newsfirstkannada.com

ವರ್ಲ್ಡ್​ಕಪ್​ಗೆ ಎಂಟ್ರಿ ಕೊಡ್ತಾರಾ ಅಶ್ವಿನ್.. ಈ ಐದು ಕಾರಣಗಳಿಗೆ ಮತ್ತೆ ಸುದ್ದಿಯಾದ ಸ್ಪಿನ್ ಮಾಂತ್ರಿಕ..!

Share :

28-07-2023

    18 ತಿಂಗಳ ಬಳಿಕ ಏಕದಿನ ಪಂದ್ಯಕ್ಕೆ ಆರ್ ಅಶ್ವಿನ್​​ಗೆ ಸ್ಥಾನ..?

    ಭಾರತದ ಪಿಚ್​ಗಳಲ್ಲಿ ಅಶ್ವಿನ್ ಅಪಾಯಕಾರಿ, ಅದಕ್ಕೆ ಚಾನ್ಸ್​

    ಅಶ್ವಿನ್​ರನ್ನು ಕೈ ಬಿಟ್ಟು ದೊಡ್ಡ ತಪ್ಪು ಮಾಡಿತಾ ಆಯ್ಕೆ ಸಮಿತಿ

ಟೀಮ್ ಇಂಡಿಯಾ ಆಫ್ ಸ್ಪಿನ್ನರ್ ಆರ್​.ಅಶ್ವಿನ್ ಏಕದಿನ ವಿಶ್ವಕಪ್ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಅನುಭವಿ ಸ್ಪಿನ್ನರ್​​ನನ್ನ, ವೈಟ್​ಬಾಲ್ ಕ್ರಿಕೆಟ್​​​ನಿಂದ ಕಡೆಗಣಿಸಲಾಗಿತ್ತು. ಆದ್ರೀಗ ಅಶ್ವಿನ್, ಬರೋಬ್ಬರಿ 18 ತಿಂಗಳ ಬಳಿಕ ಮತ್ತೆ ಏಕದಿನ ತಂಡಕ್ಕೆ ವಾಪಸಾಗ್ತಿದ್ದಾರೆ.

ಆಫ್ ಸ್ಪಿನ್, ಸೈಡ್ ಸ್ಪಿನ್, ಆರ್ಮ್​ ಬಾಲ್, ಕೇರಂ ಬಾಲ್, ಟಾಪ್ ಸ್ಪಿನ್ ಹೀಗೆ ಒಂದೇ ಓವರ್​ನಲ್ಲಿ ವೆರೈಟಿ ವೇರಿಯೇಷನ್ಸ್ ಹೊಂದಿರೋ ಏಕೈಕ ಸ್ಪಿನ್ನರ್ ಅದು ಅಶ್ವಿನ್. ಕಳೆದೊಂದು ವರ್ಷದಿಂದ ಅಶ್ವಿನ್ ಏಕದಿನ ತಂಡದಿಂದ ದೂರ ಉಳಿದಿದ್ದರು. ಆದ್ರೀಗ ಏಕದಿನ ವಿಶ್ವಕಪ್ ಹತ್ತಿರವಾಗ್ತಿದಂತೆ ಟೀಮ್ ಇಂಡಿಯಾ ಆಯ್ಕೆ ಸಮಿತಿ, ಅಶ್ವಿನ್​​​ ಮೊರೆ ಹೋಗಿದೆ.

