ಎಲ್ಲ ಹಮ್ಮು-ಬಿಮ್ಮು ಬಿಟ್ಟು ಸ್ವಂತ ಊರಿನಲ್ಲಿ ಗ್ರೌಂಡ್ ಪ್ರಾರಂಭ
ಕ್ರಿಕೆಟ್ ಗ್ರೌಂಡ್ ಉದ್ಘಾಟನೆ ಮಾಡಿದ ದಿನೇಶ್ ಕಾರ್ತಿಕ್
ತಮಿಳುನಾಡಿನ ಯುವ ಪ್ರತಿಭೆಗೆ ಜನರಿಂದ ಭಾರೀ ಮೆಚ್ಚುಗೆ
ಕ್ರಿಕೆಟ್ ಅಂದರೆ ಈಗ ಕ್ರೇಜ್, ಮನರಂಜನೆ, ಜೂಜು, ಹಣ, ಜೀವನ, ಬ್ಯುಜಿನೆಸ್ ಆಗಿ ಬದಲಾವಣೆಯಾಗಿದೆ. ನಾನು ಸ್ಟಾರ್ ಕ್ರಿಕೆಟ್ ಪ್ಲೇಯರ್ ಆದರೆ ಒಳ್ಳೆಯ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬುವುದು ಯಂಗಸ್ಟರ್ಸ್ ಯೋಚನೆಯಾಗಿದೆ. ಯಾರಿಗೂ ಗೊತ್ತಿರದ ಆಟಗಾರರು ಬಂದು ಕ್ರಿಕೆಟ್ನಲ್ಲಿ ದಾಖಲೆಗಳನ್ನೇ ಮಾಡಿದ್ದಾರೆ. ಇಲ್ಲಿಯವರೆಗೂ ಯಾರೂ ಕೂಡ ಯುವ ಆಟಗಾರರಿಗಾಗಿ ಕ್ರಿಕೆಟ್ ಮೈದಾನ ನಿರ್ಮಿಸಿಲ್ಲ. ಆದ್ರೆ ಇದೀಗ ಆಟಗಾರನೊಬ್ಬ ಭವಿಷ್ಯದ ಪ್ಲೇಯರ್ಸ್ಗಾಗಿ ಕ್ರಿಕೆಟ್ ಮೈದಾನ ನಿರ್ಮಿಸಿ ಫುಲ್ ಫೇಮಸ್ ಆಗಿದ್ದಾರೆ.
ಟಿ.ನಟರಾಜನ್ ಅಂದರೆ ತಂಗರಸೂರು ನಟರಾಜನ್ ಎಂಬುವುದು ಪೂರ್ಣ ಹೆಸರು. ಟೀಮ್ ಇಂಡಿಯಾದಲ್ಲಿ ಕೆಲವೇ ಕೆಲವು ಪಂದ್ಯಗಳನ್ನು ಆಡಿ ತಮ್ಮ ಊರಿನಲ್ಲಿ ಸಖತ್ ಖ್ಯಾತಿ ಪಡೆದವರು. ಭವಿಷ್ಯದ ಕ್ರಿಕೆಟರ್ಟ್ಗೆ ಉಪಯೋಗವಾಗಲಿ ಎಂದು ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದಲ್ಲಿ ತಮ್ಮ ಅಕಾಡೆಮಿಗಾಗಿ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಿದ್ದಾರೆ. ಕ್ರಿಕೆಟ್ ಮೈದಾನವು ಗ್ರ್ಯಾಂಡ್ ಆಗಿ ಇದ್ದು 4 ಪಿಚ್ಗಳನ್ನು ಒಳಗೊಂಡಿದ್ದು ಜೊತೆಗೆ ಜಿಮ್, ಕ್ಯಾಂಟೀನ್ ಹಾಗೂ ಕುಳಿತುಕೊಂಡು ಕ್ರಿಕೆಟ್ ನೋಡಲು 100 ಸೀಟ್ಗಳಿರುವ ಗ್ಯಾಲರಿಯನ್ನು ಟಿ.ನಟರಾಜನ್ ನಿರ್ಮಾಣ ಮಾಡಿದ್ದಾರೆ.
