newsfirstkannada.com

ದೇಶದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಹೊಸ ರಣತಂತ್ರ.. ವರ್ಕೌಟ್ ಆಗುತ್ತಾ ಕೈಕಲಿಗಳ ಮೆಗಾ ಪ್ಲಾನ್..?

Share :

27-06-2023

    ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಹಾ ನಿರ್ಧಾರಕೈಗೊಂಡ ಕಾಂಗ್ರೆಸ್ ಪಕ್ಷ

    ಲೋಕಸಭೆ, ಇತರೆ ರಾಜ್ಯ ವಿಧಾನಸಭೆ ಎಲೆಕ್ಷನ್​ಗೆ ಸಿದ್ದರಾಮಯ್ಯ ಫೇಸ್​​

    ಸಿದ್ದರಾಮಯ್ಯರ ಜನಪ್ರಿಯತೆ ಎನ್​ಕ್ಯಾಶ್ ಮಾಡಿಕೊಳ್ಳಲು ‘ಕೈ’ ರಣತಂತ್ರ!

ಸಿಎಂ ಸಿದ್ದರಾಮಯ್ಯರನ್ನ ದೇಶವ್ಯಾಪಿ ಸ್ಟಾರ್‌ ಕ್ಯಾಂಪೇನರ್‌ ಆಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಪ್ಲಾನ್‌ ಮಾಡಿದೆ. ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯಮ ಈ ಬಗ್ಗೆ ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಮತ್ತು ಬೇರೆ ರಾಜ್ಯಗಳ ವಿಧಾನಸಭೆಯಲ್ಲೂ ಸಿದ್ದರಾಮಯ್ಯ ಇಮೇಜ್‌ ಬಳಕೆಗೆ ಹೈಕಮಾಂಡ್​​​ ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅಹಿಂದ ವರ್ಗಗಳ ಜನಪ್ರಿಯ ನಾಯಕ. ರಾಜ್ಯದ ಮಾಸ್ ಲೀಡರ್​.. ಸೈದ್ಧಾಂತಿಕವಾಗಿ ಬದ್ಧ ಸಿದ್ದು, ಈ ವಿಚಾರದಲ್ಲಿ ರಾಜೀ ಇಲ್ಲದ ರಾಜಕೀಯ ನೇತಾರ. ಸದ್ಯ, ಪ್ರಧಾನಿ ಮೋದಿಯನ್ನೂ ಎದುರಿಸುವ ಎದೆಗಾರಿಕೆ ಇರೋದು ಇದೇ ಸಿದ್ದರಾಮಯ್ಯರಿಗೆ. ಕಳಂಕ ರಹಿತ ಅನ್ನರಾಮಯ್ಯ, ಮುಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಬಹುಬೇಡಿಕೆ ಬಂದು ಬಿಟ್ಟಿದೆ.

ಸಿದ್ದು ಜನಪ್ರಿಯತೆ ಎನ್​ಕ್ಯಾಶ್ ಮಾಡಿಕೊಳ್ಳಲು ‘ಕೈ’ ರಣತಂತ್ರ!

