ಸರ್ಜರಿ ಮಾಡಲು ಮುಂದಾದ ಧೋನಿ
ಅಭಿಮಾನಿಗಳಿಗೆ ಧೋನಿ ಮಹತ್ವದ ನಿರ್ಧಾರ
ನಿರ್ಧಾರಕ್ಕೆ ತಕ್ಕಂತೆ ತಾಕತ್ತು ತೋರಿಸಲಿದ್ದಾರೆ ಧೋನಿ
ಐಪಿಎಲ್ ಮುಗಿದು 2 ದಿನ ಕಳೀತು. ಆದ್ರೂ, ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್ನಲ್ಲಿ ಸಂಭ್ರಮಾಚರಣೆ ಮಾತ್ರ ನಿಂತಿಲ್ಲ. ಆಟಗಾರರು, ಫ್ಯಾನ್ಸ್ ಇನ್ನೂ ಸಂಭ್ರಮದ ಕಡಲಲ್ಲೇ ತೇಲ್ತಿದ್ದಾರೆ. ಆದ್ರೆ, ಅದಾಗಲೇ ಕ್ಯಾಪ್ಟನ್ ಧೋನಿ ನೆಕ್ಸ್ಟ್ ಸೀಸನ್ ಅನ್ನ ಟಾರ್ಗೆಟ್ ಮಾಡಿದ್ದಾರೆ. ಮುಂದಿನ ಆವೃತ್ತಿ ಐಪಿಎಲ್ಗೆ ಈಗಲೇ ದಿಟ್ಟ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16ಕ್ಕೆ ಅದ್ದೂರಿ ತೆರೆ ಬಿದ್ದು 2 ದಿನಗಳೇ ಉರುಳಿದ್ವು. ಆದ್ರೂ, ಚೆನ್ನೈ ತಂಡ ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕಿದ ಸಂಭ್ರಮವೇ ಕ್ರಿಕೆಟ್ ಲೋಕವನ್ನ ಆವರಿಸಿದೆ. ಜಡೇಜಾ ಹೊಡೆದ ಆ ವಿನ್ನಿಂಗ್ ಶಾಟ್, ಡಗೌಟ್ನಲ್ಲಿದ್ದ ಆಟಗಾರರು ಮೈದಾನಕ್ಕೆ ನುಗ್ಗಿದ ರೀತಿ, ಜಡೇಜಾರನ್ನ ಭಾವುಕ ಧೋನಿ ಎತ್ತಾಡಿದ ಕ್ಷಣ. ಆನಂದಭಾಷ್ಪದಿಂದ ತುಂಬಿದ ಧೋನಿಯ ಕಣ್ಣುಗಳು. ಎಲ್ಲವೂ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ.
ಅಹಮದಾಬಾದ್ನಿಂದ ಚೆನ್ನೈಗೆ ಸಂಭ್ರಮಾಚರಣೆ ಶಿಫ್ಟ್.!
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಗೆದ್ದ ಬಳಿಕ ಆರಂಭವಾದ ಸಂಭ್ರಮಾಚರಣೆ ಇನ್ನೂ ನಿಂತಿಲ್ಲ.. ನಮೋ ಮೈದಾನದಲ್ಲಿ ಆಟಗಾರರು ಸೆಲೆಬ್ರೇಷನ್ ಮಾಡಿ ಸಂಭ್ರಮಿಸಿದ ಚೆನ್ನೈ ಕ್ಯಾಂಪ್, ಇದೀಗ ತವರಿನ ಅಭಿಮಾನಿಗಳೆದುರು ಸಂಭ್ರಮಿಸಲು ವಿಶೇಷ ಪ್ಲಾನ್ ಮಾಡ್ತಿದೆ. ಅದಕ್ಕಾಗಿ ತಲಾ ಧೋನಿಯೂ ಚೆನ್ನೈಗೆ ಬಂದಿಳಿದಿದ್ದಾರೆ. ಆದ್ರೆ, ಸೆಲಬ್ರೇಷನ್ ಹೇಗಿರುತ್ತೆ ಅನ್ನೋದು ಮಾತ್ರ ಗುಟ್ಟಾಗೆ ಉಳಿದಿದೆ.
