ಪ್ರಿಯಕರನಿಗಾಗಿ ಮಗುವನ್ನೇ ಕೊಂದಿದ್ದ ಹಂತಕಿ
ಮಹಿಳೆಗೆ ಮದುವೆ ಆಗುತ್ತೇನೆ ಎಂದಿದ್ದ ಭೂಪ..!
ಹೆಂಡತಿಗೆ ಡಿವೋರ್ಸ್ ನೀಡಲು ಹಿಂದೇಟು ಹಾಕಿದ್ದ
ನವದೆಹಲಿ: ಅಪ್ರಾಪ್ತ ಬಾಲಕನ ದಾರುಣ ಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಗೆ ಅಡ್ಡಿಯಾಗಿದ್ದ ಎಂದು 24 ವರ್ಷದ ಮಹಿಳೆ ಒಬ್ಬಳು ತನ್ನ ಪ್ರಿಯಕರನ ಮಗನನ್ನು ಕೊಂದು ಹಾಕಿದ್ದಾಳೆ. ಪೂಜಾ ಕುಮಾರಿ ಎಂಬಾಕೆ ಹಂತಕಿ ಎಂದು ತಿಳಿದು ಬಂದಿದೆ.
ತನ್ನ ಬಾಯ್ ಫ್ರೆಂಡ್ ಭೇಟಿಗಾಗಿ ಪೂಜಾ ಮನೆಗೆ ತೆರಳಿದ್ದಳು. ಈ ವೇಳೆ ಬಾಯ್ ಫ್ರೆಂಡ್ ಮಗ ಅಲ್ಲೇ ನಿದ್ರಿಸುತ್ತಿದ್ದ. ತನ್ನ ಮದುವೆಗೆ ಮಗನೇ ಅಡ್ಡಿ ಎಂದು ಭಾವಿಸಿ ಪೂಜಾ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಬೆಡ್ ಬಾಕ್ಸ್ನಲ್ಲಿ ಮುಚ್ಚಿ ಎಸ್ಕೇಪ್ ಆಗಿದ್ದಾಳೆ. ಈಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಕೇಸ್..?
ಪೂಜಾ ಜಿತೇಂದರ್ ಎಂಬಾತನೊಂದಿಗೆ ಲಿವ್ ಇನ್ ರಿಲೇಶನ್ಶೀಪ್ನಲ್ಲಿ ಇದ್ದಳು. ತನ್ನನ್ನು ಮದುವೆ ಆಗು ಎಂದು ಜಿತೇಂದರ್ ಬೆನ್ನು ಬಿದ್ದಿದ್ದಳು ಪೂಜಾ. ಆಗ ಹೆಂಡತಿಗೆ ಡಿವೋರ್ಸ್ ನೀಡಲು ಜಿತೇಂದರ್ ಹಿಂದೆ ಮುಂದೆ ನೋಡಿದ್ದ. ಇದಕ್ಕೆ ಜಿತೇಂದರ್ ಮಗ ಕಾರಣ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾಳೆ.
ಪೂಜಾಗೆ ಕೈ ಕೊಟ್ಟಿದ್ದ ಜಿತೇಂದರ್!
ಮೂರು ವರ್ಷಗಳ ಕಾಲ ಜಿತೇಂದರ್ ಮತ್ತು ಪೂಜಾ ಲಿವ್ ಇನ್ ಸಂಬಂಧದಲ್ಲಿ ಇದ್ದರು. ಹೆಂಡತಿಗೆ ಡಿವೋರ್ಸ್ ಕೊಟ್ಟು ಮದುವೆ ಆಗುತ್ತೇನೆ ಎಂದು ಜಿತೇಂದರ್ ಭರವಸೆ ನೀಡಿದ್ದ. ಕೊನೆಗೂ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪೂಜಾಗೆ ಕೈಕೊಟ್ಟು ಜಿತೇಂದರ್ ತನ್ನ ಹೆಂಡತಿ, ಮಗು ಜತೆ ವಾಸವಾಗಿದ್ದ. ಇದರಿಂದ ಸಿಟ್ಟಿಗೆದ್ದ ಪೂಜಾ ಈ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಿಯಕರನಿಗಾಗಿ ಮಗುವನ್ನೇ ಕೊಂದಿದ್ದ ಹಂತಕಿ
ಮಹಿಳೆಗೆ ಮದುವೆ ಆಗುತ್ತೇನೆ ಎಂದಿದ್ದ ಭೂಪ..!