ಲೇಟ್ ಆದ್ರೂ ಲೆಟೆಸ್ಟ್​​ ಆಗಿ, ಆಯ್ಕೆ ಸಮಿತಿ ಎಚ್ಚೆತ್ತುಕೊಂಡಿದೆ. ಅಶ್ವಿನ್ ಸಾಮರ್ಥ್ಯ ಏನು ಅಂತ ಅಗರ್​ಕರ್ ಌಂಡ್ ಟೀಮ್​ಗೆ ಗೊತ್ತಾಗಿದೆ. ಅಶ್ವಿನ್ ಪ್ಲೇಯಿಂಗ್ ಇಲೆವೆನ್​ನಲ್ಲಿದ್ರೆ, ತಂಡಕ್ಕಾಗೋ ಲಾಭ ಏನು ಅನ್ನೋದು, ಕ್ಲಿಯರ್ ಆಗಿ ಅರ್ಥವಾಗಿದೆ. ಹಾಗಾಗೇ ಅಶ್ವಿನ್​ರನ್ನ ತವರಿನಲ್ಲಿ ನಡೆಯೋ ಏಕದಿನ ವಿಶ್ವಕಪ್ ಆಡಿಸಲು, ಸೆಲೆಕ್ಟರ್ಸ್​ ಮುಂದಾಗಿದ್ದಾರೆ.

ತಂಡದಲ್ಲಿ ಸಾಕಷ್ಟು ಯುವ ಸ್ಪಿನ್ನರ್​ಗಳಿದ್ದಾರೆ. ಆದ್ರೂ ಸೆಲೆಕ್ಷನ್ ಕಮಿಟಿ, ಅಶ್ವಿನ್ ಬೇಕೇ ಬೇಕು ಅಂತಿರೋದಕ್ಕೆ, ಹಲವು ಕಾರಣಗಳಿವೆ.

ಕಾರಣ ನಂ.1- ಬ್ಯಾಕ್​ಅಪ್ ಸ್ಪಿನ್ನರ್ ಇಲ್ಲ..!

ಸದ್ಯ ಟೀಮ್ ಇಂಡಿಯಾದಲ್ಲಿ, ಬ್ಯಾಕ್​ಅಪ್ ಸ್ಪಿನ್ನರ್​​ಗಳ ಕೊರತೆ ಎದ್ದು ಕಾಡ್ತಿದೆ. ವಾಷಿಂಗ್ಟನ್ ಸುಂದರ್, ಏಷ್ಯನ್ ಗೇಮ್ಸ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಯುವ ಆಫ್​ಸ್ಪಿನ್ನರ್ ಬೆಸ್ಟ್ ಆಪ್ಶನ್ ಆದ್ರೂ, ವಿಶ್ವಕಪ್​​ ಪ್ಲಾನ್​​ನಲ್ಲಿ ಇಲ್ಲ. ಹಾಗಾಗಿ ಅಶ್ವಿನ್​​ಗಿಂತ ಮತ್ತೋರ್ವ ಅನುಭವಿ ಹುಡುಕಿದ್ರೂ ಸಿಗೋದಿಲ್ಲ ಅನ್ನೋದು, ಆಯ್ಕೆಗಾರರಿಗೆ ಗೊತ್ತಾಗಿದೆ.

ಕಾರಣ ನಂ.2- ಒಳ್ಳೆ ಸ್ಪಿನ್ನರ್ ಇಲ್ಲ- ಕ್ಯಾಪ್ಟನ್-ಕೋಚ್ ಹತಾಶೆ..!

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್​​ ದ್ರಾವಿಡ್​​​ ಮುಂದೆ, ಸ್ಪಿನ್ ಆಪ್ಶನ್​ಗಳಿಲ್ಲ. ಈಗಾಗಲೇ ICC ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾಕ್ಕೆ, ಓರ್ವ ಮ್ಯಾಚ್ ವಿನ್ನಿಂಗ್ ಸ್ಪಿನ್ನರ್​​ ಬೇಕೇ ಬೇಕು. ಹಾಗಾಗಿ ಏಕದಿನ ಕ್ರಿಕೆಟ್​ನಲ್ಲಿ 5ಕ್ಕಿಂತ ಕಡಿಮೆ ಎಕಾನಮಿ ಹೊಂದಿರುವ ಅಶ್ವಿನ್​​, ಕ್ಯಾಪ್ಟನ್ ಮತ್ತು ಕೋಚ್​​ರ ಉತ್ತಮ ಆಯ್ಕೆಯಾಗಲಿದ್ದಾರೆ.

