newsfirstkannada.com

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲ್ಲ ಎಂದ ಕೇಂದ್ರ; ಕಾಂಗ್ರೆಸ್​​ ಸರ್ಕಾರದ ಮುಂದಿರೋ ಅವಕಾಶಗಳೇನು?

Share :

14-06-2023

    ಅನ್ನಭಾಗ್ಯ ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ದಿಢೀರ್​​ ಸುದ್ದಿಗೋಷ್ಠಿ!

    ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್​​

    ದುಡ್ಡು ಕೊಟ್ರೂ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲ್ಲ ಎಂದ ಕೇಂದ್ರ ಸರ್ಕಾರ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್​​ ಸರ್ಕಾರ ನೀಡಿದ್ದ ಐದು ಗ್ಯಾರಂಟಿಗಳನ್ನು ಅಧಿಕೃತವಾಗಿ ಜಾರಿ ಮಾಡಿದೆ. ಜುಲೈ 1ನೇ ತಾರೀಕಿನಿಂದಲೇ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​ ಹೊಂದಿರುವ ಎಲ್ಲಾ ಕುಟುಂಬಗಳಿಗೂ ತಲಾ 10 ಕೆಜಿ ಆಹಾರ ಧಾನ್ಯ ಪೂರೈಕೆ ಮಾಡಲಾಗುವುದು ಎಂದು ಘೋಷಿಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಕುರಿತು ಸುದ್ದಿಗೋಷ್ಠಿ ನಡೆಸಿದ್ದಾರೆ.

ಇನ್ನು, ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯನವರು, ಬಿಜೆಪಿ ಸರ್ಕಾರ 7 ಕೆಜಿ ಅಕ್ಕಿ ಕೊಡುವ ಕಡೆ 5 ಕೆಜಿ ಕೊಡುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಕೊಡುವುದಾಗಿ ಭರವಸೆ ನೀಡಿದ್ದೆವು. ಅಕ್ಕಿ ಸಂಗ್ರಹ ಇಲ್ಲದ ಕಾರಣ ಮುಂದಿನ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​​ದಾರರಿಗೆ ತಲಾ 10 ಕೆಜಿ ಆಹಾರ ಧಾನ್ಯ ವಿತರಿಸಲು ತೀರ್ಮಾನ ಮಾಡಿಕೊಂಡಿದ್ವಿ. ಅದಕ್ಕೆ ನಾವು ಕೇಳಿದಷ್ಟು ಅಕ್ಕಿಯನ್ನು ಕೇಂದ್ರೀಯ ಆಹಾರ ನಿಗಮದ ಡೆಪ್ಯುಟಿ ಜನರಲ್ ಮ್ಯಾನೇಜರ್ ಒಪ್ಪಿಕೊಂಡಿದ್ದರು. ಆದರೆ ಇದೀಗ ಈಗ ಅಕ್ಕಿ ಕೊಡಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಡವರಿಗೆ ಅಕ್ಕಿ ಕೊಟ್ಟರೆ ಕಾಂಗ್ರೆಸ್​​ಗೆ ಒಳ್ಳೇ ಹೆಸರು ಬಂದು ಬಿಡುತ್ತದೆ ಎಂದು ಬಿಜೆಪಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಅಕ್ಕಿ ಇಟ್ಟುಕೊಂಡು ಬಿಜೆಪಿ ಕೊಡಲ್ಲ ಎನ್ನುತ್ತಿದೆ. ನಾವು ದುಡ್ಡು ಕೊಟ್ಟರೂ ಕೊಡಲ್ಲ ಎನ್ನುತ್ತಿದೆ. ಇದು ಪಕ್ಕಾ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​​ ಸರ್ಕಾರದ ಮುಂದೆ ಇರುವ ಅವಕಾಶಗಳು ಏನು..?

  • ಕೇಂದ್ರ ಸರ್ಕಾರಕ್ಕೆ ಮತ್ತೆ ಮೊರೆ ಹೋಗುವುದು
  • ಇತರೆ ರಾಜ್ಯಗಳ ಸರ್ಕಾರದ ಜತೆ ಮಾತನಾಡುವುದು
  • ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡುವುದು
  • ಕಾಂಗ್ರೆಸ್ ಮುಂದೆ ಏನು ಮಾಡಬಹುದು
  • ಕೇಂದ್ರ ಸರ್ಕಾರ ಒಪ್ಪದಿದ್ರೆ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಬಹುದು
  • ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಬಹುದು
  • ಕೇಂದ್ರ, ರಾಜ್ಯ ಸರ್ಕಾರಗಳ ಕಿತ್ತಾಟ ಕೋರ್ಟ್ ಗೆ ಹೋಗಬಹುದು
  • ರಾಜ್ಯದಲ್ಲಿ ಕೇಂದ್ರದ ವಿರುದ್ಧ ಟ್ರೆಂಡ್ ಸೆಟ್ ಮಾಡಲು ಇದನ್ನ ಬಳಸಿಕೊಳ್ಳಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲ್ಲ ಎಂದ ಕೇಂದ್ರ; ಕಾಂಗ್ರೆಸ್​​ ಸರ್ಕಾರದ ಮುಂದಿರೋ ಅವಕಾಶಗಳೇನು?

https://newsfirstlive.com/wp-content/uploads/2023/06/Siddaramaiah-10.jpg

    ಅನ್ನಭಾಗ್ಯ ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ದಿಢೀರ್​​ ಸುದ್ದಿಗೋಷ್ಠಿ!

    ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್​​

    ದುಡ್ಡು ಕೊಟ್ರೂ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲ್ಲ ಎಂದ ಕೇಂದ್ರ ಸರ್ಕಾರ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್​​ ಸರ್ಕಾರ ನೀಡಿದ್ದ ಐದು ಗ್ಯಾರಂಟಿಗಳನ್ನು ಅಧಿಕೃತವಾಗಿ ಜಾರಿ ಮಾಡಿದೆ. ಜುಲೈ 1ನೇ ತಾರೀಕಿನಿಂದಲೇ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​ ಹೊಂದಿರುವ ಎಲ್ಲಾ ಕುಟುಂಬಗಳಿಗೂ ತಲಾ 10 ಕೆಜಿ ಆಹಾರ ಧಾನ್ಯ ಪೂರೈಕೆ ಮಾಡಲಾಗುವುದು ಎಂದು ಘೋಷಿಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಕುರಿತು ಸುದ್ದಿಗೋಷ್ಠಿ ನಡೆಸಿದ್ದಾರೆ.

ಇನ್ನು, ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯನವರು, ಬಿಜೆಪಿ ಸರ್ಕಾರ 7 ಕೆಜಿ ಅಕ್ಕಿ ಕೊಡುವ ಕಡೆ 5 ಕೆಜಿ ಕೊಡುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಕೊಡುವುದಾಗಿ ಭರವಸೆ ನೀಡಿದ್ದೆವು. ಅಕ್ಕಿ ಸಂಗ್ರಹ ಇಲ್ಲದ ಕಾರಣ ಮುಂದಿನ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​​ದಾರರಿಗೆ ತಲಾ 10 ಕೆಜಿ ಆಹಾರ ಧಾನ್ಯ ವಿತರಿಸಲು ತೀರ್ಮಾನ ಮಾಡಿಕೊಂಡಿದ್ವಿ. ಅದಕ್ಕೆ ನಾವು ಕೇಳಿದಷ್ಟು ಅಕ್ಕಿಯನ್ನು ಕೇಂದ್ರೀಯ ಆಹಾರ ನಿಗಮದ ಡೆಪ್ಯುಟಿ ಜನರಲ್ ಮ್ಯಾನೇಜರ್ ಒಪ್ಪಿಕೊಂಡಿದ್ದರು. ಆದರೆ ಇದೀಗ ಈಗ ಅಕ್ಕಿ ಕೊಡಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಡವರಿಗೆ ಅಕ್ಕಿ ಕೊಟ್ಟರೆ ಕಾಂಗ್ರೆಸ್​​ಗೆ ಒಳ್ಳೇ ಹೆಸರು ಬಂದು ಬಿಡುತ್ತದೆ ಎಂದು ಬಿಜೆಪಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಅಕ್ಕಿ ಇಟ್ಟುಕೊಂಡು ಬಿಜೆಪಿ ಕೊಡಲ್ಲ ಎನ್ನುತ್ತಿದೆ. ನಾವು ದುಡ್ಡು ಕೊಟ್ಟರೂ ಕೊಡಲ್ಲ ಎನ್ನುತ್ತಿದೆ. ಇದು ಪಕ್ಕಾ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​​ ಸರ್ಕಾರದ ಮುಂದೆ ಇರುವ ಅವಕಾಶಗಳು ಏನು..?

  • ಕೇಂದ್ರ ಸರ್ಕಾರಕ್ಕೆ ಮತ್ತೆ ಮೊರೆ ಹೋಗುವುದು
  • ಇತರೆ ರಾಜ್ಯಗಳ ಸರ್ಕಾರದ ಜತೆ ಮಾತನಾಡುವುದು
  • ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡುವುದು
  • ಕಾಂಗ್ರೆಸ್ ಮುಂದೆ ಏನು ಮಾಡಬಹುದು
  • ಕೇಂದ್ರ ಸರ್ಕಾರ ಒಪ್ಪದಿದ್ರೆ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಬಹುದು
  • ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಬಹುದು
  • ಕೇಂದ್ರ, ರಾಜ್ಯ ಸರ್ಕಾರಗಳ ಕಿತ್ತಾಟ ಕೋರ್ಟ್ ಗೆ ಹೋಗಬಹುದು
  • ರಾಜ್ಯದಲ್ಲಿ ಕೇಂದ್ರದ ವಿರುದ್ಧ ಟ್ರೆಂಡ್ ಸೆಟ್ ಮಾಡಲು ಇದನ್ನ ಬಳಸಿಕೊಳ್ಳಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More