ಡೆಲ್ಲಿಯಿಂದ ಬಲಿಷ್ಠ ಸೇನೆಯೊಂದಿಗೆ ಲಗ್ಗೆಯಿಟ್ಟ ಮೋದಿ ಟೀಮ್​ಗೆ ಸೋಲಿನ ರುಚಿ ಉಣಿಸಿದ್ದು ಅಹಿಂದರಾಮಯ್ಯ. ಡಬಲ್​ ಎಂಜಿನ್​, ಹಿಂದುತ್ವದ ಕಾರ್ಡ್​, ಮೋದಿ ಫೇಸ್​ ಎಲ್ಲವೂ ಅರಗಿನಂತೆ ಕರಗಿಹೋಯ್ತು. ಕರ್ನಾಟಕದ ಇದೇ ಗೆಲುವು ಸಿದ್ದರಾಮಯ್ಯರ ಚರಿಷ್ಮಾ ಬದಲಿಸಿದೆ. ನ್ಯಾಷನಲ್​ ಫೇಸ್​ ಆಗಿ ಬಳಕೆ ಮಾಡಿಕೊಳ್ಳಲು ಪ್ಲಾನ್​ ರೂಪಿಸಲಾಗಿದೆ. ನೆರೆ ರಾಜ್ಯಗಳಲ್ಲೂ ತಮ್ಮ ಹವಾ ಕ್ರಿಯೇಟ್​​ ಮಾಡಿದ್ದಾರೆ. ಇದಕ್ಕೆ ಉದಾಹರಣೆ ನಿನ್ನೆ ನಡೆದ ಮಹಾರಾಷ್ಟ್ರದ ಈ ಸಮಾವೇಶ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕೇರಳದಲ್ಲೂ ಸಿದ್ದರಾಮಯ್ಯ ಇಮೇಜ್​ ಇದೆ. ರಾಜ್ಯದ ಯಾವ ನಾಯಕರಿಗೂ ಸಿದ್ದು ಇಮೇಜ್​​​ ಸರಿಸಾಟಿ ಇಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಬಂದೆರಗುವ ಚುನಾವಣೆ ಬಿರುಗಾಳಿ ಎದುರಿಸಲು ಸಿದ್ದರಾಮಯ್ಯ ಸಮರ್ಥ ಸಾರಥಿ ಅಂತ ಹೈಕಮಾಂಡ್​ ಅರಿತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಈ ಬಾರಿ ಚುನಾವಣೆ ಜವಾಬ್ದಾರಿ ಕೇವಲ ರಾಜ್ಯದ್ದಷ್ಟೇ ಅಲ್ಲ, ನೆರೆ ರಾಜ್ಯಗಳಲ್ಲೂ ಕಾಂಗ್ರೆಸ್​​ ಬಾವುಟ ಹಾರಿಸುವ ಚಾಲೆಂಜ್​ ನೀಡಿದೆ ಅಂತ ಗೊತ್ತಾಗಿದೆ. ಈವರೆಗೆ ರಾಹುಲ್​​ ಗಾಂಧಿ, ರಾಜ್ಯದವರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಪ್ರಿಯಾಂಕಾ ಗಾಂಧಿ ನ್ಯಾಷನಲ್​​​ ಫೇಸ್​​ ಆಗಿ ಕಂಡಿದ್ದ ಕಾಂಗ್ರೆಸ್​​​ಗೆ ಈ ಮೂವರ ಜೊತೆ ಸಿದ್ದು ವರ್ಚಸ್ಸು ಕೈ ಜೋಡಿಸಲಿದೆ.

ಸಿದ್ದರಾಮಯ್ಯರನ್ನ ರಾಷ್ಟ್ರ ಮಟ್ಟದಲ್ಲಿ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್​​ ಪ್ಲಾನ್​ ರೂಪಿಸಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ಜನಪ್ರಿಯ, ಮಾಸ್ ಲೀಡರ್​​​ ಅನ್ನೋದು ಚುನಾವಣೆ ಫಲಿತಾಂಶವೇ ಉತ್ತರ ಕೊಟ್ಟಿದೆ. ಕಳಂಕ ರಹಿತರಾಗಿರುವ ಕಾರಣ ಸಿಎಂ ಸಿದ್ದ್ದು ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಅಲ್ಲದೆ, ಮೋದಿಯನ್ನ ಪರಿಣಾಮಕಾರಿಯಾಗಿ ಎದುರಿಸುವ ಛಾತಿ ಸಿದ್ದುಗೆ ಮಾತ್ರ ಅನ್ನೋದು ಬಹಿರಂಗ ಸತ್ಯ. ಇದಕ್ಕೆ ತಾಜಾ ಉದಾಹರಣೆ ವಿಧಾನಸಭೆಯಲ್ಲಿ ಬಿಜೆಪಿಗೆ ಪ್ರಬಲ ಫೈಟ್​​​ ಕೊಟ್ಟು ಗೆಲುವು ದಾಖಲಿಸಿರೋದು.