ಕಾರಣ ನಂ.3- ಆಲ್​ರೌಂಡರ್​ಗಳ ಕೊರತೆ..!

ಸದ್ಯ ಟೀಮ್ ಇಂಡಿಯಾದಲ್ಲಿ ಆಲ್​ರೌಂಡರ್​ಗಳಿಗಿಂತ, ಹೆಚ್ಚು ಬ್ಯಾಟ್ಸ್​ಮನ್​ಗಳು ತುಂಬಿದ್ದಾರೆ. 2011ರಲ್ಲಿ ಟೀಮ್ ಇಂಡಿಯಾದಲ್ಲಿ ಸಚಿನ್, ಸೆಹ್ವಾಗ್, ಯುವರಾಜ್, ಯೂಸುಫ್ ಪಠಾಣ್, ಬೌಲಿಂಗ್ ಮಾಡ್ತಿದ್ರು. ಆದ್ರೆ, ಈಗಿರೋ ತಂಡದಲ್ಲಿ ಟಾಪ್ ಫೈವ್ ಬ್ಯಾಟರ್ಸ್​​​, ಬೌಲಿಂಗ್​​ ಮಾಡಲ್ಲ. ಹಾರ್ದಿಕ್ ಪಾಂಡ್ಯ, ಜಡೇಜಾ, ಅಕ್ಷರ್ ಪಟೇಲ್​ರಂತ ಆಲ್​ರೌಂಡರ್​ಗಳು, ತಂಡದಲ್ಲಿದ್ದಾರೆ ನಿಜ. ಆದ್ರೆ ಇವಱರು ಎಡಗೈ ಬ್ಯಾಟ್ಸ್​ಮನ್​ಗಳಿಗೆ, ಟಫ್ ಫೈಟ್ ನೀಡ್ತಿಲ್ಲ. ಸೋ, ಎಡಗೈ ಬ್ಯಾಟ್ಸ್​ಮನ್​​ಗಳ ಎದುರು, ಅಶ್ವಿನ್ ಅಸ್ತ್ರ ಪ್ರಯೋಗಿಸೋಕೆ ಸೆಲೆಕ್ಟರ್ಸ್ ಪ್ಲಾನ್ ಮಾಡ್ತಿದ್ದಾರೆ. ​​ ​

ಕಾರಣ ನಂ.4- ಸ್ಪಿನ್ ಫ್ರೆಂಡ್ಲಿ ಪಿಚ್​​​..!

ಅಶ್ವಿನ್ ವರ್ಲ್ಡ್​ಕಪ್ ಪ್ಲಾನ್​ನಲ್ಲಿರೋಕೆ ಮತ್ತೊಂದು ಕಾರಣ ಅಂದ್ರೆ, ಭಾರತದ ಪಿಚ್​ಗಳು. 9 ಗ್ರೌಂಡ್​ಗಳ ಪೈಕಿ ಚೆನ್ನೈ, ಕೊಲ್ಕತ್ತಾ, ಮುಂಬೈ, ಅಹ್ಮದಾಬಾದ್ ಮತ್ತು ಲಕ್ನೋ ಪಿಚ್​ಗಳು, ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗುತ್ತೆ. ಹೀಗಿರುವಾಗ ಕ್ಯಾಪ್ಟನ್ ರೋಹಿತ್ ಶರ್ಮಾ, ಪ್ಲೇಯಿಂಗ್ ಇಲೆವೆನ್​​ನಲ್ಲಿ ಮೂರು ಮಂದಿ ಸ್ಪಿನ್ನರ್​ಗಳನ್ನ ಆಡಿಸೋ ಸಾಧ್ಯತೆ ಹೆಚ್ಚಿದೆ. ಅಶ್ವಿನ್ ಬೌಲಿಂಗ್​​ನಲ್ಲಿರೋ ವೆರೈಟಿ, ತಂಡಕ್ಕೆ ವರದಾನವಾಗಲಿದೆ.

