newsfirstkannada.com

ಮೈಸೂರು-ಬೆಂಗಳೂರು ಹೈವೇ: ‘ದುಡ್ಡು ಸಂಗ್ರಹ ಮಾಡಿದ್ರೆ ಟೋಲ್​​ ಪ್ಲಾಜಾ ಪೀಸ್​​ ಪೀಸ್’ ಎಂದ ಕಾಂಗ್ರೆಸ್​ MLA

Share :

30-06-2023

    ಇನ್ನೂ ಸರ್ವೀಸ್​ ರೋಡ್​​ ನಿರ್ಮಾಣ ಮಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಸರ್ವೀಸ್​ ರೋಡ್​ ಮಾಡದೆ ಟೋಲ್​ ಸಂಗ್ರಹಿಸಿದ್ರೆ ಹುಷಾರ್​ ಎಂದ ಶಾಸಕ

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿರುದ್ಧ ಶಾಸಕ ರವಕುಮಾರ್​ ಗಣಿಗ ಆಕ್ರೋಶ

ಬೆಂಗಳೂರು: ಸದ್ಯ ಭಾರೀ ಸದ್ದು ಮಾಡುತ್ತಿರೋ ಹೆದ್ದಾರಿ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ. ಕಾರಣ ಕಳೆದ 9 ತಿಂಗಳಲ್ಲಿ 850ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಅದರಲ್ಲೂ 150ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್ ಹೈವೇ ಸೇಫ್ಟಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಸರಿಯಾಗಿ ಸರ್ವೀಸ್​ ರೋಡ್​ ಮಾಡದೆ ಟೋಲ್​​ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದ ಕಾಂಗ್ರೆಸ್​ ಶಾಸಕ ರವಿಕುಮಾರ್ ಗಣಿಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಶಾಸಕ ರವಿಕುಮಾರ್ ಗಣಿಗ, ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ ಗುತ್ತಿಗೆದಾರನಿಗೆ ಪ್ರೀತಿಯಾಗಿರೋ ಹೆದ್ದಾರಿ. ನನ್ನ ಕ್ಷೇತ್ರದಲ್ಲಿ ಸರ್ವೀಸ್​ ರೋಡ್​ ಮಾಡದೆ ಟೋಲ್​ ಸಂಗ್ರಹ ಮಾಡುವ ಮೂಲಕ ಜನರನ್ನು ಸಾಯಿಸುತ್ತಿದ್ದಾರೆ. ಸರ್ವಿಸ್ ರಸ್ತೆ ಇಲ್ಲದೆ ಜನ ಹೈವೆಗೆ ಬಂದು ಸಾಯಬೇಕಾಗಿದೆ ಎಂದರು.

ದಸರಾ ಸಂದರ್ಭದಲ್ಲಿ ಒಂದು ಕೆರೆ ಹೊಡೆದು ಹೋಗಿ ಹೈವೆ ಬಂದ್ ಆಗಿತ್ತು. ಈ ಬಾರಿ ಮಳೆ ಬಂದರೆ ಅಲ್ಲಿ ಮತ್ತೆ ಸಮಸ್ಯೆ ಆಗುತ್ತೆ. ಚಿಕ್ಕ ಮಂಡ್ಯದಲ್ಲಿ ಊರು ಮುಳುಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೊನೇ ಎಚ್ಚರಿಕೆ ನೀಡುತ್ತಿದ್ದೇನೆ. ಹೀಗೆ ಮುಂದುವರಿದರೆ ಟೋಲ್​​ ಪ್ಲಾಜಾಗಳನ್ನು ಪೀಸ್​ ಪೀಸ್​ ಮಾಡಲಾಗುತ್ತದೆ. ಮಂಡ್ಯದಲ್ಲಿ ಬಸ್​​, ಕಾರ್​​ ತಡೆದು ಹೋರಾಟ ಮಾಡೋದು ಗ್ಯಾರಂಟಿ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರು-ಬೆಂಗಳೂರು ಹೈವೇ: ‘ದುಡ್ಡು ಸಂಗ್ರಹ ಮಾಡಿದ್ರೆ ಟೋಲ್​​ ಪ್ಲಾಜಾ ಪೀಸ್​​ ಪೀಸ್’ ಎಂದ ಕಾಂಗ್ರೆಸ್​ MLA

