newsfirstkannada.com

ಅನ್ನಭಾಗ್ಯಕ್ಕೆ ಕನ್ನ.. ಒಂದೊಂದು ಕಾರ್ಡ್​ನಿಂದ ಒಂದೊಂದು ಕೆಜಿ ಅಕ್ಕಿ ಕದ್ದಿಯುತ್ತಿದ್ದ ಸಿಬ್ಬಂದಿ ಅಮಾನತು

Share :

24-08-2023

    ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕಾರ್ಡ್​ಗೆ 1 ಕೆ.ಜಿ ಅಕ್ಕಿ ಕದಿಯುತ್ತಿದ್ದ ಸಿಬ್ಬಂದಿ

    ನ್ಯೂಸ್​ಫಸ್ಟ್ ಚಾನೆಲ್​ನಲ್ಲಿ ವರದಿ ಪ್ರಸಾರವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು

    ಜನರಿಗೆ ಅನ್ನಭಾಗ್ಯದಡಿ ಅಕ್ಕಿ ಕಡಿಮೆ ಕೊಡದಂತೆ ಖಡಕ್ ಸೂಚನೆ

ದಾವಣಗೆರೆ: ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕಾರ್ಡ್​ಗೆ 1 ಕೆ.ಜಿ ಅಕ್ಕಿ ಕದಿಯುತ್ತಿದ್ದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅನ್ನಭಾಗ್ಯ ಅಕ್ಕಿ ಕದಿಯುತ್ತಿರುವ ಬಗ್ಗೆ ನ್ಯೂಸ್​ಫಸ್ಟ್ ಚಾನೆಲ್  ಸುದ್ದಿ ಬಿತ್ತರಿಸಿತ್ತು. ಈ ಬಗ್ಗೆ ಗಮನಿಸಿದ್ದ ಆಹಾರ ಇಲಾಖೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ.

ಗ್ರಾಮದ ನ್ಯಾಯಬೆಲೆ ಅಂಗಡಿಯ ಸಿದ್ದಪ್ಪ ಅಮಾನತುಗೊಂಡ ಸಿಬ್ಬಂದಿ. ಇವರು ಫಲಾನುವಿಗಳಿಗೆ ಗೊತ್ತಿಲ್ಲದಂತೆ ಪ್ರತಿ ಕಾರ್ಡ್​ನಿಂದ ಒಂದು ಕೆಜಿ ಅಕ್ಕಿ ಕದಿಯುತ್ತಿದ್ದನು. ಇವರ ಲೈಸನ್ಸ್ ಅಡಿ ಮಾವಿನಹೊಳೆ, ಮರಳಹಟ್ಟಿ, ದಂಡಿಗನಹಳ್ಳಿ ಮತ್ತು ಗಂಡಗನ ಹಂಕಲು ಗ್ರಾಮಗಳ 250 ಕ್ಕೂ ಅಧಿಕ ಕಾರ್ಡ್​ಗಳಿವೆ. ಸದ್ಯ ಸಿಬ್ಬಂದಿ ಮಾಡುತ್ತಿದ್ದ ಕಳ್ಳಾಟವನ್ನು ಯುವಕನೊಬ್ಬ ವಿಡಿಯೋ ಮಾಡಿದ್ದನು. ಹೀಗಾಗಿ ಸಿಬ್ಬಂದಿಯ ಲೈಸೆನ್ಸ್ ಕ್ಯಾನ್ಸ್​ಲ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದರು.

ಇದನ್ನು ಓದಿ: ಅನ್ನಭಾಗ್ಯಕ್ಕೆ ಸಿಬ್ಬಂದಿಯಿಂದ ಕನ್ನ.. ಪ್ರತಿ ಕಾರ್ಡ್​ನಿಂದ ಎಷ್ಟು ಕೆಜಿ ಅಕ್ಕಿ ಕದಿಯುತ್ತಿದ್ದ ಗೊತ್ತಾ..?

ಈ ಬಗ್ಗೆ ಸ್ಥಳೀಯ ಶಾಸಕ ಬಸವರಾಜ್ ಶಿವಗಂಗಾ ಅವರ ಗಮನಕ್ಕೂ ತರಲಾಗಿತ್ತು. ಹೀಗಾಗಿ ಸಿಬ್ಬಂದಿಯ ಕಳ್ಳಾಟದಿಂದ ಎಚ್ಚೆತ್ತುಕೊಂಡ ಆಹಾರ ಇಲಾಖೆ ಅವರನ್ನು ಅಮಾನತುಗೊಳಿಸಿದೆ. ಸರ್ಕಾರದಿಂದ ನೀಡುವ ಅನ್ನಭಾಗ್ಯದಡಿ ಅಕ್ಕಿಯನ್ನ ಕಡಿಮೆ ಕೊಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ನಭಾಗ್ಯಕ್ಕೆ ಕನ್ನ.. ಒಂದೊಂದು ಕಾರ್ಡ್​ನಿಂದ ಒಂದೊಂದು ಕೆಜಿ ಅಕ್ಕಿ ಕದ್ದಿಯುತ್ತಿದ್ದ ಸಿಬ್ಬಂದಿ ಅಮಾನತು

https://newsfirstlive.com/wp-content/uploads/2023/08/DVG_ANNABHAGYA-1.jpg

    ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕಾರ್ಡ್​ಗೆ 1 ಕೆ.ಜಿ ಅಕ್ಕಿ ಕದಿಯುತ್ತಿದ್ದ ಸಿಬ್ಬಂದಿ

