newsfirstkannada.com

ಆಸ್ಟ್ರೇಲಿಯಾ ವಿರುದ್ಧ ಸೋತದ್ದಕ್ಕೆ ಉದ್ಯೋಗಿಗಳಿಗೆ ರಜೆ! ಬೇಸರ ನಿವಾರಿಸಿಕೊಳ್ಳಲು ಬಾಸ್​ ತೆಗೆದುಕೊಂಡ್ರು ಈ ನಿರ್ಧಾರ

Share :

21-11-2023

    ಉದ್ಯೋಗಿಗಳಿಗಾಗಿ ಒಂದು ದಿನದ ವಿಶ್ರಾಂತಿಯ ರಜೆ

    ಬಾಸ್​ ನಿರ್ಧಾರಕ್ಕೆ ಫಿದಾ ಆದ ಉದ್ಯೋಗಿಗಳು!

    ಆಸೀಸ್​ ವಿರುದ್ಧ ಸೋತದ್ದಕ್ಕೆ ಉದ್ಯೋಗಿಗಳಿಗೆ ರಜೆ

ವಿಶ್ವಕಪ್​ ಪಂದ್ಯದ ಸೋಲನ್ನು ನಿವಾರಿಸಿಕೊಳ್ಳಲು ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದು ದಿನ ರಜೆಯನ್ನು ನೀಡಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಗುರುಗ್ರಾಮ್​ ಮೂಲದ ಕಂಪನಿ ತನ್ನ ಉದ್ಯೋಗಿಗಳಿಗಾಗಿ ಒಂದು ದಿನದ ವಿಶ್ರಾಂತಿ ರಜೆಯನ್ನು ನೀಡಿದೆ.

ನವೆಂಬರ್​ 19ರಂದು ಆದಿತ್ಯವಾರದಂದು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ಫೈನಲ್​ ಪಂದ್ಯ ಏರ್ಪಡಿಸಲಾಗಿತ್ತು. ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ನಡೆಸಲಾಗಿತ್ತು. ಆದರೆ ಟೀಂ ಇಂಡಿಯಾದ ನೀಡಿದ 240 ರನ್​ಗಳ ಸಾಧಾರಣ ಸವಾಲನ್ನು ಆಸೀಸ್​ ಸುಲಭವಾಗಿ ಸ್ವೀಕರಿಸಿ ವಿಶ್ವಕಪ್​ ಗೆದ್ದಿದೆ. ಈ ವಿಚಾರ ಭಾರತೀಯ ಕ್ರಿಕೆಟ್​​​ ಫ್ಯಾನ್ಸ್​ಗೆ ಬೇಸರ ತರಿಸಿದೆ.

 

ಇದನ್ನು ಓದಿ: ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ಕಣ್ಣೀರು ಸುರಿಸಿದ್ದನ್ನು ಕಂಡು ಹೃದಯಾಘಾತ; ಸಾವನ್ನಪ್ಪಿದ ಅಪ್ಪಟ ಅಭಿಮಾನಿ

ಅದರಂತೆಯೇ ಗುರುಗ್ರಾಮ್​ನ ಮಾರ್ಕೆಟಿಂಗ್​​ ಮೂವ್ಸ್​ ಏಜೆನ್ಸಿಯ ಉದ್ಯೋಗಿ ದೀಕ್ಷಾ ಗುಪ್ತಾ ಟೀಂ ಇಂಡಿಯಾ ವಿಶ್ವಕಪ್​ ಸೋತ ಬೆನ್ನಲ್ಲೇ ಈ ಬೇಸರವನ್ನು ನಿವಾರಿಸಿಕೊಳ್ಳಲು ಒಂದು ದಿನದ ರಜೆಯನ್ನು ನೀಡಿರುವ ಬಗ್ಗೆ ಲಿಂಕ್ಡ್​ ಇನ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಸದ್ಯ ಅವರು ಹಂಚಿರುವ ಪೋಸ್ಟ್​ ವೈರಲ್​ ಆಗಿದೆ.

