ಮನರಂಜನೆಯ ಸ್ಪೆಷಲ್ ಧಮಾಕ ನೀಡುತ್ತಿದೆ ರಾಮಾಚಾರಿ
ಚಾರುವಿನ ಮನವೊಲಿಕೆ ಪ್ರಯತ್ನಕ್ಕೆ ತಣ್ಣೀರೆರಚಿದ ಪತಿ!
ಥ್ರಿಲ್ಲಿಂಗ್ ಜೊತೆಗೆ ಹೊಸ ಟ್ವಿಸ್ಟ್ನೊಂದಿಗೆ ಬರ್ತಿದೆ ಸೀರಿಯಲ್
ಕಿರುತೆರೆಯ ನೆಚ್ಚಿನ ಧಾರಾವಾಹಿಗಳಲ್ಲಿ ರಾಮಾಚಾರಿ ಟಾಪ್ ಲಿಸ್ಟ್ನಲ್ಲಿ ಹೊರ ಹೊಮ್ಮಲಿದೆ. ಈ ಧಾರಾವಾಹಿ ಎಲ್ಲಾ ಕತೆಗಿಂತ ತುಂಬಾನೇ ಭಿನ್ನ ವಿಭಿನ್ನವಾಗಿದೆ. ಮೊದಲಿನಿಂದಲೂ ಕೂಡ ರಾಮಾಚಾರಿ ಕಥೆ ಸಿಕ್ಕಾಪಟ್ಟೆ ಡಿಫ್ರೆಂಟ್ ಆಗಿ ಮೂಡಿ ಬರ್ತಿದೆ. ಸದ್ಯದ ಕತೆ ವೀಕ್ಷಕರಿಗೆ ಬಲು ಇಷ್ಟವಾಗ್ತಿದೆ. ರಾಮಾಚಾರಿಗೋಸ್ಕರ ಚಾರು ತನ್ನ ಹಳೇ ಸ್ಟೈಲ್ನ ಬಿಟ್ಟು ಒಬ್ಬ ಒಳ್ಳೆ ಗೃಹಿಣಿಯಾಗಿ ನಾರಾಯಣ ಆಚಾರ್ ಮನೆಯ ಸೊಸೆಯಾಗಿ ನಡೆದುಕೊಳ್ಳುತ್ತಿದ್ದಾಳೆ.
ಇದನ್ನು ಓದಿ: PHOTOS: ಕನಸಿನ ಮನೆಗೆ ಬಲಗಾಲಿಟ್ಟ ನಾಗಿಣಿ ಸೀರಿಯಲ್ ನಟಿ ನಮ್ರತಾ ಗೌಡ; ಯಾರ್ ಯಾರು ಬಂದಿದ್ರು?
ಚಾರು ಒಳ್ಳೆ ರೀತಿಯಲ್ಲಿ ಬದಲಾಗಿರೋದಾಗಲಿ, ರಾಮಾಚಾರಿಯನ್ನ ಮದುವೆ ಆಗಿರೋದಾಗಲಿ, ಚಾರು ಮನೆಯಲ್ಲಿರೋದಾಗಲಿ, ಇದ್ಯಾವುದೋ ವೈಶಾಖಳಗೆ ಸುತರಾಮ್ ಇಷ್ಟ ಆಗ್ತಿಲ್ಲ. ಚಾರುಳನ್ನು ಮನೆಯವರ ಮುಂದೆ ಕೆಟ್ಟವಳಾಗಿಸೋಕೆ ವೈಶಾಖ ಶತಾಯ-ಗತಾಯ ಪ್ರಯತ್ನ ನಡೆಸುತ್ತಿದ್ದಾಳೆ. ಈ ಪ್ರಯತ್ನದಲ್ಲಿ ಮೊನ್ನೆಯಷ್ಟೇ ವೈಶಾಖಗೆ ಗೆಲುವು ಸಿಕ್ಕಿದೆ. ಇವಳ ಮಾತು ಕೇಳಿ ಚಾರು ತನಗೆ ಅರಿವೇ ಇಲ್ಲದೆ ತಪ್ಪು ಮಾಡಿದ್ದಾಳೆ. ರಾಮಾಚಾರಿಯನ್ನ ಗೆಲ್ಲೋದಕ್ಕೆ ನಾರಾಯಣ್ ಆಚಾರ್ ಅವರ ಧ್ವನಿಯಲ್ಲಿ ರಾಮಾಚಾರಿ ಹತ್ತಿರ ಒಳ್ಳೆ ರೀತಿಯಲ್ಲಿ ಮಾತಾಡಿದ್ದಾಳೆ.
