ಉಚಿತ ವಿದ್ಯುತ್ ಯೋಜನೆ ಯಾರಿಗೆ ಖಚಿತ
ಬಾಡಿಗೆದಾರರು ಕರೆಂಟ್ ಬಿಲ್ ಕಟ್ಟಬೇಕಾ?
ಮನೆ ಮಾಲೀಕರಿಗೆ ಮಾತ್ರ ಗೃಹಜ್ಯೋತಿನಾ?
ಬೆಂಗಳೂರು: 5 ಗ್ಯಾರಂಟಿ ಯೋಜನೆ ಘೋಷಿಸಿರೋ ರಾಜ್ಯ ಸರ್ಕಾರ ಅದನ್ನ ಜಾರಿಗೊಳಿಸಲು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಗೃಹಜ್ಯೋತಿ ಯೋಜನೆಯೂ ಒಂದು. ಈ ಯೋಜನೆಯಡಿ ಯಾಱರಿಗೆ ಕರೆಂಟ್ ಬಿಲ್ ಉಚಿತ. ಮನೆ ಮಾಲೀಕರು ಫಲಾನುಭವಿಗಳಾದ್ರೆ ಬಾಡಿಗೆದಾರರು ಕರೆಂಟ್ ಬಿಲ್ ಕಟ್ಟಬೇಕಾ ಅನ್ನೋ ಪ್ರಶ್ನೆ ಸಂಚಲನ ಸೃಷ್ಟಿಸಿತ್ತು. ಈ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ಅವರೇ ಈಗ ಸ್ಪಷ್ಟನೆ ನೀಡಿದ್ದಾರೆ.
ಗೃಹಜ್ಯೋತಿ ಯೋಜನೆಯಲ್ಲಿ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸಿಗಲಿದೆ. ಆದರೆ, ವಾಣಿಜ್ಯ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾಱರು ಬಡವರು 200 ಯೂನಿಟ್ ಒಳಗೆ ವಿದ್ಯುತ್ ಬಳಸಿದ್ದಾರೆ ಅವರಿಗೆಲ್ಲ ಉಚಿತ ವಿದ್ಯುತ್ ಕೊಡುತ್ತೇವೆ. ಅವರು ಯಾರೂ ಬಿಲ್ ಕಟ್ಟೋ ಹಾಗಿಲ್ಲ ಎಂದಿದ್ದಾರೆ.
ಇನ್ನು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ಮೇಲೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪಾಪ.. ಬಿಜೆಪಿಯವರಿಗೆ ಏನೂ ಇಲ್ವಲ್ಲ. ಅವರಿಗೆ ಪ್ರಶ್ನೆ ಮಾಡಲು ಯಾವ ನೈತಿಕತೆ ಇದೆ. ಮೊಸರಲ್ಲಿ ಕಲ್ಲು ಹುಡುಕೋಕೆ ಹೊರಟಿದ್ದಾರೆ. ಜನವಿರೋಧಿ ಪಕ್ಷ ಬಿಜೆಪಿ. ಅಧಿಕಾರದಲ್ಲಿ ಇದ್ದಾಗ ಲೂಟಿ ಹೊಡೆದು ರಾಜ್ಯವನ್ನು ಹಾಳು ಮಾಡಿ ಬಿಟ್ಟರು. ಅವರು ನಮಗೆ ಪಾಠ ಮಾಡೋದಕ್ಕೆ ಬರ್ತಾರಾ? ಕೃಷಿ ಭಾಗ್ಯ ನಿಲ್ಸಿದವರು ಯಾರು? ಸೈಕಲ್ ನಿಲ್ಸಿದವರು ಯಾರು? ಇಂದಿರಾ ಕ್ಯಾಂಟೀನ್ ನಿಲ್ಲಿಸಿದರು. ಒಂದಾ ಎರಡಾ ಹೇಳೋದು ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಾಡಿಗೆದಾರರು ಕರೆಂಟ್ ಬಿಲ್ ಕಟ್ಟಬೇಕಾ? ಗೃಹಜ್ಯೋತಿ ಯೋಜನೆ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. #Newsfirstlive #Currentbill #Rentalhomes @siddaramaiah @DKShivakumar @INCKarnataka @BJP4Karnataka pic.twitter.com/72kP5H2ILk
— NewsFirst Kannada (@NewsFirstKan) June 6, 2023
ಉಚಿತ ವಿದ್ಯುತ್ ಯೋಜನೆ ಯಾರಿಗೆ ಖಚಿತ
ಬಾಡಿಗೆದಾರರು ಕರೆಂಟ್ ಬಿಲ್ ಕಟ್ಟಬೇಕಾ?