ಸದ್ಯ ದೀಕ್ಷಾ ಹಂಚಿಕೊಂಡಿರುವ ಫೋಸ್ಟ್​ ಕಂಡು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಬಗೆ ಬಗೆ ಕಾಮೆಂಟ್​​ ಬರೆದು ಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆಸ್ಟ್ರೇಲಿಯಾ ವಿರುದ್ಧ ಸೋತದ್ದಕ್ಕೆ ಉದ್ಯೋಗಿಗಳಿಗೆ ರಜೆ! ಬೇಸರ ನಿವಾರಿಸಿಕೊಳ್ಳಲು ಬಾಸ್​ ತೆಗೆದುಕೊಂಡ್ರು ಈ ನಿರ್ಧಾರ

https://newsfirstlive.com/wp-content/uploads/2023/11/ROhit.jpg

    ಉದ್ಯೋಗಿಗಳಿಗಾಗಿ ಒಂದು ದಿನದ ವಿಶ್ರಾಂತಿಯ ರಜೆ

    ಬಾಸ್​ ನಿರ್ಧಾರಕ್ಕೆ ಫಿದಾ ಆದ ಉದ್ಯೋಗಿಗಳು!

    ಆಸೀಸ್​ ವಿರುದ್ಧ ಸೋತದ್ದಕ್ಕೆ ಉದ್ಯೋಗಿಗಳಿಗೆ ರಜೆ

ವಿಶ್ವಕಪ್​ ಪಂದ್ಯದ ಸೋಲನ್ನು ನಿವಾರಿಸಿಕೊಳ್ಳಲು ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದು ದಿನ ರಜೆಯನ್ನು ನೀಡಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಗುರುಗ್ರಾಮ್​ ಮೂಲದ ಕಂಪನಿ ತನ್ನ ಉದ್ಯೋಗಿಗಳಿಗಾಗಿ ಒಂದು ದಿನದ ವಿಶ್ರಾಂತಿ ರಜೆಯನ್ನು ನೀಡಿದೆ.

ನವೆಂಬರ್​ 19ರಂದು ಆದಿತ್ಯವಾರದಂದು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ಫೈನಲ್​ ಪಂದ್ಯ ಏರ್ಪಡಿಸಲಾಗಿತ್ತು. ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ನಡೆಸಲಾಗಿತ್ತು. ಆದರೆ ಟೀಂ ಇಂಡಿಯಾದ ನೀಡಿದ 240 ರನ್​ಗಳ ಸಾಧಾರಣ ಸವಾಲನ್ನು ಆಸೀಸ್​ ಸುಲಭವಾಗಿ ಸ್ವೀಕರಿಸಿ ವಿಶ್ವಕಪ್​ ಗೆದ್ದಿದೆ. ಈ ವಿಚಾರ ಭಾರತೀಯ ಕ್ರಿಕೆಟ್​​​ ಫ್ಯಾನ್ಸ್​ಗೆ ಬೇಸರ ತರಿಸಿದೆ.

 

ಇದನ್ನು ಓದಿ: ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ಕಣ್ಣೀರು ಸುರಿಸಿದ್ದನ್ನು ಕಂಡು ಹೃದಯಾಘಾತ; ಸಾವನ್ನಪ್ಪಿದ ಅಪ್ಪಟ ಅಭಿಮಾನಿ

ಅದರಂತೆಯೇ ಗುರುಗ್ರಾಮ್​ನ ಮಾರ್ಕೆಟಿಂಗ್​​ ಮೂವ್ಸ್​ ಏಜೆನ್ಸಿಯ ಉದ್ಯೋಗಿ ದೀಕ್ಷಾ ಗುಪ್ತಾ ಟೀಂ ಇಂಡಿಯಾ ವಿಶ್ವಕಪ್​ ಸೋತ ಬೆನ್ನಲ್ಲೇ ಈ ಬೇಸರವನ್ನು ನಿವಾರಿಸಿಕೊಳ್ಳಲು ಒಂದು ದಿನದ ರಜೆಯನ್ನು ನೀಡಿರುವ ಬಗ್ಗೆ ಲಿಂಕ್ಡ್​ ಇನ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಸದ್ಯ ಅವರು ಹಂಚಿರುವ ಪೋಸ್ಟ್​ ವೈರಲ್​ ಆಗಿದೆ.

ಸದ್ಯ ದೀಕ್ಷಾ ಹಂಚಿಕೊಂಡಿರುವ ಫೋಸ್ಟ್​ ಕಂಡು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಬಗೆ ಬಗೆ ಕಾಮೆಂಟ್​​ ಬರೆದು ಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More