ಕಾರಣ ನಂ.5- ಅಟ್ಯಾಕಿಂಗ್ ಸ್ಪಿನ್ನರ್ ಬೇಕು..!

2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ತಂಡದಲ್ಲಿ, ಅಶ್ವಿನ್ ಕಾಣಿಸಿಕೊಂಡಿದ್ರು. ಐಸಿಸಿಯ ಮಹತ್ವದ ಟೂರ್ನಿಗಳಲ್ಲಿ ಆಡಿರುವ ಅನುಭವ, ಅಶ್ವಿನ್​ಗಿದೆ. ಅಲ್ಲದೇ, ಹೊಸ ಬಾಲ್​ನಲ್ಲಿ ಬೌಲಿಂಗ್​​ ಮತ್ತು ಬೌಲಿಂಗ್ ಅಟ್ಯಾಕ್​​ ಓಪನ್ ಮಾಡೋ ಸಾಮರ್ಥ್ಯ ಕೂಡ ಹೊಂದಿದ್ದಾರೆ.

ಈ ಹಿಂದೆ ಮಾಡಿದ್ದ ತಪ್ಪನ್ನ ತಿದ್ದಿಕೊಳ್ಳಲು ಮುಂದಾಗಿರುವ ಬಿಸಿಸಿಐ ಮತ್ತು ಆಯ್ಕೆ ಸಮಿತಿ, ಒಂದೊಳ್ಳೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಆ ಮೂಲಕ 10 ವರ್ಷಗಳ ಬಳಿಕ, ಐಸಿಸಿ ಟ್ರೋಫಿ ಗೆಲ್ಲೋಕೆ ಹೊರಟಿದೆ. ಅಜಿತ್ ಅಗರ್​ಕರ್ ಌಂಡ್ ಟೀಮ್ ಪ್ಲಾನ್ ವರ್ಕ್​ಔಟ್ ಆಗುತ್ತಾ ಕಾದುನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವರ್ಲ್ಡ್​ಕಪ್​ಗೆ ಎಂಟ್ರಿ ಕೊಡ್ತಾರಾ ಅಶ್ವಿನ್.. ಈ ಐದು ಕಾರಣಗಳಿಗೆ ಮತ್ತೆ ಸುದ್ದಿಯಾದ ಸ್ಪಿನ್ ಮಾಂತ್ರಿಕ..!

https://newsfirstlive.com/wp-content/uploads/2023/07/ASHWIN_SPIN.jpg

    18 ತಿಂಗಳ ಬಳಿಕ ಏಕದಿನ ಪಂದ್ಯಕ್ಕೆ ಆರ್ ಅಶ್ವಿನ್​​ಗೆ ಸ್ಥಾನ..?

    ಭಾರತದ ಪಿಚ್​ಗಳಲ್ಲಿ ಅಶ್ವಿನ್ ಅಪಾಯಕಾರಿ, ಅದಕ್ಕೆ ಚಾನ್ಸ್​

    ಅಶ್ವಿನ್​ರನ್ನು ಕೈ ಬಿಟ್ಟು ದೊಡ್ಡ ತಪ್ಪು ಮಾಡಿತಾ ಆಯ್ಕೆ ಸಮಿತಿ

ಟೀಮ್ ಇಂಡಿಯಾ ಆಫ್ ಸ್ಪಿನ್ನರ್ ಆರ್​.ಅಶ್ವಿನ್ ಏಕದಿನ ವಿಶ್ವಕಪ್ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಅನುಭವಿ ಸ್ಪಿನ್ನರ್​​ನನ್ನ, ವೈಟ್​ಬಾಲ್ ಕ್ರಿಕೆಟ್​​​ನಿಂದ ಕಡೆಗಣಿಸಲಾಗಿತ್ತು. ಆದ್ರೀಗ ಅಶ್ವಿನ್, ಬರೋಬ್ಬರಿ 18 ತಿಂಗಳ ಬಳಿಕ ಮತ್ತೆ ಏಕದಿನ ತಂಡಕ್ಕೆ ವಾಪಸಾಗ್ತಿದ್ದಾರೆ.

