newsfirstkannada.com

ವಾರದ ಬಳಿಕ ರಾಜ್ಯ ರಾಜಕೀಯದಲ್ಲಿ ‘ದೀಪಾವಳಿ’.. ಡಿಕೆಶಿ ಹೇಳಿಕೆಯಿಂದ ಜೆಡಿಎಸ್​-ಬಿಜೆಪಿಯಲ್ಲಿ ಕಂಪನ?

Share :

09-11-2023

    ದೀಪಾವಳಿ ಮುಗಿಯುತ್ತಿದ್ದಂತೆ JDS-BJP ಶಾಸಕರು ಕಾಂಗ್ರೆಸ್​ ಸೇರ್ತಾರಾ?

    ಚುನಾವಣೆಯಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವಷ್ಟೇ ಅಂತ DCM ಲೇವಡಿ

    ಆಪರೇಷನ್ ಹಸ್ತದಿಂದ ಭಯ ಬಿದ್ದಿರುವ ಕಮಲ-ದಳಕ್ಕೆ ಶಾಕಿಂಗ್​​ ಗ್ಯಾರಂಟಿ

ರಾಜ್ಯದಲ್ಲಿ ಆಪರೇಷನ್ ಪಾಲಿಟಿಕ್ಸ್ ಜೋರಾಗಿದೆ. ಮಾಜಿ ಸಿಎಂ ಹೆಚ್​ಡಿಕೆ, ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಆಪರೇಷನ್ ಹಸ್ತ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿಕೆ ಕಿಡಿ ಕಾರಿದ್ದಾರೆ. 136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್​​ಗೆ ಭಯ ಏಕೆ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಗುಪ್ತ ವರದಿಯೊಂದರ ರಹಸ್ಯ ಬಿಚ್ಚಿಟ್ಟಿದ್ದಾರೆ. ಬಾಂಬೆ ದಾಳಕ್ಕೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು, ನವೆಂಬರ್ 15ರ ರಹಸ್ಯ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಕಂಪನವೇ ಸೃಷ್ಟಿಸಿದೆ.

ಬಿಜೆಪಿಗೆ ಒಬ್ಬ ಎಂಎಲ್​ಎನಾ ತಗೊಳ್ಳೋಕೆ ಆಗಲ್ಲ. ನವೆಂಬರ್​​ 15ರ ನಂತರ ನೋಡ್ತಾಯಿರಿ.. ಹೀಗೆ ಡೆಲ್ಲಿ ಅಂಗಳದಲ್ಲಿ ಬಹುದಿನಗಳ ಬಳಿಕ ಕಾಣಿಸಿದ ಡಿಸಿಎಂ ಡಿಕೆ ಶಿವಕುಮಾರ್​​​​ ಉರುಳಿಸಿದ ಸಸ್ಪೆನ್ಸ್​​ ದಾಳ ಇದು. ಈ ದಾಳದ ಹಿಂದೆ ಬಲಿಷ್ಠ ಲೆಕ್ಕಾಚಾರಗಳು ಅಡಕವಾಗಿವೆ. ಕಳೆದ 5 ತಿಂಗಳಿಂದ ಆಪರೇಷನ್​​ ಸುತ್ತವೇ ಪಾಲಿಟಿಕ್ಸ್ ಪ್ರದಕ್ಷಿಣೆ ಹಾಕ್ತಿದೆ. ಇದಕ್ಕೆ ಲೋಕಸಭಾ ಎಲೆಕ್ಷನ್​​​ ದಿನಗಳೇ ಮುಹೂರ್ತವಾಗಿ ಪರಿಗಣನೆ ಆಗಿದೆ.

ಮಾಜಿ ಸಿಎಂ ಕುಮಾರಸ್ವಾಮಿ

ಲೋಕಸಭೆ ಎಲೆಕ್ಷನ್​​​ಗೂ ಮುನ್ನವೇ ಆಪರೇಷನ್​​​ ಸುನಾಮಿ!

