ಕರ್ನಾಟಕ ಜನರಿಗೆ ದುಬಾರಿ ಕರೆಂಟ್ ಬಿಲ್ ಶಾಕ್..!
300 ರೂ. ಇದ್ದ ಕರೆಂಟ್ ಬಿಲ್ ದಿಢೀರ್ ಸಾವಿರಕ್ಕೇರಿಕೆ
ದುಬಾರಿ ಕರೆಂಟ್ ಬಿಲ್ ಬಗ್ಗೆ ಸಿಎಂ ಸಿದ್ದು ಏನಂದ್ರು..?
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಆದೇಶಿಸಿದೆ. ಈ ಪೈಕಿ ರಾಜ್ಯದ ಎಲ್ಲಾ ಮನೆಗಳಿಗೂ 200 ಯೂನಿಟ್ ಕರೆಂಟ್ ಫ್ರೀ ನೀಡುವ ಸ್ಕೀಮ್ ಗೃಹಜ್ಯೋತಿ ಒಂದು.
ಒಂದೆಡೆ ಮುಂದಿನ ತಿಂಗಳಿನಿಂದ 200 ಯೂನಿಟ್ ಒಳಗೆ ವಿದ್ಯುತ್ ಬಳಸೋ ಮನೆಗೆ ಎಲ್ಲರಿಗೂ ಫ್ರೀ ಎಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾವು ಬಾಡಿಗೆದಾರರು, ಮನೆ ಮಾಲೀಕರು ಎಂದು ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಎಲ್ಲರಿಗೆ ಉಚಿತ 200 ಯೂನಿಟ್ ಕರೆಂಟ್ ಕೊಡುತ್ತೇವೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಮುನ್ನವೇ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ಶಾಕ್ ಕೊಟ್ಟಿದೆ.
ಯೆಸ್, ಕಳೆದ ತಿಂಗಳು ಕೇವಲ 300 ರೂ. ಬಂದಿದ್ದ ಕರೆಂಟ್ ಬಿಲ್ ಈ ಬಾರಿ ಏಕಾಏಕಿ ಒಂದು ಸಾವಿರಕ್ಕೆ ಏರಿಕೆಯಾಗಿದೆ. 600 ರೂ. ಬಂದಿದ್ದ ಕರೆಂಟ್ ಬಿಲ್ 2 ಸಾವಿರ, 3 ಸಾವಿರ ಹೀಗೆ ಬೇಕಾಬಿಟ್ಟಿ ಆಗಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಿಲ್ ಪರಿಷ್ಕರಣೆ ಆದ್ದರಿಂದ ರೀಡರ್ ಸಮಸ್ಯೆ ಆಗಿದೆ. ಹೀಗಾಗಿ ತಾಂತ್ರಿಕ ದೋಷದಿಂದ ಬಿಲ್ ಹೆಚ್ಚು ಬಂದಿದೆ. ನಾವು ಇದನ್ನು ಕೂಡಲೇ ಸರಿ ಮಾಡುತ್ತೇವೆ. ಅಲ್ಲಿಯವರೆಗೂ ಯಾರು ಕರೆಂಟ್ ಬಿಲ್ ಕಟ್ಟಬೇಡಿ ಎಂದಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕೂಡ ದುಬಾರಿ ಕರೆಂಟ್ ಬಿಲ್ ಬಗ್ಗೆ ಮಾತಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಸರ್ಕಾರ ಪ್ರತೀ ವರ್ಷ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ವಿದ್ಯುತ್ ಬಿಲ್ ಪರಿಷ್ಕರಣೆ ಮಾಡುತ್ತದೆ. ಚುನಾವಣೆಯಿಂದ ಕೋಡ್ ಆಫ್ ಕಂಡಕ್ಟ್ ಇದ್ದ ಕಾರಣ ಈ ಬಾರಿ ಏಪ್ರಿಲ್ನಲ್ಲಿ ವಿದ್ಯುತ್ ಬಿಲ್ ಪರಿಷ್ಕರಣೆ ಮಾಡಲಾಗಲಿಲ್ಲ. ಈಗ ಕರೆಂಟ್ ಬಿಲ್ ಹೆಚ್ಚಳದ ಕುರಿತು ಆದೇಶ ಹೊರಡಿಸಲಾಗಿದೆ. ಇದು ಹಿಂದಿನಿಂದ ತಿಂಗಳಿನಿಂದಲೇ ಅನ್ವಯ ಆಗಲಿದೆ. ಹೀಗಾಗಿ ಕರೆಂಟ್ ಬಿಲ್ ಹೆಚ್ಚಾಗಿ ಬಂದಿದೆ ಅಷ್ಟೇ ಎಂದರು ಸಿಎಂ ಸಿದ್ದರಾಮಯ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕರ್ನಾಟಕ ಜನರಿಗೆ ದುಬಾರಿ ಕರೆಂಟ್ ಬಿಲ್ ಶಾಕ್..!
