ಮಕ್ಕಳ ಜತೆ ಹಲವು ವಿಚಾರ ಚರ್ಚಿಸಿ ನಿರ್ಧಾರ ಮಾಡಬಹುದು
ಆತ್ಮೀಯರನ್ನ ಭೇಟಿ ಮಾಡಿ ನಿಮ್ಮ ಕಷ್ಟಗಳನ್ನ ಹೇಳಿಕೊಳ್ಳಬಹುದು
ಇಂದು ಗಟ್ಟಿ ಮನಸ್ಸಿನಿಂದ ಕೆಲವು ತೀರ್ಮಾನ ಮಾಡಬೇಕಾಗುತ್ತದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ

- ದಿನ ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಬಹುದು
- ವ್ಯಾಪಾರ, ವ್ಯವಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿರಲಿ
- ಹೆಚ್ಚಿನ ಲಾಭದ ಆಸೆ ಪಟ್ಟರೆ ನಷ್ಟ ಹೊಂದುವ ಸಾಧ್ಯತೆಯಿದೆ
- ದುಷ್ಟ ಮನಸ್ಸಿನ ಕೆಲವರು ನಿಮಗೆ ಹಿಂಸೆ ಕೊಡಬಹುದು
- ನಿಮ್ಮ ಅಧಿಕಾರ ಅಥವಾ ಹಕ್ಕಿನ ದುರ್ಬಳಕೆಯ ಸಾಧ್ಯತೆ ಹೆಚ್ಚಾಗಿದೆ
- ಸರಿಯಾದ ನಿರ್ಧಾರಗಳಿಲ್ಲದೇ ಅವಮಾನ ಹೊಂದಬಹುದು
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಆತ್ಮೀಯರಿಂದ ಶುಭ ಸುದ್ದಿ ಕೇಳುತ್ತೀರಿ ಅದರಿಂದ ಸಂತಸವಾಗುತ್ತದೆ
- ಜಟಿಲವಾದ ಸಮಸ್ಯೆಗಳನ್ನ ಸುಲಭವಾಗಿ ಬಗೆಹರಿಸುತ್ತೀರಿ
- ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
- ಕೆಲಸದ ಸ್ಥಳದಲ್ಲಿ ನಾಯಕತ್ವ ನಿಮ್ಮದಾಗಬಹುದು
- ಹೊಸ ವ್ಯವಹಾರದ ಯೋಜನೆಗೆ ಅವಕಾಶವಿದೆ
- ತಾಯಿಯವರಿಗೆ ಅನಿರೀಕ್ಷಿತವಾಗಿ ತೊಂದರೆಯಾಗಬಹುದು
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಮಿಥುನ

- ಹಣಕಾಸಿನ ಯೋಜನೆಗಳನ್ನ ಹಾಕಲು ಉತ್ತಮವಾದ ದಿನ
- ಸಾಮಾಜಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ
- ಮನೆಯವರ ವಿಶ್ವಾಸವನ್ನ ಉಳಿಸಿಕೊಳ್ಳುಲು ಪ್ರಯತ್ನಿಸಿ
- ಆಡಳಿತಾತ್ಮಕ ವಿಚಾರದಲ್ಲಿ ಕೆಲವು ಸಮಸ್ಯೆಯಾಗಬಹುದು
- ಜನರು ಬುದ್ಧಿವಂತರಿರುತ್ತಾರೆ ನೀವು ಅರ್ಥ ಮಾಡಿಕೊಳ್ಳಬೇಕು
- ಸಾಂಸಾರಿಕವಾಗಿ ಕೆಲವು ವಿಚಾರಗಳನ್ನ ಸಮಾಧಾನ ಮಾಡಿಕೊಳ್ಳಿ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ

- ವ್ಯವಹಾರ ಅಥವಾ ಉದ್ಯೋಗದಲ್ಲಿ ಮನಸ್ಸಿಗೆ ಮೆಚ್ಚುವಂತೆ ಕೆಲಸ ಮಾಡಿ
- ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ
- ಆಂತರಿಕ ಶಕ್ತಿ, ಉತ್ಸಾಹ ಹೆಚ್ಚಾಗಿರುತ್ತದೆ
- ಮುಖಸ್ತುತಿ ಮಾಡುವ ಜನರು ವಂಚಿಸಬಹುದು
- ಜನರ ಮಾತನ್ನು ಹೆಜ್ಜೆ ಹೆಜ್ಜೆಗೂ ಗಮನಿಸಿ
- ಆರ್ಥಿಕವಾಗಿ ತೊಂದರೆಯಿಲ್ಲ ಸಮಾಧಾನ ಇರುತ್ತದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಅದೃಷ್ಟದ ಬೆಂಬಲ ಸಂಪೂರ್ಣವಾಗಿದ್ದು ಶುಭವಿದೆ
- ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬೇಡ
- ಬೇರೆಯವರ ತಪ್ಪುಗಳನ್ನು ಎತ್ತಿ ತೋರಿಸಬೇಡಿ
- ಉದ್ಯೋಗ ಸ್ಥಳದಲ್ಲಿ ಬಡ್ತಿಗೆ ಅವಕಾಶವಿದೆ
- ನಿಮ್ಮ ಪ್ರತಿಭೆ ಗುರುತಿಸಿ ಗೌರವಿಸಬಹುದು
- ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ಸಮಯ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಆತ್ಮೀಯರನ್ನು ಭೇಟಿ ಮಾಡಿ ನಿಮ್ಮ ಕಷ್ಟಗಳನ್ನ ಹೇಳಿಕೊಳ್ಳಬಹುದು
- ವ್ಯವಹಾರಿಕವಾಗಿ ತಪ್ಪು ಮಾಹಿತಿಯ ಬಗ್ಗೆ ಚರ್ಚೆ ಮಾಡಬಹುದು
- ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು
- ಕುಟುಂಬದಲ್ಲಿ ಜಗಳಕ್ಕೆ ಅವಕಾಶ ಬೇಡ
- ಆಸ್ತಿಯ ವಿಚಾರದಲ್ಲಿ ನೀವಾಡುವ ಮಾತು, ನಿರ್ಧಾರದಿಂದ ತೊಂದರೆಯಾಗಬಹುದು
- ಬೇರೆಯವರ ಮಾತಿಗೆ ಸ್ವಲ್ಪ ಬೆಲೆಯಿರಲಿ
- ಐಕ್ಯಮತ್ಯ ಮಂತ್ರವನ್ನ ಶ್ರವಣ ಮಾಡಿ
ತುಲಾ

- ಕೆಲಸದಲ್ಲಿ ನಿಮ್ಮ ಗಮನ ಹೆಚ್ಚಾಗಿರಲಿ
- ಸಹೋದರ ವರ್ಗದಿಂದ ಸಿಹಿಸುದ್ದಿ ಬರಬಹುದು
- ಮಕ್ಕಳು ತಮ್ಮ ಚಟುವಟಿಕೆಯಿಂದ ಸಂತೋಷ ಪಡಿಸುತ್ತಾರೆ
- ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಪ್ರೇಮಿಗಳಿಗೆ ಶುಭ ದಿನ
- ಪ್ರಯಾಣಕ್ಕೆ ಸಮಯ ಅನುಕೂಲಕರವಾಗಿದೆ
- ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ವೈಯಕ್ತಿಕವಾದ ಕೆಲವು ಕೆಲಸಗಳಿಗೆ ಅಡೆತಡೆ ಉಂಟಾಗಬಹುದು
- ಇಂದು ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಜನರನ್ನು ನಿಮ್ಮತ್ತ ಆಕರ್ಷಿಸುವಲ್ಲಿ ವಿಫಲರಾಗುತ್ತೀರಿ
- ಮಾನಸಿಕವಾಗಿ ತುಂಬಾ ಬೆಳೆಯುತ್ತೀರಿ
- ಮಕ್ಕಳ ಬಗ್ಗೆ ಒಲವು ತೋರಿಸಿ ಸಮಾಧಾನ ಕೊಡುತ್ತದೆ
- ಬೇರೆಯವರ ಮಾತಿಗೆ ಸ್ವಲ್ಪ ಬೆಲೆಯನ್ನ ಕೊಡಿ
- ಕುಲದೇವತಾ ಪ್ರಾರ್ಥನೆ ಮಾಡಿ
ಧನುಸ್ಸು