ಸಂಭ್ರಮಾಚರಣೆ ನಡುವೆಯೇ ಧೋನಿ ಮಹತ್ವದ ನಿರ್ಧಾರ.!
ಒಂದೆಡೆ ಇಡೀ ತಂಡ ಸೆಲಬ್ರೇಷನ್ ಮೂಡ್ನಲ್ಲಿದ್ರೆ, ಕ್ಯಾಪ್ಟನ್ ಧೋನಿ ಬೇರೆಯದ್ದೇ ಯೋಚನೆಯಲ್ಲಿದ್ದಾರೆ. ಈ ಸೀಸನ್ನಲ್ಲಿ ಟೂರ್ನಿಯೂ ಮುಗೀತು. ಟ್ರೋಫಿನೂ ಗೆದ್ದಾಯ್ತು. ಈಗೇನಿದ್ರೂ ಮುಂದಿನ ಟಾರ್ಗೆಟ್ ನೆಕ್ಸ್ಟ್ ಐಪಿಎಲ್ ಅನ್ನೋದು ಧೋನಿ ಮಾತಾಗಿದೆ. ಇದಕ್ಕಾಗಿ ಈಗಾಗಲೇ ದಿಟ್ಟ ಹೆಜ್ಜೆಯನ್ನೂ ಮಾಹಿ ಇಟ್ಟಿದ್ದಾರೆ.
ಸರ್ಜರಿಗೆ ಒಳಗಾಗಲು ಕ್ಯಾಪ್ಟನ್ ಧೋನಿ ನಿರ್ಧಾರ.!
ಈ ಸೀಸನ್ನ ಟೂರ್ನಿಯೇ ಧೋನಿ ಪಾಲಿನ ಕೊನೆಯ ಟೂರ್ನಿ ಎಂದು ಹೇಳಲಾಗಿತ್ತು. ಆದ್ರೆ, ಫೈನಲ್ ಪಂದ್ಯ ಕೊನೆಯಲ್ಲಿ ಮಾತನಾಡಿರೋ ಮುಂದಿನ ಸೀಸನ್ನ ಆಡೋ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ಎಲ್ಲವೂ ಫಿಟ್ನೆಸ್ ಮೇಲೆ ನಿರ್ಧಾರ ಎಂದೂ ಹೇಳಿದ್ದಾರೆ. ಹೀಗಾಗಿಯೇ ಟ್ರೋಫಿ ಗೆದ್ದ ಎರಡೇ ದಿನಕ್ಕೆ ಸರ್ಜರಿಗೆ ಒಳಗಾಗೋ ಮಹತ್ವದ ನಿರ್ಧಾರವನ್ನ ಪ್ರಕಟಿಸಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲಿ ಫಿಟ್ನೆನ್ಗೆ ಮುನ್ನುಡಿ ಬರೆದಿದ್ದೆ ಎಮ್.ಎಸ್ ಧೋನಿ.. ಆದ್ರೆ, ಅಂತಾ ಧೋನಿಯ ಫಿಟ್ನೆಸ್ ಬಗ್ಗೆ ಈ ಸೀಸನ್ನ ಐಪಿಎಲ್ನಲ್ಲಿ ಪ್ರಶ್ನೆಗಳು ಎದ್ವು.. ಟೂರ್ನಿಯ ಆರಂಭದಿಂದ ಅಂತ್ಯದವರೆಗೆ ಧೋನಿ, KNEE INJURY ಯಿಂದ ಬಳಲಿದ್ರು. ಆದ್ರೂ, ಆ ಅಸಾಧ್ಯ ನೋವಿನ ನಡುವೆಯೇ 16 ಪಂದ್ಯಗಳಲ್ಲಿ ಕಣಕ್ಕಿಳಿದು ಹೋರಾಡಿದ್ರು. ಟ್ರೋಫಿ ಗೆಲುವಿನ ವರೆಗೂ ನೋವಿನ ನಡುವೆ ಕೆಚ್ಚೆದೆಯ ಹೋರಾಟ ನಡೆಸಿದ ಧೋನಿ ಇದೀಗ ಗಾಯಕ್ಕೆ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ.
ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಸರ್ಜರಿ.!
ಇಂಜುರಿಯಾಗಿದ್ರೂ ಕೂಡ ಮೈದಾನಕ್ಕಿಳಿದಿದ್ದ ಧೋನಿ, ಹೆಚ್ಚು ಕಾಲ ಬ್ಯಾಟಿಂಗ್ ಮಾಡಲಿಲ್ಲ. ಆದ್ರೆ ವಿಕೆಟ್ ಕೀಪರ್ ಆಗಿ ದೀರ್ಘಕಾಲ ಮೈದಾನದಲ್ಲಿ ಕಳೆದ್ರು. ನೀ ಕ್ಯಾಪ್ ಧರಿಸಿ ಧೋನಿ ಆಡಿದ್ರೂ ಕೂಡ, ಇಡೀ ಇನ್ನಿಂಗ್ಸ್ ಪೂರ್ತಿ ಕಾಲಿನ ಮೇಲೆ ಭಾರ ಬಿಟ್ಟಿದ್ದು, ಕೀಪಿಂಗ್ ವೇಳೆ ಹಲವು ಭಾರಿ ಡೈವ್ ಮಾಡಿದ ಪರಿಣಾಮ ಗಾಯ ಇನ್ನಷ್ಟು ಉಲ್ಭಣಿಸಿದೆ. ಹೀಗಾಗಿ ಸರ್ಜರಿ ಅನಿವಾರ್ಯವಾಗಿದ್ದು, ಮುಂಬೈನ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಧೋನಿ, ಸರ್ಜರಿಗೆ ಒಳಗಾಲಿದ್ದಾರೆ ಎನ್ನಲಾಗಿದೆ. ಈಗಾಗಲೇ ವೈದ್ಯರ ಸಂಪರ್ಕ ಮಾಡಲಾಗಿದ್ದು, ಮುಂದಿನ ಒಂದು ವಾರದೊಳಗೆ ಧೋನಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ.
ಅಭಿಮಾನಿಗಳ ಅಭಿಮಾನಕ್ಕೆ ಕರಗಿದ ಧೋನಿ..!
ಈ ಬಾರಿ ಐಪಿಎಲ್ನಲ್ಲಿ ನಡೆದಿದ್ದು ಧೋನಿ ಜಾತ್ರೆ. ಧೋನಿ ಹೋದಲ್ಲಿ, ಬಂದಲ್ಲಿ ಎಲ್ಲೆಡೆ ಯೆಲ್ಲೋ ಜೆರ್ಸಿಗಳು ರಾರಾಜಿಸಿದ್ವು. ಬೌಂಡರಿ, ಸಿಕ್ಸರ್ಗಳ ಆರ್ಭಟಕ್ಕಿಂತ ಮಹೇಂದ್ರನ ಮೇನಿಯಾನೇ ಜೋರಾಗಿ ನಡೀತು. ಅಭಿಮಾನಿಗಳ ಈ ಅಭಿಮಾನ ಕಂಡು ಧೋನಿಯೇ ಭಾವುಕರಾಗಿ ಬಿಟ್ರು.. ನಿವೃತ್ತಿ ತೆಗೆದುಕೊಳ್ಳೋ ನಿರ್ಧಾರದಿಂದ ಹಿಂದೆ ಸರಿದಿದ್ದಕ್ಕೂ ಇದೇ ಕಾರಣ…
ಒಟ್ಟಿನಲ್ಲಿ, ಮುಂದಿನ ಸೀಸನ್ ಆಡೋ ನಿರ್ಧಾರ ಮಾಡಿರೋ ಮಾಹಿ, ಅಷ್ಟರೊಳಗೆ ಫಿಟ್ & ಫೈನ್ ಆಗೋ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಸರ್ಜರಿ ಬಳಿಕ ಧೋನಿ ಎಷ್ಟರ ಮಟ್ಟಿಗೆ ಫಿಟ್ ಆಗ್ತಾರೆ ಅನ್ನೋದೆ ಸದ್ಯಕ್ಕಿರೋ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ
ಸರ್ಜರಿ ಮಾಡಲು ಮುಂದಾದ ಧೋನಿ