    ನ್ಯೂಸ್​ಫಸ್ಟ್ ಚಾನೆಲ್​ನಲ್ಲಿ ವರದಿ ಪ್ರಸಾರವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು

    ಜನರಿಗೆ ಅನ್ನಭಾಗ್ಯದಡಿ ಅಕ್ಕಿ ಕಡಿಮೆ ಕೊಡದಂತೆ ಖಡಕ್ ಸೂಚನೆ

ದಾವಣಗೆರೆ: ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕಾರ್ಡ್​ಗೆ 1 ಕೆ.ಜಿ ಅಕ್ಕಿ ಕದಿಯುತ್ತಿದ್ದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅನ್ನಭಾಗ್ಯ ಅಕ್ಕಿ ಕದಿಯುತ್ತಿರುವ ಬಗ್ಗೆ ನ್ಯೂಸ್​ಫಸ್ಟ್ ಚಾನೆಲ್  ಸುದ್ದಿ ಬಿತ್ತರಿಸಿತ್ತು. ಈ ಬಗ್ಗೆ ಗಮನಿಸಿದ್ದ ಆಹಾರ ಇಲಾಖೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ.

ಗ್ರಾಮದ ನ್ಯಾಯಬೆಲೆ ಅಂಗಡಿಯ ಸಿದ್ದಪ್ಪ ಅಮಾನತುಗೊಂಡ ಸಿಬ್ಬಂದಿ. ಇವರು ಫಲಾನುವಿಗಳಿಗೆ ಗೊತ್ತಿಲ್ಲದಂತೆ ಪ್ರತಿ ಕಾರ್ಡ್​ನಿಂದ ಒಂದು ಕೆಜಿ ಅಕ್ಕಿ ಕದಿಯುತ್ತಿದ್ದನು. ಇವರ ಲೈಸನ್ಸ್ ಅಡಿ ಮಾವಿನಹೊಳೆ, ಮರಳಹಟ್ಟಿ, ದಂಡಿಗನಹಳ್ಳಿ ಮತ್ತು ಗಂಡಗನ ಹಂಕಲು ಗ್ರಾಮಗಳ 250 ಕ್ಕೂ ಅಧಿಕ ಕಾರ್ಡ್​ಗಳಿವೆ. ಸದ್ಯ ಸಿಬ್ಬಂದಿ ಮಾಡುತ್ತಿದ್ದ ಕಳ್ಳಾಟವನ್ನು ಯುವಕನೊಬ್ಬ ವಿಡಿಯೋ ಮಾಡಿದ್ದನು. ಹೀಗಾಗಿ ಸಿಬ್ಬಂದಿಯ ಲೈಸೆನ್ಸ್ ಕ್ಯಾನ್ಸ್​ಲ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದರು.

ಇದನ್ನು ಓದಿ: ಅನ್ನಭಾಗ್ಯಕ್ಕೆ ಸಿಬ್ಬಂದಿಯಿಂದ ಕನ್ನ.. ಪ್ರತಿ ಕಾರ್ಡ್​ನಿಂದ ಎಷ್ಟು ಕೆಜಿ ಅಕ್ಕಿ ಕದಿಯುತ್ತಿದ್ದ ಗೊತ್ತಾ..?

ಈ ಬಗ್ಗೆ ಸ್ಥಳೀಯ ಶಾಸಕ ಬಸವರಾಜ್ ಶಿವಗಂಗಾ ಅವರ ಗಮನಕ್ಕೂ ತರಲಾಗಿತ್ತು. ಹೀಗಾಗಿ ಸಿಬ್ಬಂದಿಯ ಕಳ್ಳಾಟದಿಂದ ಎಚ್ಚೆತ್ತುಕೊಂಡ ಆಹಾರ ಇಲಾಖೆ ಅವರನ್ನು ಅಮಾನತುಗೊಳಿಸಿದೆ. ಸರ್ಕಾರದಿಂದ ನೀಡುವ ಅನ್ನಭಾಗ್ಯದಡಿ ಅಕ್ಕಿಯನ್ನ ಕಡಿಮೆ ಕೊಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More