/newsfirstlive-kannada/media/post_attachments/wp-content/uploads/2023/11/VARANASI_DIWALI.jpg)
ಲಕ್ನೋ: ದೇವ್ ದಿವಾಳಿ ಅಥವಾ ದೇವ್ ದೀಪಾವಳಿ ಹಬ್ಬವನ್ನು ಇಂದು ವಾರಾಣಸಿಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಗಂಗಾ ನದಿಯ ತಟದಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸಲು ವಿಶೇಷ ತಯಾರಿ ನಡೆಯುತ್ತಿದೆ. ಇನ್ನು ನಗರದ ಪ್ರತಿ ರಸ್ತೆಯು ವಿದ್ಯುತ್​ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ.
/newsfirstlive-kannada/media/post_attachments/wp-content/uploads/2023/11/VARANASI_DIWALI_2.jpg)
ಇಂದು ವಾರಾಣಸಿಯಲ್ಲಿ ಗಂಗಾ ನದಿಯ ತಟದಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸುವ ಭರ್ಜರಿ ತಯಾರಿ ನಡೆಯುತ್ತಿದೆ. ವಾರಾಣಸಿಯು ಪ್ರಧಾನಿ ಮೋದಿಯವರ ಲೋಕಸಭೆ ಕ್ಷೇತ್ರವಾಗಿದೆ. ಸದ್ಯ ದೇವ್ ದೀಪಾವಳಿ ಹಿನ್ನೆಲೆಯಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಬರುತ್ತಿದ್ದು ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಶ್ರೀ ವಿಶ್ವನಾಥ ಧಾಮದ ಗಂಗಾ ದ್ವಾರ ಮತ್ತು ಚೇತ್ಸಿಂಗ್ ಘಾಟ್​ಗಳಲ್ಲಿ ಲೇಸರ್ ಮತ್ತು ಕ್ರ್ಯಾಕರ್ ಶೋಗಳನ್ನು ಆಯೋಜಿಸಲಾಗಿದ್ದು, ದೇವ್ ದೀಪಾವಳಿ ಉತ್ಸವಕ್ಕೆ ಆಧುನಿಕ ಸ್ಪರ್ಶ ನೀಡಲಾಗ್ತಿದೆ.
/newsfirstlive-kannada/media/post_attachments/wp-content/uploads/2023/11/VARANASI_DIWALI_1.jpg)
ಇನ್ನು ಚೇತ್ ಸಿಂಗ್ ಘಾಟ್​ನಲ್ಲಿ ಹೊಲೊಗ್ರಾಫಿಕ್ ಪ್ರೊಜೆಕ್ಷನ್ ಒಳಗೊಂಡ ಶಿವ ಹಾಗೂ ಕಾಶಿಯ ನಡುವಿನ ಪೌರಾಣಿಕ ಸಂಬಂಧದ 30 ನಮಿಷಗಳ ಪ್ರದರ್ಶನ ಆಯೋಜಿಸಲಾಗಿದೆ. ಗಂಗಾನದಿ ತೀರದ 85 ಘಾಟ್​ಗಳಲ್ಲಿ 12 ಲಕ್ಷ ದೀಪ ಬೆಳಗಿಸಲು ಪ್ರವಾಸೋದ್ಯಮ ಇಲಾಖೆ ತಯಾರಿ ನಡೆಸಿದೆ. ಇನ್ನು ದೇವ್ ದೀಪಾವಳಿ ಆಚರಿಸುವ ಹಿಂದೆ ಒಂದು ಪೌರಾಣಿಕ ಕಥೆ ಇದೆ. ಶಿವ ಪರಮಾತ್ಮನು ರಾಕ್ಷಸ ತ್ರಿಪುರಾಸುರನ ವಿರುದ್ಧ ವಿಜಯ ಸಾಧಿಸುತ್ತಾನೆ. ಹೀಗಾಗಿ ಈ ಹಬ್ಬವನ್ನು ತ್ರಿಪುರಿ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಜೊತೆಗೆ ಭಗವಾನ್ ವಿಷ್ಣುವು ಮತ್ಸ್ಯ ರೂಪ ಪಡೆದ ದಿನವನ್ನು ಕೂಡ ಇದು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us