ಆಫ್ ಸ್ಪಿನ್, ಸೈಡ್ ಸ್ಪಿನ್, ಆರ್ಮ್​ ಬಾಲ್, ಕೇರಂ ಬಾಲ್, ಟಾಪ್ ಸ್ಪಿನ್ ಹೀಗೆ ಒಂದೇ ಓವರ್​ನಲ್ಲಿ ವೆರೈಟಿ ವೇರಿಯೇಷನ್ಸ್ ಹೊಂದಿರೋ ಏಕೈಕ ಸ್ಪಿನ್ನರ್ ಅದು ಅಶ್ವಿನ್. ಕಳೆದೊಂದು ವರ್ಷದಿಂದ ಅಶ್ವಿನ್ ಏಕದಿನ ತಂಡದಿಂದ ದೂರ ಉಳಿದಿದ್ದರು. ಆದ್ರೀಗ ಏಕದಿನ ವಿಶ್ವಕಪ್ ಹತ್ತಿರವಾಗ್ತಿದಂತೆ ಟೀಮ್ ಇಂಡಿಯಾ ಆಯ್ಕೆ ಸಮಿತಿ, ಅಶ್ವಿನ್​​​ ಮೊರೆ ಹೋಗಿದೆ.

ಲೇಟ್ ಆದ್ರೂ ಲೆಟೆಸ್ಟ್​​ ಆಗಿ, ಆಯ್ಕೆ ಸಮಿತಿ ಎಚ್ಚೆತ್ತುಕೊಂಡಿದೆ. ಅಶ್ವಿನ್ ಸಾಮರ್ಥ್ಯ ಏನು ಅಂತ ಅಗರ್​ಕರ್ ಌಂಡ್ ಟೀಮ್​ಗೆ ಗೊತ್ತಾಗಿದೆ. ಅಶ್ವಿನ್ ಪ್ಲೇಯಿಂಗ್ ಇಲೆವೆನ್​ನಲ್ಲಿದ್ರೆ, ತಂಡಕ್ಕಾಗೋ ಲಾಭ ಏನು ಅನ್ನೋದು, ಕ್ಲಿಯರ್ ಆಗಿ ಅರ್ಥವಾಗಿದೆ. ಹಾಗಾಗೇ ಅಶ್ವಿನ್​ರನ್ನ ತವರಿನಲ್ಲಿ ನಡೆಯೋ ಏಕದಿನ ವಿಶ್ವಕಪ್ ಆಡಿಸಲು, ಸೆಲೆಕ್ಟರ್ಸ್​ ಮುಂದಾಗಿದ್ದಾರೆ.

ತಂಡದಲ್ಲಿ ಸಾಕಷ್ಟು ಯುವ ಸ್ಪಿನ್ನರ್​ಗಳಿದ್ದಾರೆ. ಆದ್ರೂ ಸೆಲೆಕ್ಷನ್ ಕಮಿಟಿ, ಅಶ್ವಿನ್ ಬೇಕೇ ಬೇಕು ಅಂತಿರೋದಕ್ಕೆ, ಹಲವು ಕಾರಣಗಳಿವೆ.

ಕಾರಣ ನಂ.1- ಬ್ಯಾಕ್​ಅಪ್ ಸ್ಪಿನ್ನರ್ ಇಲ್ಲ..!

