ಹೆಚ್ಚು ಪ್ರಯಾಣಿಕರನ್ನು ಕಾಪಾಡಿದ್ದಾರೆ.

ಉತ್ತರಾಖಂಡದ ಉದಾಮ್​ ಸಿಂಗ್​ ನಗರ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. ಚಾಲಕನೋರ್ವ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಬಸ್​ ಚಲಾಯಿಸುತ್ತಿದ್ದ. ನೈನಿತಾಲ್​​ ರೋಡ್​ ಸಮೀಪದ ತಾಂಡ ಎಂಬ ಅರಣ್ಯ ಪ್ರದೇಶದಲ್ಲಿ ಬಸ್​ ಚಾಲಕನ ನಿಯಂತ್ರಣ ತಪ್ಪಿದೆ. ಇನ್ನೇನು ಬಸ್​ ಅಪಘಾತಕ್ಕೆ ಗುರಿಯಾಗಬೇಕು ಎನ್ನುವಾಗ CISF ಅಸಿಸ್ಟಂಟ್​​ ಕಮಾಂಡರ್ ಸ್ಟೇರಿಂಗ್​ ಹಿಡಿದು ಕಂಟ್ರೋಲ್​​ಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಅರಣ್ಯ ಪ್ರದೇಶದಲ್ಲಿ ಅಪಘಾತವಾಗಬೇಕಿದ್ದ ಬಸ್​ ಅನ್ನೇ ಕಂಟ್ರೋಲ್​ ಮಾಡಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.

ಮೊದಲು ಡ್ರೈವರ್​ ಸೀಟ್​ನಿಂದ ಚಾಲಕನನ್ನು ಹೊರಗೆ ಎಳೆದಿದ್ದಾರೆ. ಬಳಿಕ ಸ್ಟೇರಿಂಗ್​ ಕಟ್ರೋಲ್​ ಮಾಡಿ ನಿಧಾನಕ್ಕೆ ಬ್ರೇಕ್​ ಹಾಕಿ ನಿಲ್ಲಿಸಿದ್ದಾರೆ. ಬಸ್​ ಕೊನೆಯಲ್ಲಿ ಇದ್ದ ಅಸಿಸ್ಟಂಟ್​​ ಕಮಾಂಡರ್ ತನ್ನ ಪ್ರಾಣವನ್ನು ಲೆಕ್ಕಿಸದೆ ಈ ಕೆಲಸ ಮಾಡಿದ್ದಾರೆ. ಇವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕುಡಿದು ಅಡ್ಡಾದಿಡ್ಡಿ ಬಸ್​​ ಚಲಾವಣೆ

ಮಕ್ಕಳು, ಮಹಿಳೆರು, ವೃದ್ಧರು ಸೇರಿದಂತೆ 55ಕ್ಕೂ ಹೆಚ್ಚು ಪ್ರಯಾಣಿಕರು ಬದುಕುಳಿದಿದ್ದಾರೆ. ಭಾರೀ ವಾಹನಗಳು ಯಾವುದೇ ಕಾರಣಕ್ಕೂ ಈ ರಸ್ತೆಯಲ್ಲಿ 60 ಕಿಲೋ ಮೀಟರ್​ಗೂ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ. ಡ್ರೈವರ್​​ 60 ಕಿಲೋ ಮೀಟರ್​​ಗೂ ಹೆಚ್ಚು ವೇಗದಲ್ಲಿ ಚಲಾಯಿಸಿದ ಕಾರಣ ಈ ಅನಾಹುತ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮಯ ಪ್ರಜ್ಞೆಯಿಂದ ಭೀಕರ ಬಸ್​​ ದುರಂತ ತಪ್ಪಿಸಿದ ಕಮಾಂಡರ್; 55 ಮಂದಿ ಪ್ರಾಣ ಉಳಿಸಿದ್ದೇ ರೋಚಕ!

https://newsfirstlive.com/wp-content/uploads/2023/06/Bus-Accident-2.jpg

    ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಬಸ್​​ ಚಲಾಯಿಸಿದ ಚಾಲಕ

    ಸಮಯ ಪ್ರಜ್ಞೆಯಿಂದ ಬಸ್​​ ದುರಂತ ತಪ್ಪಿಸಿದ ಕಮಾಂಡರ್

    ಬಸ್​ ದುರಂತ ತಪ್ಪಿಸಿ 55ಕ್ಕೂ ಹೆಚ್ಚು ಮಂದಿಯನ್ನು ಉಳಿಸಿದ್ರು!