‘ಮಗನೇ ನಾನು ನಿಮ್ಮಿಬ್ಬರನ್ನು ಒಪ್ಕೊಂಡಿದ್ದೀನಿ. ಈ ವಿಷಯದಲ್ಲಿ ನಿನ್ನದೇನೂ ತಪ್ಪಿಲ್ಲ ಅನ್ನೋದು ನನಗೆ ಅರಿವಾಗಿದೆ. ನೀವಿಬ್ಬರು ಈ ಮನೆಯಲ್ಲೇ ಇದ್ದು ಸುಖ ಜೀವನ ನೆಡೆಸಿ ಅಂತ ನಾರಾಯಣ್ ಅವರ ಧ್ವನಿಯ ರೀತಿಯಲ್ಲೇ ಮಾತಾಡಿದ್ದಾಳೆ ಚಾರು’. ಈ ಕುತಂತ್ರದ ಐಡಿಯಾ ಮಾತ್ಯಾರದು ಇಲ್ಲಾ ಇದು ವೈಶಾಖಾಳ. ಈ ವೈಶಾಖ ಚಾರುಳ ತಲೆಗೆ ಈ ಐಡಿಯನಾ ತುಂಬಿ ಆಕೆಯ ಕೈಯಲ್ಲೇ ಈ ಕೆಲಸ ಮಾಡಿಸಿದ್ದಾಳೆ. ಒಟ್ಟಿನಲ್ಲಿ ಈ ವೈಶಾಖಾಳಿಂದ ಚಾರು ರಾಮಾಚಾರಿ ದೂರ ದೂರ ಆಗಿದ್ದಾರೆ. ಚಾರು ಸಂಸರಕ್ಕೆ ಹುಳಿ ಹಿಂಡಿದ್ದಾಳೆ ವೈಶಾಖ. ಈಗ ಚಾರು ರಾಮಾಚಾರಿಯನ್ನ ಹೇಗೆ ನಂಬಿಸುತ್ತಾಳೆ ಅನ್ನೋದು ಮುಂಬರೋ ಎಪಿಸೋಡ್ಗಳಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮನರಂಜನೆಯ ಸ್ಪೆಷಲ್ ಧಮಾಕ ನೀಡುತ್ತಿದೆ ರಾಮಾಚಾರಿ
ಚಾರುವಿನ ಮನವೊಲಿಕೆ ಪ್ರಯತ್ನಕ್ಕೆ ತಣ್ಣೀರೆರಚಿದ ಪತಿ!
ಥ್ರಿಲ್ಲಿಂಗ್ ಜೊತೆಗೆ ಹೊಸ ಟ್ವಿಸ್ಟ್ನೊಂದಿಗೆ ಬರ್ತಿದೆ ಸೀರಿಯಲ್
ಕಿರುತೆರೆಯ ನೆಚ್ಚಿನ ಧಾರಾವಾಹಿಗಳಲ್ಲಿ ರಾಮಾಚಾರಿ ಟಾಪ್ ಲಿಸ್ಟ್ನಲ್ಲಿ ಹೊರ ಹೊಮ್ಮಲಿದೆ. ಈ ಧಾರಾವಾಹಿ ಎಲ್ಲಾ ಕತೆಗಿಂತ ತುಂಬಾನೇ ಭಿನ್ನ ವಿಭಿನ್ನವಾಗಿದೆ. ಮೊದಲಿನಿಂದಲೂ ಕೂಡ ರಾಮಾಚಾರಿ ಕಥೆ ಸಿಕ್ಕಾಪಟ್ಟೆ ಡಿಫ್ರೆಂಟ್ ಆಗಿ ಮೂಡಿ ಬರ್ತಿದೆ. ಸದ್ಯದ ಕತೆ ವೀಕ್ಷಕರಿಗೆ ಬಲು ಇಷ್ಟವಾಗ್ತಿದೆ. ರಾಮಾಚಾರಿಗೋಸ್ಕರ ಚಾರು ತನ್ನ ಹಳೇ ಸ್ಟೈಲ್ನ ಬಿಟ್ಟು ಒಬ್ಬ ಒಳ್ಳೆ ಗೃಹಿಣಿಯಾಗಿ ನಾರಾಯಣ ಆಚಾರ್ ಮನೆಯ ಸೊಸೆಯಾಗಿ ನಡೆದುಕೊಳ್ಳುತ್ತಿದ್ದಾಳೆ.
