newsfirstkannada.com

VIDEO: ನಾರಿಯರೇ ಎಚ್ಚರ, ಎಚ್ಚರ! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಹಣ ಪೀಕುವ ಖದೀಮರ ಹಾವಳಿ ಶುರು

Share :

29-06-2023

    ಮನೆ ಯಜಮಾನಿ ಅಕೌಂಟ್‌ಗೆ 2000 ರೂಪಾಯಿ ಹಾಕುವ ಗ್ಯಾರಂಟಿ

    ಸರ್ಕಾರ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಇನ್ನೂ ಅಪ್ಲಿಕೇಷನ್ ಬಿಟ್ಟಿಲ್ಲ

    ಬಳ್ಳಾರಿಯಲ್ಲಿ ಮನೆ ಮನೆಗೆ ತೆರಳಿ ಮಹಿಳೆಯರಿಂದ 150 ರೂ. ವಸೂಲಿ

ಬಳ್ಳಾರಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಮತದಾರರಿಗೆ ಕೊಟ್ಟ ಮಾತಿನಂತೆ ಒಂದೊಂದೇ ಗ್ಯಾರಂಟಿ ಯೋಜನೆಯನ್ನ ಜಾರಿಗೊಳಿಸಲು ಮುಂದಾಗಿದೆ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಶುರುವಾಯ್ತು. 200 ಯೂನಿಟ್ ಫ್ರೀ ಗೃಹಜ್ಯೋತಿ ಯೋಜನೆಗೂ ಅರ್ಜಿ ಹಾಕೋ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇನ್ನು ಮನೆ ಯಜಮಾನಿಯ ಅಕೌಂಟ್‌ಗೆ 2000 ರೂಪಾಯಿ ಹಾಕುವ ಗೃಹಲಕ್ಷ್ಮಿ ಯೋಜನೆಗೆ ತಯಾರಿ ನಡೆದಿದೆ. ಗೃಹಲಕ್ಷ್ಮಿಯ ಗ್ಯಾರಂಟಿ ಯೋಜನೆಗೆ ಇನ್ನೂ ಅಪ್ಲಿಕೇಷನ್ ಬಿಟ್ಟಿಲ್ಲ. ಆದ್ರೆ, ಅದಕ್ಕೂ ಮೊದಲೇ ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಭರ್ತಿ ಹೆಸರಲ್ಲಿ ಹಣ ವಸೂಲಿ ಮಾಡುವವರು ಹುಟ್ಟುಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ವಿವಿಧೆಡೆ ನೂರಾರು ಮಹಿಳೆಯರಿಂದ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್‌ಗಾಗಿ ಹಣ ಪೀಕಿದ ಖದೀಮನೊಬ್ಬ ಸಿಕ್ಕಿಬಿದ್ದಿದ್ದಾನೆ. ಇನ್ನೂ ಸರ್ಕಾರವೇ ಗೃಹಲಕ್ಷ್ಮಿ ಯೋಜನೆಗೆ ಅಪ್ಲಿಕೇಷನ್ ಬಿಟ್ಟಿಲ್ಲ. ಆಗಲೇ ಅಪ್ಲಿಕೇಷನ್ ಹಾಕ್ತೀವಿ ಅಂತಾ ಮನೆ ಮನೆಗೆ ತೆರಳಿ ಮಹಿಳೆಯರಿಂದ 150 ರೂಪಾಯಿ ವಸೂಲಿ ಮಾಡಲಾಗಿದೆ.

ದಿಶಾ ಒನ್ ಹೆಸರಲ್ಲಿ ಖಾಸಗಿ ಏಜೆನ್ಸಿಯೊಂದು ಗೃಹಲಕ್ಷ್ಮಿ, ಗೃಹ ಜ್ಯೋತಿ ಸೇರಿದಂತೆ ಇತರೆ ಸ್ಕೀಮ್‌ನ ಫಾರಂ ತುಂಬುತ್ತೇವೆಂದು ಹಣ ಸಂಗ್ರಹ ಮಾಡಿದೆ. ಒಂದು ಫಾರಂ ತುಂಬಿಕೊಡಲು‌ 150 ರೂಪಾಯಿ ಹಣ ಕಲೆಕ್ಟ್ ಮಾಡಿರೋದು ಬೆಳಕಿಗೆ ಬಂದಿದೆ. ಬಳ್ಳಾರಿಯ ವಿವಿಧೆಡೆ ಮಹಿಳೆಯರಿಂದ ಖಾಸಗಿ ಏಜೆನ್ಸಿ ಹಣ ವಸೂಲಿ‌ ಮಾಡಿದ್ದು ಬೆಳಕಿಗೆ ಬಂದಿದ್ದು, ಖಾಸಗಿ ಏಜೆನ್ಸಿ ಅವರನ್ನ ಸ್ಥಳೀಯರು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನಗೆ ಅರ್ಜಿ ಹಾಕುವ ಹೆಸರಲ್ಲಿ ಹಣ ಪೀಕಿದವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ನಾರಿಯರೇ ಎಚ್ಚರ, ಎಚ್ಚರ! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಹಣ ಪೀಕುವ ಖದೀಮರ ಹಾವಳಿ ಶುರು

https://newsfirstlive.com/wp-content/uploads/2023/06/Gruhalakshmi-Scheme.jpg

    ಮನೆ ಯಜಮಾನಿ ಅಕೌಂಟ್‌ಗೆ 2000 ರೂಪಾಯಿ ಹಾಕುವ ಗ್ಯಾರಂಟಿ

    ಸರ್ಕಾರ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಇನ್ನೂ ಅಪ್ಲಿಕೇಷನ್ ಬಿಟ್ಟಿಲ್ಲ