ಬಿಜೆಪಿ ಲೋಕಸಭೆಯ ಲೆಕ್ಕ ಹಾಕ್ತಿದ್ರೆ, ಕಾಂಗ್ರೆಸ್​​​ ನವೆಂಬರ್ 15ನೇ ತಾರೀಖಿನ ಬಳಿಕವೇ ಚೆಕ್​​ಮೇಟ್​​​ ಇಟ್ಟಿದೆ. ದೀಪಾವಳಿ ಮುಗಿದ ನಂತರ ಹಲವು ಜೆಡಿಎಸ್​-ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಡಿಸಿಎಂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೀಪಾವಳಿ ನಂತರ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳ ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಆಪರೇಷನ್ ಹಸ್ತದ ಭಯಬಿದ್ದಿರುವ ಕಮಲ-ದಳಕ್ಕೆ ಶಾಕಿಂಗ್​​ ಕಾದಿದೆ ಅಂತ ಸುಳಿವು ನೀಡಿದ್ದಾರೆ.

ಪಕ್ಷಕ್ಕೆ ಯಾರೋ ಬರ್ತಾರೆ ಅಂದಿರಲ್ಲ. ಅದಕ್ಕೆ ಡೇಟ್​ ಡೇಟ್​ ಒಂದಿದೆ, ಅಡ್ಮಿಷನ್ ಡೇಟ್ ನವೆಂಬರ್ 15ಕ್ಕೆ.

ಡಿ.ಕೆ.ಶಿವಕುಮಾರ್​, ಡಿಸಿಎಂ

ನಮ್ಮ ಒಬ್ಬ ಶಾಸಕರನ್ನೂ ಸೆಳೆಯಲು ಸಾಧ್ಯವಿಲ್ಲ!

ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ಆಪರೇಷನ್​​​ ಮೀಟಿಂಗ್​​​ಗೆ ಕೌಂಟರ್​​​ ಕೊಟ್ಟ ಕಾಂಗ್ರೆಸ್​​​ ಕ್ಯಾಪ್ಟನ್​​​​, ನಮ್ಮ ಒಬ್ಬ ಶಾಸಕರನ್ನೂ ಅವರಿಗೆ ಕರೆದುಕೊಳ್ಳಲು ಆಗಲ್ಲ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ತೀರ್ಮಾನ‌ ಮಾಡಲು ಆಗಿಲ್ಲ. ಚುನಾವಣೆಯಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವಷ್ಟೇ ಅಂತ ಲೇವಡಿ ಮಾಡಿದ್ದಾರೆ.

‘ಒಬ್ಬ ಎಂಎಲ್​ಎ ಹೋಗಲ್ಲ’

ಒಬ್ಬ ಎಂಎಲ್​​ಎಯನ್ನು ಅವರು ಕರೆದುಕೊಳ್ಳೋಕೆ ಆಗಲ್ಲ. ಅವರು ಮಾಡಿದರು ಅದು ವಿಫಲವಾಗುತ್ತದೆ. ಎಲೆಕ್ಷನ್​ಗೂ ಮೊದಲೇ ಗೊಂದಲ ಸೃಷ್ಟಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಪಕ್ಷದ ನಾಯಕತ್ವದ ಬಗ್ಗೆ ತೀರ್ಮಾನ ಮಾಡೋಕೆ ಆಗಿಲ್ಲ. ಅವರ ಪರಿಸ್ಥಿತಿ ಚೆನ್ನಾಗಿಲ್ಲ.

ಡಿ.ಕೆ.ಶಿವಕುಮಾರ್​, ಡಿಸಿಎಂ

ಇನ್ನು, ಬಿಜೆಪಿಯವರಿಗೆ ಅಸ್ಥಿತ್ವದಲ್ಲಿಲ್ಲದ ಪರಿಸ್ಥಿತಿ ಎದುರಾಗಿದೆ ಅಂತ ವ್ಯಂಗ್ಯವಾಡಿದ ಡಿಕೆಶಿ, ಎಲ್ಲ ಮೂಮೆಂಟ್​ ಗೊತ್ತಿದೆ, ನಿರುದ್ಯೋಗಿಗಳು ಚಪಲಕ್ಕೆ ಮಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.