https://newsfirstlive.com/wp-content/uploads/2023/06/Gangiga-Ravikumar.jpg

    ಇನ್ನೂ ಸರ್ವೀಸ್​ ರೋಡ್​​ ನಿರ್ಮಾಣ ಮಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಸರ್ವೀಸ್​ ರೋಡ್​ ಮಾಡದೆ ಟೋಲ್​ ಸಂಗ್ರಹಿಸಿದ್ರೆ ಹುಷಾರ್​ ಎಂದ ಶಾಸಕ

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿರುದ್ಧ ಶಾಸಕ ರವಕುಮಾರ್​ ಗಣಿಗ ಆಕ್ರೋಶ

ಬೆಂಗಳೂರು: ಸದ್ಯ ಭಾರೀ ಸದ್ದು ಮಾಡುತ್ತಿರೋ ಹೆದ್ದಾರಿ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ. ಕಾರಣ ಕಳೆದ 9 ತಿಂಗಳಲ್ಲಿ 850ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಅದರಲ್ಲೂ 150ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್ ಹೈವೇ ಸೇಫ್ಟಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಸರಿಯಾಗಿ ಸರ್ವೀಸ್​ ರೋಡ್​ ಮಾಡದೆ ಟೋಲ್​​ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದ ಕಾಂಗ್ರೆಸ್​ ಶಾಸಕ ರವಿಕುಮಾರ್ ಗಣಿಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಶಾಸಕ ರವಿಕುಮಾರ್ ಗಣಿಗ, ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ ಗುತ್ತಿಗೆದಾರನಿಗೆ ಪ್ರೀತಿಯಾಗಿರೋ ಹೆದ್ದಾರಿ. ನನ್ನ ಕ್ಷೇತ್ರದಲ್ಲಿ ಸರ್ವೀಸ್​ ರೋಡ್​ ಮಾಡದೆ ಟೋಲ್​ ಸಂಗ್ರಹ ಮಾಡುವ ಮೂಲಕ ಜನರನ್ನು ಸಾಯಿಸುತ್ತಿದ್ದಾರೆ. ಸರ್ವಿಸ್ ರಸ್ತೆ ಇಲ್ಲದೆ ಜನ ಹೈವೆಗೆ ಬಂದು ಸಾಯಬೇಕಾಗಿದೆ ಎಂದರು.

ದಸರಾ ಸಂದರ್ಭದಲ್ಲಿ ಒಂದು ಕೆರೆ ಹೊಡೆದು ಹೋಗಿ ಹೈವೆ ಬಂದ್ ಆಗಿತ್ತು. ಈ ಬಾರಿ ಮಳೆ ಬಂದರೆ ಅಲ್ಲಿ ಮತ್ತೆ ಸಮಸ್ಯೆ ಆಗುತ್ತೆ. ಚಿಕ್ಕ ಮಂಡ್ಯದಲ್ಲಿ ಊರು ಮುಳುಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೊನೇ ಎಚ್ಚರಿಕೆ ನೀಡುತ್ತಿದ್ದೇನೆ. ಹೀಗೆ ಮುಂದುವರಿದರೆ ಟೋಲ್​​ ಪ್ಲಾಜಾಗಳನ್ನು ಪೀಸ್​ ಪೀಸ್​ ಮಾಡಲಾಗುತ್ತದೆ. ಮಂಡ್ಯದಲ್ಲಿ ಬಸ್​​, ಕಾರ್​​ ತಡೆದು ಹೋರಾಟ ಮಾಡೋದು ಗ್ಯಾರಂಟಿ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More