ಮುಂದಿನ ಕೆಲ ತಿಂಗಳಲ್ಲೇ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಚುನಾವಣೆ ನಡೆಯಲಿದೆ. ಆ ಬಳಿಕ ಮಹಾರಾಷ್ಟ್ರ ಎಲೆಕ್ಷನ್ ಆಗಲಿದೆ. ಹಾಗಾಗಿ ನಿನ್ನೆ ಮಹಾರಾಷ್ಟ್ರದ ಸಾಂಗ್ಲಿಯ ಸಮಾವೇಶದಲ್ಲಿ ಸಿದ್ದು ಭಾಗಿಯಾಗಿ ಅಬ್ಬರಿಸಿದ್ದರು. ಒಟ್ಟಾರೆ, ಕಳೆದ 2018ರಲ್ಲಿ ಸೋತ ಕಾಂಗ್ರೆಸ್​​ಗೆ 2023ರ ಈ ಚುನಾವಣೆಯಲ್ಲಿ ಬೂಸ್ಟ್​ ನೀಡಿದ ಸಿದ್ದು-ಡಿಕೆ ಜೋಡೆತ್ತು, ರಾಜ್ಯದಲ್ಲಿ ಕಾಂಗ್ರೆಸ್​​ ದಿಗ್ವಿಜಯದ ಇತಿಹಾಸ ಸೃಷ್ಟಿಸಿದ್ದಾರೆ. ಸದ್ಯ ಈ ಇಬ್ಬರನ್ನ ಅನ್ಯ ರಾಜ್ಯಗಳ ಚುನಾವಣೆಯಲ್ಲಿ ಬೇರೆ ಬೇರೆ ರೂಪದಡಿ ಬಳಕೆ ಮಾಡಿಕೊಳ್ಳಲು ಪ್ಲಾನ್​ ರೂಪಿಸಿದೆ. ಅಷ್ಟಕ್ಕೂ ಉತ್ತರ ಏನಾಗಿರಲಿದೆ ಅನ್ನೋದು ಮತದಾರ ಬರೆಯುವ ತೀರ್ಪನ್ನು ಅವಲಂಭಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಹೊಸ ರಣತಂತ್ರ.. ವರ್ಕೌಟ್ ಆಗುತ್ತಾ ಕೈಕಲಿಗಳ ಮೆಗಾ ಪ್ಲಾನ್..?

https://newsfirstlive.com/wp-content/uploads/2023/06/SIDDU-25.jpg

    ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಹಾ ನಿರ್ಧಾರಕೈಗೊಂಡ ಕಾಂಗ್ರೆಸ್ ಪಕ್ಷ

    ಲೋಕಸಭೆ, ಇತರೆ ರಾಜ್ಯ ವಿಧಾನಸಭೆ ಎಲೆಕ್ಷನ್​ಗೆ ಸಿದ್ದರಾಮಯ್ಯ ಫೇಸ್​​

    ಸಿದ್ದರಾಮಯ್ಯರ ಜನಪ್ರಿಯತೆ ಎನ್​ಕ್ಯಾಶ್ ಮಾಡಿಕೊಳ್ಳಲು ‘ಕೈ’ ರಣತಂತ್ರ!

ಸಿಎಂ ಸಿದ್ದರಾಮಯ್ಯರನ್ನ ದೇಶವ್ಯಾಪಿ ಸ್ಟಾರ್‌ ಕ್ಯಾಂಪೇನರ್‌ ಆಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಪ್ಲಾನ್‌ ಮಾಡಿದೆ. ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯಮ ಈ ಬಗ್ಗೆ ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಮತ್ತು ಬೇರೆ ರಾಜ್ಯಗಳ ವಿಧಾನಸಭೆಯಲ್ಲೂ ಸಿದ್ದರಾಮಯ್ಯ ಇಮೇಜ್‌ ಬಳಕೆಗೆ ಹೈಕಮಾಂಡ್​​​ ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅಹಿಂದ ವರ್ಗಗಳ ಜನಪ್ರಿಯ ನಾಯಕ. ರಾಜ್ಯದ ಮಾಸ್ ಲೀಡರ್​.. ಸೈದ್ಧಾಂತಿಕವಾಗಿ ಬದ್ಧ ಸಿದ್ದು, ಈ ವಿಚಾರದಲ್ಲಿ ರಾಜೀ ಇಲ್ಲದ ರಾಜಕೀಯ ನೇತಾರ. ಸದ್ಯ, ಪ್ರಧಾನಿ ಮೋದಿಯನ್ನೂ ಎದುರಿಸುವ ಎದೆಗಾರಿಕೆ ಇರೋದು ಇದೇ ಸಿದ್ದರಾಮಯ್ಯರಿಗೆ. ಕಳಂಕ ರಹಿತ ಅನ್ನರಾಮಯ್ಯ, ಮುಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಬಹುಬೇಡಿಕೆ ಬಂದು ಬಿಟ್ಟಿದೆ.

