ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಅಟ್ಟಹಾಸ
ಬಾರ್ನಲ್ಲಿ ಆವಾಜ್ ಹಾಕಿದ್ದಕ್ಕೆ ಲಾಂಗ್ನಿಂದ ಹಲ್ಲೆ
ಅಟ್ಟಾಡಿಸಿ ಲಾಂಗ್, ಮಚ್ಚಿನಿಂದ ಹಲ್ಲೆಗೈದ ಗ್ಯಾಂಗ್..!
ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಪೊಲೀಸರು ಎಷ್ಟೇ ಕಠಿಣಕ್ರಮ ಕೈಗೊಂಡರೂ ಪುಡಿ ರೌಡಿಗಳು ಹಾಡಹಗಲೇ ಹಲ್ಲೆ, ಕೊಲೆ ಯತ್ನ, ದರೋಡೆ ಹೀಗೆ ಹಲವು ಕ್ರೈಮ್ಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ. ಈಗ ಅಂಥದ್ದೇ ಒಂದು ಕ್ರೈಮ್ ನಗರದಲ್ಲಿ ನಡೆದಿದೆ.
ಇದ್ಯಾವುದೋ ಸಿನಿಮಾ ದೃಶ್ಯವಲ್ಲ, ಬದಲಿಗೆ ಬೆಂಗಳೂರಲ್ಲಿ ಪುಡಿ ರೌಡಿಗಳ ಅಟ್ಟಹಾಸ. ಬೈಕ್ನಲ್ಲಿ ಬಂದ ಮೂವರು ರಾಹುಲ್ ಎಂಬಾತನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಬೈಕ್ನಿಂದ ಇಳಿಯುತ್ತಿದ್ದಂತೆ ರೋಹಿತ್ ಮೇಲೆ ಏಕಾಏಕಿ ಅಟ್ಯಾಕ್ ಮಾಡಿದ್ದಾರೆ.
ಹೌದು, ಅದು ವಿಜಯನಗರದಲ್ಲಿ ಮಟ ಮಟ ಮಧ್ಯಾಹ್ನವೇ ಲಾಂಗು, ಮಚ್ಚು ಸದ್ದು ಮಾಡಿದೆ. ಬಾರ್ನಲ್ಲಿ ಆವಾಜ್ ಹಾಕಿದ್ದಕ್ಕೆ ರೋಹಿತ್ ಗೌಡನ ಮೇಲೆ ರಾಜು ಆ್ಯಂಡ್ ಟೀಂ ಅಟ್ಯಾಕ್ ಮಾಡಿದೆ.
ಕಳೆದ ವಾರ ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇಗುಲದ ಮುಂದೆ, ರಾಜು ಆ್ಯಂಡ್ ಟೀಂಗೆ ರೋಹಿತ್ ಆವಾಜ್ ಹಾಕಿದ್ದ. ಹೀಗಾಗಿ ಸಿಟ್ಟಿಗೆದ್ದ ರಾಜು ಗ್ಯಾಂಗ್ ರೋಹಿತ್ ಮೇಲೆ ಮಚ್ಚು ಬೀಸಿದೆ. ಸಿನಿಮೀಯ ರೀತಿಯಲ್ಲಿ ಲಾಂಗು ಮಚ್ಚು ಬೀಸಿದ ರಾಜು, ಧನುಷ್, ಗುರುಪ್ರಸಾದ್ ಸೇರಿ 6 ಪುಂಡರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಅಟ್ಟಹಾಸ
ಬಾರ್ನಲ್ಲಿ ಆವಾಜ್ ಹಾಕಿದ್ದಕ್ಕೆ ಲಾಂಗ್ನಿಂದ ಹಲ್ಲೆ
ಅಟ್ಟಾಡಿಸಿ ಲಾಂಗ್, ಮಚ್ಚಿನಿಂದ ಹಲ್ಲೆಗೈದ ಗ್ಯಾಂಗ್..!
ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಪೊಲೀಸರು ಎಷ್ಟೇ ಕಠಿಣಕ್ರಮ ಕೈಗೊಂಡರೂ ಪುಡಿ ರೌಡಿಗಳು ಹಾಡಹಗಲೇ ಹಲ್ಲೆ, ಕೊಲೆ ಯತ್ನ, ದರೋಡೆ ಹೀಗೆ ಹಲವು ಕ್ರೈಮ್ಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ. ಈಗ ಅಂಥದ್ದೇ ಒಂದು ಕ್ರೈಮ್ ನಗರದಲ್ಲಿ ನಡೆದಿದೆ.
ಇದ್ಯಾವುದೋ ಸಿನಿಮಾ ದೃಶ್ಯವಲ್ಲ, ಬದಲಿಗೆ ಬೆಂಗಳೂರಲ್ಲಿ ಪುಡಿ ರೌಡಿಗಳ ಅಟ್ಟಹಾಸ. ಬೈಕ್ನಲ್ಲಿ ಬಂದ ಮೂವರು ರಾಹುಲ್ ಎಂಬಾತನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಬೈಕ್ನಿಂದ ಇಳಿಯುತ್ತಿದ್ದಂತೆ ರೋಹಿತ್ ಮೇಲೆ ಏಕಾಏಕಿ ಅಟ್ಯಾಕ್ ಮಾಡಿದ್ದಾರೆ.
ಹೌದು, ಅದು ವಿಜಯನಗರದಲ್ಲಿ ಮಟ ಮಟ ಮಧ್ಯಾಹ್ನವೇ ಲಾಂಗು, ಮಚ್ಚು ಸದ್ದು ಮಾಡಿದೆ. ಬಾರ್ನಲ್ಲಿ ಆವಾಜ್ ಹಾಕಿದ್ದಕ್ಕೆ ರೋಹಿತ್ ಗೌಡನ ಮೇಲೆ ರಾಜು ಆ್ಯಂಡ್ ಟೀಂ ಅಟ್ಯಾಕ್ ಮಾಡಿದೆ.
ಕಳೆದ ವಾರ ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇಗುಲದ ಮುಂದೆ, ರಾಜು ಆ್ಯಂಡ್ ಟೀಂಗೆ ರೋಹಿತ್ ಆವಾಜ್ ಹಾಕಿದ್ದ. ಹೀಗಾಗಿ ಸಿಟ್ಟಿಗೆದ್ದ ರಾಜು ಗ್ಯಾಂಗ್ ರೋಹಿತ್ ಮೇಲೆ ಮಚ್ಚು ಬೀಸಿದೆ. ಸಿನಿಮೀಯ ರೀತಿಯಲ್ಲಿ ಲಾಂಗು ಮಚ್ಚು ಬೀಸಿದ ರಾಜು, ಧನುಷ್, ಗುರುಪ್ರಸಾದ್ ಸೇರಿ 6 ಪುಂಡರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್