newsfirstkannada.com

ಅಂದು ಧೋನಿ ತಬ್ಬಿ ಭಾವುಕರಾದ್ರು ಸಚಿನ್​, ಇಂದು ಜಡೇಜಾನ ತಬ್ಬಿ ಅತ್ತು ಬಿಟ್ರು ಮಾಹಿ

Share :

31-05-2023

    ಧೋನಿ ತಬ್ಬಿಕೊಂಡು ಕಣ್ಣೀರು ಸುರಿಸಿದ ಕ್ರಿಕೆಟ್​ ದೇವರು

    ಜಡೇಜಾನನ್ನು ಎತ್ತಿಕೊಂಡು ಭಾವುಕರಾದ ಮಹೇಂದ್ರ ಸಿಂಗ್​ ಧೋನಿ

    ಇಬ್ಬರದ್ದು ಗೆಲುವಿಗಾಗಿ ಶಪಥ, ಪ್ರೀತಿ, ಭಾವುಕ

ಭಾರತೀಯ ಕ್ರಿಕೆಟ್​ ವಿಶ್ವಾದ್ಯಂತ ಅನೇಕ ಗೆಲುವುಗಳನ್ನ ಕಂಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ದಾಖಲೆಗಳನ್ನ ಬರೆದಿದೆ. ಇತಿಹಾಸದ ಪುಟ ತಿರುವಿ ಹಾಕಿದ್ರೆ, ಒಂದೊಂದು ಗೆಲುವು ಒಂದೊಂದು ಕಥೆಯನ್ನ ಹೇಳುತ್ವೆ. ಆದ್ರೆ, ಈ ಎಲ್ಲಾ ಗೆಲುವುಗಳಿಗಿಂತ, ಭಾರತೀಯರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿದಿರೋದು ಎರಡೇ ಗೆಲುವು. ಒಂದು 1983ರ ವಿಶ್ವಕಪ್​, ಇನ್ನೊಂದು 2011 ವಿಶ್ವಕಪ್​. ಇವರೆಡು ಭಾರತೀಯರ ಪಾಲಿನ ಎವರ್​ಗ್ರೀನ್​ ವಿಕ್ಟರೀಸ್​..!

2011ರ ವಿಶ್ವಕಪ್​ಗೆ ಪಣ ತೊಟ್ಟಿತ್ತು ಭಾರತ..!

ರವಿಶಾಸ್ತ್ರಿ ಬಾಯಿಂದ ಬಂದ ಈ ಮಾತುಗಳನ್ನ ವಾಂಖೆಡೆ ಅಂಗಳದಲ್ಲಿ ಲಾಂಗ್ ಆನ್​ನಲ್ಲಿ ಧೋನಿ ಭಾರಿಸಿದ ಸಿಕ್ಸರ್​​ ಅನ್ನ ಯಾರು ತಾನೆ ಮರೆಯೋಕೆ ಸಾಧ್ಯ. ಕೋಟಿ-ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಿದ ಕ್ಷಣ ಅದು. ಬರೋಬ್ಬರಿ 28 ವರ್ಷಗಳ ಬಳಿಕ ಹೆಮ್ಮೆಯ ಭಾರತದ ಮುಡಿಗೆ ವಿಶ್ವಕಪ್​ ಕಿರೀಟ ತೊಡಿಸಿದ ಕ್ಷಣ ಅದು.

ಕ್ರಿಕೆಟ್​ ದೇವರಿಗಾಗಿ ಆಗಿತ್ತು ಗೆಲುವಿನ ಶಪಥ.!