ಸಿದ್ದು ಜನಪ್ರಿಯತೆ ಎನ್​ಕ್ಯಾಶ್ ಮಾಡಿಕೊಳ್ಳಲು ‘ಕೈ’ ರಣತಂತ್ರ!

ಡೆಲ್ಲಿಯಿಂದ ಬಲಿಷ್ಠ ಸೇನೆಯೊಂದಿಗೆ ಲಗ್ಗೆಯಿಟ್ಟ ಮೋದಿ ಟೀಮ್​ಗೆ ಸೋಲಿನ ರುಚಿ ಉಣಿಸಿದ್ದು ಅಹಿಂದರಾಮಯ್ಯ. ಡಬಲ್​ ಎಂಜಿನ್​, ಹಿಂದುತ್ವದ ಕಾರ್ಡ್​, ಮೋದಿ ಫೇಸ್​ ಎಲ್ಲವೂ ಅರಗಿನಂತೆ ಕರಗಿಹೋಯ್ತು. ಕರ್ನಾಟಕದ ಇದೇ ಗೆಲುವು ಸಿದ್ದರಾಮಯ್ಯರ ಚರಿಷ್ಮಾ ಬದಲಿಸಿದೆ. ನ್ಯಾಷನಲ್​ ಫೇಸ್​ ಆಗಿ ಬಳಕೆ ಮಾಡಿಕೊಳ್ಳಲು ಪ್ಲಾನ್​ ರೂಪಿಸಲಾಗಿದೆ. ನೆರೆ ರಾಜ್ಯಗಳಲ್ಲೂ ತಮ್ಮ ಹವಾ ಕ್ರಿಯೇಟ್​​ ಮಾಡಿದ್ದಾರೆ. ಇದಕ್ಕೆ ಉದಾಹರಣೆ ನಿನ್ನೆ ನಡೆದ ಮಹಾರಾಷ್ಟ್ರದ ಈ ಸಮಾವೇಶ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕೇರಳದಲ್ಲೂ ಸಿದ್ದರಾಮಯ್ಯ ಇಮೇಜ್​ ಇದೆ. ರಾಜ್ಯದ ಯಾವ ನಾಯಕರಿಗೂ ಸಿದ್ದು ಇಮೇಜ್​​​ ಸರಿಸಾಟಿ ಇಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಬಂದೆರಗುವ ಚುನಾವಣೆ ಬಿರುಗಾಳಿ ಎದುರಿಸಲು ಸಿದ್ದರಾಮಯ್ಯ ಸಮರ್ಥ ಸಾರಥಿ ಅಂತ ಹೈಕಮಾಂಡ್​ ಅರಿತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಈ ಬಾರಿ ಚುನಾವಣೆ ಜವಾಬ್ದಾರಿ ಕೇವಲ ರಾಜ್ಯದ್ದಷ್ಟೇ ಅಲ್ಲ, ನೆರೆ ರಾಜ್ಯಗಳಲ್ಲೂ ಕಾಂಗ್ರೆಸ್​​ ಬಾವುಟ ಹಾರಿಸುವ ಚಾಲೆಂಜ್​ ನೀಡಿದೆ ಅಂತ ಗೊತ್ತಾಗಿದೆ. ಈವರೆಗೆ ರಾಹುಲ್​​ ಗಾಂಧಿ, ರಾಜ್ಯದವರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಪ್ರಿಯಾಂಕಾ ಗಾಂಧಿ ನ್ಯಾಷನಲ್​​​ ಫೇಸ್​​ ಆಗಿ ಕಂಡಿದ್ದ ಕಾಂಗ್ರೆಸ್​​​ಗೆ ಈ ಮೂವರ ಜೊತೆ ಸಿದ್ದು ವರ್ಚಸ್ಸು ಕೈ ಜೋಡಿಸಲಿದೆ.