ಜೂನ್ 23 ರಂದು ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದಲ್ಲಿ ನಟರಾಜನ್ ಕ್ರಿಕೆಟ್ ಗ್ರೌಂಡ್ ಅನ್ನು ಟೀಮ್ ಇಂಡಿಯಾ ಆಟಗಾರ ಹಾಗೂ ಆರ್ಸಿಬಿ ಪ್ಲೇಯರ್ ದಿನೇಶ್ ಕಾರ್ತಿಕ್ ಉದ್ಘಾಟನೆ ಮಾಡಿದರು. ಗ್ರೌಂಡ್ ಉದ್ಘಾಟನೆಗಾಗಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ P. ಅಶೋಕ್ ಸಿಗಮಣಿ, ಕಾಮಿಡಿ ನಟ ಯೋಗಿ ಬಾಬು, ಸೇಲಂ ಸೂಪರಿಂಟೆಂಡೆಂಟ್ R.ಶಿವಕುಮಾರ್, ಕ್ರಿಕೆಟರ್ಸ್ಗಳಾದ ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್ ಆಗಮಿಸಿದ್ದರು. ನಟರಾಜನ್ನ ಈ ಸಾಧನೆಗಾಗಿ ಬೆನ್ನು ತಟ್ಟಿ ಶಬ್ಬಾಸ್ ಗಿರಿ ಕೊಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಅವರು ನಟರಾಜನ್ ಅವರನ್ನು ಹಾಡಿ ಹೊಗಳಿದ್ದಾರೆ.
ನಟರಾಜನ್ ಬಗ್ಗೆ ಕಾರ್ತಿಕ್ ಏನು ಹೇಳಿದರು?
ನಟರಾಜನ್ ತಮಿಳುನಾಡು ಪರವಾಗಿ ಕ್ರಿಕೆಟ್ ಆಡಿ IPLನಲ್ಲಿ ಆಡಿ ಬಳಿಕ ಒಂದು ಪ್ರಾಬ್ಲಂ ಆದ ನಂತರ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ತನ್ನ ಸಾಮರ್ಥ್ಯ ಏನೆಂಬುದು ತೋರಿಸಿದ್ದಾರೆ. ಬೇರೆ ಊರುಗಳಿಂದ ಬಂದು ಕ್ರಿಕೆಟ್ ಆಡಿ ಫೇಮಸ್ ಆಗಿದ್ದಾರೆ. ಯಾರಿಗೂ ಇಂತಹ ಯೋಚನೆ ಬಂದಿಲ್ಲ. ಆದ್ರೆ ನಟರಾಜನ್ ತನ್ನ ಊರಿನಿಂದ ಭವಿಷ್ಯದ ಆಟಗಾರರು ಭಾರತ ತಂಡಕ್ಕೆ ಬರಲೆಂದು ಗ್ರೌಂಡ್ ನಿರ್ಮಿಸಿದ್ದಾರೆ. ನಾನು ಕ್ರಿಕೆಟ್ ಆಡಿದ್ದೇನೆ. ಆದ್ರೆ ಇಂತಹ ಆಲೋಚನೆ ನನಗೆ ಬಂದಿಲ್ಲವೆಂದು ದಿನೇಶ್ ಕಾರ್ತಿಕ್ ಹೇಳಿದರು.
ಕ್ರಿಕೆಟ್ ಮೈದಾನದ ಪ್ರಮುಖ ಅಂಶಗಳು ಏನೆಂದರೆ..
ಎಡಗೈ ಬೌಲರ್ ಆಗಿರುವ ಟಿ.ನಟರಾಜನ್ ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಮಾಡುತ್ತಾರೆ. 2023ರ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡಿ ಗಮನ ಸೆಳೆದಿದ್ದರು. 2020ರ ಐಪಿಎಲ್ನಲ್ಲಿ ಯಾರ್ಕರ್ ದಾಳಿಯಿಂದ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದ ನಟರಾಜನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಆಡಿ ಅದ್ಭುತ ಪ್ರದರ್ಶನ ತೋರಿದ್ದರು. ಬಳಿಕ ಅವರಿಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಆಗಿನಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ನಂತರ ದಿನಗಳಲ್ಲಿ ಭಾರತದ ಕ್ರಿಕೆಟ್ ಆಯ್ಕೆ ಮಂಡಳಿಯು ನಟರಾಜನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿಲ್ಲ.