2011ರ ವಿಶ್ವಕಪ್​ ಟೂರ್ನಿಯಲ್ಲಿ ನಮ್ಮ ನೆಲದಲ್ಲಿ ನಡೀಯುತ್ತೆ ಅನ್ನೋದಕ್ಕಿಂತ ಕ್ರಿಕೆಟ್​ ದೇವರು, ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡುಲ್ಕರ್​ ಕೊನೆಯ ಟೂರ್ನಿ ಎಂಬ ಕಾರಣಕ್ಕಾಗಿಯೇ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಭಾರತೀಯ ಕ್ರಿಕೆಟ್​ಗಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಮಾಸ್ಟರ್​ಗೆ ಗೆಲುವಿನ ಉಡುಗೊರೆ ನೀಡಲೇಬೇಕು ಎಂದು ಇಡೀ ಭಾರತ ಪಣತೊಟ್ಟಿತ್ತು. ಕ್ರಿಕೆಟ್​​ ಅಭಿಮಾನಿಗಳ ಮನೆ-ಮನಗಳಲ್ಲಿ ಭಾರತ ಗೆಲ್ಲಲಿ ಅನ್ನೋ ಜಪ ನಿರಂತರವಾಗಿ ಸಾಗಿತ್ತು.

ಅಭಿಮಾನಿಗಳ ಆಶಯದಂತೆ, ಕೋಟ್ಯಾಂತರ ಜನರ ಪ್ರಾರ್ಥನೆಯಂತೆ ಕೊನೆಗೂ ಭಾರತ ಟ್ರೋಫಿಗೆ ಮುತ್ತಿಕ್ಕಿತು. ಧೋನಿ ಸಿಕ್ಸರ್​ ಸಿಡಿಸುತ್ತಿದ್ದಂತೆ ಆರಂಭವಾದ ಗೆಲುವುನ ವಿಜಯಯಾತ್ರೆ ಕೊನೆಗೆ ಅಂತ್ಯವಾಗಿದ್ದು. ಕ್ರಿಕೆಟ್​​ ದೇವರನ್ನ ಹೊತ್ತು ಮೈದಾನದ ತುಂಬೆಲ್ಲಾ ಮೆರೆಸಿದ ಬಳಿಕ.

ಅಂದು ಧೋನಿ ತಬ್ಬಿ ಭಾವುಕರಾದ್ರು ಸಚಿನ್​, ಇಂದು ಜಡೇಜಾನ ತಬ್ಬಿ ಅತ್ತು ಬಿಟ್ರು ಮಾಹಿ

https://newsfirstlive.com/wp-content/uploads/2023/05/Dhoni-and-Sachin.webp

    ಧೋನಿ ತಬ್ಬಿಕೊಂಡು ಕಣ್ಣೀರು ಸುರಿಸಿದ ಕ್ರಿಕೆಟ್​ ದೇವರು

    ಜಡೇಜಾನನ್ನು ಎತ್ತಿಕೊಂಡು ಭಾವುಕರಾದ ಮಹೇಂದ್ರ ಸಿಂಗ್​ ಧೋನಿ

    ಇಬ್ಬರದ್ದು ಗೆಲುವಿಗಾಗಿ ಶಪಥ, ಪ್ರೀತಿ, ಭಾವುಕ

ಭಾರತೀಯ ಕ್ರಿಕೆಟ್​ ವಿಶ್ವಾದ್ಯಂತ ಅನೇಕ ಗೆಲುವುಗಳನ್ನ ಕಂಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ದಾಖಲೆಗಳನ್ನ ಬರೆದಿದೆ. ಇತಿಹಾಸದ ಪುಟ ತಿರುವಿ ಹಾಕಿದ್ರೆ, ಒಂದೊಂದು ಗೆಲುವು ಒಂದೊಂದು ಕಥೆಯನ್ನ ಹೇಳುತ್ವೆ. ಆದ್ರೆ, ಈ ಎಲ್ಲಾ ಗೆಲುವುಗಳಿಗಿಂತ, ಭಾರತೀಯರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿದಿರೋದು ಎರಡೇ ಗೆಲುವು. ಒಂದು 1983ರ ವಿಶ್ವಕಪ್​, ಇನ್ನೊಂದು 2011 ವಿಶ್ವಕಪ್​. ಇವರೆಡು ಭಾರತೀಯರ ಪಾಲಿನ ಎವರ್​ಗ್ರೀನ್​ ವಿಕ್ಟರೀಸ್​..!