ಅಭಿಮಾನಿಗಳಿಗೆ ಧೋನಿ ಮಹತ್ವದ ನಿರ್ಧಾರ
ನಿರ್ಧಾರಕ್ಕೆ ತಕ್ಕಂತೆ ತಾಕತ್ತು ತೋರಿಸಲಿದ್ದಾರೆ ಧೋನಿ
ಐಪಿಎಲ್ ಮುಗಿದು 2 ದಿನ ಕಳೀತು. ಆದ್ರೂ, ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್ನಲ್ಲಿ ಸಂಭ್ರಮಾಚರಣೆ ಮಾತ್ರ ನಿಂತಿಲ್ಲ. ಆಟಗಾರರು, ಫ್ಯಾನ್ಸ್ ಇನ್ನೂ ಸಂಭ್ರಮದ ಕಡಲಲ್ಲೇ ತೇಲ್ತಿದ್ದಾರೆ. ಆದ್ರೆ, ಅದಾಗಲೇ ಕ್ಯಾಪ್ಟನ್ ಧೋನಿ ನೆಕ್ಸ್ಟ್ ಸೀಸನ್ ಅನ್ನ ಟಾರ್ಗೆಟ್ ಮಾಡಿದ್ದಾರೆ. ಮುಂದಿನ ಆವೃತ್ತಿ ಐಪಿಎಲ್ಗೆ ಈಗಲೇ ದಿಟ್ಟ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16ಕ್ಕೆ ಅದ್ದೂರಿ ತೆರೆ ಬಿದ್ದು 2 ದಿನಗಳೇ ಉರುಳಿದ್ವು. ಆದ್ರೂ, ಚೆನ್ನೈ ತಂಡ ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕಿದ ಸಂಭ್ರಮವೇ ಕ್ರಿಕೆಟ್ ಲೋಕವನ್ನ ಆವರಿಸಿದೆ. ಜಡೇಜಾ ಹೊಡೆದ ಆ ವಿನ್ನಿಂಗ್ ಶಾಟ್, ಡಗೌಟ್ನಲ್ಲಿದ್ದ ಆಟಗಾರರು ಮೈದಾನಕ್ಕೆ ನುಗ್ಗಿದ ರೀತಿ, ಜಡೇಜಾರನ್ನ ಭಾವುಕ ಧೋನಿ ಎತ್ತಾಡಿದ ಕ್ಷಣ. ಆನಂದಭಾಷ್ಪದಿಂದ ತುಂಬಿದ ಧೋನಿಯ ಕಣ್ಣುಗಳು. ಎಲ್ಲವೂ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ.
ಅಹಮದಾಬಾದ್ನಿಂದ ಚೆನ್ನೈಗೆ ಸಂಭ್ರಮಾಚರಣೆ ಶಿಫ್ಟ್.!
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಗೆದ್ದ ಬಳಿಕ ಆರಂಭವಾದ ಸಂಭ್ರಮಾಚರಣೆ ಇನ್ನೂ ನಿಂತಿಲ್ಲ.. ನಮೋ ಮೈದಾನದಲ್ಲಿ ಆಟಗಾರರು ಸೆಲೆಬ್ರೇಷನ್ ಮಾಡಿ ಸಂಭ್ರಮಿಸಿದ ಚೆನ್ನೈ ಕ್ಯಾಂಪ್, ಇದೀಗ ತವರಿನ ಅಭಿಮಾನಿಗಳೆದುರು ಸಂಭ್ರಮಿಸಲು ವಿಶೇಷ ಪ್ಲಾನ್ ಮಾಡ್ತಿದೆ. ಅದಕ್ಕಾಗಿ ತಲಾ ಧೋನಿಯೂ ಚೆನ್ನೈಗೆ ಬಂದಿಳಿದಿದ್ದಾರೆ. ಆದ್ರೆ, ಸೆಲಬ್ರೇಷನ್ ಹೇಗಿರುತ್ತೆ ಅನ್ನೋದು ಮಾತ್ರ ಗುಟ್ಟಾಗೆ ಉಳಿದಿದೆ.