ವಿಶೇಷ ವರದಿ: ಭೀಮಪ್ಪ. ನ್ಯೂಸ್ಫಸ್ಟ್ ಡಿಜಿಟಲ್ ಡೆಸ್ಕ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಎಲ್ಲ ಹಮ್ಮು-ಬಿಮ್ಮು ಬಿಟ್ಟು ಸ್ವಂತ ಊರಿನಲ್ಲಿ ಗ್ರೌಂಡ್ ಪ್ರಾರಂಭ
ಕ್ರಿಕೆಟ್ ಗ್ರೌಂಡ್ ಉದ್ಘಾಟನೆ ಮಾಡಿದ ದಿನೇಶ್ ಕಾರ್ತಿಕ್
ತಮಿಳುನಾಡಿನ ಯುವ ಪ್ರತಿಭೆಗೆ ಜನರಿಂದ ಭಾರೀ ಮೆಚ್ಚುಗೆ
ಕ್ರಿಕೆಟ್ ಅಂದರೆ ಈಗ ಕ್ರೇಜ್, ಮನರಂಜನೆ, ಜೂಜು, ಹಣ, ಜೀವನ, ಬ್ಯುಜಿನೆಸ್ ಆಗಿ ಬದಲಾವಣೆಯಾಗಿದೆ. ನಾನು ಸ್ಟಾರ್ ಕ್ರಿಕೆಟ್ ಪ್ಲೇಯರ್ ಆದರೆ ಒಳ್ಳೆಯ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬುವುದು ಯಂಗಸ್ಟರ್ಸ್ ಯೋಚನೆಯಾಗಿದೆ. ಯಾರಿಗೂ ಗೊತ್ತಿರದ ಆಟಗಾರರು ಬಂದು ಕ್ರಿಕೆಟ್ನಲ್ಲಿ ದಾಖಲೆಗಳನ್ನೇ ಮಾಡಿದ್ದಾರೆ. ಇಲ್ಲಿಯವರೆಗೂ ಯಾರೂ ಕೂಡ ಯುವ ಆಟಗಾರರಿಗಾಗಿ ಕ್ರಿಕೆಟ್ ಮೈದಾನ ನಿರ್ಮಿಸಿಲ್ಲ. ಆದ್ರೆ ಇದೀಗ ಆಟಗಾರನೊಬ್ಬ ಭವಿಷ್ಯದ ಪ್ಲೇಯರ್ಸ್ಗಾಗಿ ಕ್ರಿಕೆಟ್ ಮೈದಾನ ನಿರ್ಮಿಸಿ ಫುಲ್ ಫೇಮಸ್ ಆಗಿದ್ದಾರೆ.
ಟಿ.ನಟರಾಜನ್ ಅಂದರೆ ತಂಗರಸೂರು ನಟರಾಜನ್ ಎಂಬುವುದು ಪೂರ್ಣ ಹೆಸರು. ಟೀಮ್ ಇಂಡಿಯಾದಲ್ಲಿ ಕೆಲವೇ ಕೆಲವು ಪಂದ್ಯಗಳನ್ನು ಆಡಿ ತಮ್ಮ ಊರಿನಲ್ಲಿ ಸಖತ್ ಖ್ಯಾತಿ ಪಡೆದವರು. ಭವಿಷ್ಯದ ಕ್ರಿಕೆಟರ್ಟ್ಗೆ ಉಪಯೋಗವಾಗಲಿ ಎಂದು ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದಲ್ಲಿ ತಮ್ಮ ಅಕಾಡೆಮಿಗಾಗಿ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಿದ್ದಾರೆ. ಕ್ರಿಕೆಟ್ ಮೈದಾನವು ಗ್ರ್ಯಾಂಡ್ ಆಗಿ ಇದ್ದು 4 ಪಿಚ್ಗಳನ್ನು ಒಳಗೊಂಡಿದ್ದು ಜೊತೆಗೆ ಜಿಮ್, ಕ್ಯಾಂಟೀನ್ ಹಾಗೂ ಕುಳಿತುಕೊಂಡು ಕ್ರಿಕೆಟ್ ನೋಡಲು 100 ಸೀಟ್ಗಳಿರುವ ಗ್ಯಾಲರಿಯನ್ನು ಟಿ.ನಟರಾಜನ್ ನಿರ್ಮಾಣ ಮಾಡಿದ್ದಾರೆ.