2011ರ ವಿಶ್ವಕಪ್​ಗೆ ಪಣ ತೊಟ್ಟಿತ್ತು ಭಾರತ..!

ರವಿಶಾಸ್ತ್ರಿ ಬಾಯಿಂದ ಬಂದ ಈ ಮಾತುಗಳನ್ನ ವಾಂಖೆಡೆ ಅಂಗಳದಲ್ಲಿ ಲಾಂಗ್ ಆನ್​ನಲ್ಲಿ ಧೋನಿ ಭಾರಿಸಿದ ಸಿಕ್ಸರ್​​ ಅನ್ನ ಯಾರು ತಾನೆ ಮರೆಯೋಕೆ ಸಾಧ್ಯ. ಕೋಟಿ-ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಿದ ಕ್ಷಣ ಅದು. ಬರೋಬ್ಬರಿ 28 ವರ್ಷಗಳ ಬಳಿಕ ಹೆಮ್ಮೆಯ ಭಾರತದ ಮುಡಿಗೆ ವಿಶ್ವಕಪ್​ ಕಿರೀಟ ತೊಡಿಸಿದ ಕ್ಷಣ ಅದು.

ಕ್ರಿಕೆಟ್​ ದೇವರಿಗಾಗಿ ಆಗಿತ್ತು ಗೆಲುವಿನ ಶಪಥ.!

2011ರ ವಿಶ್ವಕಪ್​ ಟೂರ್ನಿಯಲ್ಲಿ ನಮ್ಮ ನೆಲದಲ್ಲಿ ನಡೀಯುತ್ತೆ ಅನ್ನೋದಕ್ಕಿಂತ ಕ್ರಿಕೆಟ್​ ದೇವರು, ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡುಲ್ಕರ್​ ಕೊನೆಯ ಟೂರ್ನಿ ಎಂಬ ಕಾರಣಕ್ಕಾಗಿಯೇ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಭಾರತೀಯ ಕ್ರಿಕೆಟ್​ಗಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಮಾಸ್ಟರ್​ಗೆ ಗೆಲುವಿನ ಉಡುಗೊರೆ ನೀಡಲೇಬೇಕು ಎಂದು ಇಡೀ ಭಾರತ ಪಣತೊಟ್ಟಿತ್ತು. ಕ್ರಿಕೆಟ್​​ ಅಭಿಮಾನಿಗಳ ಮನೆ-ಮನಗಳಲ್ಲಿ ಭಾರತ ಗೆಲ್ಲಲಿ ಅನ್ನೋ ಜಪ ನಿರಂತರವಾಗಿ ಸಾಗಿತ್ತು.

ಅಭಿಮಾನಿಗಳ ಆಶಯದಂತೆ, ಕೋಟ್ಯಾಂತರ ಜನರ ಪ್ರಾರ್ಥನೆಯಂತೆ ಕೊನೆಗೂ ಭಾರತ ಟ್ರೋಫಿಗೆ ಮುತ್ತಿಕ್ಕಿತು. ಧೋನಿ ಸಿಕ್ಸರ್​ ಸಿಡಿಸುತ್ತಿದ್ದಂತೆ ಆರಂಭವಾದ ಗೆಲುವುನ ವಿಜಯಯಾತ್ರೆ ಕೊನೆಗೆ ಅಂತ್ಯವಾಗಿದ್ದು. ಕ್ರಿಕೆಟ್​​ ದೇವರನ್ನ ಹೊತ್ತು ಮೈದಾನದ ತುಂಬೆಲ್ಲಾ ಮೆರೆಸಿದ ಬಳಿಕ.

Load More