ಹೆಂಡತಿಗೆ ಡಿವೋರ್ಸ್ ನೀಡಲು ಹಿಂದೇಟು ಹಾಕಿದ್ದ
ನವದೆಹಲಿ: ಅಪ್ರಾಪ್ತ ಬಾಲಕನ ದಾರುಣ ಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಗೆ ಅಡ್ಡಿಯಾಗಿದ್ದ ಎಂದು 24 ವರ್ಷದ ಮಹಿಳೆ ಒಬ್ಬಳು ತನ್ನ ಪ್ರಿಯಕರನ ಮಗನನ್ನು ಕೊಂದು ಹಾಕಿದ್ದಾಳೆ. ಪೂಜಾ ಕುಮಾರಿ ಎಂಬಾಕೆ ಹಂತಕಿ ಎಂದು ತಿಳಿದು ಬಂದಿದೆ.
ತನ್ನ ಬಾಯ್ ಫ್ರೆಂಡ್ ಭೇಟಿಗಾಗಿ ಪೂಜಾ ಮನೆಗೆ ತೆರಳಿದ್ದಳು. ಈ ವೇಳೆ ಬಾಯ್ ಫ್ರೆಂಡ್ ಮಗ ಅಲ್ಲೇ ನಿದ್ರಿಸುತ್ತಿದ್ದ. ತನ್ನ ಮದುವೆಗೆ ಮಗನೇ ಅಡ್ಡಿ ಎಂದು ಭಾವಿಸಿ ಪೂಜಾ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಬೆಡ್ ಬಾಕ್ಸ್ನಲ್ಲಿ ಮುಚ್ಚಿ ಎಸ್ಕೇಪ್ ಆಗಿದ್ದಾಳೆ. ಈಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಕೇಸ್..?
ಪೂಜಾ ಜಿತೇಂದರ್ ಎಂಬಾತನೊಂದಿಗೆ ಲಿವ್ ಇನ್ ರಿಲೇಶನ್ಶೀಪ್ನಲ್ಲಿ ಇದ್ದಳು. ತನ್ನನ್ನು ಮದುವೆ ಆಗು ಎಂದು ಜಿತೇಂದರ್ ಬೆನ್ನು ಬಿದ್ದಿದ್ದಳು ಪೂಜಾ. ಆಗ ಹೆಂಡತಿಗೆ ಡಿವೋರ್ಸ್ ನೀಡಲು ಜಿತೇಂದರ್ ಹಿಂದೆ ಮುಂದೆ ನೋಡಿದ್ದ. ಇದಕ್ಕೆ ಜಿತೇಂದರ್ ಮಗ ಕಾರಣ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾಳೆ.
ಪೂಜಾಗೆ ಕೈ ಕೊಟ್ಟಿದ್ದ ಜಿತೇಂದರ್!
ಮೂರು ವರ್ಷಗಳ ಕಾಲ ಜಿತೇಂದರ್ ಮತ್ತು ಪೂಜಾ ಲಿವ್ ಇನ್ ಸಂಬಂಧದಲ್ಲಿ ಇದ್ದರು. ಹೆಂಡತಿಗೆ ಡಿವೋರ್ಸ್ ಕೊಟ್ಟು ಮದುವೆ ಆಗುತ್ತೇನೆ ಎಂದು ಜಿತೇಂದರ್ ಭರವಸೆ ನೀಡಿದ್ದ. ಕೊನೆಗೂ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪೂಜಾಗೆ ಕೈಕೊಟ್ಟು ಜಿತೇಂದರ್ ತನ್ನ ಹೆಂಡತಿ, ಮಗು ಜತೆ ವಾಸವಾಗಿದ್ದ. ಇದರಿಂದ ಸಿಟ್ಟಿಗೆದ್ದ ಪೂಜಾ ಈ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