ಮನೆ ಮಾಲೀಕರಿಗೆ ಮಾತ್ರ ಗೃಹಜ್ಯೋತಿನಾ?
ಬೆಂಗಳೂರು: 5 ಗ್ಯಾರಂಟಿ ಯೋಜನೆ ಘೋಷಿಸಿರೋ ರಾಜ್ಯ ಸರ್ಕಾರ ಅದನ್ನ ಜಾರಿಗೊಳಿಸಲು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಗೃಹಜ್ಯೋತಿ ಯೋಜನೆಯೂ ಒಂದು. ಈ ಯೋಜನೆಯಡಿ ಯಾಱರಿಗೆ ಕರೆಂಟ್ ಬಿಲ್ ಉಚಿತ. ಮನೆ ಮಾಲೀಕರು ಫಲಾನುಭವಿಗಳಾದ್ರೆ ಬಾಡಿಗೆದಾರರು ಕರೆಂಟ್ ಬಿಲ್ ಕಟ್ಟಬೇಕಾ ಅನ್ನೋ ಪ್ರಶ್ನೆ ಸಂಚಲನ ಸೃಷ್ಟಿಸಿತ್ತು. ಈ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ಅವರೇ ಈಗ ಸ್ಪಷ್ಟನೆ ನೀಡಿದ್ದಾರೆ.
ಗೃಹಜ್ಯೋತಿ ಯೋಜನೆಯಲ್ಲಿ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸಿಗಲಿದೆ. ಆದರೆ, ವಾಣಿಜ್ಯ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾಱರು ಬಡವರು 200 ಯೂನಿಟ್ ಒಳಗೆ ವಿದ್ಯುತ್ ಬಳಸಿದ್ದಾರೆ ಅವರಿಗೆಲ್ಲ ಉಚಿತ ವಿದ್ಯುತ್ ಕೊಡುತ್ತೇವೆ. ಅವರು ಯಾರೂ ಬಿಲ್ ಕಟ್ಟೋ ಹಾಗಿಲ್ಲ ಎಂದಿದ್ದಾರೆ.
ಇನ್ನು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ಮೇಲೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪಾಪ.. ಬಿಜೆಪಿಯವರಿಗೆ ಏನೂ ಇಲ್ವಲ್ಲ. ಅವರಿಗೆ ಪ್ರಶ್ನೆ ಮಾಡಲು ಯಾವ ನೈತಿಕತೆ ಇದೆ. ಮೊಸರಲ್ಲಿ ಕಲ್ಲು ಹುಡುಕೋಕೆ ಹೊರಟಿದ್ದಾರೆ. ಜನವಿರೋಧಿ ಪಕ್ಷ ಬಿಜೆಪಿ. ಅಧಿಕಾರದಲ್ಲಿ ಇದ್ದಾಗ ಲೂಟಿ ಹೊಡೆದು ರಾಜ್ಯವನ್ನು ಹಾಳು ಮಾಡಿ ಬಿಟ್ಟರು. ಅವರು ನಮಗೆ ಪಾಠ ಮಾಡೋದಕ್ಕೆ ಬರ್ತಾರಾ? ಕೃಷಿ ಭಾಗ್ಯ ನಿಲ್ಸಿದವರು ಯಾರು? ಸೈಕಲ್ ನಿಲ್ಸಿದವರು ಯಾರು? ಇಂದಿರಾ ಕ್ಯಾಂಟೀನ್ ನಿಲ್ಲಿಸಿದರು. ಒಂದಾ ಎರಡಾ ಹೇಳೋದು ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಾಡಿಗೆದಾರರು ಕರೆಂಟ್ ಬಿಲ್ ಕಟ್ಟಬೇಕಾ? ಗೃಹಜ್ಯೋತಿ ಯೋಜನೆ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. #Newsfirstlive #Currentbill #Rentalhomes @siddaramaiah @DKShivakumar @INCKarnataka @BJP4Karnataka pic.twitter.com/72kP5H2ILk
— NewsFirst Kannada (@NewsFirstKan) June 6, 2023