ರುದ್ರಾಪುರ: ಸೆಂಟ್ರಲ್​ ಇಂಡಸ್ಟ್ರಿಯಲ್​​ ಸೆಕ್ಯೂರಿಟಿ ಫೋರ್ಸ್​​ (CISF) ಅಸಿಸ್ಟಂಟ್​​ ಕಮಾಂಡರ್ ಒಬ್ಬರು ಭೀಕರ ಬಸ್​ ಅಪಘಾತವೊಂದನ್ನು ತಪ್ಪಿಸಿದ್ದಾರೆ. ಈ ಮೂಲಕ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದ 55ಕ್ಕೂ ಹೆಚ್ಚು ಪ್ರಯಾಣಿಕರನ್ನು ಕಾಪಾಡಿದ್ದಾರೆ.

ಉತ್ತರಾಖಂಡದ ಉದಾಮ್​ ಸಿಂಗ್​ ನಗರ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. ಚಾಲಕನೋರ್ವ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಬಸ್​ ಚಲಾಯಿಸುತ್ತಿದ್ದ. ನೈನಿತಾಲ್​​ ರೋಡ್​ ಸಮೀಪದ ತಾಂಡ ಎಂಬ ಅರಣ್ಯ ಪ್ರದೇಶದಲ್ಲಿ ಬಸ್​ ಚಾಲಕನ ನಿಯಂತ್ರಣ ತಪ್ಪಿದೆ. ಇನ್ನೇನು ಬಸ್​ ಅಪಘಾತಕ್ಕೆ ಗುರಿಯಾಗಬೇಕು ಎನ್ನುವಾಗ CISF ಅಸಿಸ್ಟಂಟ್​​ ಕಮಾಂಡರ್ ಸ್ಟೇರಿಂಗ್​ ಹಿಡಿದು ಕಂಟ್ರೋಲ್​​ಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಅರಣ್ಯ ಪ್ರದೇಶದಲ್ಲಿ ಅಪಘಾತವಾಗಬೇಕಿದ್ದ ಬಸ್​ ಅನ್ನೇ ಕಂಟ್ರೋಲ್​ ಮಾಡಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.

ಮೊದಲು ಡ್ರೈವರ್​ ಸೀಟ್​ನಿಂದ ಚಾಲಕನನ್ನು ಹೊರಗೆ ಎಳೆದಿದ್ದಾರೆ. ಬಳಿಕ ಸ್ಟೇರಿಂಗ್​ ಕಟ್ರೋಲ್​ ಮಾಡಿ ನಿಧಾನಕ್ಕೆ ಬ್ರೇಕ್​ ಹಾಕಿ ನಿಲ್ಲಿಸಿದ್ದಾರೆ. ಬಸ್​ ಕೊನೆಯಲ್ಲಿ ಇದ್ದ ಅಸಿಸ್ಟಂಟ್​​ ಕಮಾಂಡರ್ ತನ್ನ ಪ್ರಾಣವನ್ನು ಲೆಕ್ಕಿಸದೆ ಈ ಕೆಲಸ ಮಾಡಿದ್ದಾರೆ. ಇವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕುಡಿದು ಅಡ್ಡಾದಿಡ್ಡಿ ಬಸ್​​ ಚಲಾವಣೆ

ಮಕ್ಕಳು, ಮಹಿಳೆರು, ವೃದ್ಧರು ಸೇರಿದಂತೆ 55ಕ್ಕೂ ಹೆಚ್ಚು ಪ್ರಯಾಣಿಕರು ಬದುಕುಳಿದಿದ್ದಾರೆ. ಭಾರೀ ವಾಹನಗಳು ಯಾವುದೇ ಕಾರಣಕ್ಕೂ ಈ ರಸ್ತೆಯಲ್ಲಿ 60 ಕಿಲೋ ಮೀಟರ್​ಗೂ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ. ಡ್ರೈವರ್​​ 60 ಕಿಲೋ ಮೀಟರ್​​ಗೂ ಹೆಚ್ಚು ವೇಗದಲ್ಲಿ ಚಲಾಯಿಸಿದ ಕಾರಣ ಈ ಅನಾಹುತ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More