newsfirstkannada.com

ಲೋಕಸಭೆ ಕಲಾಪದಿಂದ ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿ ಅಮಾನತು.. ಕಾರಣ..?

Share :

11-08-2023

    ಇಂದು ಸಂಸತ್​ನ ಮುಂಗಾರು ಅಧಿವೇಶನದ ಕೊನೆ ದಿನ

    ವಿಪಕ್ಷಗಳಿಂದ ಇವತ್ತೂ ಕಲಾಪ ಬಹಿಷ್ಕಾರ ಸಾಧ್ಯತೆ

    ಮಣಿಪುರ ವಿಚಾರದಲ್ಲಿ ಸಮರ್ಪಕ ಉತ್ತರಕ್ಕೆ ಪಟ್ಟು

ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿಯನ್ನು ಲೋಕಸಭಾ ಕಲಾಪದಿಂದ ಅಮಾನತು ಮಾಡಲಾಗಿದೆ. ಲೋಕಸಭೆ ಕಲಾಪದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ಚರ್ಚೆ ವೇಳೆ ಅಶಿಸ್ತು ಪ್ರದರ್ಶಿಸಿದ ಕಾರಣ ಸ್ಪೀಕರ್​​ ಓಂ ಬಿರ್ಲಾ ಅವರು, ಅಮಾನತು ಮಾಡಿದ್ದಾರೆ. ​ರಂಜನ್ ಚೌಧರಿ ಅವರು ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರದ ಬಗ್ಗೆ ಸಮರ್ಪಕ ಉತ್ತರವನ್ನು ನೀಡಿಲ್ಲ ಎಂದು ಸದನದ ನಿಯಮದ ವಿರುದ್ಧ ನಡೆದುಕೊಂಡಿರೋದಕ್ಕೆ ಅಮಾನತು ಮಾಡಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ಅವಿಶ್ವಾಸ ನಿರ್ಣಯ ಮಂಡನೆ ಮೇಲೆ ನಡೆದ ಚರ್ಚೆಯಲ್ಲಿ ಪ್ರಧಾನಿ ಮೋದಿ ಉತ್ತರ ಕೊಡುತ್ತಿದ್ದರು. ಆಗ ವಿಪಕ್ಷಗಳು ಮೋದಿ ಉತ್ತರಕ್ಕೆ ಅಡ್ಡಿಪಡಿಸಿ, ಗಲಾಟೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಕಲಾಪದ ನಿಯಮದ ವಿರುದ್ಧ ನಡೆದುಕೊಂಡ ಕಾಂಗ್ರೆಸ್​ನ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿಯನ್ನು ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರಸ್ತಾಪ ಮಾಡಿದ್ದರು.

ಅಂದ್ಹಾಗೆ ಮುಂಗಾರು ಅಧಿವೇಶನಕ್ಕೆ ಇವತ್ತು ತೆರೆ ಬೀಳಲಿದೆ. ಈ ಬಾರಿಯ ಅಧಿವೇಶನ ಹೆಚ್ಚು ಚರ್ಚೆ ಇಲ್ಲದೇ, ಬರೀ ಗದ್ದಲ-ಗಲಾಟೆಯಲ್ಲೇ ಕಳೆದುಹೋಗಿದೆ. ಇವತ್ತು ಕೂಡ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಕಲಾಪದಿಂದ ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿ ಅಮಾನತು.. ಕಾರಣ..?

https://newsfirstlive.com/wp-content/uploads/2023/08/ADHIR.jpg

    ಇಂದು ಸಂಸತ್​ನ ಮುಂಗಾರು ಅಧಿವೇಶನದ ಕೊನೆ ದಿನ

    ವಿಪಕ್ಷಗಳಿಂದ ಇವತ್ತೂ ಕಲಾಪ ಬಹಿಷ್ಕಾರ ಸಾಧ್ಯತೆ

    ಮಣಿಪುರ ವಿಚಾರದಲ್ಲಿ ಸಮರ್ಪಕ ಉತ್ತರಕ್ಕೆ ಪಟ್ಟು

ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿಯನ್ನು ಲೋಕಸಭಾ ಕಲಾಪದಿಂದ ಅಮಾನತು ಮಾಡಲಾಗಿದೆ. ಲೋಕಸಭೆ ಕಲಾಪದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ಚರ್ಚೆ ವೇಳೆ ಅಶಿಸ್ತು ಪ್ರದರ್ಶಿಸಿದ ಕಾರಣ ಸ್ಪೀಕರ್​​ ಓಂ ಬಿರ್ಲಾ ಅವರು, ಅಮಾನತು ಮಾಡಿದ್ದಾರೆ. ​ರಂಜನ್ ಚೌಧರಿ ಅವರು ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರದ ಬಗ್ಗೆ ಸಮರ್ಪಕ ಉತ್ತರವನ್ನು ನೀಡಿಲ್ಲ ಎಂದು ಸದನದ ನಿಯಮದ ವಿರುದ್ಧ ನಡೆದುಕೊಂಡಿರೋದಕ್ಕೆ ಅಮಾನತು ಮಾಡಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ಅವಿಶ್ವಾಸ ನಿರ್ಣಯ ಮಂಡನೆ ಮೇಲೆ ನಡೆದ ಚರ್ಚೆಯಲ್ಲಿ ಪ್ರಧಾನಿ ಮೋದಿ ಉತ್ತರ ಕೊಡುತ್ತಿದ್ದರು. ಆಗ ವಿಪಕ್ಷಗಳು ಮೋದಿ ಉತ್ತರಕ್ಕೆ ಅಡ್ಡಿಪಡಿಸಿ, ಗಲಾಟೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಕಲಾಪದ ನಿಯಮದ ವಿರುದ್ಧ ನಡೆದುಕೊಂಡ ಕಾಂಗ್ರೆಸ್​ನ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿಯನ್ನು ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರಸ್ತಾಪ ಮಾಡಿದ್ದರು.

ಅಂದ್ಹಾಗೆ ಮುಂಗಾರು ಅಧಿವೇಶನಕ್ಕೆ ಇವತ್ತು ತೆರೆ ಬೀಳಲಿದೆ. ಈ ಬಾರಿಯ ಅಧಿವೇಶನ ಹೆಚ್ಚು ಚರ್ಚೆ ಇಲ್ಲದೇ, ಬರೀ ಗದ್ದಲ-ಗಲಾಟೆಯಲ್ಲೇ ಕಳೆದುಹೋಗಿದೆ. ಇವತ್ತು ಕೂಡ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More