- ಬೇರೆಯವರ ಮಾತುಗಳನ್ನು ಹೆಚ್ಚಾಗಿ ನಂಬಬೇಡಿ
- ದಿನಚರಿಯಲ್ಲಿ ಅಸ್ತವ್ಯಸ್ತವಾಗಬಹುದು
- ಮಾತಿನಿಂದ ಬೇರೆಯವರಿಗೆ ನೋವುಂಟು ಮಾಡಬೇಡಿ
- ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಡಬಹುದು
- ಹಳೆ ನೆನಪಿನಿಂದ ಆತ್ಮವಿಶ್ವಾಸ ಕಡಿಮೆಯಾಗುತ್ತದೆ
- ಎಲ್ಲಾ ಇದ್ದರೂ ಅನುಭವಿಸುವ ಯೋಗವಿಲ್ಲ
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಮಕರ

- ಸಾಂಸಾರಿಕ ಜೀವನದಲ್ಲಿ ಯಾವುದೇ ಕಾರಣಕ್ಕೂ ಜಗಳ ಬೇಡ
- ವ್ಯವಹಾರಿಕವಾಗಿ ಆದಾಯ ಹೆಚ್ಚಾಗಬಹುದು
- ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು
- ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು
- ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ
- ಮಾನಸಿಕವಾಗಿ ಸ್ವಲ್ಪ ಸಮಾಧಾನದ ದಿನ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ಸಮಯ
- ಜೀವನದ ಬಗ್ಗೆ ಧನಾತ್ಮಕ ಚಿಂತನೆಯಿರಲಿ
- ಮಕ್ಕಳ ಜೊತೆ ಹಲವು ವಿಚಾರಗಳನ್ನ ಚರ್ಚೆಮಾಡಿ ನಿರ್ಧಾರ ಮಾಡಬಹುದು
- ಮನೆ ಮತ್ತು ವ್ಯವಹಾರದ ಅಭಿವೃದ್ಧಿಗೆ ಅವಕಾಶವಿದೆ
- ನಿಮ್ಮ ಕೆಲಸದ ವೈಖರಿ ಬೇರೆಯವರನ್ನ ಆಕರ್ಷಣೆ ಮಾಡಬಹುದು
- ಸಮಾಜದಲ್ಲಿ ಹೆಸರು ಮಾಡಲು ಅವಕಾಶವಿದೆ
- ಶಿರಡಿ ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಮೀನ

- ದೂರದ ಪ್ರಯಾಣ ಮಾಡುವ ಸಂಭವವಿದೆ
- ಮಕ್ಕಳ ಚಟುವಟಿಕೆ, ವರ್ತನೆ ಬೇಸರ ತರಬಹುದು
- ಮನೆಯಲ್ಲಿ ಅಶಾಂತಿಯ ವಾತಾವರಣ
- ನಕಾರಾತ್ಮಕ ಚಿಂತೆಯಿಂದ ಮನಸ್ಸನ್ನ ಕೆಡಿಸಿಕೊಳ್ಳಬೇಡಿ
- ಮಹಾತ್ಮರ, ಸಾಧಕರ ಭೇಟಿಗೆ ಅವಕಾಶವಿದೆ
- ಇಂದು ಗಟ್ಟಿ ಮನಸ್ಸಿನಿಂದ ಕೆಲವು ತೀರ್ಮಾನ ಮಾಡಬೇಕಾಗುತ್ತದೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