DK ಶಿವಕುಮಾರ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ

136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್​​ಗೇಕೆ ಭಯ?

ಡಿ.ಕೆ ಶಿವಕುಮಾರ್ ಹೇಳಿದ ಮೂಮೆಂಟ್ಸ್​ ಬೆಂಗಳೂರಲ್ಲ. ಮತ್ತೊಮ್ಮೆ ಮುಂಬೈನಲ್ಲಿ ನಡೀತಿದೆ ಅನ್ನೋದು ಗುಪ್ತಚರ ವರದಿ ಸರ್ಕಾರಕ್ಕೆ ಸಿಕ್ಕಿದೆಯಂತೆ. ಹೀಗಾಗಿ ಆಪರೇಷನ್​​ ಕಮಲ ತಡೆಯಲು ಈ ಯತ್ನ ಸಾಗಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ. 136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್​​ನವರಿಗೇಕೆ ಭಯ ಪ್ರಶ್ನಿಸಿದ್ದಾರೆ.

ನವೆಂಬರ್​​ 15ರ ಗುಮ್ಮ ತೋರಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್​​, 50ಕ್ಕೂ ಹೆಚ್ಚು ಹಾಲಿ ಮಾಜಿಗಳು ಹಸ್ತದ ಮನೆಯ ಗೃಹ ಪ್ರವೇಶ ಮಾಡಲಿದ್ದಾರೆ ಅಂತ ಹೇಳಿದ್ದಾರೆ. ಡಿಸಿಎಂ ಆಡಿದ ಇದೇ ಮಾತು ಕಮಲ-ದಳ ಮೈತ್ರಿ ಕೂಟದ ಅಧಿಕಾರದ ಕನಸಿಗೆ ಕೊಳ್ಳಿ ಇಡುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರದ ಬಳಿಕ ರಾಜ್ಯ ರಾಜಕೀಯದಲ್ಲಿ ‘ದೀಪಾವಳಿ’.. ಡಿಕೆಶಿ ಹೇಳಿಕೆಯಿಂದ ಜೆಡಿಎಸ್​-ಬಿಜೆಪಿಯಲ್ಲಿ ಕಂಪನ?

https://newsfirstlive.com/wp-content/uploads/2023/10/HDK-DKS-1.jpg

    ದೀಪಾವಳಿ ಮುಗಿಯುತ್ತಿದ್ದಂತೆ JDS-BJP ಶಾಸಕರು ಕಾಂಗ್ರೆಸ್​ ಸೇರ್ತಾರಾ?

    ಚುನಾವಣೆಯಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವಷ್ಟೇ ಅಂತ DCM ಲೇವಡಿ

    ಆಪರೇಷನ್ ಹಸ್ತದಿಂದ ಭಯ ಬಿದ್ದಿರುವ ಕಮಲ-ದಳಕ್ಕೆ ಶಾಕಿಂಗ್​​ ಗ್ಯಾರಂಟಿ

ರಾಜ್ಯದಲ್ಲಿ ಆಪರೇಷನ್ ಪಾಲಿಟಿಕ್ಸ್ ಜೋರಾಗಿದೆ. ಮಾಜಿ ಸಿಎಂ ಹೆಚ್​ಡಿಕೆ, ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಆಪರೇಷನ್ ಹಸ್ತ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿಕೆ ಕಿಡಿ ಕಾರಿದ್ದಾರೆ. 136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್​​ಗೆ ಭಯ ಏಕೆ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಗುಪ್ತ ವರದಿಯೊಂದರ ರಹಸ್ಯ ಬಿಚ್ಚಿಟ್ಟಿದ್ದಾರೆ. ಬಾಂಬೆ ದಾಳಕ್ಕೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು, ನವೆಂಬರ್ 15ರ ರಹಸ್ಯ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಕಂಪನವೇ ಸೃಷ್ಟಿಸಿದೆ.