ಸಿದ್ದರಾಮಯ್ಯರನ್ನ ರಾಷ್ಟ್ರ ಮಟ್ಟದಲ್ಲಿ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್​​ ಪ್ಲಾನ್​ ರೂಪಿಸಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ಜನಪ್ರಿಯ, ಮಾಸ್ ಲೀಡರ್​​​ ಅನ್ನೋದು ಚುನಾವಣೆ ಫಲಿತಾಂಶವೇ ಉತ್ತರ ಕೊಟ್ಟಿದೆ. ಕಳಂಕ ರಹಿತರಾಗಿರುವ ಕಾರಣ ಸಿಎಂ ಸಿದ್ದ್ದು ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಅಲ್ಲದೆ, ಮೋದಿಯನ್ನ ಪರಿಣಾಮಕಾರಿಯಾಗಿ ಎದುರಿಸುವ ಛಾತಿ ಸಿದ್ದುಗೆ ಮಾತ್ರ ಅನ್ನೋದು ಬಹಿರಂಗ ಸತ್ಯ. ಇದಕ್ಕೆ ತಾಜಾ ಉದಾಹರಣೆ ವಿಧಾನಸಭೆಯಲ್ಲಿ ಬಿಜೆಪಿಗೆ ಪ್ರಬಲ ಫೈಟ್​​​ ಕೊಟ್ಟು ಗೆಲುವು ದಾಖಲಿಸಿರೋದು.

ಮುಂದಿನ ಕೆಲ ತಿಂಗಳಲ್ಲೇ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಚುನಾವಣೆ ನಡೆಯಲಿದೆ. ಆ ಬಳಿಕ ಮಹಾರಾಷ್ಟ್ರ ಎಲೆಕ್ಷನ್ ಆಗಲಿದೆ. ಹಾಗಾಗಿ ನಿನ್ನೆ ಮಹಾರಾಷ್ಟ್ರದ ಸಾಂಗ್ಲಿಯ ಸಮಾವೇಶದಲ್ಲಿ ಸಿದ್ದು ಭಾಗಿಯಾಗಿ ಅಬ್ಬರಿಸಿದ್ದರು. ಒಟ್ಟಾರೆ, ಕಳೆದ 2018ರಲ್ಲಿ ಸೋತ ಕಾಂಗ್ರೆಸ್​​ಗೆ 2023ರ ಈ ಚುನಾವಣೆಯಲ್ಲಿ ಬೂಸ್ಟ್​ ನೀಡಿದ ಸಿದ್ದು-ಡಿಕೆ ಜೋಡೆತ್ತು, ರಾಜ್ಯದಲ್ಲಿ ಕಾಂಗ್ರೆಸ್​​ ದಿಗ್ವಿಜಯದ ಇತಿಹಾಸ ಸೃಷ್ಟಿಸಿದ್ದಾರೆ. ಸದ್ಯ ಈ ಇಬ್ಬರನ್ನ ಅನ್ಯ ರಾಜ್ಯಗಳ ಚುನಾವಣೆಯಲ್ಲಿ ಬೇರೆ ಬೇರೆ ರೂಪದಡಿ ಬಳಕೆ ಮಾಡಿಕೊಳ್ಳಲು ಪ್ಲಾನ್​ ರೂಪಿಸಿದೆ. ಅಷ್ಟಕ್ಕೂ ಉತ್ತರ ಏನಾಗಿರಲಿದೆ ಅನ್ನೋದು ಮತದಾರ ಬರೆಯುವ ತೀರ್ಪನ್ನು ಅವಲಂಭಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More