ಸದ್ಯ ಟೀಮ್ ಇಂಡಿಯಾದಲ್ಲಿ, ಬ್ಯಾಕ್​ಅಪ್ ಸ್ಪಿನ್ನರ್​​ಗಳ ಕೊರತೆ ಎದ್ದು ಕಾಡ್ತಿದೆ. ವಾಷಿಂಗ್ಟನ್ ಸುಂದರ್, ಏಷ್ಯನ್ ಗೇಮ್ಸ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಯುವ ಆಫ್​ಸ್ಪಿನ್ನರ್ ಬೆಸ್ಟ್ ಆಪ್ಶನ್ ಆದ್ರೂ, ವಿಶ್ವಕಪ್​​ ಪ್ಲಾನ್​​ನಲ್ಲಿ ಇಲ್ಲ. ಹಾಗಾಗಿ ಅಶ್ವಿನ್​​ಗಿಂತ ಮತ್ತೋರ್ವ ಅನುಭವಿ ಹುಡುಕಿದ್ರೂ ಸಿಗೋದಿಲ್ಲ ಅನ್ನೋದು, ಆಯ್ಕೆಗಾರರಿಗೆ ಗೊತ್ತಾಗಿದೆ.

ಕಾರಣ ನಂ.2- ಒಳ್ಳೆ ಸ್ಪಿನ್ನರ್ ಇಲ್ಲ- ಕ್ಯಾಪ್ಟನ್-ಕೋಚ್ ಹತಾಶೆ..!

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್​​ ದ್ರಾವಿಡ್​​​ ಮುಂದೆ, ಸ್ಪಿನ್ ಆಪ್ಶನ್​ಗಳಿಲ್ಲ. ಈಗಾಗಲೇ ICC ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾಕ್ಕೆ, ಓರ್ವ ಮ್ಯಾಚ್ ವಿನ್ನಿಂಗ್ ಸ್ಪಿನ್ನರ್​​ ಬೇಕೇ ಬೇಕು. ಹಾಗಾಗಿ ಏಕದಿನ ಕ್ರಿಕೆಟ್​ನಲ್ಲಿ 5ಕ್ಕಿಂತ ಕಡಿಮೆ ಎಕಾನಮಿ ಹೊಂದಿರುವ ಅಶ್ವಿನ್​​, ಕ್ಯಾಪ್ಟನ್ ಮತ್ತು ಕೋಚ್​​ರ ಉತ್ತಮ ಆಯ್ಕೆಯಾಗಲಿದ್ದಾರೆ.

ಕಾರಣ ನಂ.3- ಆಲ್​ರೌಂಡರ್​ಗಳ ಕೊರತೆ..!

ಸದ್ಯ ಟೀಮ್ ಇಂಡಿಯಾದಲ್ಲಿ ಆಲ್​ರೌಂಡರ್​ಗಳಿಗಿಂತ, ಹೆಚ್ಚು ಬ್ಯಾಟ್ಸ್​ಮನ್​ಗಳು ತುಂಬಿದ್ದಾರೆ. 2011ರಲ್ಲಿ ಟೀಮ್ ಇಂಡಿಯಾದಲ್ಲಿ ಸಚಿನ್, ಸೆಹ್ವಾಗ್, ಯುವರಾಜ್, ಯೂಸುಫ್ ಪಠಾಣ್, ಬೌಲಿಂಗ್ ಮಾಡ್ತಿದ್ರು. ಆದ್ರೆ, ಈಗಿರೋ ತಂಡದಲ್ಲಿ ಟಾಪ್ ಫೈವ್ ಬ್ಯಾಟರ್ಸ್​​​, ಬೌಲಿಂಗ್​​ ಮಾಡಲ್ಲ. ಹಾರ್ದಿಕ್ ಪಾಂಡ್ಯ, ಜಡೇಜಾ, ಅಕ್ಷರ್ ಪಟೇಲ್​ರಂತ ಆಲ್​ರೌಂಡರ್​ಗಳು, ತಂಡದಲ್ಲಿದ್ದಾರೆ ನಿಜ. ಆದ್ರೆ ಇವಱರು ಎಡಗೈ ಬ್ಯಾಟ್ಸ್​ಮನ್​ಗಳಿಗೆ, ಟಫ್ ಫೈಟ್ ನೀಡ್ತಿಲ್ಲ. ಸೋ, ಎಡಗೈ ಬ್ಯಾಟ್ಸ್​ಮನ್​​ಗಳ ಎದುರು, ಅಶ್ವಿನ್ ಅಸ್ತ್ರ ಪ್ರಯೋಗಿಸೋಕೆ ಸೆಲೆಕ್ಟರ್ಸ್ ಪ್ಲಾನ್ ಮಾಡ್ತಿದ್ದಾರೆ. ​​ ​

ಕಾರಣ ನಂ.4- ಸ್ಪಿನ್ ಫ್ರೆಂಡ್ಲಿ ಪಿಚ್​​​..!