ಬಿಜೆಪಿಗೆ ಒಬ್ಬ ಎಂಎಲ್​ಎನಾ ತಗೊಳ್ಳೋಕೆ ಆಗಲ್ಲ. ನವೆಂಬರ್​​ 15ರ ನಂತರ ನೋಡ್ತಾಯಿರಿ.. ಹೀಗೆ ಡೆಲ್ಲಿ ಅಂಗಳದಲ್ಲಿ ಬಹುದಿನಗಳ ಬಳಿಕ ಕಾಣಿಸಿದ ಡಿಸಿಎಂ ಡಿಕೆ ಶಿವಕುಮಾರ್​​​​ ಉರುಳಿಸಿದ ಸಸ್ಪೆನ್ಸ್​​ ದಾಳ ಇದು. ಈ ದಾಳದ ಹಿಂದೆ ಬಲಿಷ್ಠ ಲೆಕ್ಕಾಚಾರಗಳು ಅಡಕವಾಗಿವೆ. ಕಳೆದ 5 ತಿಂಗಳಿಂದ ಆಪರೇಷನ್​​ ಸುತ್ತವೇ ಪಾಲಿಟಿಕ್ಸ್ ಪ್ರದಕ್ಷಿಣೆ ಹಾಕ್ತಿದೆ. ಇದಕ್ಕೆ ಲೋಕಸಭಾ ಎಲೆಕ್ಷನ್​​​ ದಿನಗಳೇ ಮುಹೂರ್ತವಾಗಿ ಪರಿಗಣನೆ ಆಗಿದೆ.

ಮಾಜಿ ಸಿಎಂ ಕುಮಾರಸ್ವಾಮಿ

ಲೋಕಸಭೆ ಎಲೆಕ್ಷನ್​​​ಗೂ ಮುನ್ನವೇ ಆಪರೇಷನ್​​​ ಸುನಾಮಿ!

ಬಿಜೆಪಿ ಲೋಕಸಭೆಯ ಲೆಕ್ಕ ಹಾಕ್ತಿದ್ರೆ, ಕಾಂಗ್ರೆಸ್​​​ ನವೆಂಬರ್ 15ನೇ ತಾರೀಖಿನ ಬಳಿಕವೇ ಚೆಕ್​​ಮೇಟ್​​​ ಇಟ್ಟಿದೆ. ದೀಪಾವಳಿ ಮುಗಿದ ನಂತರ ಹಲವು ಜೆಡಿಎಸ್​-ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಡಿಸಿಎಂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೀಪಾವಳಿ ನಂತರ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳ ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಆಪರೇಷನ್ ಹಸ್ತದ ಭಯಬಿದ್ದಿರುವ ಕಮಲ-ದಳಕ್ಕೆ ಶಾಕಿಂಗ್​​ ಕಾದಿದೆ ಅಂತ ಸುಳಿವು ನೀಡಿದ್ದಾರೆ.

ಪಕ್ಷಕ್ಕೆ ಯಾರೋ ಬರ್ತಾರೆ ಅಂದಿರಲ್ಲ. ಅದಕ್ಕೆ ಡೇಟ್​ ಡೇಟ್​ ಒಂದಿದೆ, ಅಡ್ಮಿಷನ್ ಡೇಟ್ ನವೆಂಬರ್ 15ಕ್ಕೆ.

ಡಿ.ಕೆ.ಶಿವಕುಮಾರ್​, ಡಿಸಿಎಂ

ನಮ್ಮ ಒಬ್ಬ ಶಾಸಕರನ್ನೂ ಸೆಳೆಯಲು ಸಾಧ್ಯವಿಲ್ಲ!

ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ಆಪರೇಷನ್​​​ ಮೀಟಿಂಗ್​​​ಗೆ ಕೌಂಟರ್​​​ ಕೊಟ್ಟ ಕಾಂಗ್ರೆಸ್​​​ ಕ್ಯಾಪ್ಟನ್​​​​, ನಮ್ಮ ಒಬ್ಬ ಶಾಸಕರನ್ನೂ ಅವರಿಗೆ ಕರೆದುಕೊಳ್ಳಲು ಆಗಲ್ಲ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ತೀರ್ಮಾನ‌ ಮಾಡಲು ಆಗಿಲ್ಲ. ಚುನಾವಣೆಯಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವಷ್ಟೇ ಅಂತ ಲೇವಡಿ ಮಾಡಿದ್ದಾರೆ.

‘ಒಬ್ಬ ಎಂಎಲ್​ಎ ಹೋಗಲ್ಲ’

ಒಬ್ಬ ಎಂಎಲ್​​ಎಯನ್ನು ಅವರು ಕರೆದುಕೊಳ್ಳೋಕೆ ಆಗಲ್ಲ. ಅವರು ಮಾಡಿದರು ಅದು ವಿಫಲವಾಗುತ್ತದೆ. ಎಲೆಕ್ಷನ್​ಗೂ ಮೊದಲೇ ಗೊಂದಲ ಸೃಷ್ಟಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಪಕ್ಷದ ನಾಯಕತ್ವದ ಬಗ್ಗೆ ತೀರ್ಮಾನ ಮಾಡೋಕೆ ಆಗಿಲ್ಲ. ಅವರ ಪರಿಸ್ಥಿತಿ ಚೆನ್ನಾಗಿಲ್ಲ.

ಡಿ.ಕೆ.ಶಿವಕುಮಾರ್​, ಡಿಸಿಎಂ

ಇನ್ನು, ಬಿಜೆಪಿಯವರಿಗೆ ಅಸ್ಥಿತ್ವದಲ್ಲಿಲ್ಲದ ಪರಿಸ್ಥಿತಿ ಎದುರಾಗಿದೆ ಅಂತ ವ್ಯಂಗ್ಯವಾಡಿದ ಡಿಕೆಶಿ, ಎಲ್ಲ ಮೂಮೆಂಟ್​ ಗೊತ್ತಿದೆ, ನಿರುದ್ಯೋಗಿಗಳು ಚಪಲಕ್ಕೆ ಮಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.

DK ಶಿವಕುಮಾರ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ

136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್​​ಗೇಕೆ ಭಯ?

ಡಿ.ಕೆ ಶಿವಕುಮಾರ್ ಹೇಳಿದ ಮೂಮೆಂಟ್ಸ್​ ಬೆಂಗಳೂರಲ್ಲ. ಮತ್ತೊಮ್ಮೆ ಮುಂಬೈನಲ್ಲಿ ನಡೀತಿದೆ ಅನ್ನೋದು ಗುಪ್ತಚರ ವರದಿ ಸರ್ಕಾರಕ್ಕೆ ಸಿಕ್ಕಿದೆಯಂತೆ. ಹೀಗಾಗಿ ಆಪರೇಷನ್​​ ಕಮಲ ತಡೆಯಲು ಈ ಯತ್ನ ಸಾಗಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ. 136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್​​ನವರಿಗೇಕೆ ಭಯ ಪ್ರಶ್ನಿಸಿದ್ದಾರೆ.

ನವೆಂಬರ್​​ 15ರ ಗುಮ್ಮ ತೋರಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್​​, 50ಕ್ಕೂ ಹೆಚ್ಚು ಹಾಲಿ ಮಾಜಿಗಳು ಹಸ್ತದ ಮನೆಯ ಗೃಹ ಪ್ರವೇಶ ಮಾಡಲಿದ್ದಾರೆ ಅಂತ ಹೇಳಿದ್ದಾರೆ. ಡಿಸಿಎಂ ಆಡಿದ ಇದೇ ಮಾತು ಕಮಲ-ದಳ ಮೈತ್ರಿ ಕೂಟದ ಅಧಿಕಾರದ ಕನಸಿಗೆ ಕೊಳ್ಳಿ ಇಡುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More