300 ರೂ. ಇದ್ದ ಕರೆಂಟ್ ಬಿಲ್ ದಿಢೀರ್ ಸಾವಿರಕ್ಕೇರಿಕೆ
ದುಬಾರಿ ಕರೆಂಟ್ ಬಿಲ್ ಬಗ್ಗೆ ಸಿಎಂ ಸಿದ್ದು ಏನಂದ್ರು..?
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಆದೇಶಿಸಿದೆ. ಈ ಪೈಕಿ ರಾಜ್ಯದ ಎಲ್ಲಾ ಮನೆಗಳಿಗೂ 200 ಯೂನಿಟ್ ಕರೆಂಟ್ ಫ್ರೀ ನೀಡುವ ಸ್ಕೀಮ್ ಗೃಹಜ್ಯೋತಿ ಒಂದು.
ಒಂದೆಡೆ ಮುಂದಿನ ತಿಂಗಳಿನಿಂದ 200 ಯೂನಿಟ್ ಒಳಗೆ ವಿದ್ಯುತ್ ಬಳಸೋ ಮನೆಗೆ ಎಲ್ಲರಿಗೂ ಫ್ರೀ ಎಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾವು ಬಾಡಿಗೆದಾರರು, ಮನೆ ಮಾಲೀಕರು ಎಂದು ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಎಲ್ಲರಿಗೆ ಉಚಿತ 200 ಯೂನಿಟ್ ಕರೆಂಟ್ ಕೊಡುತ್ತೇವೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಮುನ್ನವೇ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ಶಾಕ್ ಕೊಟ್ಟಿದೆ.
ಯೆಸ್, ಕಳೆದ ತಿಂಗಳು ಕೇವಲ 300 ರೂ. ಬಂದಿದ್ದ ಕರೆಂಟ್ ಬಿಲ್ ಈ ಬಾರಿ ಏಕಾಏಕಿ ಒಂದು ಸಾವಿರಕ್ಕೆ ಏರಿಕೆಯಾಗಿದೆ. 600 ರೂ. ಬಂದಿದ್ದ ಕರೆಂಟ್ ಬಿಲ್ 2 ಸಾವಿರ, 3 ಸಾವಿರ ಹೀಗೆ ಬೇಕಾಬಿಟ್ಟಿ ಆಗಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಿಲ್ ಪರಿಷ್ಕರಣೆ ಆದ್ದರಿಂದ ರೀಡರ್ ಸಮಸ್ಯೆ ಆಗಿದೆ. ಹೀಗಾಗಿ ತಾಂತ್ರಿಕ ದೋಷದಿಂದ ಬಿಲ್ ಹೆಚ್ಚು ಬಂದಿದೆ. ನಾವು ಇದನ್ನು ಕೂಡಲೇ ಸರಿ ಮಾಡುತ್ತೇವೆ. ಅಲ್ಲಿಯವರೆಗೂ ಯಾರು ಕರೆಂಟ್ ಬಿಲ್ ಕಟ್ಟಬೇಡಿ ಎಂದಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕೂಡ ದುಬಾರಿ ಕರೆಂಟ್ ಬಿಲ್ ಬಗ್ಗೆ ಮಾತಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಸರ್ಕಾರ ಪ್ರತೀ ವರ್ಷ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ವಿದ್ಯುತ್ ಬಿಲ್ ಪರಿಷ್ಕರಣೆ ಮಾಡುತ್ತದೆ. ಚುನಾವಣೆಯಿಂದ ಕೋಡ್ ಆಫ್ ಕಂಡಕ್ಟ್ ಇದ್ದ ಕಾರಣ ಈ ಬಾರಿ ಏಪ್ರಿಲ್ನಲ್ಲಿ ವಿದ್ಯುತ್ ಬಿಲ್ ಪರಿಷ್ಕರಣೆ ಮಾಡಲಾಗಲಿಲ್ಲ. ಈಗ ಕರೆಂಟ್ ಬಿಲ್ ಹೆಚ್ಚಳದ ಕುರಿತು ಆದೇಶ ಹೊರಡಿಸಲಾಗಿದೆ. ಇದು ಹಿಂದಿನಿಂದ ತಿಂಗಳಿನಿಂದಲೇ ಅನ್ವಯ ಆಗಲಿದೆ. ಹೀಗಾಗಿ ಕರೆಂಟ್ ಬಿಲ್ ಹೆಚ್ಚಾಗಿ ಬಂದಿದೆ ಅಷ್ಟೇ ಎಂದರು ಸಿಎಂ ಸಿದ್ದರಾಮಯ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