ಇದನ್ನು ಓದಿ: PHOTOS: ಕನಸಿನ ಮನೆಗೆ ಬಲಗಾಲಿಟ್ಟ ನಾಗಿಣಿ ಸೀರಿಯಲ್ ನಟಿ ನಮ್ರತಾ ಗೌಡ; ಯಾರ್ ಯಾರು ಬಂದಿದ್ರು?
ಚಾರು ಒಳ್ಳೆ ರೀತಿಯಲ್ಲಿ ಬದಲಾಗಿರೋದಾಗಲಿ, ರಾಮಾಚಾರಿಯನ್ನ ಮದುವೆ ಆಗಿರೋದಾಗಲಿ, ಚಾರು ಮನೆಯಲ್ಲಿರೋದಾಗಲಿ, ಇದ್ಯಾವುದೋ ವೈಶಾಖಳಗೆ ಸುತರಾಮ್ ಇಷ್ಟ ಆಗ್ತಿಲ್ಲ. ಚಾರುಳನ್ನು ಮನೆಯವರ ಮುಂದೆ ಕೆಟ್ಟವಳಾಗಿಸೋಕೆ ವೈಶಾಖ ಶತಾಯ-ಗತಾಯ ಪ್ರಯತ್ನ ನಡೆಸುತ್ತಿದ್ದಾಳೆ. ಈ ಪ್ರಯತ್ನದಲ್ಲಿ ಮೊನ್ನೆಯಷ್ಟೇ ವೈಶಾಖಗೆ ಗೆಲುವು ಸಿಕ್ಕಿದೆ. ಇವಳ ಮಾತು ಕೇಳಿ ಚಾರು ತನಗೆ ಅರಿವೇ ಇಲ್ಲದೆ ತಪ್ಪು ಮಾಡಿದ್ದಾಳೆ. ರಾಮಾಚಾರಿಯನ್ನ ಗೆಲ್ಲೋದಕ್ಕೆ ನಾರಾಯಣ್ ಆಚಾರ್ ಅವರ ಧ್ವನಿಯಲ್ಲಿ ರಾಮಾಚಾರಿ ಹತ್ತಿರ ಒಳ್ಳೆ ರೀತಿಯಲ್ಲಿ ಮಾತಾಡಿದ್ದಾಳೆ.
‘ಮಗನೇ ನಾನು ನಿಮ್ಮಿಬ್ಬರನ್ನು ಒಪ್ಕೊಂಡಿದ್ದೀನಿ. ಈ ವಿಷಯದಲ್ಲಿ ನಿನ್ನದೇನೂ ತಪ್ಪಿಲ್ಲ ಅನ್ನೋದು ನನಗೆ ಅರಿವಾಗಿದೆ. ನೀವಿಬ್ಬರು ಈ ಮನೆಯಲ್ಲೇ ಇದ್ದು ಸುಖ ಜೀವನ ನೆಡೆಸಿ ಅಂತ ನಾರಾಯಣ್ ಅವರ ಧ್ವನಿಯ ರೀತಿಯಲ್ಲೇ ಮಾತಾಡಿದ್ದಾಳೆ ಚಾರು’. ಈ ಕುತಂತ್ರದ ಐಡಿಯಾ ಮಾತ್ಯಾರದು ಇಲ್ಲಾ ಇದು ವೈಶಾಖಾಳ. ಈ ವೈಶಾಖ ಚಾರುಳ ತಲೆಗೆ ಈ ಐಡಿಯನಾ ತುಂಬಿ ಆಕೆಯ ಕೈಯಲ್ಲೇ ಈ ಕೆಲಸ ಮಾಡಿಸಿದ್ದಾಳೆ. ಒಟ್ಟಿನಲ್ಲಿ ಈ ವೈಶಾಖಾಳಿಂದ ಚಾರು ರಾಮಾಚಾರಿ ದೂರ ದೂರ ಆಗಿದ್ದಾರೆ. ಚಾರು ಸಂಸರಕ್ಕೆ ಹುಳಿ ಹಿಂಡಿದ್ದಾಳೆ ವೈಶಾಖ. ಈಗ ಚಾರು ರಾಮಾಚಾರಿಯನ್ನ ಹೇಗೆ ನಂಬಿಸುತ್ತಾಳೆ ಅನ್ನೋದು ಮುಂಬರೋ ಎಪಿಸೋಡ್ಗಳಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