ಜೂನ್ 23 ರಂದು ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದಲ್ಲಿ ನಟರಾಜನ್ ಕ್ರಿಕೆಟ್ ಗ್ರೌಂಡ್ ಅನ್ನು ಟೀಮ್ ಇಂಡಿಯಾ ಆಟಗಾರ ಹಾಗೂ ಆರ್ಸಿಬಿ ಪ್ಲೇಯರ್ ದಿನೇಶ್ ಕಾರ್ತಿಕ್ ಉದ್ಘಾಟನೆ ಮಾಡಿದರು. ಗ್ರೌಂಡ್ ಉದ್ಘಾಟನೆಗಾಗಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ P. ಅಶೋಕ್ ಸಿಗಮಣಿ, ಕಾಮಿಡಿ ನಟ ಯೋಗಿ ಬಾಬು, ಸೇಲಂ ಸೂಪರಿಂಟೆಂಡೆಂಟ್ R.ಶಿವಕುಮಾರ್, ಕ್ರಿಕೆಟರ್ಸ್ಗಳಾದ ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್ ಆಗಮಿಸಿದ್ದರು. ನಟರಾಜನ್ನ ಈ ಸಾಧನೆಗಾಗಿ ಬೆನ್ನು ತಟ್ಟಿ ಶಬ್ಬಾಸ್ ಗಿರಿ ಕೊಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಅವರು ನಟರಾಜನ್ ಅವರನ್ನು ಹಾಡಿ ಹೊಗಳಿದ್ದಾರೆ.
ನಟರಾಜನ್ ಬಗ್ಗೆ ಕಾರ್ತಿಕ್ ಏನು ಹೇಳಿದರು?
ನಟರಾಜನ್ ತಮಿಳುನಾಡು ಪರವಾಗಿ ಕ್ರಿಕೆಟ್ ಆಡಿ IPLನಲ್ಲಿ ಆಡಿ ಬಳಿಕ ಒಂದು ಪ್ರಾಬ್ಲಂ ಆದ ನಂತರ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ತನ್ನ ಸಾಮರ್ಥ್ಯ ಏನೆಂಬುದು ತೋರಿಸಿದ್ದಾರೆ. ಬೇರೆ ಊರುಗಳಿಂದ ಬಂದು ಕ್ರಿಕೆಟ್ ಆಡಿ ಫೇಮಸ್ ಆಗಿದ್ದಾರೆ. ಯಾರಿಗೂ ಇಂತಹ ಯೋಚನೆ ಬಂದಿಲ್ಲ. ಆದ್ರೆ ನಟರಾಜನ್ ತನ್ನ ಊರಿನಿಂದ ಭವಿಷ್ಯದ ಆಟಗಾರರು ಭಾರತ ತಂಡಕ್ಕೆ ಬರಲೆಂದು ಗ್ರೌಂಡ್ ನಿರ್ಮಿಸಿದ್ದಾರೆ. ನಾನು ಕ್ರಿಕೆಟ್ ಆಡಿದ್ದೇನೆ. ಆದ್ರೆ ಇಂತಹ ಆಲೋಚನೆ ನನಗೆ ಬಂದಿಲ್ಲವೆಂದು ದಿನೇಶ್ ಕಾರ್ತಿಕ್ ಹೇಳಿದರು.
ಕ್ರಿಕೆಟ್ ಮೈದಾನದ ಪ್ರಮುಖ ಅಂಶಗಳು ಏನೆಂದರೆ..
ಎಡಗೈ ಬೌಲರ್ ಆಗಿರುವ ಟಿ.ನಟರಾಜನ್ ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಮಾಡುತ್ತಾರೆ. 2023ರ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡಿ ಗಮನ ಸೆಳೆದಿದ್ದರು. 2020ರ ಐಪಿಎಲ್ನಲ್ಲಿ ಯಾರ್ಕರ್ ದಾಳಿಯಿಂದ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದ ನಟರಾಜನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಆಡಿ ಅದ್ಭುತ ಪ್ರದರ್ಶನ ತೋರಿದ್ದರು. ಬಳಿಕ ಅವರಿಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಆಗಿನಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ನಂತರ ದಿನಗಳಲ್ಲಿ ಭಾರತದ ಕ್ರಿಕೆಟ್ ಆಯ್ಕೆ ಮಂಡಳಿಯು ನಟರಾಜನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿಲ್ಲ.
ವಿಶೇಷ ವರದಿ: ಭೀಮಪ್ಪ. ನ್ಯೂಸ್ಫಸ್ಟ್ ಡಿಜಿಟಲ್ ಡೆಸ್ಕ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