/newsfirstlive-kannada/media/post_attachments/wp-content/uploads/2024/09/Darshan-Pavithra-Gowda-Photo-1.jpg)
ಬೆಂಗಳೂರು: ಕೇಸ್​ವೊಂದರಲ್ಲಿ ನಟ ದರ್ಶನ್​ ಅವರು ಜೈಲು ಸೇರಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್​ಗೆ ರೇಣುಕಾಸ್ವಾಮಿ ಕೇಸ್​ ಸಂಬಂಧ ಪೊಲೀಸ್ರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ರು. ಕೋರ್ಟ್​ಗೆ ಸಲ್ಲಿಸಲಾದ ಈ ಚಾರ್ಜ್​ಶೀಟ್​​ನಲ್ಲಿ ಆಘಾತಕಾರಿ ವಿಷಯಗಳು ಬಹಿರಂಗವಾಗಿವೆ.
ನಟಿ ಪವಿತ್ರಾಗೌಡ ಅವರನ್ನು ಮೆಚ್ಚಿಸಲು ನಟ ದರ್ಶನ್ ರೇಣುಕಾಸ್ವಾಮಿ ಜೀವ ತೆಗೆದರು ಎನ್ನುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ನಟ ದರ್ಶನ್​ಗೆ ಪವಿತ್ರಾಗೌಡ ಬ್ಲಾಕ್​ಮೇಲ್​ ಮಾಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ.
ವಿಜಯಲಕ್ಷ್ಮಿಯಿಂದಲೇ ಗಂಭೀರ ಆರೋಪ
ನನ್ನ ಆಪ್ತ ವಲಯದಿಂದಲೇ ದರ್ಶನ್ ಹಾಗೂ ಪವಿತ್ರಾ ಸಂಬಂಧದ ಬಗ್ಗೆ ಗೊತ್ತಾಗಿತ್ತು. ನಾನು ಆ ವಿಚಾರದ ಬಗ್ಗೆ ಮಾತಾಡಿದಾಗ ದರ್ಶನ್​​, ನನ್ನ ನಡುವೆ ಜಗಳ ಆಗಿತ್ತು. ದರ್ಶನ್​ ಕೂಡ ನನ್ನ ದುಡ್ಡು ನನ್ನಿಷ್ಟ ಎಂದಿದ್ದರು. ಈ ವಿಷಯಕ್ಕೆ ನಮ್ಮಿಬ್ಬರ ನಡುವೆ ಆಗಾಗ ಜಗಳ ಆಗುತ್ತಲೇ ಇತ್ತು. ಪವಿತ್ರಾಗೌಡ ಬಳಿ ದರ್ಶನ್​ ಖಾಸಗಿ ವಿಡಿಯೋ, ಫೋಟೋಗಳಿರೋ ಹಾರ್ಡ್​ ಡಿಸ್ಕ್​​ ಇತ್ತು. ಹಾರ್ಡ್​ ಡಿಸ್ಕ್​​ ತನ್ನ ತಾಯಿ ಮನೆಯಲ್ಲಿ ಇಟ್ಟು ದರ್ಶನ್​ಗೆ ಬ್ಲಾಕ್​ಮೇಲ್​ ಮಾಡುತ್ತಿದ್ದಳು ಎಂದು ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದು, ಇದು ಚಾರ್ಜ್​ಶೀಟ್​ನಲ್ಲಿ ದಾಖಲಾಗಿದೆ.
ದರ್ಶನ್​ ಏನಂದ್ರು?
ಪವಿತ್ರಾಗೌಡ ಜೊತೆ 10 ವರ್ಷಗಳಿಂದ ನಾನು ಲೀವ್-ಇನ್ ರಿಲೇಷನ್ಷಿಪ್ನಲ್ಲಿ ಇದ್ದೇನೆ. ಆರ್​​.ಆರ್​ ನಗರದಲ್ಲಿ ನನ್ನ ಮನೆಯಿಂದ ಒಂದೂವರೆ ಕಿಲೋ ಮೀಟರ್​ ದೂರದಲ್ಲಿ ಪವಿತ್ರಾ ಗೌಡ ನೆಲೆಸಿದ್ದಾರೆ ಎಂದು ದರ್ಶನ್​ ಹೇಳಿರುವುದು ಕೂಡ ಚಾರ್ಜ್​ಶೀಟ್​ನಲ್ಲಿ ರೆಕಾರ್ಡ್​ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us