ಪ್ರೀತಿಸಿ ಮದುವೆಯಾದವರಿಗೆ ಸಮಸ್ಯೆಯಾಗುವ ದಿನ
ಆರೋಗ್ಯ ಸಮಸ್ಯೆ ಅಥವಾ ಸೋಮಾರಿತನ ಕಾಡಬಹುದು
ಮನೆಯವರ ಸಹಕಾರದಿಂದ ದಿಟ್ಟ ಹೆಜ್ಜೆಯಿಡಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮೃಗಶಿರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ

- ಇಂದು ಅನಿರೀಕ್ಷಿತವಾಗಿ ಕೆಲವು ಕೆಲಸಗಳು ಕೈಗೂಡಬಹುದು
- ದಾಂಪತ್ಯದಲ್ಲಿ ಹೊಸ ತಿರುವು ಸಾಧ್ಯತೆ
- ತಾಳ್ಮೆಯಿದ್ದರೆ ಶುಭವಿದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಆದಾಯದ ಮೂಲ ಹೆಚ್ಚಾಗಬಹುದು
- ಮನೆಯವರ ಸಹಕಾರದಿಂದ ದಿಟ್ಟ ಹೆಜ್ಜೆಯಿಡಬಹುದು
- ಕುಲದೇವತಾರಾಧನೆ ಮಾಡಿ
ವೃಷಭ

- ಸಾಂಸಾರಿಕವಾಗಿ ನೆಮ್ಮದಿಯಿರುವ ದಿನ
- ಹೊಸ ಯೋಜನೆಯಿಂದ ಸಂತೋಷವಾಗುತ್ತದೆ
- ಕಚೇರಿಯಲ್ಲಿ ಕಿರಿಕಿರಿಯ ದಿನ
- ಕೆಲಸದಲ್ಲಿ ನಿರಾಸಕ್ತಿ ಉಂಟಾಗಬಹುದು
- ಆರೋಗ್ಯ ಸಮಸ್ಯೆ ಅಥವಾ ಸೋಮಾರಿತನ ಕಾಡಬಹುದು
- ಬುದ್ಧಿವಂತಿಕೆಗೆ ತಕ್ಕ ಚಟುವಟಿಕೆಯಿರಲಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಿಥುನ

- ವ್ಯಾವಹಾರಿಕವಾಗಿ ನಷ್ಟ ಅನುಭವಿಸಬಹುದು, ಸೂಕ್ತವಲ್ಲದ ನಿರ್ಧಾರ ಮಾಡಬಹುದು
- ತುಂಬಾ ಶ್ರಮಿಸಬೇಕಾದ ದಿನ
- ಅಲ್ಪಗಳಿಕೆ ಆದರೆ ತೃಪ್ತಿಯಿರುತ್ತದೆ
- ಯಾವುದೇ ರೀತಿಯ ಮನಸ್ತಾಪಗಳು ಬೇಡ
- ವಿದ್ಯಾರ್ಥಿಗಳಿಗೆ ಶುಭವಿದೆ
- ಪ್ರೀತಿಸಿ ಮದುವೆಯಾದವರಿಗೆ ಸಮಸ್ಯೆಯಾಗುವ ದಿನ
- ಪಾರಿಜಾತ ಸರಸ್ವತಿಯನ್ನ ಪ್ರಾರ್ಥನೆ ಮಾಡಿ
ಕಟಕ

- ಉದ್ಯೋಗದಲ್ಲಿ ಬಡ್ತಿಗಾಗಿ ಹೋರಾಟ ಆದರೆ ನಿರಾಸೆಯಾಗಬಹುದು
- ಇಂದು ನಿಮ್ಮ ವೃತ್ತಿಯಲ್ಲಿ ಹಿನ್ನಡೆಯಾಗಬಹುದು
- ಅಂದುಕೊಂಡ ಕೆಲಸ ಸಕಾಲಕ್ಕೆ ಆಗುವುದಿಲ್ಲ
- ಇಲ್ಲಿಯವರೆಗೆ ಸಂಪಾದಿಸಿದ ಗೌರವಕ್ಕೆ ಕುಂದು ಬರಬಹುದು
- ಇಂದು ಸರಿಯಾಗಿ ಆಲೋಚಿಸಿ ಎಲ್ಲವನ್ನು ನಿರ್ಧಾರ ಮಾಡಿ
- ಭೂ ಲಾಭಕ್ಕೆ ಅವಕಾಶವಿದೆ ಚಿಂತನೆ ನಡೆಸಿ
- ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಸಿಂಹ

- ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು ಆದರೆ ತಾಳ್ಮೆಯಿರಲಿ
- ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ
- ಆಶ್ಚರ್ಯವಾಗುವ ರೀತಿಯಲ್ಲಿ ಜೀವನ ಶೈಲಿ ಬದಲಾವಣೆಯಾಗಬಹುದು
- ಉತ್ತಮ ಸ್ನೇಹಿತರ ಸಂಪರ್ಕ ಸಿಗಬಹುದು ಅದರಿಂದ ಅನುಕೂಲವಿದೆ
- ಆಸ್ತಿ ಖರೀದಿಗೆ ಚಿಂತನೆ ಮಾಡಬಹುದು
- ಹಳೆ ಹೂಡಿಕೆಯಿಂದ ಧನಲಾಭದ ಸೂಚನೆಯಿದೆ
- ಐಶ್ವರ್ಯ ಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ
ಕನ್ಯಾ

- ಇಂದು ಮಾನಸಿಕವಾಗಿ ಅಸಮಾಧಾನ
- ಭಯದ ನಡುವೆ ಬದುಕು
- ಆರೋಗ್ಯ ಸಮಸ್ಯೆ ನಿಮಗೆ ದೊಡ್ಡ ಶತ್ರುವಾಗಬಹುದು
- ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
- ಇಂದು ಯಾವ ವಿಚಾರದಲ್ಲೂ ಅನುಮಾನ ಬೇಡ
- ಏಕಮುಖ ನಿರ್ಧಾರದಿಂದ ತೊಂದರೆಯಾಗಬಹುದು
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ
ತುಲಾ

- ಸ್ಥಳ ಬದಲಾವಣೆ ಸೂಚನೆಯಿದೆ ಅದರಿಂದ ಶುಭವಾಗುತ್ತದೆ
- ದಾಯಾದಿ ಕಲಹಕ್ಕೆ ಅವಕಾಶ ಮಾಡಿಕೊಡಬೇಡಿ
- ಕೆಲವು ಸವಾಲುಗಳು ಎದುರಾಗಬಹುದು
- ಹಠಕ್ಕೆ ಬಿದ್ದು ಕೆಲಸವನ್ನ ಸಾಧಿಸುತ್ತೀರಿ
- ಸೇವಕ ವರ್ಗದಿಂದ ಅಸಹಕಾರ ಅದರಿಂದ ಬೇಸರ
- ಆರ್ಥಿಕ ಚಿಂತೆ ಕಾಡಬಹುದು
- ಧನಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ

- ನಿಮ್ಮ ಬುದ್ಧಿವಂತಿಕೆ ಉಪಯೋಗಕ್ಕೆ ಬರುವುದಿಲ್ಲ
- ನಿರುದ್ಯೋಗಿಗಳಿಗೆ ತುಂಬಾ ಸಮಸ್ಯೆಯ ದಿನ
- ಮನೆಯಲ್ಲಿ ನೆಮ್ಮದಿಗೆ ಭಂಗ ಬರಬಹುದು
- ಬೇರೆ ವಿಚಾರಗಳು ಮನಸ್ಸಿಗೆ ಬರಬಹುದು ಆದರೆ ತಾಳ್ಮೆ ಮುಖ್ಯ
- ಸ್ನೇಹಿತ ವರ್ಗದಿಂದ ಸಲಹೆ ಪಡೆಯಿರಿ ಒಳ್ಳೆಯದಾಗಬಹುದು
- ಪರಿಶ್ರಮ ವ್ಯರ್ಥವಾಯಿತು ಎಂಬ ಭಾವನೆ ಬರಬಹುದು
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯಗ್ರಹ ಪ್ರಾರ್ಥನೆ ಮಾಡಿ
ಧನುಸ್ಸು

