ಆ್ಯಂಬುಲೆನ್ಸ್ ಸಿಗದೆ ಪರದಾಡಿದ ತುಂಬು ಗರ್ಭಿಣಿ
ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ತಾಯಿ
ರಿಕ್ಷಾದಲ್ಲಿ ಸಾವನ್ನಪ್ಪಿದ ಶಿಶು, ಇದು ಕರುಳು ಹಿಂಡುವ ಸ್ಟೋರಿ
ಲಕ್ನೋ: ಮಹಿಳೆಯೊಬ್ಬಳು ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರಪ್ರದೇಶದ ರಾಜಭವನದ ಬಳಿ ನಡೆದಿದೆ. ಆದರೆ ದುರಾದೃಷ್ಟ ಸಂಗತಿ ಎಂದರೆ ಆಗ ತಾನೇ ಜನಿಸಿದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯ ವೇಳೆ ಸಾವನ್ನಪ್ಪಿದೆ.
ಮಹಿಳೆ ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಬಾರದೆ ಇದ್ದಾಗ ಈ ಘಟನೆ ಸಂಭವಿಸಿದೆ. ಕೊನೆಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಮಗು ಸಾವನ್ನಪ್ಪಿದೆ. ಇನ್ನು ಈ ಘಟನೆ ಬಗ್ಗೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತನಿಖೆಗೆ ಆದೇಶಿಸಿದ್ದಾರೆ.
ಬ್ರಜೇಶ್ ಪಾಠಕ್ ಸಾವನ್ನಪ್ಪಿದ ಶಿಶುವಿನ ಕುಟುಂಬದ ಜೊತೆಗೆ ಮಾತನಾಡಿದ್ದಾರೆ. ಮೃತ ಮಗುವಿನ ಅಂತ್ಯ ಸಂಸ್ಕಾರ ವೇಳೆ ಕುಟುಂಬ ಜೊತೆಗೆ ಹಾಜರಿದ್ದು, ಸಾಂತ್ವನ ಹೇಳಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಸಮಾಜವಾದಿ ಪಕ್ಷ (ಎಸ್ಪಿ) ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ಕೆಂಡಕಾರಿದೆ. ಯುಪಿಯಲ್ಲಿ ಆರೋಗ್ಯ ಸೌಲಭ್ಯವು ಯೋಗಿ ಸರ್ಕಾರದ ಅಡಿಯಲ್ಲಿ ಕುಸಿದಿದೆ ಎಂದು ಟ್ವೀಟ್ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆ್ಯಂಬುಲೆನ್ಸ್ ಸಿಗದೆ ಪರದಾಡಿದ ತುಂಬು ಗರ್ಭಿಣಿ
ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ತಾಯಿ
ರಿಕ್ಷಾದಲ್ಲಿ ಸಾವನ್ನಪ್ಪಿದ ಶಿಶು, ಇದು ಕರುಳು ಹಿಂಡುವ ಸ್ಟೋರಿ
ಲಕ್ನೋ: ಮಹಿಳೆಯೊಬ್ಬಳು ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರಪ್ರದೇಶದ ರಾಜಭವನದ ಬಳಿ ನಡೆದಿದೆ. ಆದರೆ ದುರಾದೃಷ್ಟ ಸಂಗತಿ ಎಂದರೆ ಆಗ ತಾನೇ ಜನಿಸಿದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯ ವೇಳೆ ಸಾವನ್ನಪ್ಪಿದೆ.
ಮಹಿಳೆ ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಬಾರದೆ ಇದ್ದಾಗ ಈ ಘಟನೆ ಸಂಭವಿಸಿದೆ. ಕೊನೆಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಮಗು ಸಾವನ್ನಪ್ಪಿದೆ. ಇನ್ನು ಈ ಘಟನೆ ಬಗ್ಗೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತನಿಖೆಗೆ ಆದೇಶಿಸಿದ್ದಾರೆ.
ಬ್ರಜೇಶ್ ಪಾಠಕ್ ಸಾವನ್ನಪ್ಪಿದ ಶಿಶುವಿನ ಕುಟುಂಬದ ಜೊತೆಗೆ ಮಾತನಾಡಿದ್ದಾರೆ. ಮೃತ ಮಗುವಿನ ಅಂತ್ಯ ಸಂಸ್ಕಾರ ವೇಳೆ ಕುಟುಂಬ ಜೊತೆಗೆ ಹಾಜರಿದ್ದು, ಸಾಂತ್ವನ ಹೇಳಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಸಮಾಜವಾದಿ ಪಕ್ಷ (ಎಸ್ಪಿ) ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ಕೆಂಡಕಾರಿದೆ. ಯುಪಿಯಲ್ಲಿ ಆರೋಗ್ಯ ಸೌಲಭ್ಯವು ಯೋಗಿ ಸರ್ಕಾರದ ಅಡಿಯಲ್ಲಿ ಕುಸಿದಿದೆ ಎಂದು ಟ್ವೀಟ್ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