ಸಂಭ್ರಮಾಚರಣೆ ನಡುವೆಯೇ ಧೋನಿ ಮಹತ್ವದ ನಿರ್ಧಾರ.!
ಒಂದೆಡೆ ಇಡೀ ತಂಡ ಸೆಲಬ್ರೇಷನ್ ಮೂಡ್ನಲ್ಲಿದ್ರೆ, ಕ್ಯಾಪ್ಟನ್ ಧೋನಿ ಬೇರೆಯದ್ದೇ ಯೋಚನೆಯಲ್ಲಿದ್ದಾರೆ. ಈ ಸೀಸನ್ನಲ್ಲಿ ಟೂರ್ನಿಯೂ ಮುಗೀತು. ಟ್ರೋಫಿನೂ ಗೆದ್ದಾಯ್ತು. ಈಗೇನಿದ್ರೂ ಮುಂದಿನ ಟಾರ್ಗೆಟ್ ನೆಕ್ಸ್ಟ್ ಐಪಿಎಲ್ ಅನ್ನೋದು ಧೋನಿ ಮಾತಾಗಿದೆ. ಇದಕ್ಕಾಗಿ ಈಗಾಗಲೇ ದಿಟ್ಟ ಹೆಜ್ಜೆಯನ್ನೂ ಮಾಹಿ ಇಟ್ಟಿದ್ದಾರೆ.
ಸರ್ಜರಿಗೆ ಒಳಗಾಗಲು ಕ್ಯಾಪ್ಟನ್ ಧೋನಿ ನಿರ್ಧಾರ.!
ಈ ಸೀಸನ್ನ ಟೂರ್ನಿಯೇ ಧೋನಿ ಪಾಲಿನ ಕೊನೆಯ ಟೂರ್ನಿ ಎಂದು ಹೇಳಲಾಗಿತ್ತು. ಆದ್ರೆ, ಫೈನಲ್ ಪಂದ್ಯ ಕೊನೆಯಲ್ಲಿ ಮಾತನಾಡಿರೋ ಮುಂದಿನ ಸೀಸನ್ನ ಆಡೋ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ಎಲ್ಲವೂ ಫಿಟ್ನೆಸ್ ಮೇಲೆ ನಿರ್ಧಾರ ಎಂದೂ ಹೇಳಿದ್ದಾರೆ. ಹೀಗಾಗಿಯೇ ಟ್ರೋಫಿ ಗೆದ್ದ ಎರಡೇ ದಿನಕ್ಕೆ ಸರ್ಜರಿಗೆ ಒಳಗಾಗೋ ಮಹತ್ವದ ನಿರ್ಧಾರವನ್ನ ಪ್ರಕಟಿಸಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲಿ ಫಿಟ್ನೆನ್ಗೆ ಮುನ್ನುಡಿ ಬರೆದಿದ್ದೆ ಎಮ್.ಎಸ್ ಧೋನಿ.. ಆದ್ರೆ, ಅಂತಾ ಧೋನಿಯ ಫಿಟ್ನೆಸ್ ಬಗ್ಗೆ ಈ ಸೀಸನ್ನ ಐಪಿಎಲ್ನಲ್ಲಿ ಪ್ರಶ್ನೆಗಳು ಎದ್ವು.. ಟೂರ್ನಿಯ ಆರಂಭದಿಂದ ಅಂತ್ಯದವರೆಗೆ ಧೋನಿ, KNEE INJURY ಯಿಂದ ಬಳಲಿದ್ರು. ಆದ್ರೂ, ಆ ಅಸಾಧ್ಯ ನೋವಿನ ನಡುವೆಯೇ 16 ಪಂದ್ಯಗಳಲ್ಲಿ ಕಣಕ್ಕಿಳಿದು ಹೋರಾಡಿದ್ರು. ಟ್ರೋಫಿ ಗೆಲುವಿನ ವರೆಗೂ ನೋವಿನ ನಡುವೆ ಕೆಚ್ಚೆದೆಯ ಹೋರಾಟ ನಡೆಸಿದ ಧೋನಿ ಇದೀಗ ಗಾಯಕ್ಕೆ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ.
ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಸರ್ಜರಿ.!
ಇಂಜುರಿಯಾಗಿದ್ರೂ ಕೂಡ ಮೈದಾನಕ್ಕಿಳಿದಿದ್ದ ಧೋನಿ, ಹೆಚ್ಚು ಕಾಲ ಬ್ಯಾಟಿಂಗ್ ಮಾಡಲಿಲ್ಲ. ಆದ್ರೆ ವಿಕೆಟ್ ಕೀಪರ್ ಆಗಿ ದೀರ್ಘಕಾಲ ಮೈದಾನದಲ್ಲಿ ಕಳೆದ್ರು. ನೀ ಕ್ಯಾಪ್ ಧರಿಸಿ ಧೋನಿ ಆಡಿದ್ರೂ ಕೂಡ, ಇಡೀ ಇನ್ನಿಂಗ್ಸ್ ಪೂರ್ತಿ ಕಾಲಿನ ಮೇಲೆ ಭಾರ ಬಿಟ್ಟಿದ್ದು, ಕೀಪಿಂಗ್ ವೇಳೆ ಹಲವು ಭಾರಿ ಡೈವ್ ಮಾಡಿದ ಪರಿಣಾಮ ಗಾಯ ಇನ್ನಷ್ಟು ಉಲ್ಭಣಿಸಿದೆ. ಹೀಗಾಗಿ ಸರ್ಜರಿ ಅನಿವಾರ್ಯವಾಗಿದ್ದು, ಮುಂಬೈನ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಧೋನಿ, ಸರ್ಜರಿಗೆ ಒಳಗಾಲಿದ್ದಾರೆ ಎನ್ನಲಾಗಿದೆ. ಈಗಾಗಲೇ ವೈದ್ಯರ ಸಂಪರ್ಕ ಮಾಡಲಾಗಿದ್ದು, ಮುಂದಿನ ಒಂದು ವಾರದೊಳಗೆ ಧೋನಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ.
ಅಭಿಮಾನಿಗಳ ಅಭಿಮಾನಕ್ಕೆ ಕರಗಿದ ಧೋನಿ..!
ಈ ಬಾರಿ ಐಪಿಎಲ್ನಲ್ಲಿ ನಡೆದಿದ್ದು ಧೋನಿ ಜಾತ್ರೆ. ಧೋನಿ ಹೋದಲ್ಲಿ, ಬಂದಲ್ಲಿ ಎಲ್ಲೆಡೆ ಯೆಲ್ಲೋ ಜೆರ್ಸಿಗಳು ರಾರಾಜಿಸಿದ್ವು. ಬೌಂಡರಿ, ಸಿಕ್ಸರ್ಗಳ ಆರ್ಭಟಕ್ಕಿಂತ ಮಹೇಂದ್ರನ ಮೇನಿಯಾನೇ ಜೋರಾಗಿ ನಡೀತು. ಅಭಿಮಾನಿಗಳ ಈ ಅಭಿಮಾನ ಕಂಡು ಧೋನಿಯೇ ಭಾವುಕರಾಗಿ ಬಿಟ್ರು.. ನಿವೃತ್ತಿ ತೆಗೆದುಕೊಳ್ಳೋ ನಿರ್ಧಾರದಿಂದ ಹಿಂದೆ ಸರಿದಿದ್ದಕ್ಕೂ ಇದೇ ಕಾರಣ…
ಒಟ್ಟಿನಲ್ಲಿ, ಮುಂದಿನ ಸೀಸನ್ ಆಡೋ ನಿರ್ಧಾರ ಮಾಡಿರೋ ಮಾಹಿ, ಅಷ್ಟರೊಳಗೆ ಫಿಟ್ & ಫೈನ್ ಆಗೋ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಸರ್ಜರಿ ಬಳಿಕ ಧೋನಿ ಎಷ್ಟರ ಮಟ್ಟಿಗೆ ಫಿಟ್ ಆಗ್ತಾರೆ ಅನ್ನೋದೆ ಸದ್ಯಕ್ಕಿರೋ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