newsfirstkannada.com

ಬಿಜೆಪಿಗೆ ಮತ್ತೊಂದು ಶಾಕ್​; RSS​ಗೆ ಮಂಜೂರಾಗಿದ್ದ ಗೋಮಾಳ ಭೂಮಿ ಮಂಜೂರಾತಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ತಡೆ

Share :

14-07-2023

    ಬಿಜೆಪಿ ವಿರುದ್ಧ ಶಾಕ್​ ಕೊಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ

    RSS​ನ ಜನಸೇವಾ ಟ್ರಸ್ಟ್ ಗೆ ಮಂಜೂರಾಗಿದ್ದ ಭೂಮಿಗೆ ತಡೆ

    ಗೋಮಾಳ ನಿರ್ಮಿಸಲು ಬಿಜೆಪಿ ನೀಡಿದ್ದ ಭೂಮಿಗೆ ಸರ್ಕಾರ ನಕಾರ

ಕರ್ನಾಟಕದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ದಿನದಿಂದ ವಿರೋಧ ಪಕ್ಷ ಬಿಜೆಪಿ ಹಾಕಿಕೊಂಡಿದ್ದ ಹಲವು ಯೋಜನೆಗಳನ್ನು ಸಿದ್ದರಾಮಯ್ಯನವರು ಸರ್ಕಾರ ಸ್ಥಗಿತ ಮಾಡುತ್ತಾ ಬಂದಿದೆ. ಇದೀಗ ಆರ್​ಎಸ್​ಎಸ್​​ಗೂ ಕಾಂಗ್ರೆಸ್​​ ಸರ್ಕಾರ ಮತ್ತೊಂದು ಶಾಕ್​​ ನೀಡಿದೆ.  ಜನಸೇವಾ ಟ್ರಸ್ಟ್​ಗೆ ಮಂಜೂರಾಗಿದ್ದ ಗೋಮಾಳ ಭೂಮಿಗೆ ತಡೆ ನೀಡಿದೆ.

ಬೆಂಗಳೂರಿನ ಕುರುಬರಹಳ್ಳಿಯಲ್ಲಿ 35.33 ಎಕರೆ ಭೂಮಿ ಆರ್​ಎಸ್​ಎಸ್​ನ ಜನಸೇವಾ ಟ್ರಸ್ಟ್ ಗೆ ಮಂಜೂರಾಗಿತ್ತು. ಬಿಜೆಪಿ ಸರ್ಕಾರ ಅವಧಿಯಲ್ಲಿ ಸಮಯದಲ್ಲಿ ಭೂಮಿಯನ್ನು ನೀಡಲು ಮುಂದಾಗಿತ್ತು. ಆದರೀಗ ಸಿದ್ದರಾಮಯ್ಯ ಸರ್ಕಾರ ಈ ಭೂಮಿಗೆ ತಡೆ ನೀಡಿದೆ.

ಇದೇ ವಿಚಾರವಾಗಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡರಿಂದ ಲಿಖಿತ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಕೃಷ್ಣಬೈರೇಗೌಡರು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಬಿಜೆಪಿಯಿಂದ ಮಂಜೂರಾಗಿದ್ದ ಗೋಮಾಳ ಭೂಮಿ ಮಂಜೂರಾತಿಗೆ ಕಾಂಗ್ರೆಸ್ ತಡೆ ನೀಡಿರುವುದಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಗೆ ಮತ್ತೊಂದು ಶಾಕ್​; RSS​ಗೆ ಮಂಜೂರಾಗಿದ್ದ ಗೋಮಾಳ ಭೂಮಿ ಮಂಜೂರಾತಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ತಡೆ

https://newsfirstlive.com/wp-content/uploads/2023/07/Siddu-2.jpg

    ಬಿಜೆಪಿ ವಿರುದ್ಧ ಶಾಕ್​ ಕೊಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ

    RSS​ನ ಜನಸೇವಾ ಟ್ರಸ್ಟ್ ಗೆ ಮಂಜೂರಾಗಿದ್ದ ಭೂಮಿಗೆ ತಡೆ

    ಗೋಮಾಳ ನಿರ್ಮಿಸಲು ಬಿಜೆಪಿ ನೀಡಿದ್ದ ಭೂಮಿಗೆ ಸರ್ಕಾರ ನಕಾರ

ಕರ್ನಾಟಕದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ದಿನದಿಂದ ವಿರೋಧ ಪಕ್ಷ ಬಿಜೆಪಿ ಹಾಕಿಕೊಂಡಿದ್ದ ಹಲವು ಯೋಜನೆಗಳನ್ನು ಸಿದ್ದರಾಮಯ್ಯನವರು ಸರ್ಕಾರ ಸ್ಥಗಿತ ಮಾಡುತ್ತಾ ಬಂದಿದೆ. ಇದೀಗ ಆರ್​ಎಸ್​ಎಸ್​​ಗೂ ಕಾಂಗ್ರೆಸ್​​ ಸರ್ಕಾರ ಮತ್ತೊಂದು ಶಾಕ್​​ ನೀಡಿದೆ.  ಜನಸೇವಾ ಟ್ರಸ್ಟ್​ಗೆ ಮಂಜೂರಾಗಿದ್ದ ಗೋಮಾಳ ಭೂಮಿಗೆ ತಡೆ ನೀಡಿದೆ.

ಬೆಂಗಳೂರಿನ ಕುರುಬರಹಳ್ಳಿಯಲ್ಲಿ 35.33 ಎಕರೆ ಭೂಮಿ ಆರ್​ಎಸ್​ಎಸ್​ನ ಜನಸೇವಾ ಟ್ರಸ್ಟ್ ಗೆ ಮಂಜೂರಾಗಿತ್ತು. ಬಿಜೆಪಿ ಸರ್ಕಾರ ಅವಧಿಯಲ್ಲಿ ಸಮಯದಲ್ಲಿ ಭೂಮಿಯನ್ನು ನೀಡಲು ಮುಂದಾಗಿತ್ತು. ಆದರೀಗ ಸಿದ್ದರಾಮಯ್ಯ ಸರ್ಕಾರ ಈ ಭೂಮಿಗೆ ತಡೆ ನೀಡಿದೆ.

ಇದೇ ವಿಚಾರವಾಗಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡರಿಂದ ಲಿಖಿತ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಕೃಷ್ಣಬೈರೇಗೌಡರು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಬಿಜೆಪಿಯಿಂದ ಮಂಜೂರಾಗಿದ್ದ ಗೋಮಾಳ ಭೂಮಿ ಮಂಜೂರಾತಿಗೆ ಕಾಂಗ್ರೆಸ್ ತಡೆ ನೀಡಿರುವುದಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More