ಅಶ್ವಿನ್ ವರ್ಲ್ಡ್​ಕಪ್ ಪ್ಲಾನ್​ನಲ್ಲಿರೋಕೆ ಮತ್ತೊಂದು ಕಾರಣ ಅಂದ್ರೆ, ಭಾರತದ ಪಿಚ್​ಗಳು. 9 ಗ್ರೌಂಡ್​ಗಳ ಪೈಕಿ ಚೆನ್ನೈ, ಕೊಲ್ಕತ್ತಾ, ಮುಂಬೈ, ಅಹ್ಮದಾಬಾದ್ ಮತ್ತು ಲಕ್ನೋ ಪಿಚ್​ಗಳು, ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗುತ್ತೆ. ಹೀಗಿರುವಾಗ ಕ್ಯಾಪ್ಟನ್ ರೋಹಿತ್ ಶರ್ಮಾ, ಪ್ಲೇಯಿಂಗ್ ಇಲೆವೆನ್​​ನಲ್ಲಿ ಮೂರು ಮಂದಿ ಸ್ಪಿನ್ನರ್​ಗಳನ್ನ ಆಡಿಸೋ ಸಾಧ್ಯತೆ ಹೆಚ್ಚಿದೆ. ಅಶ್ವಿನ್ ಬೌಲಿಂಗ್​​ನಲ್ಲಿರೋ ವೆರೈಟಿ, ತಂಡಕ್ಕೆ ವರದಾನವಾಗಲಿದೆ.

ಕಾರಣ ನಂ.5- ಅಟ್ಯಾಕಿಂಗ್ ಸ್ಪಿನ್ನರ್ ಬೇಕು..!

2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ತಂಡದಲ್ಲಿ, ಅಶ್ವಿನ್ ಕಾಣಿಸಿಕೊಂಡಿದ್ರು. ಐಸಿಸಿಯ ಮಹತ್ವದ ಟೂರ್ನಿಗಳಲ್ಲಿ ಆಡಿರುವ ಅನುಭವ, ಅಶ್ವಿನ್​ಗಿದೆ. ಅಲ್ಲದೇ, ಹೊಸ ಬಾಲ್​ನಲ್ಲಿ ಬೌಲಿಂಗ್​​ ಮತ್ತು ಬೌಲಿಂಗ್ ಅಟ್ಯಾಕ್​​ ಓಪನ್ ಮಾಡೋ ಸಾಮರ್ಥ್ಯ ಕೂಡ ಹೊಂದಿದ್ದಾರೆ.

ಈ ಹಿಂದೆ ಮಾಡಿದ್ದ ತಪ್ಪನ್ನ ತಿದ್ದಿಕೊಳ್ಳಲು ಮುಂದಾಗಿರುವ ಬಿಸಿಸಿಐ ಮತ್ತು ಆಯ್ಕೆ ಸಮಿತಿ, ಒಂದೊಳ್ಳೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಆ ಮೂಲಕ 10 ವರ್ಷಗಳ ಬಳಿಕ, ಐಸಿಸಿ ಟ್ರೋಫಿ ಗೆಲ್ಲೋಕೆ ಹೊರಟಿದೆ. ಅಜಿತ್ ಅಗರ್​ಕರ್ ಌಂಡ್ ಟೀಮ್ ಪ್ಲಾನ್ ವರ್ಕ್​ಔಟ್ ಆಗುತ್ತಾ ಕಾದುನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More