- ಸಾಮಾಜಿಕವಾದ ಗೌರವ ಸಿಗಬಹುದು
- ವಿದ್ಯಾ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
- ಉದ್ಯೋಗಕ್ಕಾಗಿ ಹೋರಾಟ ಅದರಿಂದ ಜಯವಿದೆ
- ಸ್ಥಾನ ಬದಲಾವಣೆಯ ಸೂಚನೆಯಿದೆ
- ಅಪರಿಚಿತರಿಂದ ಸಮಸ್ಯೆಗೆ ಅವಕಾಶವಿದೆ ಎಚ್ಚರ
- ನಿಮ್ಮ ಆಲೋಚನೆಯಂತೆ ನಡೆಯಿರಿ
- ಇಂದು ಧ್ಯಾನದ ಮೊರೆಹೋಗಿ
ಮಕರ

- ಶತ್ರುನಾಶಕ್ಕೆ ಪ್ರಯತ್ನ ಆದರೆ ವಿಫಲವಾಗಬಹುದು
- ಮಾನಸಿಕ ಸಮಾಧಾನವಿರುವುದಿಲ್ಲ
- ಬುದ್ಧಿಯ ದುರುಪಯೋಗ ಮಾಡಿಕೊಳ್ಳಬೇಡಿ
- ಸರ್ಕಾರಿ ಕೆಲಸದಲ್ಲಿ ಪ್ರಗತಿ ಹೊಂದುತ್ತೀರಿ
- ಇಂದು ರಾಜಕಾರಣಿಗಳ ಸಂಪರ್ಕ ಆದರೆ ಭರವಸೆ ಮಾತ್ರ ಸಿಗಬಹುದು
- ನಿರಾಶದಾಯಕ ವಾತಾವರಣಕ್ಕೆ ಸಾಕ್ಷಿಯಾಗಬಹುದು
- ಪ್ರತ್ಯಂಗಿರಾ ದೇವಿಯನ್ನ ಆರಾಧನೆ ಮಾಡಿ
ಕುಂಭ

- ನಿಮ್ಮ ಮಾತು ಹಿಡಿತ ತಪ್ಪಿದರೆ ಸಮಸ್ಯೆ ಉಂಟಾಗಬಹುದು
- ಇಂದು ಸಾಲ ಬಾಧೆ ಕಾಡಬಹುದು
- ಹಳೆಯ ತಪ್ಪಿನಿಂದ ಸಮಸ್ಯೆಯಾಗಬಹುದು
- ಬೇರೆಯವರ ವ್ಯವಹಾರದಲ್ಲಿ ಭಾಗಿಯಾಗಬಹುದು
- ಮಕ್ಕಳ ಭವಿಷ್ಯ ನಿಮಗೆ ಚಿಂತೆ ಉಂಟುಮಾಡಬಹುದು
- ಸಂಬಂಧಿಕರು ಸಹಾಯ ಮಾಡಿ ಅವಮಾನ ಮಾಡಬಹುದು
- ಋಣಮೋಚನ ಮಂಗಳ ಸ್ತೋತ್ರ ಶ್ರವಣ ಮಾಡಿ
ಮೀನ

- ಇಂದು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ
- ನಿಮ್ಮ ನಿರ್ಧಾರವನ್ನು ಕಾರ್ಯರೂಪಗೊಳಿಸಿ
- ಯಾರೊಂದಿಗೂ ಕೋಪದಿಂದ ವರ್ತಿಸಬೇಡಿ
- ಕೆಲಸ, ಕಾರ್ಯಗಳಲ್ಲಿ ನಿರೀಕ್ಷಿತವಾದ ಜಯವಿದೆ
- ಸಮಾಜದಲ್ಲಿರುವ ಗೌರವವನ್ನ ಕಾಪಾಡಿಕೊಳ್ಳಿ
- ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
- ವಿದ್ಯಾಧಿದೇವತೆಯನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