    ಬಳ್ಳಾರಿಯಲ್ಲಿ ಮನೆ ಮನೆಗೆ ತೆರಳಿ ಮಹಿಳೆಯರಿಂದ 150 ರೂ. ವಸೂಲಿ

ಬಳ್ಳಾರಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಮತದಾರರಿಗೆ ಕೊಟ್ಟ ಮಾತಿನಂತೆ ಒಂದೊಂದೇ ಗ್ಯಾರಂಟಿ ಯೋಜನೆಯನ್ನ ಜಾರಿಗೊಳಿಸಲು ಮುಂದಾಗಿದೆ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಶುರುವಾಯ್ತು. 200 ಯೂನಿಟ್ ಫ್ರೀ ಗೃಹಜ್ಯೋತಿ ಯೋಜನೆಗೂ ಅರ್ಜಿ ಹಾಕೋ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇನ್ನು ಮನೆ ಯಜಮಾನಿಯ ಅಕೌಂಟ್‌ಗೆ 2000 ರೂಪಾಯಿ ಹಾಕುವ ಗೃಹಲಕ್ಷ್ಮಿ ಯೋಜನೆಗೆ ತಯಾರಿ ನಡೆದಿದೆ. ಗೃಹಲಕ್ಷ್ಮಿಯ ಗ್ಯಾರಂಟಿ ಯೋಜನೆಗೆ ಇನ್ನೂ ಅಪ್ಲಿಕೇಷನ್ ಬಿಟ್ಟಿಲ್ಲ. ಆದ್ರೆ, ಅದಕ್ಕೂ ಮೊದಲೇ ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಭರ್ತಿ ಹೆಸರಲ್ಲಿ ಹಣ ವಸೂಲಿ ಮಾಡುವವರು ಹುಟ್ಟುಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ವಿವಿಧೆಡೆ ನೂರಾರು ಮಹಿಳೆಯರಿಂದ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್‌ಗಾಗಿ ಹಣ ಪೀಕಿದ ಖದೀಮನೊಬ್ಬ ಸಿಕ್ಕಿಬಿದ್ದಿದ್ದಾನೆ. ಇನ್ನೂ ಸರ್ಕಾರವೇ ಗೃಹಲಕ್ಷ್ಮಿ ಯೋಜನೆಗೆ ಅಪ್ಲಿಕೇಷನ್ ಬಿಟ್ಟಿಲ್ಲ. ಆಗಲೇ ಅಪ್ಲಿಕೇಷನ್ ಹಾಕ್ತೀವಿ ಅಂತಾ ಮನೆ ಮನೆಗೆ ತೆರಳಿ ಮಹಿಳೆಯರಿಂದ 150 ರೂಪಾಯಿ ವಸೂಲಿ ಮಾಡಲಾಗಿದೆ.

ದಿಶಾ ಒನ್ ಹೆಸರಲ್ಲಿ ಖಾಸಗಿ ಏಜೆನ್ಸಿಯೊಂದು ಗೃಹಲಕ್ಷ್ಮಿ, ಗೃಹ ಜ್ಯೋತಿ ಸೇರಿದಂತೆ ಇತರೆ ಸ್ಕೀಮ್‌ನ ಫಾರಂ ತುಂಬುತ್ತೇವೆಂದು ಹಣ ಸಂಗ್ರಹ ಮಾಡಿದೆ. ಒಂದು ಫಾರಂ ತುಂಬಿಕೊಡಲು‌ 150 ರೂಪಾಯಿ ಹಣ ಕಲೆಕ್ಟ್ ಮಾಡಿರೋದು ಬೆಳಕಿಗೆ ಬಂದಿದೆ. ಬಳ್ಳಾರಿಯ ವಿವಿಧೆಡೆ ಮಹಿಳೆಯರಿಂದ ಖಾಸಗಿ ಏಜೆನ್ಸಿ ಹಣ ವಸೂಲಿ‌ ಮಾಡಿದ್ದು ಬೆಳಕಿಗೆ ಬಂದಿದ್ದು, ಖಾಸಗಿ ಏಜೆನ್ಸಿ ಅವರನ್ನ ಸ್ಥಳೀಯರು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನಗೆ ಅರ್ಜಿ ಹಾಕುವ ಹೆಸರಲ್ಲಿ ಹಣ ಪೀಕಿದವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More