newsfirstkannada.com

ಈದ್ಗಾ ಮೈದಾನದಲ್ಲಿ ಬಕ್ರಿದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

Share :

29-06-2023

    CMಗೆ ದಿನೇಶ್ ಗುಂಡೂರಾವ್, ಜಮೀರ್ ಸಾಥ್

    ಧರ್ಮಗುರುಗಳಿಂದ ಸಿದ್ದರಾಮಯ್ಯಗೆ ಸನ್ಮಾನ

    ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿದ್ದು ಏನಂದ್ರು..?

ಬೆಂಗಳೂರು: ಬಕ್ರಿದ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಆಗಮಿಸಿದ್ದರು. ಇಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಸಿದ್ದರಾಮಯ್ಯರಿಗೆ ಸಚಿವರಾದ ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್ ಸಾಥ್ ನೀಡಿದರು.

ಈ ವೇಳೆ ಮುಖ್ಯಮಂತ್ರಿಗಳಿಗೆ ಧರ್ಮಗುರುಗಳು ಆತ್ಮೀಯವಾಗಿ ಸ್ವಾಗತಕೋರಿದರು. ಕಪ್ಪು ಟೋಪಿ ಹಾಕಿ ಶಾಲು ಹೊದ್ದಿಸಿ ಸಿಎಂಗೆ ಸನ್ಮಾನ ಸನ್ಮಾನ ಮಾಡಿದರು. ಸಿದ್ದರಾಮಯ್ಯ ಮುಸ್ಲಿಂ ಟೋಪಿ ಧರಿಸಿ ಮುಗುಳ್ನಗೆ ಬೀರಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಶುಭಾಶಯ ತಿಳಿಸುತ್ತೇನೆ. ನಾವೆಲ್ಲರೂ ಮನುಷ್ಯರು. ಕೆಲವರು ನಮ್ಮ ನಮ್ಮಲ್ಲೇ ವೈರುತ್ವ ಹುಟ್ಟಿಕೊಳ್ಳುವಂತಹ ಕೆಲಸ ಮಾಡುತ್ತಾರೆ. ಅದಕ್ಕೆಲ್ಲ ನಾವು ಮಹತ್ವ ಕೊಡಬಾರದರು. ಪ್ರೀತಿ-ವಿಶ್ವಾಸದಿಂದ ನಾವು ಬಾಳಬೇಕು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈದ್ಗಾ ಮೈದಾನದಲ್ಲಿ ಬಕ್ರಿದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

https://newsfirstlive.com/wp-content/uploads/2023/06/SIDDU-30.jpg

    CMಗೆ ದಿನೇಶ್ ಗುಂಡೂರಾವ್, ಜಮೀರ್ ಸಾಥ್

    ಧರ್ಮಗುರುಗಳಿಂದ ಸಿದ್ದರಾಮಯ್ಯಗೆ ಸನ್ಮಾನ

    ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿದ್ದು ಏನಂದ್ರು..?

ಬೆಂಗಳೂರು: ಬಕ್ರಿದ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಆಗಮಿಸಿದ್ದರು. ಇಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಸಿದ್ದರಾಮಯ್ಯರಿಗೆ ಸಚಿವರಾದ ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್ ಸಾಥ್ ನೀಡಿದರು.

ಈ ವೇಳೆ ಮುಖ್ಯಮಂತ್ರಿಗಳಿಗೆ ಧರ್ಮಗುರುಗಳು ಆತ್ಮೀಯವಾಗಿ ಸ್ವಾಗತಕೋರಿದರು. ಕಪ್ಪು ಟೋಪಿ ಹಾಕಿ ಶಾಲು ಹೊದ್ದಿಸಿ ಸಿಎಂಗೆ ಸನ್ಮಾನ ಸನ್ಮಾನ ಮಾಡಿದರು. ಸಿದ್ದರಾಮಯ್ಯ ಮುಸ್ಲಿಂ ಟೋಪಿ ಧರಿಸಿ ಮುಗುಳ್ನಗೆ ಬೀರಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಶುಭಾಶಯ ತಿಳಿಸುತ್ತೇನೆ. ನಾವೆಲ್ಲರೂ ಮನುಷ್ಯರು. ಕೆಲವರು ನಮ್ಮ ನಮ್ಮಲ್ಲೇ ವೈರುತ್ವ ಹುಟ್ಟಿಕೊಳ್ಳುವಂತಹ ಕೆಲಸ ಮಾಡುತ್ತಾರೆ. ಅದಕ್ಕೆಲ್ಲ ನಾವು ಮಹತ್ವ ಕೊಡಬಾರದರು. ಪ್ರೀತಿ-ವಿಶ್ವಾಸದಿಂದ ನಾವು ಬಾಳಬೇಕು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More